Friday, October 21, 2016

ಹೀಗೊಬ್ಬನಿದ್ದ ಅಪ್ಪ; ಭಾಗ -೩



ಭಾನುವಾರದ ನಸುಕಿನ ಚುಮು ಚುಮು ಚಳಿಗೆ ರಗ್ಗನ್ನು ಇನ್ನಷ್ಟು ಗಾಢವಾಗಿ ಹೊದ್ದು ಮಲಗಿದ್ದ ಅವನುವಾರವೆಲ್ಲಾ ದುಡಿದು ದಣಿದ ದೇಹಕ್ಕೆ ಸಾಕಷ್ಟು ವಿಶ್ರಾಂತಿಯ ಅಗತ್ಯವಿತ್ತು, ಶನಿವಾರ ರಾತ್ರಿಯ ಎರಡು ಪೆಗ್  ವಿಸ್ಕಿ, ಖಾರ ಹೆಚ್ಚಾಗಿದ್ದ ಹುರಿದ ಕೋಳಿ ಕಾಲು, ಪತ್ನಿಯೊಡನೆ ಸುಮಧುರ ಸರಸ ಸಂಭಾಷಣೆ ಅವನಿಗೆ ವಿಚಿತ್ರ ಮತ್ತೇರಿಸಿ ಗಾಢ ನಿದ್ರೆಗೆ ತಳ್ಳಿದ್ದವುಬೆಳಗ್ಗಿನ ಚಳಿಗೆ ಅವನು ಮಗ್ಗುಲು ಬದಲಿಸಿ ರಗ್ಗೆಳೆದು ಇನ್ನಷ್ಟು ನಿದ್ದೆಗೆ ಯತ್ನಿಸುವಾಗಲೇ ಪುಟ್ಟ ತುಟಿಯೊಂದು ಕೆನ್ನೆಗೆ ಮುತ್ತಿಕ್ಕಿತ್ತು ಪುಟ್ಟ ಜೀವದ ಬಿಸಿಯುಸಿರು ಇವನ ಮುಖಕ್ಕೆ ರಾಚುತ್ತಿದ್ದಂತೆ ನಿದ್ದೆಯ ಭಾರದಿಂದ ಬಿಡಲಾಗದ ಕಣ್ಣುಗಳನ್ನು ಕೊಂಚ ತೆರೆದು ನೋಡಿದಆರು ವರ್ಷದ ಪುಟ್ಟ ಮಗ  ತನ್ನೆದೆಯ ಮೇಲೆ  ಮಲಗಿ, ತನ್ನ ಪುಟ್ಟ ಕೈಗಳಿಂದ ಅವನನ್ನು ತಬ್ಬಿ ಹಿಡಿದು ಕೆನ್ನೆಗೆ, ಗಲ್ಲಕ್ಕೆ ಸಿಹಿಮುತ್ತು ನೀಡುತ್ತಾ ನಿದ್ದೆಯಿಂದ ಎಬ್ಬಿಸಲು ಪ್ರಯತ್ನಿಸುತ್ತಿದ್ದ. ಅವನನ್ನು ಹಾಗೆಯೇ  ತಬ್ಬಿಕೊಂಡು ಇನ್ನು ಸ್ವಲ್ಪ ಹೊತ್ತು ಮಲಗಬೇಕು ಸುಮ್ನಿರೋ ಮಗಾ ಎಂದು ಮತ್ತೆ ಮಲಗಲು ಯತ್ನಿಸುತ್ತಿದ್ದಆದರೆ ತನ್ನ ಹಠ ಬಿಡದ ಪುಟ್ಟ ಮಗ ತನ್ನ ಸಿಹಿ ಮುತ್ತುಗಳಿಂದಲೇ ಅವನನ್ನು ಎಬ್ಬಿಸಲು ನಿರಂತರ ಪ್ರಯತ್ನ ಮಾಡುತ್ತಲೇ ಇದ್ದ!

ಅಷ್ಟರಲ್ಲಿ ಅಡಿಗೆ ಮನೆಯಿಂದ ಬಿಸಿ ಬಿಸಿ ಕಾಫಿಯ ಲೋಟ ಹಿಡಿದು ಬಂದ ಅವನ ಮಡದಿ ಅವನು ಹೊದ್ದಿದ್ದ ರಗ್ಗನ್ನು ಕಿತ್ತೆಸೆದು ರೀ ಏಳಿ ಮ್ಯಾಲೆ, ಎಷ್ಟೊತ್ತು ಮಲಗೋದು, ವಾರವೆಲ್ಲಾ ಕೆಲಸ ಕೆಲಸ ಅಂತೀರಿ, ಭಾನುವಾರ ಒಂದು ದಿನವಾದ್ರೂ  ಮಕ್ಕಳ ಜೊತೆಗೆ  ಮಾತಾಡ್ತಾ ಇರೋದಿಕ್ಕೆ ಆಗೋದಿಲ್ವಾ ಅಂತ ರಾಗ ಎಳೆದಿದ್ದಳು. ಹತ್ತು ವರ್ಷದ ಅವನ ಮಗಳು ಮಂಚದ ಕಾಲ ಬದಿಯಲ್ಲಿ ಕುಳಿತು ,ಅಪ್ಪ ಎದ್ದೇಳಪ್ಪಾ, ಮಾರ್ಕೆಟ್ಟಿಗೆ ಹೋಗೋಣ, ಟೈಮಾಗುತ್ತೆ ಎದ್ದೇಳಪ್ಪಾ ಎಂದು ಇವನನ್ನು ಕುಂಭಕರ್ಣ ನಿದ್ರೆಯಿಂದ ಎಬ್ಬಿಸಲು ಯತ್ನಿಸುತ್ತಿದ್ದಳುಕೊನೆಗೂ ಅವರ ಕಾಟ ತಡೆಯಲಾಗದೆ ಅವನು ಮೈ ಕೊಡವಿ ಎದ್ದಬಚ್ಚಲಿಗೆ ಹೋಗಿ ಬಾಯಿ ಮುಕ್ಕಳಿಸಿ ಉಗಿದು, ಅಡಿಗೆ  ಮನೆಗೆ  ಬಂದು ಒಂದು ಚೊಂಬು ನೀರನ್ನು ಗಟಗಟನೆ ಕುಡಿದು ಹಾಲಿನಲ್ಲಿದ್ದ ದಿವಾನ್ ಕಾಟ್ ಮೇಲೆ ಕುಳಿತು, ಕಾಫಿ ಕುಡಿಯುತ್ತಾ ಅಂದಿನ ವೃತ್ತ  ಪತ್ರಿಕೆಯ ಮೇಲೆ ಕಣ್ಣಾಡಿಸತೊಡಗಿದ. ಮಗ ಹಾಗೂ ಮಗಳು ಅವನ ಎಡಬಲದಲ್ಲಿ ಆಸೀನರಾಗಿ ಅವನು ಕಾಫಿ ಕುಡಿದು ಮುಗಿಸುವುದನ್ನೇ ಕಾತರದಿಂದ ಕಾಯುತ್ತಿದ್ದರುವಾರೆಗಣ್ಣಿನಲ್ಲಿ ಅವರಿಬ್ಬರನ್ನೂ  ನೋಡುತ್ತಲೇ ಪತ್ರಿಕೆ ಓದಿ ಮುಗಿದರೂ  ಇನ್ನೂ ಓದುತ್ತಿರುವವನಂತೆ  ನಟಿಸುತ್ತಿದ್ದ. ಅಪ್ಪ ಬೇಗ ಪತ್ರಿಕೆ ಓದಿ ಮುಗಿಸಿ ಎದ್ದು ಮಾರ್ಕೆಟ್ಟಿಗೆ ಹೊರಡಲಿಲ್ಲವಲ್ಲಾ ಎಂದು ಮಕ್ಕಳಿಬ್ಬರೂ ಚಡಪಡಿಸುತ್ತಿದ್ದರುಅಪ್ಪ ಮಕ್ಕಳ ಆಟವನ್ನು ನೋಡುತ್ತಾ ಅಡಿಗೆ ಮನೆ ಬಾಗಿಲಲ್ಲಿ ನಿಂತು ನೋಡುತ್ತಿದ್ದ ಅವನ ಪತ್ನಿ ಒಳಗೊಳಗೇ ನಗುತ್ತಿದ್ದಳು.   ಕೊನೆಗೆ ಮಗಳು ಧೈರ್ಯವಾಗಿ ಅವನ ಕೈಯ್ಯಲ್ಲಿದ್ದ ಪತ್ರಿಕೆಯನ್ನು ಕಿತ್ತು ಅತ್ತ ಬಿಸಾಕಿ ಏಳಪ್ಪಾ ಮೇಲೆ, ಮಾರ್ಕೆಟ್ಟಿಗೆ ಹೋಗೋಣ, ಎಷ್ಟೊತ್ತು ಕಾಯೋದು ಎಂದು ಹುಸಿಮುನಿಸಿನಿಂದ ಮುಖ ಉಬ್ಬಿಸಿದ್ದಳು.   ಇನ್ನು ಮಕ್ಕಳನ್ನು ಸತಾಯಿಸುವುದು ಬೇಡವೆಂದು ಮೇಲೆದ್ದ ಅವನು ಮುಖ ತೊಳೆದು, ಬಟ್ಟೆ ಬದಲಿಸಿ ಹೊರಟ. ಬಾಗಿಲಿನ ಬಳಿಯೇ ಕುಳಿತು ಇವನು ಹೊರಗೆ ಬರುವುದನ್ನೇ ಕಾಯುತ್ತಿದ್ದ ಮುದ್ದಿನ ನಾಯಿಮರಿ ಟಾಮಿ ಇವನ ಕಾಲುಗಳನ್ನು ನೆಕ್ಕಿ ಎಗರಾಡಿ ಪ್ರೀತಿ ತೋರಿಸಿತ್ತು

ನಿಧಾನಕ್ಕೆ ತನ್ನ ಟಿವಿಎಸ್ ಸ್ಟಾರ್ ಸಿಟಿ  ಬೈಕ್  ರಸ್ತೆಗೆ ಇಳಿಸಿ ಸ್ಟಾರ್ಟ್  ಮಾಡಿದ್ದ. ಪುಟ್ಟ ಮಗ ಮುಂದೆ ಕುಳಿತರೆ ಮಗಳು ಹಿಂದೆ ಕುಳಿತಿದ್ದಳು. ಅಲ್ಲಿಂದ ಅವರ ಸವಾರಿ  ಪೀಣ್ಯ ಎರಡನೇ ಹಂತದ ಮಾರ್ಕೆಟ್ಟಿಗೆ ಬಂದಿತ್ತುಅಬ್ದುಲ್ಲಾನ ಕೋಳಿ ಅಂಗಡಿಯಲ್ಲಿ ಒಂದೂವರೆ ಕೆಜಿಯ ಬ್ರಾಯ್ಲರ್ ಕೋಳಿಯನ್ನು, ಶುದ್ಧಗೊಳಿಸಿ ಬಿರಿಯಾನಿ ಪೀಸ್ ಹೊಡೆಯುವಂತೆ ಹೇಳಿ ಕಟ್ಟಿಸಿಕೊಂಡಿದ್ದ. ಅದನ್ನು ಮಗ ತನ್ನ ಕೈಯ್ಯಲ್ಲಿದ್ದ    ಬ್ಯಾಗಿನಲ್ಲಿ ಇಟ್ಟುಕೊಂಡಿದ್ದ, ಅದು ಅವನಿಗೆ ಇಷ್ಟವಾದ ಚಿಕನ್ ಬಿರಿಯಾನಿಗೆ!   ಪಕ್ಕದಲ್ಲಿದ್ದ ಮುನಿರಾಜನ ಮೀನು ಅಂಗಡಿಗೆ ಬಂದು ಮಗಳಿಗೆ ಇಷ್ಟವಾದ  ಒಂದು ಕೆಜಿ ಮೀನು ಖರೀದಿಸಿ ಫ್ರೈ ಪೀಸ್ ಮಾಡಿಸಿದ್ದ. ಮೀನಿನ ತುಂಡುಗಳಿದ್ದ ಕವರನ್ನು ಮಗಳು ಜಾಗರೂಕತೆಯಿಂದ ತನ್ನ ಕೈಯ್ಯಲ್ಲಿ ಹಿಡಿದುಕೊಂಡಿದ್ದಳು, ಏಕೆಂದರೆ ಅದು ಅವಳ ಪಾಲುಅಲ್ಲಿಂದ ಅನ್ವರನ ಮಾಂಸದ ಅಂಗಡಿಗೆ ಬಂದು ತನಗೂ ಪತ್ನಿಗೂ ಇಷ್ಟವಾದ ಮಟನ್ ಖೈಮಾ ಒಂದು ಕೆಜಿ ಕಟ್ಟಿಸಿಕೊಂಡು ತರಕಾರಿ ಅಂಗಡಿಯ ರತ್ನಮ್ಮಜ್ಜಿಯ ಬಳಿ ಸೌತೆಕಾಯಿ, ಕ್ಯಾರೆಟ್, ಟೊಮ್ಯಾಟೋ, ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು, ಪುದಿನಾ, ಹಸಿಮೆಣಸಿನಕಾಯಿ, ನಿಂಬೆಹಣ್ಣು ಖರೀದಿಸಿದ್ದ. ಜೊತೆಗೆ ಅವಳ ಅಂಗಡಿಯ ಪಕ್ಕದಲ್ಲಿದ್ದ ಚೆಲುವಿಯ ಹೂವಿನಂಗಡಿಯಲ್ಲಿ ಪತ್ನಿಗಾಗಿ ಒಂದು ಮಾರು ಮಲ್ಲಿಗೆ  ಹಾಗೂ ಕನಕಾಂಬರ ಖರೀದಿಸಿದ್ದಎಲ್ಲವನ್ನೂ ಬ್ಯಾಗುಗಳಲ್ಲಿ ತುಂಬಿಕೊಂಡು ಹೊರಟಾಗ ಮಗಳು ಗಾಯತ್ರಿ ಬ್ಯಾಂಗಲ್ ಸ್ಟೋರ್ಸ್ ತೋರಿಸಿ ಅಲ್ಲಿಗೆ ಹೋಗೋಣ ಅಂದಿದ್ದಳುಅಲ್ಲಿ ಅವಳಿಗೆ ಬೇಕಾದ ಟೇಪು, ಪೆನ್ನು, ಪೆನ್ಸಿಲ್, ಬಣ್ಣದ ಕ್ರೆಯಾನ್ಸ್, ಮಗನಿಗೆ ಬಣ್ಣದ ಸೀಮೆ ಸುಣ್ಣ ಎಲ್ಲಾ ಕೊಡಿಸಿದ್ದಎಲ್ಲವನ್ನೂ ಮುಗಿಸಿ ಮತ್ತೆ ಮನೆ   ಕಡೆಗೆ ಹೊರಡುವಾಗ ಸಾಕಷ್ಟು ಸಮಯವಾಗಿತ್ತು.

ಮನೆಯ ಬಳಿಗೆ ಬಂದು ಬೈಕು ನಿಲ್ಲಿಸುತ್ತಿದ್ದಂತೆ ಬ್ಯಾಗುಗಳನ್ನು ತೆಗೆದುಕೊಳ್ಳಲು ಮಡದಿ ಬಂದರೆ ಮಾಂಸದ ವಾಸನೆ ಹಿಡಿದ ಟಾಮಿ ಎಲ್ಲಿಯೂ ನಿಲ್ಲದೆ ಖುಷಿಯಿಂದ ಕುಣಿದು ಕುಪ್ಪಳಿಸುತ್ತಿತ್ತುಮನೆಯೊಳಗೆ ಬಂದ ನಂತರ ಮಡದಿ ಅಡಿಗೆಗೆ ಶುರು ಹಚ್ಚಿಕೊಂಡರೆ ಇವನು ತರಕಾರಿಗಳನ್ನೆಲ್ಲ ಒಪ್ಪವಾಗಿ ಹಚ್ಚಿ ಕೊಡುತ್ತಿದ್ದ. ಮಗಳು ತನ್ನ ವಸ್ತುಗಳನ್ನೆಲ್ಲಾ ನೀಟಾಗಿ ಜೋಡಿಸಿಟ್ಟ ನಂತರ ಬಂದು ಅಪ್ಪನೊಡನೆ ಕುಳಿತಳುಈಗ ಇಬ್ಬರೂ ಸೇರಿ ತರಕಾರಿ ಸಲಾಡ್ ಮಾಡಲು ಶುರು ಹಚ್ಚಿಕೊಂಡರುಸೌತೆಕಾಯಿಯ ಎರಡೂ ತುದಿಗಳನ್ನು ಕತ್ತರಿಸಿ ವಿಷವನ್ನೆಲ್ಲ ತೆಗೆದು ನೀಟಾಗಿ ಇವನು ಕತ್ತರಿಸಿ ಕೊಟ್ಟರೆ ಮಗಳು ಅವನ್ನೆಲ್ಲಾ ಒಂದು ದೊಡ್ಡ ತಟ್ಟೆಯಲ್ಲಿ  ಜೋಡಿಸುತ್ತಿದ್ದಳು. ನಂತರ ಕ್ಯಾರೆಟ್, ಈರುಳ್ಳಿ, ಟೊಮ್ಯಾಟೋಗಳನ್ನೂ ಸೌತೆಕಾಯಿಯೊಡನೆ ಸುಂದರವಾಗಿ ಜೋಡಿಸಿಟ್ಟು ಎರಡು ನಿಂಬೆಹಣ್ಣು ಕುಯ್ದು ರಸ ಹಿಂಡಿ , ಮೇಲೆ ಒಂದಿಷ್ಟು ಉಪ್ಪು ಮತ್ತು ಕಾಳು  ಮೆಣಸಿನಪುಡಿ ಉದುರಿಸಿ ಸುಂದರ ಸಲಾಡ್ ಸಿದ್ಧಪಡಿಸಿದ್ದಅವನೊಡನೆ ಕೈ ಜೋಡಿಸಿದ ಮಗಳು  ಅಪ್ಪಾ, ನಾನು ದೊಡ್ಡವಳಾದ ಮೇಲೆ ಪ್ರತಿ ಭಾನುವಾರವೂ ನಿನಗೆ ಇದೇ ಥರಾ ಸಲಾಡ್ ಮಾಡಿ ಕೊಡುತ್ತೇನೆ ಎಂದು ಮುದ್ದಾಗಿ ಉಲಿದಿದ್ದಳುಅವನು  ಪ್ರೀತಿಯಿಂದ ಮಗಳ ತಲೆ ನೇವರಿಸಿದ್ದ. ನೀನು ದೊಡ್ಡವನಾದ ಮೇಲೆ ನನಗೆ ಏನು ಮಾಡಿ ಕೊಡ್ತಿಯೋ ಮಗನೇ ಅಂದರೆ ಪುಟ್ಟ ಮಗ ಮುಗ್ಧವಾಗಿ ನಗುತ್ತಾ ನಾನು ನಿನಗೆ ಖಾರ ಜಾಸ್ತಿ ಹಾಕಿ ಚಿಕನ್ ಬಿರಿಯಾನಿ ಮಾಡಿ ಕೊಡುತ್ತೇನೆ ಎಂದಿದ್ದ. ಅಡಿಗೆ ಮನೆಯಲ್ಲಿ ಚಿಕನ್ ಬಿರಿಯಾನಿ ಮಾಡುತ್ತಿದ್ದ ಮಡದಿ ಮಗನ ಮಾತು  ಕೇಳಿ ಘೊಳ್ಳೆಂದು ಜೋರಾಗಿ ನಕ್ಕಿದ್ದಳು.

ಅಷ್ಟರಲ್ಲಿ ಘಮ ಘಮಿಸುವ ಚಿಕನ್ ಬಿರಿಯಾನಿ ಸಿದ್ಧವಾಗಿತ್ತು. ಹಣೆಯಲ್ಲಿ ಮೂಡಿದ್ದ ಬೆವರಿನ ಬಿಂದುಗಳನ್ನು ಒರೆಸಿಕೊಳ್ಳುತ್ತಾ ಮಡದಿ   ನಾಲ್ಕು ತಟ್ಟೆಗಳಲ್ಲಿ ಬಿರಿಯಾನಿ ಹಾಕಿ ಹಾಲಿನಲ್ಲಿ ತಂದಿಟ್ಟಿದ್ದಳು, ಮಧ್ಯದಲ್ಲಿ ತರಕಾರಿ ಸಲಾಡ್ ತಟ್ಟೆ , ಜೊತೆಗೆ ಮೊಸರು ಬಜ್ಜಿ, ಹಬೆಯಾಡುತ್ತಿದ್ದ ಬಿರಿಯಾನಿ ಸ್ವಲ್ಪ ತಣ್ಣಗಾಗಲೆಂದು ಜೋರಾಗಿ   ಫ್ಯಾನ್ ತಿರುಗಿಸಿದ್ದಳು. ನಾಲ್ವರೂ ಒಟ್ಟಿಗೆ ಕುಳಿತು ಬಿರಿಯಾನಿ ಭಕ್ಷಣೆಗೆ ತೊಡಗಿದ್ದರು, ಮಕ್ಕಳ ತುಂಟಾಟ, ಮಡದಿಯ ಪ್ರೀತಿಯ ನುಡಿಗಳು, ನಾಲಿಗೆಗೆ ಹಿತವಾದ ಅಡಿಗೆ, ಮನಸ್ಸಿಗೆ ಹಿತವಾದ ವಾತಾವರಣ ಅವನಿಗೆ ತಾನು ಸ್ವರ್ಗದಲ್ಲಿಯೇ ಇದ್ದೇನೇನೋ  ಎನ್ನುವಂಥ ಅನುಭವವನ್ನು ಉಂಟು ಮಾಡಿತ್ತುವಾರವೆಲ್ಲಾ ದುಡಿದು ಹೈರಾಣಾದ ದೇಹ ಹಾಗೂ ಮನಸ್ಸಿಗೆ ಭಾನುವಾರದ ಬೆಳಗು ನಿಜಕ್ಕೂ ಚೇತೋಹಾರಿಯಾಗಿತ್ತುಬಿರಿಯಾನಿ ಹಾಗೂ ಕೋಳಿ ಮಾಂಸದ ವಾಸನೆ ಹಿಡಿದ ನಾಯಿಮರಿ ಟಾಮಿ ಬಾಗಿಲಲ್ಲೇ ಕುಳಿತು ಒಂದೇ ಸಮನೆ ಚಡಪಡಿಸುತ್ತಿತ್ತುಏನೇ ಮಾಡಿದರೂ ಬಾಗಿಲು ದಾಟಿ ಒಳಕ್ಕೆ ಬಾರದ ಮುದ್ದು ನಾಯಿಗೆ ಎಲ್ಲರೂ ತಿಂದು ಆದ ನಂತರ ಉಳಿದ ಮೂಳೆಯ ತುಂಡುಗಳ ಜೊತೆಗೆ ತಣ್ಣಗಾಗಿದ್ದ ಬಿರಿಯಾನಿಯನ್ನು ಅದಕ್ಕೆಂದೇ ಮೀಸಲಾಗಿಟ್ಟಿದ್ದ ತಟ್ಟೆಯಲ್ಲಿ ಹಾಕಿ  ಅದರ ತಲೆ ನೇವರಿಸಿದ್ದಸಾವಕಾಶವಾಗಿ ಬಿರಿಯಾನಿ ತಿಂದ ಟಾಮಿ ಸ್ವಲ್ಪ ನೀರು ಕುಡಿದು ಇವನ ಜೊತೆಗೆ ಆಟವಾಡಲು ತೊಡಗಿತ್ತು.       

ಮಧ್ಯಾಹ್ನದ ಅಡುಗೆಗೆ ಮಟನ್ ಖೈಮಾ ಸಾರು, ಮಗಳಿಗಾಗಿ ಸ್ಪೆಷಲ್ ಮೀನು ತವಾ ಫ್ರೈ ಸಿದ್ಧವಾಗುತ್ತಿತ್ತು, .  ಮಗಳೊಡನೆ ಕುಳಿತು ಅವಳ ಪಠ್ಯ ವಿಷಯಗಳ ಬಗ್ಗೆ ಕೇಳುತ್ತಾ, ಅವಳಿಗೆ ಅನುಮಾನವಿದ್ದ ವಿಚಾರಗಳನ್ನು ಬಗೆಹರಿಸುತ್ತಾ ಮಗನಿಗೆ ಅಕ್ಷರಾಭ್ಯಾಸ ಮಾಡಿಸುತ್ತಾ ಇವನು ಕಾಲ ಕಳೆದಿದ್ದ. ಮಧ್ಯಾಹ್ನವಾಗುತ್ತಾ ಹೋದಂತೆ ಹೊರಗಡೆ ಹೋಗಬೇಕೆಂಬ ಬಯಕೆ ಇವನಲ್ಲಿ ಹೆಚ್ಚಾಗುತ್ತಾ ಹೋಗುತ್ತಿತ್ತು, ಆದರೆ ಮಕ್ಕಳಿಬ್ಬರೂ ಇವನನ್ನು ಆಚೆಗೆ ಹೋಗಲು ಬಿಡುತ್ತಿರಲಿಲ್ಲಕೊನೆಗೊಮ್ಮೆ ಅಡಿಗೆ ಕೆಲಸ ಮುಗಿಸಿ ಮಡದಿ ರೂಮಿಗೆ ಬಂದಾಗ ಅವಳಿಗಾಗಿ ತಂದಿದ್ದ ಹೂವಿನ ಪೊಟ್ಟಣವನ್ನು ಅವಳ ಕೈಗಿತ್ತು, ಮಕ್ಕಳ ಕಣ್ತಪ್ಪಿಸಿ ಚುಂಬಿಸಿದ್ದನಾಚಿ ನೀರಾದ ಅವಳನ್ನು ಒಪ್ಪಿಸಿ, ಅರ್ಧ ಘಂಟೆಯಲ್ಲಿ ಬರುವದಾಗಿ ಮನೆಯಿಂದ ಹೊರಬಂದಿದ್ದಬೈಕಿನವರೆಗೂ ಬಂದ ಅವಳು ಅವನ ಕೈ ಹಿಡಿದು "ಯಾವುದೇ ಕಾರಣಕ್ಕೂ ಜಾಸ್ತಿ ಕುಡಿಬೇಡಿ, ಬೇಕಾದ್ರೆ ಮನೆಗೇ  ತೊಗೊಂಡು ಬನ್ನಿ, ಬಾರಿನಲ್ಲಿ ಜಾಸ್ತಿ ಹೊತ್ತು ಕೂರಬೇಡಿ"ಎಂದು ತಾಕೀತು ಮಾಡಿದ್ದಳು. ಹೂಗುಟ್ಟಿ ಹೊರಟವನು ಸೀದಾ ಹೋಗಿ ಬೈಕ್ ನಿಲ್ಲಿಸಿದ್ದು ವಿಜಯಲಕ್ಷ್ಮಿ ಬಾರಿನ ಮುಂದೆವಾರಕ್ಕೊಮ್ಮೆ ಸಿಗುವ ರಜಾ ದಿನದಂದು ಮನಕ್ಕೆ ಇಷ್ಟವಾದುದನ್ನು ತಿಂದು, ಮನಸ್ಸಿಗೆ ಸಮಾಧಾನವಾಗುವಷ್ಟು ಕುಡಿಯದೆ ಇದ್ದರೆ  ಅವನಿಗೆ ಇರಲಾಗುತ್ತಿರಲಿಲ್ಲಬಾರಿನ ಮೂಲೆಯೊಂದರಲ್ಲಿ ಕುಳಿತು ತನಗಿಷ್ಟವಾದ ಸಿಗ್ನೇಚರ್ ವಿಸ್ಕಿ ತರಿಸಿ  ಹುರಿದ ಕಡಲೆ ಬೀಜದೊಡನೆ ಎರಡು ಪೆಗ್ ಏರಿಸಿದ್ದಅಷ್ಟರಲ್ಲಿ ಒಬ್ಬೊಬ್ಬರಾಗಿ ಬಂದ ಅವನ ಗೆಳೆಯರ ಸೈನ್ಯದಿಂದ ಟೇಬಲ್ ತುಂಬಿ ಹೋಗಿತ್ತುಅಲ್ಲಿಂದ ಶುರುವಾದ ಮಾತು, ಮಾತು, ಮಾತು, ಅಷ್ಟೇ,,,,ಸಮಯ ಸರಿದು ಹೋದ ಪರಿವೆ ಅವರಾರಿಗೂ ಇರಲಿಲ್ಲ!

ಮಧ್ಯಾಹ್ನದ ಊಟಕ್ಕಾಗಿ ಕಾದು ಕಾದು ಸುಸ್ತಾದ ಮಡದಿ ಅವನ ಮೊಬೈಲಿಗೆ ಫೋನ್ ಮಾಡಿದಾಗಲೇ ಅವನಿಗೆ ಗೊತ್ತಾಗಿದ್ದು, ತಾನಿನ್ನೂ ಊಟ ಮಾಡಿಲ್ಲ, ಮನೆಯಲ್ಲಿ ತನಗಾಗಿ ಮಡದಿ, ಮಕ್ಕಳು ಕಾಯುತ್ತಿದ್ದಾರೆಂದುಗೆಳೆಯರಿಗೆಲ್ಲಾ ಬೈ ಬೈ ಹೇಳಿ, ಆತುರಾತುರವಾಗಿ ಬಿಲ್ ಪಾವತಿಸಿ, ರಾತ್ರಿಗೆಂದು ಇನ್ನೊಂದು ಕ್ವಾಟರ್ ಪಾರ್ಸೆಲ್ ಮಾಡಿಸಿಕೊಂಡು ಮನೆಗೆ ಬಂದಿದ್ದಇವನ ಗಾಡಿಯ ಸದ್ದು ಕೇಳಿದೊಡನೆ ಮುದ್ದಿನ ನಾಯಿ ಟಾಮಿ ಕುಣಿದಾಡುತ್ತಾ ಬಂದು ಇವನನ್ನು ಸ್ವಾಗತಿಸಿತ್ತುಮನೆಯೊಳಕ್ಕೆ ಹೋದವನನ್ನು ಧುಮುಧುಮನೆ ಉರಿಯುತ್ತಿದ್ದ ಮಡದಿಯ ಕೋಪೋದ್ರಿಕ್ತ ಮುಖ ಸ್ವಾಗತಿಸಿತ್ತುಎಷ್ಟು ಹೊತ್ತು ನಿಮಗೋಸ್ಕರ ಕಾಯೋದು, ವಾರಕ್ಕೊಂದು ದಿನ ಹೆಂಡತಿ ಮಕ್ಕಳ ಜೊತೆ ಕೂತು ಊಟ ಮಾಡೋದಿಕ್ಕೆ ಆಗೋದಿಲ್ವಾ ನಿಮಗೆ ಎಂದು ಸರಿಯಾಗಿ ಜಾಡಿಸಿದ್ದಳುಅಲ್ಲಿ ನನ್ನ ಗೆಳೆಯರೆಲ್ಲಾ ಬಂದ್ರು, ಅದಕ್ಕೇ ತಡವಾಯ್ತು ಎಂದು ಕೈ ತೊಳೆದು ಊಟಕ್ಕೆ ಕುಳಿತಿದ್ದಮಕ್ಕಳಿಬ್ಬರೂ ಬಂದು ಎದ ಬಲದಲ್ಲಿ ಆಸೀನರಾಗಿದ್ದರು, ಅವರೊಡನೆ ಜಾಲಿಯಾಗಿ ಮಾತನಾಡುತ್ತಾ, ನಗಿಸುತ್ತಾ, ಮುನಿಸಿಕೊಂಡಿದ್ದ ಮಡದಿಯನ್ನೂ ಜೋಕುಗಳನ್ನು ಹೇಳಿ ನಗಿಸುತ್ತಾ ಮಟನ್ ಖೈಮಾ, ರಾಗಿ ಮುದ್ದೆಯ ಊಟ, ಜೊತೆಗೆ ಸ್ವಲ್ಪ ಬಿರಿಯಾನಿ, ಒಂದು ಮೀನು ಫ್ರೈ ತುಂಡು ಖಾಲಿ ಮಾಡಿದ್ದಇಡೀ ಕುಟುಂಬ ಅಂದು ಸಂತೋಷದಿಂದ ಭಾನುವಾರದ ಭರ್ಜರಿ ಬಾಡೂಟದ ಸವಿಯನ್ನು ಸವಿದಿದ್ದರು, ಮೆತ್ತಗೆ ರೂಮು ಸೇರಿದ ಇವನು ಮತ್ತೊಮೆ ಗಾಢ ನಿದ್ರೆಗೆ ಜಾರಿದ್ದ.

ಸುಮಾರು ಎರಡು ಘಂಟೆಗಳ ನಿದ್ದೆಯ ತರುವಾಯ ಮತ್ತೊಮ್ಮೆ ಮಗನ ಗಲಾಟೆಗೆ ಮಣಿದು ಎದ್ದ, ಮುಖ ತೊಳೆದು ಮಡದಿ ತಂದಿತ್ತ ಕಾಫಿ ಕುಡಿದು ಹಾಲಿನಲ್ಲಿದ್ದ ದಿವಾನ್ ಮೇಲೆ  ಪವಡಿಸಿದ. ಸಂಜೆ ಉದಯ ಟಿವಿಯಲ್ಲಿ ವಿಷ್ಣುವರ್ಧನ್ ಅಭಿನಯದ ಚಲನಚಿತ್ರ ಬರುತ್ತಿತ್ತು, ದಿವಾನ್ ಮೇಲೆ ಎರಡು ದಿಂಬು ಹಾಕಿ ಮಲಗಿಕೊಂಡು ಇವನು ಚಿತ್ರ  ವೀಕ್ಷಿಸುತ್ತಿದ್ದರೆ ಅವನ ಎಡ ತೋಳಿನ ಮೇಲೆ ಮಗ, ಬಲ ತೋಳಿನ ಮೇಲೆ ಮಗಳು ಅವನನ್ನು ಅಪ್ಪಿಕೊಂಡೇ ಮಲಗಿ ಚಿತ್ರ ವೀಕ್ಷಿಸುತ್ತಿದ್ದರುಮಡದಿ ದಿವಾನ್ ಪಕ್ಕದಲ್ಲಿ ಕುಳಿತು ಚಿತ್ರದಲ್ಲಿ ಬರುತ್ತಿದ್ದ ರಸವತ್ತಾದ ಸನ್ನಿವೇಶಗಳಿಗೆ ನಗುತ್ತಾ, ಮಕ್ಕಳನ್ನೂ ನಗಿಸುತ್ತಾ ಇದ್ದಳು.    ಚಿತ್ರ ನೋಡುತ್ತಲೇ ಮಕ್ಕಳಿಬ್ಬರೂ ಅವನ ತೋಳಿನ ಮೇಲೆಯೇ ಮಲಗಿ ನಿದ್ದೆ ಹೋಗಿದ್ದರುಒಬ್ಬೊಬ್ಬರನ್ನೇ ಎತ್ತಿಕೊಂಡು ಹೋಗಿ ಅವರ ಹಾಸಿಗೆಯ ಮೇಲೆ ಮಲಗಿಸಿ ಬಂದ  ಮಡದಿ ಈಗ ಅದೇ ದಿವಾನ್ ಮೇಲೆ ಅವನನ್ನು ತಬ್ಬಿ ಮಲಗಿದ್ದಳುಅವಳ ಬೆಚ್ಚನೆಯ ಅಪ್ಪುಗೆ ಅವನಲ್ಲಿ ಕಿಚ್ಚು ಹತ್ತಿಸಿತ್ತು. ಭಾನುವಾರ ಅವರಿಬ್ಬರಿಗೂ ಶೃಂಗಾರಮಯವಾಗಿತ್ತು, ಲೋಕ ಮರೆತ ಪ್ರಣಯಪಕ್ಷಿಗಳಂತೆ ಸುಖದ ಸುಪ್ಪತ್ತಿಗೆಯಲ್ಲಿ ಅವರಿಬ್ಬರೂ ತೇಲಿ ಹೋಗಿದ್ದರು.  

ಅಂದಿನ ತನ್ನ ಸಂಸಾರ ಸುಖವನ್ನು ಕಂಡ ಇವನು ಮನಸ್ಸಿನಲ್ಲಿಯೇ ತನ್ನ ಮನೆದೇವರಿಗೆ ಪ್ರಾರ್ಥಿಸುತ್ತಿದ್ದ, ದೇವರೇ ನನ್ನ ಕುಟುಂಬ ಯಾವಾಗಲೂ ಹೀಗೆಯೇ ನಗುನಗುತ್ತಾ ಇರುವಂತೆ ನೋಡಿಕೋ!

Tuesday, October 18, 2016

ಇದು ನಿಜಕ್ಕೂ ಆತ್ಮಹತ್ಯೆಯೇ???



ಮಾಲೂರಿನ ಸರ್ಕಲ್ ಇನ್ಸ್ಪೆಕ್ಟರ್ ರಾಘವೇಂದ್ರ ಅವರು ತಮ್ಮ ಸರ್ವಿಸ್ ರಿವಾಲ್ವರಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸುದ್ಧಿ ನೋಡಿ ನನಗೆ ಕ್ಷಣ ಕಾಲ ನಂಬಲಾಗಲಿಲ್ಲ!  ಏಕೆಂದರೆ ರಾಘವೇಂದ್ರ ಅವರನ್ನು ಹತ್ತಿರದಿಂದ ನೋಡಿದವರಿಗೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದರೆ ನಂಬುವುದು ತುಂಬಾನೇ ಕಷ್ಟ!  ಅವರೊಡನೆ ಒಂದೆರಡು ಪ್ರಕರಣಗಳಲ್ಲಿ ನನ್ನ ಒಡನಾಟವಿತ್ತು, ಆ ನೆನಪುಗಳನ್ನು ಇಲ್ಲಿ ಹಂಚಿಕೊಳ್ಳುತ್ತೇನೆ.  ಆಗ ನಾನು ಬೆಂಗಳೂರಿನ ಶಿವಾಜಿನಗರದಲ್ಲಿದ್ದ ಬ್ಲಾಕ್ ಬೆಲ್ಟ್ ಕಮಾಂಡೋಸ್ ಎಂಬ ಭದ್ರತಾ ಸಂಸ್ಥೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದೆ.  ನನ್ನ ಮೇಲಧಿಕಾರಿಯಾಗಿ ಭಾರತೀಯ ಸೇನೆಯ ನಿವೃತ್ತ ಮೇಜರ್ ಸುಬ್ಬಯ್ಯ, ಕೊಡಗಿನವರು, ಇದ್ದರು. 

ಹೊಸಕೋಟೆ ಬಳಿಯ ಪಿಲ್ಲಗುಂಪ ಕೈಗಾರಿಕಾ ಪ್ರದೇಶ ಹಾಗೂ ನರಸಾಪುರ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳಿಗೆ ನಮ್ಮ ಸಂಸ್ಥೆಯಿಂದ ಭದ್ರತಾ ಸೇವೆಗಳನ್ನು ಒದಗಿಸಲಾಗಿತ್ತು.  ವಾರದಲ್ಲಿ ಎರಡು, ಮೂರು ದಿನ ಆ ಪ್ರದೇಶಗಳಿಗೆ ನನ್ನ ಭೇಟಿ ಮಾಮೂಲಾಗಿತ್ತು, ದಿನವೂ ಒಂದಿಲ್ಲೊಂದು ಸಮಸ್ಯೆ ಅಲ್ಲಿ ಇದ್ದೇ ಇರುತ್ತಿತ್ತು. ನಗರದಿಂದ ದೂರವಿದ್ದ ಆ ಪ್ರದೇಶದಲ್ಲಿ ಸಾಕಷ್ಟು ಕೈಗಾರಿಕೆಗಳಿದ್ದರೂ ನೈಸರ್ಗಿಕ ಕುರುಚಲು ಕಾಡಿನ ಜೊತೆಗೆ ಸಿಕ್ಕ ಸಿಕ್ಕಲ್ಲೆಲ್ಲಾ ನೀಲಗಿರಿ ಮರಗಳನ್ನು ಬೆಳೆಸಿ ಅದು ನಿರ್ಮಾನುಷ ಕಾಡಿನಂತೆಯೇ ಇತ್ತು.  ಕತ್ತಲಾದ ನಂತರ ಅಲ್ಲಿ ಮಾನವ ಸಂಚಾರವೇ ಇರುತ್ತಿರಲಿಲ್ಲ,,ಎಲ್ಲೋ ಅಲ್ಲೊಬ್ಬರು, ಇಲ್ಲೊಬ್ಬರು ಓಡಾಡುತ್ತಿದ್ದರೂ ಅವರು ಸಾಮಾನ್ಯವಾಗಿ ಸುತ್ತ ಮುತ್ತಲಿನ ಗ್ರಾಮಗಳವರೇ ಆಗಿದ್ದು ಅವಕಾಶ ಸಿಕ್ಕಲ್ಲಿ ಎದುರಿಗೆ ಬಂದವರಿಗೆ ಸರಿಯಾಗಿ ಬಾರಿಸಿ ಇದ್ದ ಬದ್ದದ್ದನ್ನೆಲ್ಲಾ ಕಿತ್ತುಕೊಂಡು ಹೋಗಿ ಬಿಡುತ್ತಿದ್ದರು. 

ಒಂದೆರಡು ಬಾರಿ ನನಗೂ ಇಂಥವರು ಮುಖಾಮುಖಿಯಾಗಿ ಸರಿಯಾಗಿ ಲಾಠಿ ಏಟು ತಿಂದು ಓಡಿ ಹೋಗಿದ್ದರು. ನಾವು ಭದ್ರತೆ ನೀಡಿದ್ದ ಮೂರು ಕಾರ್ಖಾನೆಗಳಲ್ಲಿ ಸರಣಿ ಕಳ್ಳತನಗಳಾಗಿ, ಕಾರ್ಖಾನೆಯವರು ಭದ್ರತಾ ವೈಫಲ್ಯವೇ ಕಾರಣವೆಂದು ನಮಗೆ ಬರಬೇಕಿದ್ದ ಹಣವನ್ನು ಹಿಡಿದು ಹಾಕಿ, ಕಳ್ಳತನದ ಪ್ರಕರಣಗಳನ್ನು ಪತ್ತೆ ಹಚ್ಚಿದರೆ ಮಾತ್ರ ಹಣ ಬಿಡುಗಡೆ ಮಾಡುವುದಾಗಿಯೂ, ಇಲ್ಲವಾದಲ್ಲಿ ನಮ್ಮ ಭದ್ರತಾ ಸಂಸ್ಥೆಯ ಮೇಲೆ ಕೇಸು ದಾಖಲಿಸುವುದಾಗಿಯೂ ಧಮಕಿ ಹಾಕಿದ್ದರು.  ಆಗ ಅಖಾಡಕ್ಕೆ ಇಳಿದಿದ್ದು ನನ್ನ ಗುರುಗಳು ಮೇಜರ್ ಸುಬ್ಬಯ್ಯ, ಅದೇ ಮೊದಲನೆಯ ಬಾರಿಗೆ ನಾನು ಅವರೊಡನೆ ನಂದಗುಡಿ ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದೆ.  ಅಲ್ಲಿದ್ದರು ನೋಡಿ ಈ ರಾಘವೇಂದ್ರ,,,,ನೋಡಲು ಬ್ರಾಹ್ಮಣರಂತೆ ಕಾಣುತ್ತಿದ್ದರೂ ಮಾತು ಮಾತ್ರ ಖಡಕ್ ಗೌಡರಂತೆಯೇ ಇತ್ತು.  ಅಂದು ಅವರು ನಮ್ಮೊಡನೆ ನಡೆದುಕೊಂಡ ರೀತಿ, ನಂತರ ಆ ಪ್ರಕರಣಗಳನ್ನು ಬಗೆಹರಿಸಿದ ರೀತಿ ಇಂದಿಗೂ ನನ್ನ ಮನಸ್ಸಿನಲ್ಲಿ ಹಚ್ಚ ಹಸಿರಾಗಿದೆ.   ನೋಡಲು ಬಂದಿರುವವರು ಭಾರತೀಯ ಸೇನೆಯ ನಿವೃತ್ತ ಮೇಜರ್ ಎಂದು ಗೊತ್ತಾಗುತ್ತಿದ್ದಂತೆ ಎದ್ದು ನಿಂತು ಒಂದು ಸೆಲ್ಯೂಟ್ ನೀಡಿ ಗೌರವಿಸಿದ್ದರು. ಪಕ್ಕದ ಹೋಟೆಲ್ಲಿನಿಂದ ಬಿಸಿಬಿಸಿ ಟೀ, ಬಿಸ್ಕತ್ ತರಿಸಿ ಉಪಚರಿಸಿದ್ದರು. 

ಮೂರೂ ಕಾರ್ಖಾನೆಗಳ ಕಳ್ಳತನದ ಪ್ರಕರಣಗಳ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿ ಆ ಕಳ್ಳರನ್ನು ಆದಷ್ಟು ಬೇಗ ಹಿಡಿದು ಪ್ರಕರಣಗಳನ್ನು ಮುಕ್ತಾಯಗೊಳಿಸಬೇಕೆಂದು ಮೇಜರ್ ಸುಬ್ಬಯ್ಯನವರು  ಭಿನ್ನವಿಸಿ ಹೊರಟಾಗ ಅವರ ಕಾರಿನ ತನಕ ಬಂದು ಬೀಳ್ಕೊಟ್ಟು ಮತ್ತೊಂದು ಸೆಲ್ಯೂಟ್ ಹೊಡೆದಿದ್ದರು.  ಅದಾದ ನಂತರ ಆ ಪ್ರಕರಣಗಳ ಬಗ್ಗೆ ಅವರೊಡನೆ ನಾನು ನಿರಂತರ ಸಂಪರ್ಕದಲ್ಲಿದ್ದೆ, ಮೂರೂ ಕಾರ್ಖಾನೆಗಳ ಸ್ಥಳ ಪರಿಶೀಲನೆ ಮಾಡಲು ಅವರು ತಮ್ಮ ಸಿಬ್ಬಂದಿಯೊಡನೆ ಬಂದಾಗ  ಅವರೊಡನೆಯೇ ಇದ್ದು ತನಿಖೆಯಲ್ಲಿ ಸಹಕರಿಸಿದ್ದೆ, ಒಂದು ಕಾರ್ಖಾನೆಯಲ್ಲಿ ತಯಾರಾಗುತ್ತಿದ್ದ  ಸಂಸ್ಕರಿತ ನೀರಿನ ಬಾಟಲಿಗಳ ದೊಡ್ಡ ಡಬ್ಬವನ್ನೇ ಅವರ ಜೀಪಿನಲ್ಲಿ ತುಂಬಿಸಿ ಕಳುಹಿಸಿದ್ದೆ.  ಸುಮಾರು ಒಂದು ತಿಂಗಳ ಅವಧಿಯಲ್ಲಿ ಸಾಕಷ್ಟು ಅನುಮಾನಾಸ್ಪದ ವ್ಯಕ್ತಿಗಳನ್ನು ಹಿಡಿದು ಬೆಂಡೆತ್ತಿ, ಬಾಯಿ ಬಿಡಿಸಿ ಕೊನೆಗೂ ಎಲ್ಲಾ ಪ್ರಕರಣಗಳನ್ನೂ ಪತ್ತೆ ಹಚ್ಚಿದ್ದರು.  ಅದೆಷ್ಟೋ ಪ್ರಕರಣಗಳಲ್ಲಿ ಕಾರ್ಖಾನೆಯ ಕಾರ್ಮಿಕರೇ ಶಾಮೀಲಾಗಿದ್ದರು, ಎಲ್ಲವೂ ಸುಖಾಂತ್ಯವಾಗಿ ನಮ್ಮ ಸಂಸ್ಥೆಗೆ ಹತ್ತಿದ್ದ ಕಳಂಕ ತೊಡೆದು ಹೋಗಿತ್ತು, ಕಳ್ಳರು ಸೆರೆಮನೆಯ ಪಾಲಾಗಿದ್ದರು!

ಆದರೆ ಆ ಪ್ರಕರಣಗಳಲ್ಲಿ ರಾಘವೇಂದ್ರ ಅವರು ಒಬ್ಬ ಪೊಲೀಸ್ ಅಧಿಕಾರಿಯಾಗಿ ನಡೆದುಕೊಂಡ ರೀತಿಯನ್ನು ಬಹಳ ಹತ್ತಿರದಿಂದ ನೋಡಿದ್ದ ನನಗೆ ಇಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದರೆ ನಂಬಲು ಸಾಧ್ಯವಾಗುತ್ತಿಲ್ಲ!  ಸ್ವಲ್ಪ ಹುಡುಗಾಟದ ಸ್ವಭಾವವಾದರೂ ಆ ಗತ್ತು, ಕರ್ತವ್ಯ ನಿರ್ವಹಿಸುತ್ತಿದ್ದ ರೀತಿ, ಆ ಮಾತುಗಾರಿಕೆ, ನಿಜಕ್ಕೂ ನನಗೆ ಮೆಚ್ಚುಗೆಯಾಗಿತ್ತು.  ಪೊಲೀಸ್ ಅಧಿಕಾರಿಯಾಗಬೇಕು ಎನ್ನುವ ನನ್ನ ಕನಸು ಹೇಗೆ ನುಚ್ಚು ನೂರಾಯಿತು, ಯಾಕೆ ನಾನು ಖಾಸಗಿ ಭದ್ರತಾ ಸೇವೆಯಲ್ಲಿ ತೊಡಗಿಸಿಕೊಂಡೆ ಎಂದು ಅವರೊಡನೆ ಹಲವಾರು ಬಾರಿ ಚರ್ಚಿಸಿದ್ದೆ!  ಆಗೆಲ್ಲಾ ಅವರು ಬೆನ್ನು ತಟ್ಟಿ ಮತ್ತೊಮ್ಮೆ ಪ್ರಯತ್ನ ಮಾಡು ಎನ್ನುತ್ತಿದ್ದರೇ ಹೊರತು ಜಂಭ ತೋರಿಸುತ್ತಿರಲಿಲ್ಲ!!  ಇಂಥ ಒಬ್ಬ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕಾದರೆ ಅದಿನ್ನೆಂಥಾ ಪರಿಸ್ಥಿತಿಯಲ್ಲಿ ಅವರು ಸಿಲುಕಿದ್ದಿರಬಹುದು? 

ಸರ್ಜಾಪುರದಲ್ಲಿ ಅವರು ಸೇವೆಯಲ್ಲಿದ್ದಾಗ ನಡೆದ ಇಸ್ಪೀಟ್ ಪ್ರಕರಣ, ಲೋಕಾಯುಕ್ತ ಧಾಳಿ, ನಂತರ ಅವರು ಕೆಲವು ದಿನ ಜೈಲಿನಲ್ಲಿದ್ದುದನ್ನು ಪತ್ರಿಕೆಗಳಲ್ಲಿ ಓದಿದ್ದೆ, ಆದರೆ ಆ ಮನುಷ್ಯ ಜೈಲಿಗೆ ಹೋಗುವಂಥ ಭ್ರಷ್ಟಾಚಾರ ಮಾಡಿರುತ್ತಾರೆಂದು ನನ್ನ ಮನಸ್ಸು ಒಪ್ಪಿರಲಿಲ್ಲ.  ಅದೇನೇ ಇರಲಿ, ಈಗಿನ ಸರ್ಕಾರದ ಆಡಳಿತದಲ್ಲಿ ಯಾವ ಖಡಕ್ ಅಧಿಕಾರಿಯೂ ಜೀವಂತವಿರಲು ಸಾಧ್ಯವಿಲ್ಲ ಎನ್ನುವುದು ಹಲವಾರು ಪ್ರಕರಣಗಳಲ್ಲಿ ಎಲ್ಲರಿಗೂ ಗೊತ್ತಾಗಿದೆ, ಇದು ಅಂಥದ್ದೇ ಇನ್ನೊಂದು ಪ್ರಕರಣ ಇದ್ದರೂ ಇರಬಹುದು, ಆದರೆ ಈ ಪ್ರಕರಣದಲ್ಲಿಯೂ ಸತ್ಯವಂತೂ ಹೊರಬರುವುದಿಲ್ಲ. 

ಅವರ ಮನೆಯವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ, ತಡವಾದರೂ ಪರವಾಗಿಲ್ಲ, ಅವರ ಸಾವಿನ ಹಿಂದಿನ ರಹಸ್ಯ ಹೊರಬರಲಿ.   ಅವರ ಆತ್ಮಕ್ಕೆ ಶಾಂತಿ ಸಿಗಲಿ. 

Friday, October 14, 2016

ಬ್ಯಾಗಾ ಬಾರೇ ತಿಮ್ಮಿ,,,,,,,,,,,,,,,


ತಿಮ್ಮಿ ಎಲ್ಲಿ,,,,,ನಿನ್ ತಿಮ್ಮಿ ಎಲ್ಲಿ 
ಆಂತಾವ್ರೆ ಇಲ್ಲಿ ಜನ ಕಣೆ ತಿಮ್ಮಿ!

ಕಾಣದಂಗ್ ನೀ ಹೋದೆ ಎಲ್ಲಿ 
ಬರದಂಗ್ ಇಲ್ಲಿ ನೀನಿದ್ದಿ ಎಲ್ಲಿ

ಯಾಕಿಂಗಾಡ್ತಿಯೇ ಅದ್ಯಾಕಿಂಗಾಡ್ತೀಯೇ
ಧಿಢೀರಂತ ಅದೆಲ್ಲಿ ಮಾಯಾ ಆಗ್ತೀಯೇ

ನೀನಿಲ್ದೆ ತಿಮ್ಮ ಇಲ್ಲಾ ಈ ಜೀವ ನಿಲ್ಲಾಕಿಲ್ಲಾ 
ಬ್ಯಾಗ ಬಾರೇ ತಿಮ್ಮಿ ಬ್ಯಾಗಾ ಬಾರೇ ತಿಮ್ಮಿ

ರಾಗಿಮುದ್ದೆ ಉಪ್ಪಿನೆಸ್ರು ಬಿಸಿ ಹಪ್ಪಳ ಒಸಿ ತುಪ್ಪ 
ಮಾಡಿಟ್ರೆ ನೀನು ಸ್ವರ್ಗಾ ಇಲ್ಲೇ ನೋಡೇ ತಿಮ್ಮೀ

ಮುನ್ಸೂ ಗಿನ್ಸೂ ಬುಡೇ ನೀನು ನಗ್ತಾ ನಗ್ತಾ ಬಾರೆ 
ನಿನ್ನಾ ಕಂಡು ನಗ್ತಾವ್ ಬಾನಾಗಿರೋ ಚಂದ್ರ ತಾರೆ

ತಿಮ್ಮಿ ನೀನು ಬರ್ತಾ ಇದ್ರೆ ,,,,,,,,,,,,,,,,,,,,,


ತಿಮ್ಮಿ 
ನೀನು 
ಬರ್ತಾ 
ಇದ್ರೆ 
ಸುತ್ತಾ
ಮುತ್ತಾ
ಹಸ್ರು !
ನಿನ್ನ
ಮೋರೆ
ಕಂಡ್ರೆ
ಸಾಕು
ಜೋರ್
ಆಯ್ತದೆ
ಉಸ್ರು!
ನೀನು
ಬರ್ನಿಲ್ಲಾ
ಅಂದ್ರೆ
ಯಾಕೋ
ಕಾಣೆ
ಸಪ್ಪೆ
ಆಯ್ತದ್
ಮೊಸ್ರು!
ಹುಳಿ
ಹೆಂಡ
ಉಪ್ಪುನ್
ಕಾಯಿ
ಬೇಕು
ಅಂತದ್
ಮನ್ಸು!
ಬ್ಯಾಡಾ
ತಿಮ್ಮಿ
ದೂರ
ಹೋಗಿ
ಕಳ್ಕ
ಬ್ಯಾಡಾ
ವಯ್ಸು!!
ಬಾರೇ
ಬ್ಯಾಗಾ
ತಡ
ಮಾಡ್ದೆ
ಮುಗ್ಯೋ
ಮುಂಚೆ
ಕನ್ಸು !
ನಾನು
ನೀನು
ಜೊತ್ಯಾ
ಗಿದ್ರೆ
ನಗ್ತೈತೆ
ಲೋಕ
ಮರ್ತು
ಮುನ್ಸೂ !!!! :