Friday, January 22, 2016

ರೋಹಿತ್ ವೇಮುಲ ಆತ್ಮಹತ್ಯೆಯ ಸುತ್ತ........... !

ರೋಹಿತ್ ವೇಮುಲ ಪ್ರಕರಣದಲ್ಲಿ ಕನ್ಫ್ಯೂಸ್ ಆಗುವಂಥದ್ದು ಇಲ್ಲಿ ಏನೂ ಇಲ್ಲ! ಓದಲೆಂದು ವಿಶ್ವವಿದ್ಯಾನಿಲಯ ಸೇರಿದವನು ಓದಬೇಕಿತ್ತು, ಈಗ ಬರುತ್ತಿರುವ ವರದಿಗಳ ಪ್ರಕಾರ ಅವನು ದಲಿತ ಎಂದು ಸುಳ್ಳು ಜಾತಿ ಪ್ರಮಾಣಪತ್ರವನ್ನು ನೀಡಿ ದಾಖಲಾಗಿದ್ದ. ೨೦೦೫ರಲ್ಲಿಯೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವೂ ಆಗಿದ್ದ, ಹಿಂದೂ ವಿರೋಧಿ ನೀತಿ, ಭಯೋತ್ಪಾದಕ ಯಾಕೂಬ್ ಮೆಮನ್ ಗೆ ನೀಡಿದ ಗಲ್ಲು ಶಿಕ್ಷೆಯ ವಿರುದ್ಧ ಅವನ ಹೇಳಿಕೆಗಳು, ವಿವೇಕಾನಂದರನ್ನು ತುಚ್ಚ ಭಾಷೆಯಲ್ಲಿ ನಿಂದಿಸಿದ್ದು, ಎಬಿವಿಪಿ ಹಾಗೂ ಆರೆಸ್ಸೆಸ್ ಬಗ್ಗೆ ಅವನು ಬೆಳೆಸಿಕೊಂಡಿದ್ದ ದ್ವೇಷ, ಇವೆಲ್ಲವೂ ಅವನು ಹೇಗೆ ದಾರಿ ತಪ್ಪಿದ್ದ ಎನ್ನುವುದನ್ನು ತೋರಿಸುತ್ತವೆ. ಓದಲೆಂದು ಹೋದವರು ತಮ್ಮ ಜವಾಬ್ಧಾರಿಯನ್ನು ಮರೆಯಬಾರದು, ಇವನು ಮರೆತ, ಇವನ ದುಂಡಾವರ್ತಿಯನ್ನು ಸಹಿಸಲಾಗದೆ ಇವನನ್ನು ತರಗತಿಗಳಿಂದ ಆಚೆಗಟ್ಟಿದ್ದರು, ಅವನಿಗೆ ಸಿಗುತ್ತಿದ್ದ ಸ್ಕಾಲರ್ ಶಿಪ್ ಕೂಡಾ ನಿಲ್ಲಿಸಿದರು, ಏಕೆಂದರೆ ದಲಿತ ಎಂದು ಅಂಬೇಡ್ಕರ್ ಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ಏನು ಮಾಡಿದರೂ ನಡೆಯುತ್ತದೆನ್ನುವ ಮನೋಭಾವ ಅವನಲ್ಲಿ ಬಲವಾಗಿ ಬೇರೂರಿತ್ತು. ಅವನು ಮಾಡಿಕೊಂಡ ತಪ್ಪಿಗೆ ಅವನು ಪ್ರಾಣ ಬಿಟ್ಟಿದ್ದಾನೆಯೇ ಹೊರತು ಯಾರನ್ನೂ ದೂಷಿಸುವಂತಿಲ್ಲ. ಅವನು ನಕ್ಷತ್ರವೂ ಅಲ್ಲ, ತ್ಯಾಗಮಯಿಯೂ ಅಲ್ಲ,,,,ವ್ಯವಸ್ಥೆಯ ಬಲಿಪಶುವೂ ಅಲ್ಲ! ತನ್ನ ಸ್ವಯಂಕೃತಾಪರಾಧದಿಂದ ತನಗೆ ತಾನೇ ಮೃತ್ಯುವಾದ ಅಷ್ಟೆ! ಇಲ್ಲಿ "ದಲಿತ" ಎನ್ನುವ ಪದವನ್ನು ಬಳಸುವ ಅವ್ಶ್ಯಕತೆಯಂತೂ ಖಂಡಿತ ಅಲ್ಲ, ಏಕೆಂದರೆ ಅವನು ದಲಿತ ಅಲ್ಲ ಎಂದು ಅವನ ಮನೆಯವರು ಧೃಡಪಡಿಸಿದ್ದಾರೆ. ಮಾಧ್ಯಮಗಳು ಹಾಗೂ ಅವಕಾಶವಾದಿ ಖಾನ್-ಗ್ರೇಸ್ ಪಕ್ಷ ಹಾಗೂ ನಾಚಿಕೆಗೆಟ್ಟ ಅರವಿಂದ್ ಕೇಜ್ರಿವಾಲ್ನಂಥವರು ಇವನ ಸಾವಿನಲ್ಲಿಯೂ ಲಾಭ ಮಾಡಿಕೊಳ್ಳಲು ಹೊರಟಿರುವುದರಿಂದ ಇದೊಂದು ದೊಡ್ಡ ಸುದ್ಧಿಯಾಗಿದೆ. ಇಲ್ಲದಿದ್ದರೆ ಇದೇ ಖಾನ್-ಗ್ರೇಸ್ ಪಕ್ಷದ ಅಧಿಕಾರಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಇತರ ವಿದ್ಯಾರ್ಥಿಗಳ ಬಗ್ಗೆ ಏಕೆ ಯಾವ ಮಾಧ್ಯಮದವರು ಅಥವಾ ರಾಜಕೀಯ ನಾಯಕರು ಬಾಯ್ತೆರೆಯಲಿಲ್ಲ? ಎಲ್ಲವೂ ರಾಜಕೀಯ ಪ್ರೇರಿತ ನಾಟಕವಷ್ಟೆ.
**********************************************************************************************************
************************************************************************************

ಅಂದು ರಾಮಾಯಣದಲ್ಲಿ ಮಂಥರೆಯಿದ್ದಳು
ಮನೆಯೊಡೆಯಲು,,, ಮಗನ ಕಾಡಿಗಟ್ಟಲು !
ಅಂದು ಮಹಾಭಾರತದಲ್ಲಿ ಶಕುನಿಯಿದ್ದ
ನಿರ್ದೋಷಿ ಪಾಂಡವರ ವನವಾಸಕ್ಕಟ್ಟಲು!
ಇಂದೂ ಇದ್ದಾರೆ ಅದೇ ಮಂಥರೆ ಶಕುನಿಯರು
ಟೌನ್ ಹಾಲ್ ಮುಂದೆ ಧರಣಿ ನಡೆಸಲು
ದಲಿತನಲ್ಲದವನ ದಲಿತನೆಂದು ಘೋಷಿಸಲು
ದೇಶದ್ರೋಹಿಯೊಬ್ಬನ ನಕ್ಷತ್ರವಾಗಿಸಲು !
ಅಂತರ್ಜಾಲವಿದ್ದರೇನು ಫೇಸ್ಬುಕ್ ವಾಟ್ಸಪ್ಪಿದ್ದರೇನು
ಇವರು ಅದೇ ಅಸಹಿಷ್ಣು ದರಿದ್ರ ಹಿಂದೂಗಳು !
ಶತಶತಮಾನಗಳಿಂದಲೂ ತಮ್ಮೊಳಗೇ ಕಚ್ಚಾಡುತ್ತ
ತಮ್ಮಸ್ತಿತ್ವವ ಮರೆತು ದೇಶವ ಪರರಿಗೆ ಕೊಟ್ಟವರು! !!!
*********************************************************************************
*********************************************************************************

ಅಂದು, ಕ್ರಿಸ್ತಪೂರ್ವ ೩೨೬ರಲ್ಲಿ ಗ್ರೀಕ್ ದೊರೆ ಅಲೆಕ್ಸಾಂಡರ್ ಭಾರತದ ಮೇಲೆ ಆಕ್ರಮಣ ಮಾಡಿದಾಗ ಅವನ ಮೊದಲ ಯುದ್ಧ ಪುರೂರವನ ಮೇಲೆ,,, ಆದರೆ ಅವನ ಪಕ್ಕದೂರಿನ ದೊರೆ ಅಂಬಿ ಪುರೂರವನಿಗೆ ಬೆಂಬಲಿಸದೆ ಗ್ರೀಕ್ ಆಕ್ರಮಣಕಾರನಿಗೆ ಸಹಾಯ ಮಾಡುತ್ತಾನೆ, ಪುರೂರವ ಸೋತು ಸೆರೆಯಾಗುತ್ತಾನೆ.
ರಾಮಾಯಣದಲ್ಲಿ ನೋಡಿ, ಮಂಥರೆಯ ಮಾತ್ಸರ್ಯಕ್ಕೆ ಶ್ರೀರಾಮಚಂದ್ರ ಸಿಂಹಾಸನ ಕಳೆದುಕೊಳ್ಳುತ್ತಾನೆ, ವನವಾಸ ಅನುಭವಿಸುತ್ತಾನೆ, ರಾವಣನ ಕುಟಿಲ ತಂತ್ರದಿಂದ ಹೆಂಡತಿಯಿಂದ ದೂರಾಗಿ ಕೊರಗುತ್ತಾನೆ, ಕೊನೆಗೆ ರಾವಣನ ವಧೆಯ ನಂತರ ತನ್ನೂರಿಗೆ ಪತ್ನಿಯೊಡನೆ ಹಿಂದಿರುಗಿದರೂ ಅಗಸನೊಬ್ಬನ ಮಾತಿನಿಂದ ಮತ್ತೆ ಸಂಸಾರಸುಖದಿಂದ ವಂಚಿತನಾಗುತ್ತಾನೆ.
ಮಹಾಭಾರತದಲ್ಲಿ ಶಕುನಿಯ ಕುತಂತ್ರದಿಂದಾಗಿ ಪಾಂಡವರು ರಾಜ್ಯ ಕಳೆದುಕೊಂಡು ಗತಿಯಿಲ್ಲದವರಂತೆ ಬದುಕುವ ಪರಿಸ್ಥಿತಿ ಅನುಭವಿಸುತ್ತಾರೆ, ದುಶ್ಯಾಸನ, ದುರ್ಯೋಧನರ ಅಟ್ಟಹಾಸದಲ್ಲಿ ದ್ರೌಪದಿ ನೋಯುತ್ತಾಳೆ, ಕೌರವನ ಸಾವಿಗೆ ಕಾರಣವಾಗುತ್ತಾಳೆ. ಗೀತೋಪದೇಶ ಮಾಡಿದ ಶ್ರೀಕೃಷ್ಣ ಅಂದೇ,(ಅದೆಷ್ಟು ಸಾವಿರ ವರ್ಷಗಳ ಹಿಂದೆಯೋ) ಎಲ್ಲ ಕುಟಿಲತಂತ್ರಗಳನ್ನೂ ಬಳಸುತ್ತಾನೆ, ಇದೆಲ್ಲಾ ಧರ್ಮ ಸಂಸ್ಥಾಪನೆಗಾಗಿಯೇ ಎನ್ನುತ್ತಾನೆ, ಕೌರವರ ಅಂತ್ಯದೊಡನೆಯೇ ಪಾಂಡವರಿಗೆ ಸುಖಪ್ರಾಪ್ತಿ!
ಭಾರತದ ಸಿರಿ ಸಂಪತ್ತಿನ ಬಗ್ಗೆ, ಸುಂದರ ಸ್ತ್ರೀಯರ ಬಗ್ಗೆ ಕೇಳಿ ತಿಳಿದಿದ್ದ ಘಸ್ನಿ ಮೊಹಮ್ಮದ್ ಒಂದಲ್ಲ, ಎರಡಲ್ಲ, ಹದಿನೇಳು ಬಾರಿ ದಂಡಯಾತ್ರೆ ಮಾಡಿ, ಎದುರಿಸಿದವರನ್ನೆಲ್ಲಾ ಕೊಂದು, ಅತ್ಯಂತ ಕ್ರೂರವಾಗಿ ವರ್ತಿಸಿ, ಸಾಕಷ್ಟು ಸುಂದರ ಮಹಿಳೆಯರ ಮಾನಭಂಗ ಮಾಡಿ, ಸಿಕ್ಕದ್ದನ್ನೆಲ್ಲಾ ಲೂಟಿ ಹೊಡೆದು ತನ್ನ ದೇಶಕ್ಕೆ ಅಮೂಲ್ಯ ಸಂಪತ್ತನ್ನೆಲ್ಲಾ ಹೊತ್ತೊಯ್ದ. ಆಗ ಯಾವ ಹಿಂದೂಗಳೂ ಒಂದಾಗಲಿಲ್ಲ, ಅವನ ವಿರುದ್ಧ ನಿಲ್ಲಲಿಲ್ಲ, ಎದುರಿಸಿದ ಮಹಾರಾಣಾ ಪ್ರತಾಪನಿಗೆ ಸೋಲೇ ಗತಿಯಾಯ್ತು. ಪಕ್ಕದವನೇ ಜಯಚಂದ್ರ ಕುಟಿಲತಂತ್ರದಿಂದ ವಿಕಟಾಟ್ಟಹಾಸಗೈದಿದ್ದ.
ನಂತರ ಬಂದ ಘೋರಿ ಮೊಹಮ್ಮದ್ ಅದನ್ನೇ ಮಾಡಿದ, ಆಗಲೂ ಮೆರೆದಿದ್ದು ಇದೇ ಶಕುನಿ ಸಂತಾನಗಳು. ಹೋರಾಟಕ್ಕೆ ಹೊರಟವರೆಲ್ಲಾ ಒಬ್ಬೊಬ್ಬರಾಗಿ ಆಕ್ರಮಣಕಾರರ ಕತ್ತಿಗೆ ಬಲಿಯಾದರೇ ಹೊರತು ಒಂದಾಗಲಿಲ್ಲ, ಒಗ್ಗೂಡಿ ಹೋರಾಡಲಿಲ್ಲ!
ಕೊನೆಗೆ ಬಂದ ಬಾಬರ್ ಹದಿನಾರನೆಯ ಶತಮಾನದಲ್ಲಿ ತನ್ನದೇ ಸಾಮ್ರಾಜ್ಯ ಸ್ಥಾಪಿಸಿ ಇಡೀ ದೇಶವನ್ನೇ ತನ್ನ ತೆಕ್ಕೆಗೆ ತೆಗೆದುಕೊಂಡ, ಆಗಲೂ ಈ ದೇಶದ ಹಿಂದೂಗಳು ಒಂದಾಗಲಿಲ್ಲ, ಪ್ರತಿರೋಧಿಸಲಿಲ್ಲ, ಹೋರಾಡಲಿಲ್ಲ! ಬದಲಾಗಿ ಹೋರಾಟದ ಹಾದಿ ಹಿಡಿದವರ ಮಾಹಿತಿ ನೀಡಿ ತಮ್ಮವರ ಅಂತ್ಯಕ್ಕೆ ಕಾರಣರಾಗಿ ದೊರೆಗಳ ಬೂಟು ನೆಕ್ಕುತ್ತಾ ಬದುಕಿದ್ದು ಇದೇ ಶಕುನಿ ಸಂತಾನಗಳು. ಅದೆಷ್ಟು ದೇವಾಲಯಗಳು ಮಸೀದಿಗಳಾದವೋ, ಅದೆಷ್ಟು ಹಿಂದೂ ಹೆಣ್ಣು ಮಕ್ಕಳ ಬಲಾತ್ಕಾರವಾಯಿತೋ, ಅದೆಷ್ಟು ಹಿಂದುಗಳ ತಲೆಗಳು ಚಂಡಾಡಲ್ಪಟ್ಟವೋ, ಅದೆಷ್ಟು ಜನ ಬಲವಂತವಾಗಿ ಮತಾಂತರಗೊಂಡರೋ, ನಿಖರವಾದ ಲೆಕ್ಕ ಆ ದೇವರಿಗೇ ಗೊತ್ತು! ಆದರೂ ಹಿಂದೂಗಳು ಒಂದಾಗಲಿಲ್ಲ!!
ತಕ್ಕಡಿ ಹಿಡಿದುಕೊಂಡು ದೈನೇಪಿ ನಗುವನ್ನು ಮೊಗದ ತುಂಬಾ ತುಂಬಿಕೊಂಡು, ಉಡುಗೊರೆಗಳ ಸುರಿಮಳೆಯನ್ನೇ ಸುರಿಸುತ್ತಾ,, ವ್ಯಾಪಾರಕ್ಕೆಂದು ಭರತಖಂಡಕ್ಕೆ ಕಾಲಿಟ್ಟ ಯೂರೋಪಿಯನ್ನರು ಮಾಡಿದ್ದೇನು? ಆಗಲೂ ಇಲ್ಲಿ ಮೆರೆದಿದ್ದು ಇದೇ ಶಕುನಿ ಸಂತಾನಗಳು. ತಮ್ಮ ನಡುವಿನ ಕಿತ್ತಾಟಗಳನ್ನು, ರಹಸ್ಯಗಳನ್ನು, ಭಿನ್ನಾಭಿಪ್ರಾಯಗಳನ್ನು ಅವರ ಮುಂದಿಟ್ಟು, ಅವರ ಸಹಾಯದಿಂದ ಪಕ್ಕದವರನ್ನು ಗೆಲ್ಲುತ್ತೇವೆಂಬ ಭ್ರಮೆಯಲ್ಲಿ ಕೊನೆಗೊಮ್ಮೆ ಇಡೀ ದೇಶವನ್ನೇ ಬ್ರಿಟಿಷರ ಪಾದಕ್ಕೊಪ್ಪಿಸಿ ಉಧೋ ಉಧೋ ಎಂದವರು ಇದೇ ನಮ್ಮ ಹಿಂದೂಗಳು.
ಅಪ್ರತಿಮ ಹೋರಾಟದ ನಂತರ, ಲಕ್ಷಾಂತರ ಜನರ ತ್ಯಾಗ, ಬಲಿದಾನಗಳಿಂದ ಪಡೆದ ಸ್ವಾತಂತ್ರ್ಯ ಇಂದು ಮತ್ತೆ ಪರಕೀಯರ ಆಕ್ರಮಣದ ಭಯದಲ್ಲಿ ನರಳುತ್ತಿರುವುದು, ಜಾತಿ, ಧರ್ಮಗಳ ನಡುವಿನ ವೈಷಮ್ಯದಲ್ಲಿ ಮುಳುಗಿ, ಅಭಿವೃದ್ಧಿಯ ಪಥವನ್ನೇ ಮುಚ್ಚಿ ನಗುತ್ತಿರುವುದು ಇಂದು ಅದೇ ಶಕುನಿ ಸಂತಾನಗಳು.
ಈ ಶಕುನಿ ಸಂತಾನಗಳ ಅಂತ್ಯವಾಗಲು ಅಂದು ಶ್ರೀಕೃಷ್ಣನ ಜನ್ಮವಾದಂತೆ ಇಂದೂ ಸಹ ಒಬ್ಬ ಶ್ರೀಕೃಷ್ಣನ ಜನ್ಮವಾಗಬೇಕಿದೆ, ಈ ಶಕುನಿ ಸಂತಾನಗಳ ಸಂಹಾರವಾಗಬೇಕಿದೆ, ದೇಶ ಮುಂದುವರೆಯಬೇಕಿದೆ, ಯದಾ ಯದಾಹಿ ಧರ್ಮಸ್ಯ ಗ್ಲಾನಿರ್ಭವತೆ,,,,,ಎಂದ ಆ ಶ್ರೀಕೃಷ್ಣನ ಅವಶ್ಯಕತೆ ನಮ್ಮ ಭಾರತಕ್ಕೆ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಮಿಲಿಯನ್ ಡಾಲರ್ ಪ್ರಶ್ನೆಯೆಂದರೆ ಶತಶತಮಾನಗಳಿಂದ ಭಾರತೀಯರ ರಕ್ತದಲ್ಲಿ ಬೆರೆತು ಹೋಗಿರುವ ಮನೆಮುರುಕತನ ಅಷ್ಟು ಸುಲಭವಾಗಿ ಹೋಗಿಬಿಡುವುದೇ? ಈ ದೇಶ ಉದ್ಧಾರವಾಗುವುದೇ? ಮತ್ತೊಮ್ಮೆ ಭಾರತ ವಿದೇಶೀಯರ ಅತಿಕ್ರಮಣಕ್ಕೊಳಗಾಗದೆ ಸ್ವತಂತ್ರವಾಗಿ ಇರಲು ಸಾಧ್ಯವೇ? ಈ ದೇಶವನ್ನು ಒಡೆದು ತುಂಡು ತುಂಡಾಗಿ ಮಾಡಲು ಯಾವುದೇ ಹೊರಗಿನ ಶತೃವಿನ ಅವಶ್ಯಕತೆಯಿಲ್ಲ, ದೇಶದೊಳಗಿನ ಈ ಶಕುನಿಗಳೇ ಸಾಕು! ಮೇರಾ ಭಾರತ್ ಮಹಾನ್,,,,,,,,,,,,,,!!!!!!!!!!!!!!

No comments: