Wednesday, March 18, 2015

ಸಾಕು ನಿಲ್ಲಿಸು ಮಹಾರಾಯ !!!!



ಸಾಕು ನಿಲ್ಲಿಸು ಮಹಾರಾಯ 
ಸಾಕಾಗಿದೆ  ನಿನ್ನ ಆರ್ಭಟ!
ಕರುಣೆಯಿಲ್ಲವೇ ನಿನಗಿನಿತು 
ಕೊಂಡೊಯ್ಯುತಿರುವೆ ಉತ್ತಮರ 
ನೀಡುತಿರುವೆ ಅಗಾಧ ಶೋಕವ 
ನಿಟ್ಟುಸಿರು ಬೇಗುದಿ ಕಂಬನಿಗಳ 
ಮಹಾಪೂರವ ತೆಡೆಯಲಾಗುತ್ತಿಲ್ಲಯ್ಯ 
ದಯೆಯಿಲ್ಲದ ನಿಷ್ಕರುಣಿ ಜವರಾಯ 
ಸಾಕು ನಿಲ್ಲಿಸು ಓ ಮಹಾರಾಯ 
ಕೊಂಡೊಯ್ದು ತುಂಡರಿಸು ಕತ್ತರಿಸು 
ಕುದಿವೆಣ್ಣೆಯಲಿ ಬೇಯಿಸು ನೋಯಿಸು 
ಮಾನಗೆಟ್ಟ ಈ ರಾಜಕಾರಣಿಗಳ 
ಖದೀಮರ  ಕಳ್ಳರ ದರೋಡೆಕೋರರ 
ಬಿಟ್ಟುಬಿಡಯ್ಯಾ ಪ್ರಾಮಾಣಿಕರ 
ಕೈಮುಗಿದು ಬೇಡುವೆ ಜವರಾಯ 
ತಡೆಯಲಾಗದು ಈ ಮನಕೆ 
ದಕ್ಷ ಪ್ರಾಮಾಣಿಕ ಜೀವಗಳ ಸಾವ! 
ಬೇಡಯ್ಯ ಜವರಾಯ ಬರದಿರು ಭುವಿಗೆ 
ಕೊಂಡೊಯ್ಯಲು ಪ್ರಾಮಾಣಿಕರ 
ಬರಲೇಬೇಕೆಂದಿದ್ದರೆ ಬಾ ಪರವಾಗಿಲ್ಲ 
ಕೊಂಡೊಯ್ಯಿ ಈ ಭ್ರಷ್ಟ ರಾಜಕಾರಣಿಗಳ!  :-( :-( :-(

No comments: