Friday, August 28, 2009

ಧರೆಗಿಳಿದು ಬಾ ದೇವ,

ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ,
ಇವರಿಗೆ ಕಂಡಿದ್ದು ಲಂಗೋಟಿಯ ಹಿಂದಿನ ಬೆತ್ತಲೆ ಮೈ,
ಕಾಣಲೇ ಇಲ್ಲ ಇವರ ಕುರುಡು ಕಣ್ಗಳಿಗೆ, ಅವನೂರಿದ ಹೆಜ್ಜೆ,
ಅವ ನಡೆದ ದಾರಿ, ಅವ ಮಾಡಿದ ತ್ಯಾಗ, ಹರಿದ ಅವನ ನೆತ್ತರು.
ಧರೆಗಿಳಿದು ಬಾ ದೇವ, ನೋಡಿವರ ಅಟ್ಟಹಾಸ!

’ಗ್ಯಾಂಡಿ’ಯ ಕಟ್ಟಿಕೊಂಡಳು, ಗಾಂಧಿಯೆಂದು ಬದಲಿಸಿದಳು,
ಅಪ್ಪನಾರೆಂದು ಅರಿಯದೆ ಮೆರೆದ ಮಗನ ಕೊಲಿಸಿದಳು,
ಉತ್ತರ ದಕ್ಷಿಣ, ಪೂರ್ವ ಪಶ್ಚಿಮವೆಲ್ಲೇ ಕೇಳಲಿ, ಜನ
ಮೊರೆಯುವಂತೆ ಮೋಡಿಯ ಮಾಡಿದಳು, ತಾ ಗಾಂಧಿಯ
ಮಗಳೆಂದು, ಸತ್ಯವ ಕೊಂದಳು, ತಾ ಮೆರೆದಳು.
ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ!

ಮತದಾನವ ಮರೆತರು, ದೇಶ ಕಟ್ಟುವ ಕಾಯಕ ಮರೆತರು,
ಮಾನವತ್ವವ ಮರೆತರು, ಹಸಿದವರಿಗೆ ಅನ್ನ ನೀಡದೆ ಮೆರೆದರು,
ಕಂಗಾಲಾಗಿ ನಿಂತ ಹೆಂಗಳೆಯರ ಮರೆತರು, ಹಿಂದೆ ಬಂದವರ,
ಮುಂದೆ ನಿಂತವರನೆಲ್ಲಾ ಮರೆತರು, ಸ್ವಾರ್ಥಿಗಳಾದರು,
ಸ್ವಾರ್ಥವನೇ ಮೆರೆದರು, ದೇಶವ ಕೊಂದರು, ತಮ್ಮತನವ ಮರೆತರು,
ಅಂಧಾನುಕರಣೆ ಮಾಡಿದರು, ಥರಾವರಿ ರೋಗಗಳ ತಂದರು,
ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ!

ಕಾಣರಿವರು, ಕೇಳರಿವರು, ವಿದ್ಯಾವಂತರಿವರು, ಹೈಟೆಕ್ ಮಂದಿಯಿವರು,
ಕಾಣದಿವರಲ್ಲಿ, ನಮ್ಮ ಸಂಸ್ಕೃತಿ, ಕಾಣುವುದು ಬರೀ ಅಮೇರಿಕಾದ ನೆರಳು,
ಗುಲಾಮರಾಗಿಹರು, ಪರದೇಶಿ ಆಚಾರಕೆ, ಸಂಸ್ಕಾರವಿಲ್ಲ ಇವರ ಆತ್ಮಗಳಿಗೆ,
ಕೊನೆಗೊಮ್ಮೆ ಸಾಯುವರು, ಮಹಡಿಯಿಂದ ಹಾರಿ, ಆತ್ಮಸ್ಥೈರ್ಯವಿಲ್ಲದೆ ಜಾರಿ,
ಧರೆಗಿಳಿದು ಬಾ ದೇವ, ನೋಡೀ ಅಪ್ರಬುದ್ಧರ ವಿಕಟಾಟ್ಟಹಾಸ!!

ನಿನ್ನ ಕೈಲಾದರೆ, ಕೊಡು ಮದ್ದು, ಈ ವಿಕೃತ ಮರೆತ ಮನಗಳಿಗೆ,
ಆಗಲಾದರೂ ಬರಲಿ, ನೆನಪು, ದೇಶ ಕಟ್ಟುವ ಕಾಯಕಕೆ,
ಸಂಸ್ಕೃತಿಯ ನೆನೆದು ಹೆಮ್ಮೆ ಪಡುವ, ನಮ್ಮವರೆಂದು ಉಪಚರಿಸುವ,
ನಮ್ಮ ದೇಶವೆಂದು ಬೀಗುವ, ನೈತಿಕತೆಯಿಂದ ಬಾಳುವ ಛಲಕೆ,
ಧರೆಗಿಳಿದು ಬಾ ದೇವ, ಅಳಿಸಿವರ ಮೌಢ್ಯವ, ನೀಡಿವರ ಬಾಳ್ಗೆ ಮುಕುತಿ,
ಧರೆಗಿಳಿದು ಬಾ ದೇವ, ತೆರೆಸಿವರ ಕಣ್ಣನು, ಮರೆಸಿವರ ಹಮ್ಮನು!!

No comments: