ಚಿಮ್ಮಿತ್ತು ಪ್ರೀತಿಯ ಒರತೆ ಆ ಒಂದು ದಿನ
ನನ್ನ ಹಿಂದೆ ಅವಳು ಬಂದಾಗ, ಮನೆಯವರನ್ನೆಲ್ಲಾ ಧಿಕ್ಕರಿಸಿ,
ನೆರೆದಿತ್ತು ಭಾವಗಳ ಸಂತೆ , ಮರೆತು ಎಲ್ಲಾ ಚಿಂತೆ ಅವಳು ನನ್ನ ಸೇರಿದಾಗ,
ಆದಿ ಅಂತ್ಯವನರಿಯದೆ ಮಿಡಿದಿತ್ತು ವೀಣೆ ಅಂದು,,
ಆದರೆ ಇಂದು,,
ಸರಿದಿದೆ ತೆರೆ, ತೋರಿದೆ ಜೀವನ
ತನ್ನ ನಿಜರೂಪವ,
ಕುರುಡು ಕಾಂಚಾಣ ಕುಣಿಯುತ್ತಲಿದೆ,,
ಕಾಲಿಗೆ ಬಿದ್ದವರ ತುಳಿಯುತ್ತಲಿದೆ,,
ನಿಸರ್ಗ ಮುನಿದಿದೆ
ಭಾವಗಳು ಅಡಗಿ ಹೋಗಿವೆ,, ಎದೆಯ ಗುಹೆಯಲ್ಲಿ,
ಆದರೂ ಒಂದು ಮಿಣತೆ ದೂರದಲ್ಲಿ ಮಿಂಚುತ್ತಿದೆ,,
ಸಾರುತ್ತಿದೆ ಜಗಕೆ,
ಇಲ್ಲಿ ಮಾನವೀಯತೆ ಬದುಕಿದೆ,
ಪ್ರೀತಿಗಿಲ್ಲಿ ಇನ್ನೂ ಬೆಲೆಯಿದೆ,
ಕೊರಗಬೇಡ ಮನವೆ.
ಹೊಳೆನರಸೀಪುರ ಮಂಜುನಾಥ
2 comments:
ಚೆನ್ನಾಗಿದೆ ...
ವ೦ದನೆಗಳು ಗೋಪಾಲ್.
Post a Comment