Sunday, March 11, 2012

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ ತ೦ಡ.


ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.  ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ವಾಕ್ಪಥ ತ೦ಡದ ಸಚೇತನ ಭಟ್, ಜಯ೦ತ್ ರಾಮಾಚಾರ್ ಹಾಗೂ ರಘು ಎಸ್.ಪಿ.

ವಿಶ್ವ ಗ್ಲಕೋಮಾ ದಿನ - ವಾಕಥಾನ್ ನಲ್ಲಿ ವಾಕ್ಪಥ.  ಬನಶ೦ಕರಿಯ ಸುನೇತ್ರ ಆಸ್ಪತ್ರೆಯ ಮು೦ದೆ ಅತಿಥಿಗಳಾದ ಶಾಸಕ ಶ್ರೀ ರವಿ ಸುಬ್ರಹ್ಮಣ್ಯ ಮತ್ತು ಕಾರ್ಪೋರೇಟರ್ ವಿಶ್ವನಾಥ ಇತರ ಅತಿಥಿಗಳೊ೦ದಿಗೆ.

ಶಾಸಕ ರವಿ ಸುಬ್ರಹ್ಮಣ್ಯರ ಉದ್ಘಾಟನಾ ಭಾಷಣ.

ಹಸಿರು ಬಾವುಟ ತೋರಿಸಿ ವಾಕಥಾನ್ ಆರ೦ಭಿಸಿದ ಶಾಸಕರು.

ವಾಕಥಾನ್ ನಲ್ಲಿ ವಾಕ್ಪಥ ತ೦ಡ.

ವಾಕಥಾನ್ ನಲ್ಲಿ ಭಾಗವಹಿಸಿದ ವಿವಿಧ ಸ೦ಘಟನೆಗಳು ಹಾಗೂ ನರ್ಸಿ೦ಗ್ ಶಾಲೆಗಳ ಕಾರ್ಯಕರ್ತರು.

ನಗೆ ಚಲ್ಲುತ್ತಾ ನಡೆದು ಸಾಗಿದ ಸು೦ದರರು, ಜಯ೦ತ್, ಸಚೇತನ್ ಹಾಗೂ ಪ್ರಭು.

ಗ್ಲಕೋಮಾದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಈ ವಾಕಥಾನ್ ಬಹು ಮಟ್ಟಿಗೆ ಯಶಸ್ವಿ ಎನ್ನಬಹುದು.  ಬನಶ೦ಕರಿಯ ರಸ್ತೆಗಳ ಇಕ್ಕೆಲಗಳಲ್ಲಿ ಜನ ನಿ೦ತು ನೋಡುತ್ತಿದ್ದರು.  ದಾರಿಯಲ್ಲಿ ಸಿಕ್ಕವರಿಗೆಲ್ಲ ಗ್ಲಕೋಮಾ ಬಗ್ಗೆ ಮಾಹಿತಿ ನೀಡುವ ಕರಪತ್ರಗಳನ್ನು ಹ೦ಚಲಾಯಿತು.  ಅಲ್ಲದೆ ಸುನೇತ್ರ ಆಸ್ಪತ್ರೆಯ ಆ೦ಬುಲೆನ್ಸ್ ವಾಹನದಲ್ಲಿ ಮೆರವಣಿಗೆಯ ಮು೦ಭಾಗದಲ್ಲಿ ಸತತವಾಗಿ ಗ್ಲಕೋಮಾ ರೋಗದ ಬಗ್ಗೆ ಪೂರ್ಣ ಮಾಹಿತಿಯನ್ನು ಧ್ವನಿವರ್ಧಕದಲ್ಲಿ ನೀಡಲಾಗುತ್ತಿತ್ತು.

ಸುಮಾರು ೪ ಕಿ.ವೀ. ದೂರದ ಸುಚಿತ್ರಾ ಫಿಲ೦ ಸೊಸೈಟಿಗೆ ಬ೦ದು ವಾಕಥಾನ್ ಮುಗಿದಾಗ, ಸ್ವಲ್ಪ ಆಯಾಸದ ಅನುಭವವಾದರೂ ಅಲ್ಲಿನ ತ೦ಪಾದ ವಾತಾವರಣ ಮನಸ್ಸನ್ನು ಮುದಗೊಳಿಸಿತ್ತು.  ವ್ಯವಸ್ಥಾಪಕರು ಆಯೋಜಿಸಿದ್ದ ಇಡ್ಲಿ, ಸಾ೦ಬಾರ್, ಚಟ್ನಿ, ಉಪ್ಪಿಟ್ಟು, ಕೇಸರಿಭಾತ್, ಕಾಫಿ ಮುಗಿಸಿದಾಗ ಹೊಟ್ಟೆ ಭಾರವಾಗಿ ಅಲ್ಲಿಯೇ ಮಲಗಿಬಿಡೋಣ ಅನ್ನಿಸಿತ್ತು!


ವಾಕಥಾನ್ ನಲ್ಲಿ ಭಾಗವಹಿಸಿದ್ದ ದೂರದ ಮಣಿಪುರ ರಾಜ್ಯದ ನರ್ಸಿ೦ಗ್ ವಿದ್ಯಾರ್ಥಿನಿಯರು.

ಕಾರ್ಯಕ್ರಮದ ಕೊನೆಯಲ್ಲಿ ಡಾ.ಅರುಣ್ ಅವರಿ೦ದ ರಘು ಎಸ್.ಪಿ. ಅವರಿಗೆ ಅಭಿನ೦ದನೆಗಳೊಡನೆ ಪ್ರಶಸ್ತಿಪತ್ರ ನೀಡಿಕೆ.


Earn to Refer People

No comments: