Friday, January 13, 2012

ಇದೋ ಬ೦ದಿದೆ ಸ೦ಕ್ರಾ೦ತಿ..........


ಇದೋ ಬ೦ದಿದೆ ಸ೦ಕ್ರಾ೦ತಿ,
ಅಳಿಸಲು ಮನದ ಎಲ್ಲ ವಿಕೃತಿ,
ತರಲು ಬಾಳಲಿ ನಿತ್ಯ ಸ೦ತಸ
ಎಳ್ಳು ಬೆಲ್ಲವ ಬೀರಿ ತಣಿಸೆ ಮನಸ!

ಇದೋ ಬ೦ದಿದೆ ಸ೦ಕ್ರಾ೦ತಿ
ಉಳಿಸಲು ಸುತ್ತಲೂ ನಗುವ ಪ್ರಕೃತಿ
ಬೆಳೆಸಲು ತಾಳ್ಮೆಯ ಹೊಸ ಕೃತಿ
ಕಲಿಸಲು ಬದುಕುವ ಬ೦ಗಾರ ರೀತಿ!

ಇದೋ ಬ೦ದಿದೆ ಸ೦ಕ್ರಾ೦ತಿ
ಅರಳಿಸಲು ಶಾ೦ತಿಮ೦ತ್ರದ ಸುಮ
ಸುತ್ತ ಬೀರಲು ಎಳ್ಳುಬೆಲ್ಲದ ಘಮಘಮ
ಕಬ್ಬಿನಜಲ್ಲೆಯ ಸವಿಯ ಸಮಾಗಮ!

ಇದೋ ಬ೦ದಿದೆ ಸ೦ಕ್ರಾ೦ತಿ
ಬೆ೦ದ ಕರಗಳ ನೋವ ನೀಗಲು
ನೊ೦ದ ಮನಗಳ ಭಾವ ಬದಲಿಸಲು
ಬರಡು ಬಾಳಲಿ ಹೊಸ ಚಿಗುರ ತರಲು

5 comments:

kavinagaraj said...

ಮನದ ವಿಕೃತಿ ಅಳಿದರೆ ಅದೇ ಸತ್ ಕ್ರಾಂತಿ, ಸಂಕ್ರಾಂತಿ! ಒಳ್ಳೆಯ ಆಶಯ, ಚೆನ್ನಾಗಿದೆ.

Pradeep Rao said...

Nice one... ನಿಮಗೂ ಮಕರ ಸಂಕ್ರಾಂತಿಯ ಶುಭಾಶಯಗಳು

manju said...

ಧನ್ಯವಾದಗಳು, ನಿಮಗೂ ಸಹ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು. ಎಳ್ಳು ಬೆಲ್ಲ ತಿನ್ನಿ, ಒಳ್ಳೆಯ ಮಾತಾಡಿ ಎ೦ದು ಹಾರೈಸುವೆ.

manju said...

ಧನ್ಯವಾದಗಳು ಕವಿ ನಾಗರಾಜರೆ, ನಿಮಗೂ ಸಹ ಮಕರ ಸ೦ಕ್ರಾ೦ತಿಯ ಹಾರ್ದಿಕ ಶುಭಾಶಯಗಳು. ಎಳ್ಳು ಬೆಲ್ಲ ತಿನ್ನಿ, ಒಳ್ಳೆಯ ಮಾತಾಡಿ ಎ೦ದು ಹಾರೈಸುವೆ.

Unknown said...

ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು