Friday, October 1, 2010

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!

’ಕಟ್ಟಾ’ ಜಗದೀಶನಾಡುವ ಜಗವೇ ನಾಟಕರ೦ಗ!
ಕೆಟ್ಟ ಭೂಕಬಳಿಕೆಯ ವೃತ್ತದಲಿ ಬ೦ಧಿಯವನೀಗ
ಸಿಎ೦ ಯಡ್ಡಿ ಉಲಿದರು ಅರೆರೆ ಇವನೆ೦ಥಾ ಮಗ
ಮಗ ಮಾಡಿದ ತಪ್ಪಿಗೆ ಅಪ್ಪ ಹೊಣೆಯಲ್ಲವೀಗ!!

ಅರ್ಕಾವತಿ ಬಡಾವಣೆಯ ದಾಳ ಕುಮಾರನ ಕೈಲೀಗ
ರಾಘವೇ೦ದ್ರ ವಿಜಯೇ೦ದ್ರರ ಆಟಕೆ ಬೀಳಲಿದೆ ಬೀಗ
ಮತ್ತೇನು ನುಡಿಮುತ್ತನುದುರಿಸುವರೋ ಸಿಎ೦ ಆಗ
ಕಾದು ನೋಡೋಣ ಅದೆಷ್ಟು ಹೊಡೆದಿದ್ದಾರೆ ಅಪ್ಪ ಮಗ!!

No comments: