ಏನೆಂದು ಬಣ್ಣಿಸಲೇ ನಾ ನಿನ್ನ
ನನ್ನ ಮನ ಗೆದ್ದ ಕೃಷ್ಣಸುಂದರಿ!
ಈ ಕೃಷ್ಣ ಜನ್ಮಾಷ್ಟಮಿಯಂದು
ನಾ ಬೇಡವೆಂದರೂ ನೆನಪಾಗುವೆ
ನಾ ಹೋಗೆಂದರೂ ಹೋಗದಿರುವೆ
ಈ ಮನದಿ ನೆಲೆಯಾಗಿ ನಿಂದಿರುವೆ
ಹೀಗೇಕೆ ಕಾಡುವೆಯೇ ಮುದ್ದುಚೆಲುವೆ!
ವರುಷಗಳು ಇಪ್ಪತ್ತೆಂಟು ಕಳೆದರೂ
ಎದೆಯಂಗಳದಿ ನೀ ಹಚ್ಚಹಸಿರು !
ಅಂದು ನೀ ಹಚ್ಚಿದ ಪ್ರೀತಿಸೊಡರು
ಉರಿಯುತಲೇ ಇದೆ ಆರದೇ ನೂರು
ಬಿರುಗಾಳಿ ಸುಂಟರಗಾಳಿಗಳ ನಡುವೆ!!
ಅದೆಂಥಾ ಮುದವಿತ್ತೇ ಆ ದಿನಗಳಲಿ
ಅದೆಂಥಾ ಛಲವಿತ್ತೇ ಆಗ ಮನದಲ್ಲಿ
ಅದೆಂಥಾ ಬಲವಿತ್ತೇ ಆ ನಿನ್ನ ಪ್ರೀತಿಯಲಿ
ಅದೆಂಥಾ ಒಲವಿತ್ತೇ ಆ ನಿನ್ನ ಪ್ರೇಮದಲಿ
ಅದೆಂಥಾ ಚೆಲುವಿತ್ತೇ ಪ್ರತಿ ಕ್ಷಣಕ್ಷಣದಲ್ಲಿ
ಅದೆಂಥಾ ಮೋಹವಿತ್ತೇ ಆ ನಿನ್ನ ನಗುವಲ್ಲಿ!
ಅದೆಂಥಾ ನಶೆಯಿತ್ತೇ ನಿನ್ನೊಲವಧಾರೆಯಲ್ಲಿ!
ದೇಶದುದ್ಧಗಲ ಸಂಚರಿಸಿದ ದೈತ್ಯಶಕ್ತಿ
ನನ್ನಲಿ ತುಂಬಿದ್ದು ಆ ನಿನ್ನ ಮುಗ್ಧ ಪ್ರೀತಿ !
ಬಂದೂಕಿನ ಗುಂಡುಗಳು ಗುರಿ ತಲುಪುತಿದ್ದದ್ದು
ಕಾರಣ ನಿನ್ನ ಮಧುರ ನಗುವ ನೆನಪಾಗುತಿದ್ದದ್ದು!
ಸಾಧನೆಯ ಶಿಖರದಲಿ ಗುರಿಮುಟ್ಟಿ ನಲಿದಿದ್ದು
ನಿನ್ನದೇ ಪ್ರೀತಿಸಿಂಚನ ಸ್ಫೂರ್ತಿಯಾದದ್ದು!
ಹೃದಯಗಳ ಜೋಡಿಸಿ ಬೆಸೆದ ಪ್ರೀತಿ ಸೋತಿದ್ದು
ಧರ್ಮವೇ ನಡುವೆ ಗೋಡೆಯಾಗಿ ನಿಂತಿದ್ದು!
ನೀನಿಂದು ಕೇವಲ ನೆನಪಾಗಿಯೇ ಉಳಿದಿದ್ದು
ದುರಂತವಲ್ಲವೇನೇ ಈ ಅರ್ಥಗೆಟ್ಟ ಬಾಳಿನದ್ದು!!!!!! :-( :-(
No comments:
Post a Comment