ಸಾಕು ನಿಲ್ಲಿಸು ಮಹಾರಾಯ
ಸಾಕಾಗಿದೆ ನಿನ್ನ ಆರ್ಭಟ!
ಕರುಣೆಯಿಲ್ಲವೇ ನಿನಗಿನಿತು
ಕೊಂಡೊಯ್ಯುತಿರುವೆ ಉತ್ತಮರ
ನೀಡುತಿರುವೆ ಅಗಾಧ ಶೋಕವ
ನಿಟ್ಟುಸಿರು ಬೇಗುದಿ ಕಂಬನಿಗಳ
ಮಹಾಪೂರವ ತೆಡೆಯಲಾಗುತ್ತಿಲ್ಲಯ್ಯ
ದಯೆಯಿಲ್ಲದ ನಿಷ್ಕರುಣಿ ಜವರಾಯ
ಸಾಕು ನಿಲ್ಲಿಸು ಓ ಮಹಾರಾಯ
ಕೊಂಡೊಯ್ದು ತುಂಡರಿಸು ಕತ್ತರಿಸು
ಕುದಿವೆಣ್ಣೆಯಲಿ ಬೇಯಿಸು ನೋಯಿಸು
ಮಾನಗೆಟ್ಟ ಈ ರಾಜಕಾರಣಿಗಳ
ಖದೀಮರ ಕಳ್ಳರ ದರೋಡೆಕೋರರ
ಬಿಟ್ಟುಬಿಡಯ್ಯಾ ಪ್ರಾಮಾಣಿಕರ
ಕೈಮುಗಿದು ಬೇಡುವೆ ಜವರಾಯ
ತಡೆಯಲಾಗದು ಈ ಮನಕೆ
ದಕ್ಷ ಪ್ರಾಮಾಣಿಕ ಜೀವಗಳ ಸಾವ!
ಬೇಡಯ್ಯ ಜವರಾಯ ಬರದಿರು ಭುವಿಗೆ
ಕೊಂಡೊಯ್ಯಲು ಪ್ರಾಮಾಣಿಕರ
ಬರಲೇಬೇಕೆಂದಿದ್ದರೆ ಬಾ ಪರವಾಗಿಲ್ಲ
ಕೊಂಡೊಯ್ಯಿ ಈ ಭ್ರಷ್ಟ ರಾಜಕಾರಣಿಗಳ! :-( :-( :-(
No comments:
Post a Comment