Tuesday, June 18, 2013

ಮಧುಮೇಹಿಯಂತೆ ನಾನಿಂದು...... !

ಅಧಿಕೃತವಾಗಿಂದು  ಧೃಡವಾಗಿದೆ ನಾನೊಬ್ಬ ಮಧುಮೇಹಿಯೆಂದು 
ಸವಿಮಾತಿನ ಸಕ್ಕರೆಯ ಎಲ್ಲರಿಗೂ ಹಂಚಿರುವೆ ಆದರೂ ಹೆಚ್ಚೆಂದು 

ನುಡಿದರು  ವೈದ್ಯರು ತಪ್ಪಿಯೂ ಆಲೂ ಅನ್ನ  ತಿನ್ನದಿರೆಂದು ....!
ಅನ್ನಪೂರ್ಣೆಯ ಕ್ಷಮೆ ಕೋರಿ ಅನ್ನ  ತಿನ್ನುವುದ ನಿಲಿಸುವೆ ಇಂದು!!! 

ಗೋಧಿ ಚಪಾತಿ ರಾಗಿಯ ರೊಟ್ಟಿಗಳೇ ಗತಿ ಉದರಕೆ ಮುಂದು ..... 
ರಾಗಿ ಮುದ್ದೆ ಮಾಡಿ ತಿನಿಸಲು ಸಾಗರ ದಾಟಿ ನೀ ಬರುವೆ ಎಂದು.... ?

 ಅಮ್ಮನ ಪ್ರಾಣಪಕ್ಷಿಯ ಅರಿವಿಲ್ಲದೆ ಎಗರಿಸಿದ್ದೆ ನೀ ಅಂದು ... !
ಬಂದಿರುವೆಯಾ ಮರಳಿ ಈಗ ನನ್ನನ್ನೂ ಕಾಡಲೇಬೇಕೆಂದು. ?

ಆದರೂ ತಿಳಿದುಕೋ ಬಂಡೆಯಂಥ ಗಟ್ಟಿ ಹೃದಯವಿದು ನನ್ನದು ..!
ಸುಲಭವಾಗಿ ಜಯಿಸಲಾರೆ, ಕೊಂಡೊಯ್ಯಲಾರೆ ನನ್ನ ನೀನೆಂದೂ.. !!

No comments: