Saturday, September 5, 2015

ಕಾಡಬೇಡವೇ ಕೃಷ್ಣಸುಂದರಿ ,,,,,,,,,,,,,,,




ಏನೆಂದು  ಬಣ್ಣಿಸಲೇ ನಾ ನಿನ್ನ 
ನನ್ನ ಮನ ಗೆದ್ದ ಕೃಷ್ಣಸುಂದರಿ!
ಈ ಕೃಷ್ಣ ಜನ್ಮಾಷ್ಟಮಿಯಂದು 
ನಾ ಬೇಡವೆಂದರೂ ನೆನಪಾಗುವೆ 
ನಾ ಹೋಗೆಂದರೂ ಹೋಗದಿರುವೆ 
ಈ ಮನದಿ ನೆಲೆಯಾಗಿ ನಿಂದಿರುವೆ   
ಹೀಗೇಕೆ ಕಾಡುವೆಯೇ ಮುದ್ದುಚೆಲುವೆ! 

ವರುಷಗಳು ಇಪ್ಪತ್ತೆಂಟು ಕಳೆದರೂ  
ಎದೆಯಂಗಳದಿ ನೀ ಹಚ್ಚಹಸಿರು !
ಅಂದು ನೀ ಹಚ್ಚಿದ ಪ್ರೀತಿಸೊಡರು
ಉರಿಯುತಲೇ ಇದೆ ಆರದೇ ನೂರು  
ಬಿರುಗಾಳಿ ಸುಂಟರಗಾಳಿಗಳ ನಡುವೆ!! 

ಅದೆಂಥಾ ಮುದವಿತ್ತೇ ಆ ದಿನಗಳಲಿ 
ಅದೆಂಥಾ ಛಲವಿತ್ತೇ ಆಗ ಮನದಲ್ಲಿ 
ಅದೆಂಥಾ ಬಲವಿತ್ತೇ ಆ ನಿನ್ನ ಪ್ರೀತಿಯಲಿ 
ಅದೆಂಥಾ ಒಲವಿತ್ತೇ ಆ ನಿನ್ನ ಪ್ರೇಮದಲಿ 
ಅದೆಂಥಾ ಚೆಲುವಿತ್ತೇ ಪ್ರತಿ ಕ್ಷಣಕ್ಷಣದಲ್ಲಿ 
ಅದೆಂಥಾ ಮೋಹವಿತ್ತೇ ಆ ನಿನ್ನ ನಗುವಲ್ಲಿ!
ಅದೆಂಥಾ ನಶೆಯಿತ್ತೇ  ನಿನ್ನೊಲವಧಾರೆಯಲ್ಲಿ!

ದೇಶದುದ್ಧಗಲ ಸಂಚರಿಸಿದ ದೈತ್ಯಶಕ್ತಿ 
ನನ್ನಲಿ ತುಂಬಿದ್ದು ಆ ನಿನ್ನ ಮುಗ್ಧ ಪ್ರೀತಿ !
ಬಂದೂಕಿನ ಗುಂಡುಗಳು ಗುರಿ ತಲುಪುತಿದ್ದದ್ದು 
ಕಾರಣ ನಿನ್ನ ಮಧುರ ನಗುವ ನೆನಪಾಗುತಿದ್ದದ್ದು!
ಸಾಧನೆಯ ಶಿಖರದಲಿ ಗುರಿಮುಟ್ಟಿ ನಲಿದಿದ್ದು 
ನಿನ್ನದೇ ಪ್ರೀತಿಸಿಂಚನ ಸ್ಫೂರ್ತಿಯಾದದ್ದು!  
ಹೃದಯಗಳ ಜೋಡಿಸಿ ಬೆಸೆದ ಪ್ರೀತಿ ಸೋತಿದ್ದು 
ಧರ್ಮವೇ ನಡುವೆ ಗೋಡೆಯಾಗಿ ನಿಂತಿದ್ದು!

ನೀನಿಂದು ಕೇವಲ ನೆನಪಾಗಿಯೇ  ಉಳಿದಿದ್ದು 
ದುರಂತವಲ್ಲವೇನೇ ಈ ಅರ್ಥಗೆಟ್ಟ ಬಾಳಿನದ್ದು!!!!!! :-( :-( 

No comments: