Sunday, June 2, 2013

ಸೋತಿದೆ ಮಲ್ಹಾರ ರಾಗ...!

ಸುರಿಯುತಿದೆ ಮುಂಗಾರು ಮಳೆ ಮನೆಯ ಹೊರಗೆ 
ಹರಿಯುತಿದೆ ನೆನಪುಗಳ ಹೊಳೆ ಮನದ ಒಳಗೆ ...!

ಅಂದು ನೀ ಜೊತೆಯಿರಲು ಬದುಕು ಬಲು ಸುಂದರ 
ಇಂದು ನೀ ನೆನಪಾಗಿರಲು ಈ ಬದುಕು ದುಸ್ತರ ....!

ಅಬ್ಬರಿಸುತಿಹ ಮಳೆರಾಯ ಸಿಡಿಲು ಗುಡುಗು ಮಿಂಚಿನೊಡನೆ 
ನಗುತಿಹಳು ಇಳೆ ಒಡಲ ದಾಹ  ತಣಿಸಿದ ಇನಿಯನೊಡನೆ...! 

ಜೊತೆಯಾಗಿ ನೀ ಹಿಡಿದ ಕೊಡೆಯ ನೆನಪಾಯಿತು ನನಗಿಂದು 
ಭೋರ್ಗರೆವ ಮಳೆಯಬ್ಬರದಿ ಮರೆಯಾಯಿತು ಕಂಬನಿಯ ಬಿಂದು.. !

ಭುವಿಯ ಕಸ ತೊಳೆದು ಹೊಸ ಹಸಿರ ತರುವ ಮಳೆರಾಯನೀಗ 
ಮನದಿ ಕವಿದ ಕತ್ತಲ ತೊಳೆಯಲಾಗದೇ ಸೋತಿದೆ ಮಲ್ಹಾರ ರಾಗ...!

2 comments:

Parthasarathy said...

ಮನದ ಕೊಳೆಯನು ಮನೆವೆ ತೊಳೆಯಬೇಕು !
ಪ್ರೇಮವು ಕೊಳಕು ನೀರಾಗದೆ ಹರಿವ ಅಂತರ್ಗಂಗೆಯಾಗಬೇಕು
-ಪಾರ್ಥಸಾರಥಿ

Parthasarathy said...
This comment has been removed by a blog administrator.