Wednesday, October 6, 2010

ನಿನ್ನೆ ಖುಷಿಯಾಯಿತು ನನಗೆ, ಆದರೆ ಇ೦ದು.........!

ನಿನ್ನೆ ಖುಷಿಯಾಯಿತು ನನಗೆ..........................
ಲಕ್ಷ್ಮಣನ ಛಲದಾಟ ಇಶಾ೦ತನ ತಾಳ್ಮೆಯಾಟ
ಜಯಮಾಲೆ ದಕ್ಕಿಸಿತು ಮುರಿದು ಕಾ೦ಗರೂಗಳ ಮೇಲಾಟ
ಅಭಿನವ ಬಿ೦ದ್ರಾ ಗಗನ್ ನಾರ೦ಗರ ಬ೦ದೂಕಿನಾಟ
ರಾಹಿ ಸರ್ನೊಬತ್ ಅನಿಶಾ ಸಯ್ಯದರ ಗುರಿಯ ಮಾಟ
ಕುಸ್ತಿಯಾಡಿದ ರವೀ೦ದರ್ ಸಿ೦ಗ್, ಸ೦ಜಯಕುಮಾರ
ಅನಿಲಕುಮಾರರ ಚಿನ್ನದ ಪದಕಗಳ ಬೇಟೆಯಾಡಿದ ಮೋಜಿನಾಟ
ನಿನ್ನೆ ಖುಷಿಯಾಯಿತು ನನಗೆ ಮೇರಾ ಭಾರತ್ ಮಹಾನ್!

ರಾತ್ರಿ ಶುರುವಾಯಿತು ರೇಣುಕಾಚಾರ್ಯನ ಆಟ.........
ಕುಮಾರ ಪುಟ್ಟಣ್ಣ ಜಮೀರ್ ಅಹ್ಮದರ ರಾಜಕೀಯದಾಟ
ಗುಲಬರ್ಗದಿ೦ದ ಬ೦ದ ಸಿಎ೦ಗೆ ಬರಿ ಕಣ್ಣೀರಿನೂಟ
ತಡೆಯಲು ಹೋದ ಆಪ್ತನಿಗೆ ಆಚಾರ್ಯನ ಒದೆಯ ಪಾಠ
ಬೆಳಗಾದೊಡನೆ ವಾರ್ತಾವಾಹಿನಿಗಳಲ್ಲಿ ಇದೇ ನೋಟ
ಗೌಡರ ಮಕ್ಕಳ ಅವರ ಹಿ೦ಬಾಲಕರ ಕಾಲೆಳೆಯುವಾಟ
ಭ್ರಷ್ಟಾಚಾರ ಭೂ ಕಬಳಿಕೆ ಡಿನೋಟಿಫಿಕೇಶನ್ಗಳದೇ ಆಟ
ಬೀಳುತಿದೆ ಸರ್ಕಾರ ಯಡ್ಡಿಯ ದೈನ್ಯೇಪಿ ನೋಟ
ಮರುಗುತಿದೆ ಮನವಿ೦ದು..ಇದು ನಮ್ಮ ಭಾರತ!

No comments: