ಹೊಳೆನರಸೀಪುರ ಮಂಜುನಾಥ, ಮನದಾಳದ ಪಿಸು ಮಾತುಗಳು.
ಬಾಳ ಹಾದಿಯಲ್ಲಿ ಕ೦ಡ, ಏರಿಳಿತಗಳಲ್ಲಿ ಮೂಡಿ ಬ೦ದ ಮನದಾಳದ ಪಿಸುಮಾತುಗಳನ್ನು ಇಲ್ಲಿ ದಾಖಲಿಸಿದ್ದೇನೆ.
Sunday, August 9, 2015
ನಿದಿರೆ ಬರದ ರಾತ್ರಿಯಲ್ಲಿ ,,,,,,,,,,,,,,,
ನಿದಿರೆ ಬರದ ರಾತ್ರಿಯಲ್ಲಿ
ದೇವತೆಯಾಗಿ ಇಳಿದು ಬಾರೆಯಾ!
ನೊಂದ ಹೃದಯ ಬೆಂದ ಮನವ
ಲಾಲಿ ಹಾಡಿ ತಣಿಸಲಾರೆಯಾ!
ರೋಸಿ ಅಳುತ ರಚ್ಚೆ ಹಿಡಿವ
ಮನಕೆ ತಾಯಿ ನೀನಾಗೆಯಾ!
ಬಾಳ ಯಾನ ಜಟಿಲ ಪಥದಿ
ಪ್ರೀತಿ ಸುಮವ ಅರಳಿಸೆಯಾ!
ಕಠಿಣ ಹಾದಿ ಸಾಗುವಲ್ಲಿ
ಕೊಳಲ ಗಾನ ನೀನಾಗೆಯಾ!
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment