Wednesday, July 29, 2015

ಎಣ್ಣೆ ತೀರಿದ ಮೇಲೆ,,,,,,,,,,,,




ಎಣ್ಣೆ ತೀರಿದ ಮೇಲೆ 
ದೀಪ ಆರಲೇಬೇಕಲ್ಲವೇ?
ಪಯಣ ಮುಗಿದ ಮೇಲೆ 
ಗಮ್ಯ ಸೇರಲೇಬೇಕಲ್ಲವೇ?
ನಶ್ವರ ದೇಹ ಅಳಿದ ಮೇಲೆ 
ಅವರ ಸಂದೇಶ ಅಮರವಲ್ಲವೇ?
ಕೋಟಿ ಜನರ ಮನದ ತುಂಬಾ 
ಅವರ ನೆನಪಿಂದು ತುಂಬಿಲ್ಲವೇ?
ಮಧುರ ಮಾತುಗಳಿಂದ ಸಜ್ಜನಿಕೆ
ಸಚ್ಚಾರಿತ್ರ್ಯಗಳಿಂದ ವಿಶ್ವ ಮಾನವ 
ರಾಗಿರುವ ಕಲಾಂಜಿ ನಿಮಗಿದೋ 
ಅಶ್ರುತರ್ಪಣ ಅಮರವಾದಿರಿ ನೀವು!
ನಿಮ್ಮ ಸರಳತೆ ಮಗುವಿನ ಮುಗ್ಧತೆ 
ದಾರಿದೀಪವಾಗಲಿ ಯುವಜನತೆಗೆ .😣

No comments: