Tuesday, February 3, 2015

ಯಾಕೆ ಹೀಗಾಯ್ತು?

ಜೇನು ಬೆರೆಸಿ 
ಕುಡಿಯಲೆಂದು 
ಹಾಲು ತಂದರೆ 
ಒಡೆದು ಹೆಪ್ಪಾಯ್ತು !
        
ರಸವ ಹಿಂಡಿ 
ಕುಡಿಯಲೆಂದು 
ಹಣ್ಣು ತಂದರೆ 
ಅದು ವಿಷವಾಯ್ತು!

ಉರಿವ ದೇಹ 
ತಂಪಾಗಲೆಂದು 
ಹೊರಗೆ ಹೋದರೆ 
ಬಿಸಿಗಾಳಿ ಉರಿದಿತ್ತು!

ಮಧುರ ನೆನಪ 
ಸವಿಯ ಹೋದರೆ  
ಹುಣ್ಣಿಮೆಯ ರಾತ್ರಿ
ಅಮಾವಾಸ್ಯೆಯಾಗಿತ್ತು!

ಹೆಣ್ಣೆಂದು ನಂಬಿದ್ದು 
ಒಲವೆಂದು ತಬ್ಬಿದರೆ 
ಪ್ರೀತಿಯು ಮರೆಯಾಗಿ 
ವಿಷದ ಹಾವಾಗಿತ್ತು!

No comments: