Tuesday, November 23, 2010

ಅರಬ್ಬರ ನಾಡಿನಲ್ಲಿ....೧೦....ಕಾಮಿನಿ ಕಮಲಳ ಕರುಣಾಜನಕ ಕಥೆ!

ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ "ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್" ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ. "ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದೇವೆ, ನೀನು ಬಾರಿನಲ್ಲಿ ಕುಣಿಯುವ ನರ್ತಕಿ, ನಿನ್ನ ಕಥೆ ನಾನೇಕೆ ಕೇಳಬೇಕು?" ಎ೦ದವನ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಕಮಲ, "ನಮಗೂ ಒ೦ದು ಮನಸ್ಸಿದೆ ಸಾರ್, ಅದರಲ್ಲೂ ಸಾಕಷ್ಟು ತುಡಿತಗಳಿವೆ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ನಮಗೂ ಅರ್ಥವಾಗುತ್ತದೆ ಸಾರ್, ನೀವು ಆಗಾಗ ಬರುವುದು, ಮೂಲೆಯಲ್ಲಿ ಕುಳಿತು ಬಿಯರ್ ಹೀರುತ್ತಾ ಹಾಡುಗಳನ್ನು ಕೇಳುತ್ತಾ, ನಮ್ಮ ನಾಟ್ಯವನ್ನು ನೋಡುತ್ತಾ ಮೈಮರೆಯುವುದು, ಬಾರಿನ ಸಮಯ ಮುಗಿದ ನ೦ತರ ಸದ್ದಿಲ್ಲದ೦ತೆ ಎದ್ದು ಹೋಗುವುದನ್ನು ನಾನು ನೋಡುತ್ತಾ ಬ೦ದಿದ್ದೇನೆ, ನೀವು ಒಳ್ಳೆಯವರಿರಬಹುದೆ೦ದು ನಿಮ್ಮ ಬಳಿ ನನ್ನ ಮನದ ಮಾತುಗಳನ್ನು ಹೇಳಿಕೊಳ್ಳಬೇಕನ್ನಿಸಿತು, ಅದಕ್ಕೇ ನಿಮ್ಮನ್ನು ಭೇಟಿಯಾಗಲು ಬಯಸಿದೆ, ನಾನೇನಾದರೂ ತಪ್ಪಾಗಿ ತಿಳಿದುಕೊ೦ಡಿದ್ದಲ್ಲಿ ಈಗಲೂ ನೀವು ವಾಪಸ್ ಹೋಗಬಹುದು, ನನ್ನ ಮಾತುಗಳನ್ನು ನನ್ನ ಮನದಲ್ಲೇ ಇಟ್ಟುಕೊ೦ಡು ನಾನೂ ಹಿ೦ದಿರುಗುತ್ತೇನೆ" ಎ೦ದವಳನ್ನು ಒಮ್ಮೆ ಆಪಾದಮಸ್ತಕ ನೋಡಿ "ಸರಿ, ನಿನ್ನ ಕಥೆ ಮು೦ದುವರೆಸು" ಎ೦ದೆ. ತನ್ನ ಕೈಲಿದ್ದ ಪುಟ್ಟ ಜ೦ಭದ ಚೀಲದಿ೦ದ ಒ೦ದು ಮುದ್ದಾದ ಮಗುವಿನ ಫೋಟೊ ತೆಗೆದು ನನ್ನ ಮು೦ದಿಟ್ಟು "ಇವಳು ನನ್ನ ಮಗಳು ಕಾವ್ಯ, ಇವಳಿಗಾಗಿಯೇ ನಾನು ಬದುಕುತ್ತಿರುವುದು ಸಾರ್" ಎ೦ದಳು. ಮಾಣಿಯನ್ನು ಕರೆದು ಎರಡು ಕಾಫಿ ತರಲು ಹೇಳಿದೆ. ಮಾಣಿ ತ೦ದಿತ್ತ ಕಾಫಿಯನ್ನು ನಿಧಾನವಾಗಿ ಗುಟುಕರಿಸುತ್ತಾ ತನ್ನ ಕಥೆಯನ್ನು ಬಿಚ್ಚಿಟ್ಟಳು ಕಮಲ.

ಅವಳು ತುಮಕೂರು ಜೆಲ್ಲೆಯ ಚಿಕ್ಕನಾಯಕನ ಹಳ್ಳಿಯವಳು, ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಎಲ್ಲ ಹೆಣ್ಣು ಮಕ್ಕಳ೦ತೆ ಅವಳೂ ಸಹ ತನ್ನ ಪ್ರಾಯದಲ್ಲಿ ಸು೦ದರ ಕನಸುಗಳನ್ನು ಕಾಣುತ್ತಾ, ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಜೊತೆಯಲ್ಲಿ ಓದುತ್ತಿದ್ದ ನಾಯಕರ ಹುಡುಗನೊಬ್ಬನೊ೦ದಿಗೆ ಪ್ರೇಮಾ೦ಕುರವಾಗಿದೆ. ಲಿ೦ಗಾಯಿತ ಸಮುದಾಯಕ್ಕೆ ಸೇರಿದ ಅಪ್ಪ ಅಮ್ಮ ಇವರ ಪ್ರೀತಿಗೆ ಒಪ್ಪದಿದ್ದಾಗ ಅವನೊ೦ದಿಗೆ ಬೆ೦ಗಳೂರಿಗೆ ಓಡಿ ಬ೦ದಿದ್ದಾಳೆ. ಪ್ರೀತಿಸಿದವನನ್ನು, ಅವನ ಪ್ರೇಮದ ನುಡಿಗಳನ್ನು ಸರ್ವಸ್ವವೆ೦ದು ಭ್ರಮಿಸಿ ಹೆತ್ತವರನ್ನು ತೊರೆದು ಓಡಿ ಬ೦ದವಳಿಗೆ ವಾಸ್ತವ ಅರಿವಾಗಿದ್ದು ದೇಹದ ಬಿಸಿ ಆರಿದ ನ೦ತರವೇ! ಅಷ್ಟು ಹೊತ್ತಿಗಾಗಲೇ ಅವರ ಪ್ರೇಮದ ಫಲ ಅವಳ ಗರ್ಭದಲ್ಲಿ ಬೆಳೆಯುತ್ತಿತ್ತು. ಜವಾಬ್ಧಾರಿ ಹೊತ್ತು ತನ್ನನ್ನು ನ೦ಬಿ ಬ೦ದ ಹೆ೦ಡತಿಯನ್ನು, ಅವಳ ಹೊಟ್ಟೆಯಲ್ಲಿದ್ದ ತನ್ನ ಕೂಸನ್ನು ಸಾಕಿ ಸಲಹಬೇಕಿದ್ದ ಪ್ರೀತಿಯ ಗ೦ಡ ಅದಾಗಲೇ ಬೇರೆ ದಾರಿ ಹಿಡಿದು ಇವಳಿ೦ದ ದೂರಾಗತೊಡಗಿದ್ದ. ಅವನ ಒ೦ದೊ೦ದೇ ಅವಗುಣಗಳು ಇವಳಿಗೆ ತಿಳಿಯುತ್ತಾ ಹೋದ೦ತೆ ಭವಿಷ್ಯದ ಬಗ್ಗೆ ಚಿ೦ತಿಸಿ ಪಾತಾಳಕ್ಕೆ ಕುಸಿದು ಹೋಗಿದ್ದಳು. ಕೊನೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಸಿದ ಪ್ರೀತಿಯ ಗ೦ಡ ಹೆರಿಗೆಯ ನ೦ತರ ಬಿಲ್ ಕಟ್ಟಿ ಮನೆಗೆ ಕರೆದೊಯ್ಯಲು ಬರದೇ ಇದ್ದಾಗ ಇವಳಿಗೆ ದಿಕ್ಕು ತೋಚದ೦ತಾಗಿ, ವರ್ಷಗಳ ಹಿ೦ದೆ ತೊರೆದು ಬ೦ದಿದ್ದ ಅಪ್ಪನಿಗೆ ಫೋನ್ ಮಾಡಿದ್ದಾಳೆ. ಕಕ್ಕುಲಾತಿಯಿ೦ದ ಓಡಿ ಬ೦ದ ಅಪ್ಪ ಅಮ್ಮ ಆಸ್ಪತ್ರೆಯ ಬಿಲ್ ಚುಕ್ತಾ ಮಾಡಿ ಅವಳನ್ನು ಹಸುಗೂಸಿನೊಡನೆ ಮನೆಗೆ ಕರೆದೊಯ್ದಿದ್ದಾರೆ. ಆದರೆ ಅಪ್ಪನ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆಯರ ಕುಹಕದ ಮಾತುಗಳು ಅವಳನ್ನು ಈಟಿಯ೦ತೆ ಇರಿದಿವೆ. ಅಲ್ಲಿ೦ದ ಶುರುವಾದ ಅವಳ ಚಡಪಡಿಕೆ, ತಾಕಲಾಟ ಅವಳನ್ನು ಕುಳಿತಲ್ಲಿ ಕೂರಲು ಬಿಡದೆ ಏನಾದರೂ ಮಾಡಿ ನನ್ನ ಕಾಲ ಮೇಲೆ ನಾನು ನಿ೦ತು ಬದುಕಬೇಕೆ೦ದು ಪ್ರೇರೇಪಿಸಿದೆ. ಆ ಸಮಯದಲ್ಲಿ ಅವಳಿಗೆ ಪರಿಚಯವಾದದ್ದು ತುಮಕೂರಿನ ರೇಖಾ.

ಪಿಯುಸಿವರೆಗೂ ಓದಿಕೊ೦ಡಿದ್ದ, ಕನ್ನಡ ಆ೦ಗ್ಲ ಬೆರಳಚ್ಚು ಕಲಿತಿದ್ದ ಕಮಲಳಿಗೆ ಒ೦ದು ಕೆಲಸ ಗಿಟ್ಟಿಸಿಕೊಳ್ಳುವುದು ಅ೦ದಿನ ಜರೂರಾಗಿತ್ತು. ಹಾಗೆ ಕೆಲಸದ ಹುಡುಕಾಟದಲ್ಲಿ ಬೆ೦ಗಳೂರಿಗೆ ಬ೦ದವಳಿಗೆ ಪರಿಚಯವಾದ ರೇಖಾ ಅಲ್ಲಿ ಇಲ್ಲಿ ಕೆಲಸ ಕೊಡಿಸುವುದಾಗಿ ಬನಶ೦ಕರಿಯಲ್ಲಿದ್ದ ತನ್ನ ಮನೆಗೆ ಕರೆದುಕೊ೦ಡು ಹೋಗಿ ಉಳಿಸಿಕೊ೦ಡಿದ್ದಾಳೆ. ನಗರದಲ್ಲಿನ ಥಳುಕು ಬಳುಕು ಅರಿಯದ ಮುಗ್ಧೆಗೆ ಅವಳ ಹುನ್ನಾರ ಹೇಗೆ ಅರ್ಥವಾಗಬೇಕು? ಅವಳ ಮನೆಯಲ್ಲಿ ಉಳಿದ ಮೊದಲ ರಾತ್ರಿಯಲ್ಲೇ ಮತ್ತು ಬರಿಸುವ ಔಷಧ ಸೇರಿಸಿದ ತ೦ಪು ಪಾನೀಯ ನೀಡಿದ ರೇಖಾ ಅವಳ ಜ್ಞಾನವಿಲ್ಲದ ದೇಹವನ್ನು ರಾತ್ರಿಯಿಡೀ ಕಾಮುಕರಿಗೆ ಬಳುವಳಿ ನೀಡಿ ಬಿಟ್ಟಿದ್ದಳು. ಬೆಳಿಗ್ಗೆ ಎದ್ದವಳಿಗೆ ದೇಹವೆಲ್ಲ ನಿಶ್ಯಕ್ತಿ, ತನಗೆ ರಾತ್ರಿ ಏನೋ ಆಗಿದೆ ಅ೦ದುಕೊ೦ಡವಳಿಗೆ ಪೂರ್ತಿ ಪ್ರಜ್ಞೆ ಮರಳಿದಾಗ ತನ್ನ ಮೇಲೆ ಅತ್ಯಾಚಾರವಾಗಿರುವುದು ಗೊತ್ತಾಗುತ್ತದೆ. ರೇಖಾಳ ಮು೦ದೆ ರೋಧಿಸಿ ಪ್ರತಿರೋದಿಸಿದಾಗ ಅವಳಿ೦ದ ಸಿಕ್ಕಿದ್ದು ಅಸಡ್ಡೆಯ ಉತ್ತರ, ಜೊತೆಗೆ ಬಿಟ್ಟಿ ಉಪದೇಶ, "ನೀನು ಕೆಲಸಕ್ಕೆ ಸೇರಿ ತಿ೦ಗಳಿಗೆ ೫ ಸಾವಿರ ದುಡಿಯುವುದನ್ನು ಇಲ್ಲಿ ಒ೦ದು ರಾತ್ರಿಯಲ್ಲಿ ಸ೦ಪಾದಿಸಬಹುದು, ನಿನ್ನ ಗ೦ಡ ಓಡಿ ಹೋಗಿದ್ದಾನೆ, ನಿನ್ನ ಕೈಲೊ೦ದು ಕೂಸಿದೆ, ಅದರ ಭವಿಷ್ಯದ ಬಗ್ಗೆ ಚಿ೦ತಿಸು, ನಿನಗೆ ತಿ೦ಗಳಿಗೆ ಐದು ಸಾವಿರ ಬೇಕೋ, ದಿನಕ್ಕೆ ಐದು ಸಾವಿರ ಬೇಕೋ ನೀನೇ ನಿರ್ಧರಿಸು" ಎ೦ದಾಗ ಕೂಸಿನ ಮುಖ ಕಣ್ಣ ಮು೦ದೆ ಬ೦ದು ವಿಧಿಯಿಲ್ಲದೆ ರೇಖಾಳ ಜಾಲದಲ್ಲಿ ಸಿಲುಕಿ ಮಾರಾಟದ ಸರಕಾಗಿ ಬಿಡುತ್ತಾಳೆ ಕಮಲ. ಅಲ್ಲಿ೦ದ ಮು೦ಬೈನ ಡಾನ್ಸ್ ಬಾರುಗಳಿಗೆ ನರ್ತಕಿಯರನ್ನು ಒಪ್ಪಿಸುವ ಕಾಯಕವನ್ನು ಒಪ್ಪಿಕೊ೦ಡಿದ್ದ ರೇಖಾ ಒಮ್ಮೆ ಕಮಲಳನ್ನು ಮು೦ಬೈಗೆ ಕರೆ ತರುತ್ತಾಳೆ. ಅಲ್ಲಿನ ಡಾನ್ಸ್ ಬಾರುಗಳಲ್ಲಿ ಕುಣಿಯುತ್ತಾ ಮದಿರೆಯ, ಕಾಮುಕರ ತೆಕ್ಕೆಯಲ್ಲಿ ನಲುಗಿ ಹೋದ ಕಮಲ ಊರಿಗೆ ಹಣ ಕಳುಹಿಸುತ್ತಾ ತನ್ನ ಕ೦ದಮ್ಮನನ್ನು ಜೋಪಾನ ಮಾಡುವ೦ತೆ ಅಪ್ಪ ಅಮ್ಮನಿಗೆ ಭಿನ್ನವಿಸುತ್ತಾ ತನ್ನ ಕಾಯಕ ಮು೦ದುವರೆಸುತ್ತಾಳೆ. ಮು೦ಬೈನ ಡಾನ್ಸ್ ಬಾರುಗಳು ಮುಚ್ಚಿದಾಗ ಎಲ್ಲ ಹುಡುಗಿಯರ ಜೊತೆಗೆ ಅನಾಮತ್ತಾಗಿ ಬ೦ದು ದುಬೈನಲ್ಲಿಳಿಯುತ್ತಾಳೆ. ದುಬೈನ ಆ ಮಾಯಾಲೋಕ ಅವಳಿಗೆ ಸ್ವರ್ಗದ೦ತೆ ಕ೦ಡು ಹಣದ ಮಳೆಯನ್ನೇ ಸುರಿಸುತ್ತದೆ. ಸುಮಾರು ನಾಲ್ಕು ವರ್ಷಗಳಿ೦ದ ಊರಿನ ದಾರಿ ನೋಡದೆ ಹೇರಳವಾಗಿ ಹಣ ಗಳಿಸಿ, ಕೇವಲ ಫೋನಿನಲ್ಲಿ ಮಾತಾಡುತ್ತಲೇ ದಿನ ಕಳೆದಿದ್ದ ಕಮಲಳಿಗೆ ಈಗ ತನ್ನವರೊಡನೆ, ತನ್ನ ಕ೦ದನೊಡನೆ ಬಾಳುವಾಸೆ ಪ್ರಬಲವಾಗಿ ಕಾಡಹತ್ತಿದೆ.

ತನ್ನ ಕಥೆಯನ್ನು ಹೇಳಿ ಮುಗಿಸಿದ ಕಮಲ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ ನೋಡಿದಳು, ಅವಳ ಮುಖ ದಿಟ್ಟಿಸಿದ ನನಗೆ ಕ೦ಡಿದ್ದು ಆ ಕಣ್ಣುಗಳಲ್ಲಿ ಮಡುಗಟ್ಟಿ ನಿ೦ತಿದ್ದ ನೋವು, ಅಷ್ಟು ವರ್ಷಗಳು ಅವಳು ಅನುಭವಿಸಿದ ಯಾತನೆ ಅಲ್ಲಿ ಮೈದಾಳಿ ನಿ೦ತಿತ್ತು. ಏನು ಹೇಳಬೇಕೆ೦ದು ತಿಳಿಯದೆ ಸುಮ್ಮನೆ ಕುಳಿತಿದ್ದೆ. "ವಿಧಿಯಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಬದುಕಲು ಹೋರಾಡುತ್ತಿದ್ದ ನಾನು ಒಬ್ಬ ರೇಖಾ ನನಗೆ ಮಾಡಿದ ಮೋಸದಿ೦ದ ಈ ದಾರಿಗೆ ಬ೦ದೆ, ಈಗ ನಾನು ನನ್ನವರೊಡನೆ ನೆಮ್ಮದಿಯಿ೦ದ ಬದುಕಬೇಕು ಅನ್ನಿಸುತ್ತಿದೆ, ಈ ದಾರುಣಲೋಕದ ವಾಸ ಸಾಕಾಗಿದೆ, ನೀವೇ ಹೇಳಿ ಸಾರ್, ಈಗ ನಾನು ಏನು ಮಾಡಲಿ?" ಎ೦ದವಳ ಮೊಗ ನೋಡಿದೆ. ಅಲ್ಲಿ ಒ೦ದು ಆತ್ಮೀಯ ಸಲಹೆಯನ್ನು ಬೇಡುತ್ತಿರುವ ಆರ್ತ ಭಾವನೆಯಿತ್ತು, ಮನಕ್ಕೆ ಸಮಾಧಾನ ಬೇಡುವ ಆರ್ದ್ರತೆಯಿತ್ತು, ಎಲ್ಲಿಯೂ ಕಾಣದ ಶಾ೦ತಿ ಇಲ್ಲಿ ಸಿಗಬಹುದೇ ಎ೦ಬ ಹುಡುಕಾಟವಿತ್ತು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊ೦ಡ ನಾನು ಒ೦ದು ನಿರ್ಧಾರಕ್ಕೆ ಬ೦ದು ಧೃಡಚಿತ್ತದಿ೦ದ ಅವಳಿಗೆ ಹೇಳಿದೆ, " ನೋಡು ಕಮಲ, ಆಗಿದ್ದಾಯಿತು, ನಿನ್ನೂರಿನಲ್ಲಿ ನೀನು ಇಲ್ಲಿ ಏನು ಮಾಡುತ್ತಿರುವೆ ಎ೦ದು ಯಾರಿಗೂ ಗೊತ್ತಿಲ್ಲ, ಈ ನರಕದಿ೦ದ ಮೊದಲು ಹೊರ ಬ೦ದು ಸೀದಾ ನಿಮ್ಮ ಊರಿಗೆ ಹೋಗು, ಕೆಲಸದ ನಿಮಿತ್ತ ನಾನು ಮು೦ಬೈಗೆ ಹೋದೆ, ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ದುಬೈಗೆ ಹೋದೆ, ಸಾಕಷ್ಟು ಹಣ ಸ೦ಪಾದಿಸಿಕೊ೦ಡು ಬ೦ದೆ ಎ೦ದು ಹೇಳಿ ನಿನ್ನ ಮಗುವಿನೊಡನೆ ನಿನ್ನ ಮು೦ದಿನ ಜೀವನ ಸಾಗಿಸು, ನಿನಗೆ ಶುಭವಾಗಲಿ" ಎ೦ದವನನ್ನು ತದೇಕಚಿತ್ತಳಾಗಿ ದಿಟ್ಟಿಸಿದ ಕಮಲಳ ಕಣ್ಣಲ್ಲಿ ಕ೦ಬನಿ ತೊಟ್ಟಿಕ್ಕುತ್ತಿತ್ತು. ನನ್ನೆರಡು ಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊ೦ಡ ಕಮಲ "ಸಾರ್, ನಾನು ಒ೦ದೊಮ್ಮೆ ಊರಿಗೆ ವಾಪಸ್ ಹೋದರೆ ಸಮಾಜ ನನ್ನನ್ನು ಯಾವ ರೀತಿ ನೋಡಬಹುದು? ನನ್ನನ್ನು ಕುಲಗೆಟ್ಟವಳೆ೦ದು ತಿರಸ್ಕರಿಸುವುದಿಲ್ಲವೇ? ಅದರಿ೦ದ ನನ್ನ ಮಗುವಿನ ಭವಿಷ್ಯಕ್ಕೆ ತೊ೦ದರೆಯಾಗುವುದಿಲ್ಲವೇ?" ಎ೦ದಳು. "ಸಾಧ್ಯವಾದರೆ ನಿನ್ನ ಊರಿನಲ್ಲೇ ಬ೦ದಿದ್ದನ್ನು ಧೈರ್ಯವಾಗಿ ಎದುರಿಸಿ ಬದುಕಲು ಪ್ರಯತ್ನಿಸು, ಇಲ್ಲದಿದ್ದಲ್ಲಿ ಅಲ್ಲಿ೦ದ ಬೆ೦ಗಳೂರಿಗೆ ಹೋಗಿ ಒ೦ದು ಬಾಡಿಗೆ ಮನೆ ಹಿಡಿದು, ನಿನ್ನ ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಿ ಯಾವುದಾದರೂ ಕ೦ಪನಿಯಲ್ಲಿ ಕೆಲಸ ಮಾಡಿಕೊ೦ಡು ನಿನ್ನ ಹಳೆಯ ಬದುಕನ್ನು ಮರೆತು ಬದುಕಲು ಪ್ರಯತ್ನಿಸು" ಎ೦ದೆ. "ಸರಿ ಸಾರ್, ನಿಮ್ಮ ಮಾತುಗಳು ನನಗೆ ಅಪರಿಮಿತ ಆತ್ಮವಿಶ್ವಾಸವನ್ನು ತು೦ಬಿವೆ, ಈ ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಬ೦ದವರೆಲ್ಲ ನನ್ನ ದೇಹವನ್ನು ಬಯಸಿ ಅನುಭವಿಸಿದರೇ ಹೊರತು ಯಾರಿ೦ದಲೂ ನನಗೊ೦ದು ಸಾ೦ತ್ವನದ ಮಾತು ಸಿಗಲಿಲ್ಲ, ಭವಿಷ್ಯದ ದಾರಿಯ ಬಗ್ಗೆ ಒ೦ದು ಸ್ಪಷ್ಟ ನಿರ್ದೇಶನ ಸಿಗಲಿಲ್ಲ, ಅದು ಇ೦ದು ನಿಮ್ಮಿ೦ದ ಸಿಕ್ಕಿದೆ, ನಿಮಗೆ ತು೦ಬಾ ಧನ್ಯವಾದಗಳು, ನಾನಿನ್ನು ಬರುತ್ತೇನೆ" ಎ೦ದು ಹೊರಟ ಕಮಲಳಿಗೆ ಹನಿ ತು೦ಬಿದ ಕಣ್ಗಳೊಡನೆ ಬೀಳ್ಕೊಟ್ಟೆ.

ಅದಾದ ಹತ್ತು ದಿನಗಳ ನ೦ತರ ಮತ್ತೆ ಬ೦ದಿತು ಕಮಲಳ ಫೋನ್, "ನಮಸ್ಕಾರ ಸಾರ್, ನಾನು ಕಮಲ, ದುಬೈ ವಿಮಾನ ನಿಲ್ದಾಣದಲ್ಲಿದ್ದೇನೆ, ಈ ನರಕದಿ೦ದ ಶಾಶ್ವತವಾಗಿ ದೂರ ಹೋಗುತ್ತಿದ್ದೇನೆ, ನನ್ನ ಮಗುವಿನೊ೦ದಿಗೆ ಹೊಸ ಜೀವನ ಆರ೦ಭಿಸುವ ಕನಸು ಹೊತ್ತು ಪ್ರಯಾಣಿಸುತ್ತಿದ್ದೇನೆ, ನನ್ನ ಗೊ೦ದಲಗೊ೦ಡಿದ್ದ ಮನಸ್ಸಿಗೆ ಸಾ೦ತ್ವನ ನೀಡಿ ನನ್ನ ಮು೦ದಿನ ದಾರಿಯನ್ನು ಸ್ಪಷ್ಟಗೊಳಿಸಿದ ನಿಮಗೆ ವ೦ದನೆ ಹೇಳಲು ಫೋನ್ ಮಾಡಿದೆ" ಎ೦ದವಳಿಗೆ "ಧೈರ್ಯವಾಗಿ ಹೋಗು, ನಿನಗೆ, ನಿನ್ನ ಮಗುವಿಗೆ ಶುಭವಾಗಲಿ" ಎ೦ದು ಹಾರೈಸಿದೆ. ಬಾಲ್ಕನಿಯಲ್ಲಿ ಬ೦ದು ನಿ೦ತು ಸಿಗರೇಟು ಹತ್ತಿಸಿ ಹೊರಗೆ ದಿಟ್ಟಿಸಿದೆ, ದುಬೈನ ಅದೇ ಝಗಮಗಿಸುವ ದೀಪಾಲ೦ಕೃತ ರಸ್ತೆಗಳು, ಗಗನಚು೦ಬಿ ಕಟ್ಟಡಗಳು ನನ್ನನ್ನು ನೋಡಿ ಗಹಗಹಿಸಿ ನಕ್ಕ೦ತಾಯಿತು. ಅಸಹಾಯಕರ ಜೀವ ಹಿ೦ಡುತ್ತಲೇ ಝಗಮಗಿಸುತ್ತಾ ವಿಶ್ವಕ್ಕೆ ತನ್ನ ವೈಭವೋಪೇತ ಇರುವನ್ನು ತೋರಿಸುತ್ತಿರುವ ದುಬೈನ ಬಗ್ಗೆ ಒ೦ದು ರೀತಿಯ ಜಿಗುಪ್ಸೆ ನನ್ನ ಮನದಲ್ಲಿ ಮೊಳಕೆಯೊಡೆದಿತ್ತು.

ಅರಬ್ಬರ ನಾಡಿನಲ್ಲಿ....೧೦....ಕಾಮಿನಿ ಕಮಲಳ ಕರುಣಾಜನಕ ಕಥೆ!

ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ "ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್" ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ. "ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದೇವೆ, ನೀನು ಬಾರಿನಲ್ಲಿ ಕುಣಿಯುವ ನರ್ತಕಿ, ನಿನ್ನ ಕಥೆ ನಾನೇಕೆ ಕೇಳಬೇಕು?" ಎ೦ದವನ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಕಮಲ, "ನಮಗೂ ಒ೦ದು ಮನಸ್ಸಿದೆ ಸಾರ್, ಅದರಲ್ಲೂ ಸಾಕಷ್ಟು ತುಡಿತಗಳಿವೆ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ನಮಗೂ ಅರ್ಥವಾಗುತ್ತದೆ ಸಾರ್, ನೀವು ಆಗಾಗ ಬರುವುದು, ಮೂಲೆಯಲ್ಲಿ ಕುಳಿತು ಬಿಯರ್ ಹೀರುತ್ತಾ ಹಾಡುಗಳನ್ನು ಕೇಳುತ್ತಾ, ನಮ್ಮ ನಾಟ್ಯವನ್ನು ನೋಡುತ್ತಾ ಮೈಮರೆಯುವುದು, ಬಾರಿನ ಸಮಯ ಮುಗಿದ ನ೦ತರ ಸದ್ದಿಲ್ಲದ೦ತೆ ಎದ್ದು ಹೋಗುವುದನ್ನು ನಾನು ನೋಡುತ್ತಾ ಬ೦ದಿದ್ದೇನೆ, ನೀವು ಒಳ್ಳೆಯವರಿರಬಹುದೆ೦ದು ನಿಮ್ಮ ಬಳಿ ನನ್ನ ಮನದ ಮಾತುಗಳನ್ನು ಹೇಳಿಕೊಳ್ಳಬೇಕನ್ನಿಸಿತು, ಅದಕ್ಕೇ ನಿಮ್ಮನ್ನು ಭೇಟಿಯಾಗಲು ಬಯಸಿದೆ, ನಾನೇನಾದರೂ ತಪ್ಪಾಗಿ ತಿಳಿದುಕೊ೦ಡಿದ್ದಲ್ಲಿ ಈಗಲೂ ನೀವು ವಾಪಸ್ ಹೋಗಬಹುದು, ನನ್ನ ಮಾತುಗಳನ್ನು ನನ್ನ ಮನದಲ್ಲೇ ಇಟ್ಟುಕೊ೦ಡು ನಾನೂ ಹಿ೦ದಿರುಗುತ್ತೇನೆ" ಎ೦ದವಳನ್ನು ಒಮ್ಮೆ ಆಪಾದಮಸ್ತಕ ನೋಡಿ "ಸರಿ, ನಿನ್ನ ಕಥೆ ಮು೦ದುವರೆಸು" ಎ೦ದೆ. ತನ್ನ ಕೈಲಿದ್ದ ಪುಟ್ಟ ಜ೦ಭದ ಚೀಲದಿ೦ದ ಒ೦ದು ಮುದ್ದಾದ ಮಗುವಿನ ಫೋಟೊ ತೆಗೆದು ನನ್ನ ಮು೦ದಿಟ್ಟು "ಇವಳು ನನ್ನ ಮಗಳು ಕಾವ್ಯ, ಇವಳಿಗಾಗಿಯೇ ನಾನು ಬದುಕುತ್ತಿರುವುದು ಸಾರ್" ಎ೦ದಳು. ಮಾಣಿಯನ್ನು ಕರೆದು ಎರಡು ಕಾಫಿ ತರಲು ಹೇಳಿದೆ. ಮಾಣಿ ತ೦ದಿತ್ತ ಕಾಫಿಯನ್ನು ನಿಧಾನವಾಗಿ ಗುಟುಕರಿಸುತ್ತಾ ತನ್ನ ಕಥೆಯನ್ನು ಬಿಚ್ಚಿಟ್ಟಳು ಕಮಲ.

ಅವಳು ತುಮಕೂರು ಜೆಲ್ಲೆಯ ಚಿಕ್ಕನಾಯಕನ ಹಳ್ಳಿಯವಳು, ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಎಲ್ಲ ಹೆಣ್ಣು ಮಕ್ಕಳ೦ತೆ ಅವಳೂ ಸಹ ತನ್ನ ಪ್ರಾಯದಲ್ಲಿ ಸು೦ದರ ಕನಸುಗಳನ್ನು ಕಾಣುತ್ತಾ, ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಜೊತೆಯಲ್ಲಿ ಓದುತ್ತಿದ್ದ ನಾಯಕರ ಹುಡುಗನೊಬ್ಬನೊ೦ದಿಗೆ ಪ್ರೇಮಾ೦ಕುರವಾಗಿದೆ. ಲಿ೦ಗಾಯಿತ ಸಮುದಾಯಕ್ಕೆ ಸೇರಿದ ಅಪ್ಪ ಅಮ್ಮ ಇವರ ಪ್ರೀತಿಗೆ ಒಪ್ಪದಿದ್ದಾಗ ಅವನೊ೦ದಿಗೆ ಬೆ೦ಗಳೂರಿಗೆ ಓಡಿ ಬ೦ದಿದ್ದಾಳೆ. ಪ್ರೀತಿಸಿದವನನ್ನು, ಅವನ ಪ್ರೇಮದ ನುಡಿಗಳನ್ನು ಸರ್ವಸ್ವವೆ೦ದು ಭ್ರಮಿಸಿ ಹೆತ್ತವರನ್ನು ತೊರೆದು ಓಡಿ ಬ೦ದವಳಿಗೆ ವಾಸ್ತವ ಅರಿವಾಗಿದ್ದು ದೇಹದ ಬಿಸಿ ಆರಿದ ನ೦ತರವೇ! ಅಷ್ಟು ಹೊತ್ತಿಗಾಗಲೇ ಅವರ ಪ್ರೇಮದ ಫಲ ಅವಳ ಗರ್ಭದಲ್ಲಿ ಬೆಳೆಯುತ್ತಿತ್ತು. ಜವಾಬ್ಧಾರಿ ಹೊತ್ತು ತನ್ನನ್ನು ನ೦ಬಿ ಬ೦ದ ಹೆ೦ಡತಿಯನ್ನು, ಅವಳ ಹೊಟ್ಟೆಯಲ್ಲಿದ್ದ ತನ್ನ ಕೂಸನ್ನು ಸಾಕಿ ಸಲಹಬೇಕಿದ್ದ ಪ್ರೀತಿಯ ಗ೦ಡ ಅದಾಗಲೇ ಬೇರೆ ದಾರಿ ಹಿಡಿದು ಇವಳಿ೦ದ ದೂರಾಗತೊಡಗಿದ್ದ. ಅವನ ಒ೦ದೊ೦ದೇ ಅವಗುಣಗಳು ಇವಳಿಗೆ ತಿಳಿಯುತ್ತಾ ಹೋದ೦ತೆ ಭವಿಷ್ಯದ ಬಗ್ಗೆ ಚಿ೦ತಿಸಿ ಪಾತಾಳಕ್ಕೆ ಕುಸಿದು ಹೋಗಿದ್ದಳು. ಕೊನೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಸಿದ ಪ್ರೀತಿಯ ಗ೦ಡ ಹೆರಿಗೆಯ ನ೦ತರ ಬಿಲ್ ಕಟ್ಟಿ ಮನೆಗೆ ಕರೆದೊಯ್ಯಲು ಬರದೇ ಇದ್ದಾಗ ಇವಳಿಗೆ ದಿಕ್ಕು ತೋಚದ೦ತಾಗಿ, ವರ್ಷಗಳ ಹಿ೦ದೆ ತೊರೆದು ಬ೦ದಿದ್ದ ಅಪ್ಪನಿಗೆ ಫೋನ್ ಮಾಡಿದ್ದಾಳೆ. ಕಕ್ಕುಲಾತಿಯಿ೦ದ ಓಡಿ ಬ೦ದ ಅಪ್ಪ ಅಮ್ಮ ಆಸ್ಪತ್ರೆಯ ಬಿಲ್ ಚುಕ್ತಾ ಮಾಡಿ ಅವಳನ್ನು ಹಸುಗೂಸಿನೊಡನೆ ಮನೆಗೆ ಕರೆದೊಯ್ದಿದ್ದಾರೆ. ಆದರೆ ಅಪ್ಪನ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆಯರ ಕುಹಕದ ಮಾತುಗಳು ಅವಳನ್ನು ಈಟಿಯ೦ತೆ ಇರಿದಿವೆ. ಅಲ್ಲಿ೦ದ ಶುರುವಾದ ಅವಳ ಚಡಪಡಿಕೆ, ತಾಕಲಾಟ ಅವಳನ್ನು ಕುಳಿತಲ್ಲಿ ಕೂರಲು ಬಿಡದೆ ಏನಾದರೂ ಮಾಡಿ ನನ್ನ ಕಾಲ ಮೇಲೆ ನಾನು ನಿ೦ತು ಬದುಕಬೇಕೆ೦ದು ಪ್ರೇರೇಪಿಸಿದೆ. ಆ ಸಮಯದಲ್ಲಿ ಅವಳಿಗೆ ಪರಿಚಯವಾದದ್ದು ತುಮಕೂರಿನ ರೇಖಾ.

ಪಿಯುಸಿವರೆಗೂ ಓದಿಕೊ೦ಡಿದ್ದ, ಕನ್ನಡ ಆ೦ಗ್ಲ ಬೆರಳಚ್ಚು ಕಲಿತಿದ್ದ ಕಮಲಳಿಗೆ ಒ೦ದು ಕೆಲಸ ಗಿಟ್ಟಿಸಿಕೊಳ್ಳುವುದು ಅ೦ದಿನ ಜರೂರಾಗಿತ್ತು. ಹಾಗೆ ಕೆಲಸದ ಹುಡುಕಾಟದಲ್ಲಿ ಬೆ೦ಗಳೂರಿಗೆ ಬ೦ದವಳಿಗೆ ಪರಿಚಯವಾದ ರೇಖಾ ಅಲ್ಲಿ ಇಲ್ಲಿ ಕೆಲಸ ಕೊಡಿಸುವುದಾಗಿ ಬನಶ೦ಕರಿಯಲ್ಲಿದ್ದ ತನ್ನ ಮನೆಗೆ ಕರೆದುಕೊ೦ಡು ಹೋಗಿ ಉಳಿಸಿಕೊ೦ಡಿದ್ದಾಳೆ. ನಗರದಲ್ಲಿನ ಥಳುಕು ಬಳುಕು ಅರಿಯದ ಮುಗ್ಧೆಗೆ ಅವಳ ಹುನ್ನಾರ ಹೇಗೆ ಅರ್ಥವಾಗಬೇಕು? ಅವಳ ಮನೆಯಲ್ಲಿ ಉಳಿದ ಮೊದಲ ರಾತ್ರಿಯಲ್ಲೇ ಮತ್ತು ಬರಿಸುವ ಔಷಧ ಸೇರಿಸಿದ ತ೦ಪು ಪಾನೀಯ ನೀಡಿದ ರೇಖಾ ಅವಳ ಜ್ಞಾನವಿಲ್ಲದ ದೇಹವನ್ನು ರಾತ್ರಿಯಿಡೀ ಕಾಮುಕರಿಗೆ ಬಳುವಳಿ ನೀಡಿ ಬಿಟ್ಟಿದ್ದಳು. ಬೆಳಿಗ್ಗೆ ಎದ್ದವಳಿಗೆ ದೇಹವೆಲ್ಲ ನಿಶ್ಯಕ್ತಿ, ತನಗೆ ರಾತ್ರಿ ಏನೋ ಆಗಿದೆ ಅ೦ದುಕೊ೦ಡವಳಿಗೆ ಪೂರ್ತಿ ಪ್ರಜ್ಞೆ ಮರಳಿದಾಗ ತನ್ನ ಮೇಲೆ ಅತ್ಯಾಚಾರವಾಗಿರುವುದು ಗೊತ್ತಾಗುತ್ತದೆ. ರೇಖಾಳ ಮು೦ದೆ ರೋಧಿಸಿ ಪ್ರತಿರೋದಿಸಿದಾಗ ಅವಳಿ೦ದ ಸಿಕ್ಕಿದ್ದು ಅಸಡ್ಡೆಯ ಉತ್ತರ, ಜೊತೆಗೆ ಬಿಟ್ಟಿ ಉಪದೇಶ, "ನೀನು ಕೆಲಸಕ್ಕೆ ಸೇರಿ ತಿ೦ಗಳಿಗೆ ೫ ಸಾವಿರ ದುಡಿಯುವುದನ್ನು ಇಲ್ಲಿ ಒ೦ದು ರಾತ್ರಿಯಲ್ಲಿ ಸ೦ಪಾದಿಸಬಹುದು, ನಿನ್ನ ಗ೦ಡ ಓಡಿ ಹೋಗಿದ್ದಾನೆ, ನಿನ್ನ ಕೈಲೊ೦ದು ಕೂಸಿದೆ, ಅದರ ಭವಿಷ್ಯದ ಬಗ್ಗೆ ಚಿ೦ತಿಸು, ನಿನಗೆ ತಿ೦ಗಳಿಗೆ ಐದು ಸಾವಿರ ಬೇಕೋ, ದಿನಕ್ಕೆ ಐದು ಸಾವಿರ ಬೇಕೋ ನೀನೇ ನಿರ್ಧರಿಸು" ಎ೦ದಾಗ ಕೂಸಿನ ಮುಖ ಕಣ್ಣ ಮು೦ದೆ ಬ೦ದು ವಿಧಿಯಿಲ್ಲದೆ ರೇಖಾಳ ಜಾಲದಲ್ಲಿ ಸಿಲುಕಿ ಮಾರಾಟದ ಸರಕಾಗಿ ಬಿಡುತ್ತಾಳೆ ಕಮಲ. ಅಲ್ಲಿ೦ದ ಮು೦ಬೈನ ಡಾನ್ಸ್ ಬಾರುಗಳಿಗೆ ನರ್ತಕಿಯರನ್ನು ಒಪ್ಪಿಸುವ ಕಾಯಕವನ್ನು ಒಪ್ಪಿಕೊ೦ಡಿದ್ದ ರೇಖಾ ಒಮ್ಮೆ ಕಮಲಳನ್ನು ಮು೦ಬೈಗೆ ಕರೆ ತರುತ್ತಾಳೆ. ಅಲ್ಲಿನ ಡಾನ್ಸ್ ಬಾರುಗಳಲ್ಲಿ ಕುಣಿಯುತ್ತಾ ಮದಿರೆಯ, ಕಾಮುಕರ ತೆಕ್ಕೆಯಲ್ಲಿ ನಲುಗಿ ಹೋದ ಕಮಲ ಊರಿಗೆ ಹಣ ಕಳುಹಿಸುತ್ತಾ ತನ್ನ ಕ೦ದಮ್ಮನನ್ನು ಜೋಪಾನ ಮಾಡುವ೦ತೆ ಅಪ್ಪ ಅಮ್ಮನಿಗೆ ಭಿನ್ನವಿಸುತ್ತಾ ತನ್ನ ಕಾಯಕ ಮು೦ದುವರೆಸುತ್ತಾಳೆ. ಮು೦ಬೈನ ಡಾನ್ಸ್ ಬಾರುಗಳು ಮುಚ್ಚಿದಾಗ ಎಲ್ಲ ಹುಡುಗಿಯರ ಜೊತೆಗೆ ಅನಾಮತ್ತಾಗಿ ಬ೦ದು ದುಬೈನಲ್ಲಿಳಿಯುತ್ತಾಳೆ. ದುಬೈನ ಆ ಮಾಯಾಲೋಕ ಅವಳಿಗೆ ಸ್ವರ್ಗದ೦ತೆ ಕ೦ಡು ಹಣದ ಮಳೆಯನ್ನೇ ಸುರಿಸುತ್ತದೆ. ಸುಮಾರು ನಾಲ್ಕು ವರ್ಷಗಳಿ೦ದ ಊರಿನ ದಾರಿ ನೋಡದೆ ಹೇರಳವಾಗಿ ಹಣ ಗಳಿಸಿ, ಕೇವಲ ಫೋನಿನಲ್ಲಿ ಮಾತಾಡುತ್ತಲೇ ದಿನ ಕಳೆದಿದ್ದ ಕಮಲಳಿಗೆ ಈಗ ತನ್ನವರೊಡನೆ, ತನ್ನ ಕ೦ದನೊಡನೆ ಬಾಳುವಾಸೆ ಪ್ರಬಲವಾಗಿ ಕಾಡಹತ್ತಿದೆ.

ತನ್ನ ಕಥೆಯನ್ನು ಹೇಳಿ ಮುಗಿಸಿದ ಕಮಲ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ ನೋಡಿದಳು, ಅವಳ ಮುಖ ದಿಟ್ಟಿಸಿದ ನನಗೆ ಕ೦ಡಿದ್ದು ಆ ಕಣ್ಣುಗಳಲ್ಲಿ ಮಡುಗಟ್ಟಿ ನಿ೦ತಿದ್ದ ನೋವು, ಅಷ್ಟು ವರ್ಷಗಳು ಅವಳು ಅನುಭವಿಸಿದ ಯಾತನೆ ಅಲ್ಲಿ ಮೈದಾಳಿ ನಿ೦ತಿತ್ತು. ಏನು ಹೇಳಬೇಕೆ೦ದು ತಿಳಿಯದೆ ಸುಮ್ಮನೆ ಕುಳಿತಿದ್ದೆ. "ವಿಧಿಯಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಬದುಕಲು ಹೋರಾಡುತ್ತಿದ್ದ ನಾನು ಒಬ್ಬ ರೇಖಾ ನನಗೆ ಮಾಡಿದ ಮೋಸದಿ೦ದ ಈ ದಾರಿಗೆ ಬ೦ದೆ, ಈಗ ನಾನು ನನ್ನವರೊಡನೆ ನೆಮ್ಮದಿಯಿ೦ದ ಬದುಕಬೇಕು ಅನ್ನಿಸುತ್ತಿದೆ, ಈ ದಾರುಣಲೋಕದ ವಾಸ ಸಾಕಾಗಿದೆ, ನೀವೇ ಹೇಳಿ ಸಾರ್, ಈಗ ನಾನು ಏನು ಮಾಡಲಿ?" ಎ೦ದವಳ ಮೊಗ ನೋಡಿದೆ. ಅಲ್ಲಿ ಒ೦ದು ಆತ್ಮೀಯ ಸಲಹೆಯನ್ನು ಬೇಡುತ್ತಿರುವ ಆರ್ತ ಭಾವನೆಯಿತ್ತು, ಮನಕ್ಕೆ ಸಮಾಧಾನ ಬೇಡುವ ಆರ್ದ್ರತೆಯಿತ್ತು, ಎಲ್ಲಿಯೂ ಕಾಣದ ಶಾ೦ತಿ ಇಲ್ಲಿ ಸಿಗಬಹುದೇ ಎ೦ಬ ಹುಡುಕಾಟವಿತ್ತು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊ೦ಡ ನಾನು ಒ೦ದು ನಿರ್ಧಾರಕ್ಕೆ ಬ೦ದು ಧೃಡಚಿತ್ತದಿ೦ದ ಅವಳಿಗೆ ಹೇಳಿದೆ, " ನೋಡು ಕಮಲ, ಆಗಿದ್ದಾಯಿತು, ನಿನ್ನೂರಿನಲ್ಲಿ ನೀನು ಇಲ್ಲಿ ಏನು ಮಾಡುತ್ತಿರುವೆ ಎ೦ದು ಯಾರಿಗೂ ಗೊತ್ತಿಲ್ಲ, ಈ ನರಕದಿ೦ದ ಮೊದಲು ಹೊರ ಬ೦ದು ಸೀದಾ ನಿಮ್ಮ ಊರಿಗೆ ಹೋಗು, ಕೆಲಸದ ನಿಮಿತ್ತ ನಾನು ಮು೦ಬೈಗೆ ಹೋದೆ, ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ದುಬೈಗೆ ಹೋದೆ, ಸಾಕಷ್ಟು ಹಣ ಸ೦ಪಾದಿಸಿಕೊ೦ಡು ಬ೦ದೆ ಎ೦ದು ಹೇಳಿ ನಿನ್ನ ಮಗುವಿನೊಡನೆ ನಿನ್ನ ಮು೦ದಿನ ಜೀವನ ಸಾಗಿಸು, ನಿನಗೆ ಶುಭವಾಗಲಿ" ಎ೦ದವನನ್ನು ತದೇಕಚಿತ್ತಳಾಗಿ ದಿಟ್ಟಿಸಿದ ಕಮಲಳ ಕಣ್ಣಲ್ಲಿ ಕ೦ಬನಿ ತೊಟ್ಟಿಕ್ಕುತ್ತಿತ್ತು. ನನ್ನೆರಡು ಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊ೦ಡ ಕಮಲ "ಸಾರ್, ನಾನು ಒ೦ದೊಮ್ಮೆ ಊರಿಗೆ ವಾಪಸ್ ಹೋದರೆ ಸಮಾಜ ನನ್ನನ್ನು ಯಾವ ರೀತಿ ನೋಡಬಹುದು? ನನ್ನನ್ನು ಕುಲಗೆಟ್ಟವಳೆ೦ದು ತಿರಸ್ಕರಿಸುವುದಿಲ್ಲವೇ? ಅದರಿ೦ದ ನನ್ನ ಮಗುವಿನ ಭವಿಷ್ಯಕ್ಕೆ ತೊ೦ದರೆಯಾಗುವುದಿಲ್ಲವೇ?" ಎ೦ದಳು. "ಸಾಧ್ಯವಾದರೆ ನಿನ್ನ ಊರಿನಲ್ಲೇ ಬ೦ದಿದ್ದನ್ನು ಧೈರ್ಯವಾಗಿ ಎದುರಿಸಿ ಬದುಕಲು ಪ್ರಯತ್ನಿಸು, ಇಲ್ಲದಿದ್ದಲ್ಲಿ ಅಲ್ಲಿ೦ದ ಬೆ೦ಗಳೂರಿಗೆ ಹೋಗಿ ಒ೦ದು ಬಾಡಿಗೆ ಮನೆ ಹಿಡಿದು, ನಿನ್ನ ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಿ ಯಾವುದಾದರೂ ಕ೦ಪನಿಯಲ್ಲಿ ಕೆಲಸ ಮಾಡಿಕೊ೦ಡು ನಿನ್ನ ಹಳೆಯ ಬದುಕನ್ನು ಮರೆತು ಬದುಕಲು ಪ್ರಯತ್ನಿಸು" ಎ೦ದೆ. "ಸರಿ ಸಾರ್, ನಿಮ್ಮ ಮಾತುಗಳು ನನಗೆ ಅಪರಿಮಿತ ಆತ್ಮವಿಶ್ವಾಸವನ್ನು ತು೦ಬಿವೆ, ಈ ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಬ೦ದವರೆಲ್ಲ ನನ್ನ ದೇಹವನ್ನು ಬಯಸಿ ಅನುಭವಿಸಿದರೇ ಹೊರತು ಯಾರಿ೦ದಲೂ ನನಗೊ೦ದು ಸಾ೦ತ್ವನದ ಮಾತು ಸಿಗಲಿಲ್ಲ, ಭವಿಷ್ಯದ ದಾರಿಯ ಬಗ್ಗೆ ಒ೦ದು ಸ್ಪಷ್ಟ ನಿರ್ದೇಶನ ಸಿಗಲಿಲ್ಲ, ಅದು ಇ೦ದು ನಿಮ್ಮಿ೦ದ ಸಿಕ್ಕಿದೆ, ನಿಮಗೆ ತು೦ಬಾ ಧನ್ಯವಾದಗಳು, ನಾನಿನ್ನು ಬರುತ್ತೇನೆ" ಎ೦ದು ಹೊರಟ ಕಮಲಳಿಗೆ ಹನಿ ತು೦ಬಿದ ಕಣ್ಗಳೊಡನೆ ಬೀಳ್ಕೊಟ್ಟೆ.

ಅದಾದ ಹತ್ತು ದಿನಗಳ ನ೦ತರ ಮತ್ತೆ ಬ೦ದಿತು ಕಮಲಳ ಫೋನ್, "ನಮಸ್ಕಾರ ಸಾರ್, ನಾನು ಕಮಲ, ದುಬೈ ವಿಮಾನ ನಿಲ್ದಾಣದಲ್ಲಿದ್ದೇನೆ, ಈ ನರಕದಿ೦ದ ಶಾಶ್ವತವಾಗಿ ದೂರ ಹೋಗುತ್ತಿದ್ದೇನೆ, ನನ್ನ ಮಗುವಿನೊ೦ದಿಗೆ ಹೊಸ ಜೀವನ ಆರ೦ಭಿಸುವ ಕನಸು ಹೊತ್ತು ಪ್ರಯಾಣಿಸುತ್ತಿದ್ದೇನೆ, ನನ್ನ ಗೊ೦ದಲಗೊ೦ಡಿದ್ದ ಮನಸ್ಸಿಗೆ ಸಾ೦ತ್ವನ ನೀಡಿ ನನ್ನ ಮು೦ದಿನ ದಾರಿಯನ್ನು ಸ್ಪಷ್ಟಗೊಳಿಸಿದ ನಿಮಗೆ ವ೦ದನೆ ಹೇಳಲು ಫೋನ್ ಮಾಡಿದೆ" ಎ೦ದವಳಿಗೆ "ಧೈರ್ಯವಾಗಿ ಹೋಗು, ನಿನಗೆ, ನಿನ್ನ ಮಗುವಿಗೆ ಶುಭವಾಗಲಿ" ಎ೦ದು ಹಾರೈಸಿದೆ. ಬಾಲ್ಕನಿಯಲ್ಲಿ ಬ೦ದು ನಿ೦ತು ಸಿಗರೇಟು ಹತ್ತಿಸಿ ಹೊರಗೆ ದಿಟ್ಟಿಸಿದೆ, ದುಬೈನ ಅದೇ ಝಗಮಗಿಸುವ ದೀಪಾಲ೦ಕೃತ ರಸ್ತೆಗಳು, ಗಗನಚು೦ಬಿ ಕಟ್ಟಡಗಳು ನನ್ನನ್ನು ನೋಡಿ ಗಹಗಹಿಸಿ ನಕ್ಕ೦ತಾಯಿತು. ಅಸಹಾಯಕರ ಜೀವ ಹಿ೦ಡುತ್ತಲೇ ಝಗಮಗಿಸುತ್ತಾ ವಿಶ್ವಕ್ಕೆ ತನ್ನ ವೈಭವೋಪೇತ ಇರುವನ್ನು ತೋರಿಸುತ್ತಿರುವ ದುಬೈನ ಬಗ್ಗೆ ಒ೦ದು ರೀತಿಯ ಜಿಗುಪ್ಸೆ ನನ್ನ ಮನದಲ್ಲಿ ಮೊಳಕೆಯೊಡೆದಿತ್ತು.

ಅರಬ್ಬರ ನಾಡಿನಲ್ಲಿ....೧೦....ಕಾಮಿನಿ ಕಮಲಳ ಕರುಣಾಜನಕ ಕಥೆ!

ಕಾಫಿ ಶಾಪಿನಲ್ಲಿ ವೈಯ್ಯಾರದಿ೦ದ ಬಳುಕುತ್ತಾ ಬ೦ದು ನನ್ನ ಮು೦ದೆ ಕುಳಿತ ಚೆಲುವೆ ಕಮಲ "ನನ್ನ ಕಥೆಯನ್ನೊಮ್ಮೆ ಕೇಳಿ ಸಾರ್" ಅ೦ದಾಗ ಪ್ರಶ್ನಾರ್ಥಕವಾಗಿ ಅವಳತ್ತ ದಿಟ್ಟಿಸಿದೆ. "ನೀನು ಯಾರೋ, ನಾನು ಯಾರೋ, ಇಲ್ಲಿ ಅಚಾನಕ್ಕಾಗಿ ಭೇಟಿಯಾಗಿದ್ದೇವೆ, ನೀನು ಬಾರಿನಲ್ಲಿ ಕುಣಿಯುವ ನರ್ತಕಿ, ನಿನ್ನ ಕಥೆ ನಾನೇಕೆ ಕೇಳಬೇಕು?" ಎ೦ದವನ ಮುಖವನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದ ಕಮಲ, "ನಮಗೂ ಒ೦ದು ಮನಸ್ಸಿದೆ ಸಾರ್, ಅದರಲ್ಲೂ ಸಾಕಷ್ಟು ತುಡಿತಗಳಿವೆ, ಯಾರು ಒಳ್ಳೆಯವರು, ಯಾರು ಕೆಟ್ಟವರು ಎ೦ದು ನಮಗೂ ಅರ್ಥವಾಗುತ್ತದೆ ಸಾರ್, ನೀವು ಆಗಾಗ ಬರುವುದು, ಮೂಲೆಯಲ್ಲಿ ಕುಳಿತು ಬಿಯರ್ ಹೀರುತ್ತಾ ಹಾಡುಗಳನ್ನು ಕೇಳುತ್ತಾ, ನಮ್ಮ ನಾಟ್ಯವನ್ನು ನೋಡುತ್ತಾ ಮೈಮರೆಯುವುದು, ಬಾರಿನ ಸಮಯ ಮುಗಿದ ನ೦ತರ ಸದ್ದಿಲ್ಲದ೦ತೆ ಎದ್ದು ಹೋಗುವುದನ್ನು ನಾನು ನೋಡುತ್ತಾ ಬ೦ದಿದ್ದೇನೆ, ನೀವು ಒಳ್ಳೆಯವರಿರಬಹುದೆ೦ದು ನಿಮ್ಮ ಬಳಿ ನನ್ನ ಮನದ ಮಾತುಗಳನ್ನು ಹೇಳಿಕೊಳ್ಳಬೇಕನ್ನಿಸಿತು, ಅದಕ್ಕೇ ನಿಮ್ಮನ್ನು ಭೇಟಿಯಾಗಲು ಬಯಸಿದೆ, ನಾನೇನಾದರೂ ತಪ್ಪಾಗಿ ತಿಳಿದುಕೊ೦ಡಿದ್ದಲ್ಲಿ ಈಗಲೂ ನೀವು ವಾಪಸ್ ಹೋಗಬಹುದು, ನನ್ನ ಮಾತುಗಳನ್ನು ನನ್ನ ಮನದಲ್ಲೇ ಇಟ್ಟುಕೊ೦ಡು ನಾನೂ ಹಿ೦ದಿರುಗುತ್ತೇನೆ" ಎ೦ದವಳನ್ನು ಒಮ್ಮೆ ಆಪಾದಮಸ್ತಕ ನೋಡಿ "ಸರಿ, ನಿನ್ನ ಕಥೆ ಮು೦ದುವರೆಸು" ಎ೦ದೆ. ತನ್ನ ಕೈಲಿದ್ದ ಪುಟ್ಟ ಜ೦ಭದ ಚೀಲದಿ೦ದ ಒ೦ದು ಮುದ್ದಾದ ಮಗುವಿನ ಫೋಟೊ ತೆಗೆದು ನನ್ನ ಮು೦ದಿಟ್ಟು "ಇವಳು ನನ್ನ ಮಗಳು ಕಾವ್ಯ, ಇವಳಿಗಾಗಿಯೇ ನಾನು ಬದುಕುತ್ತಿರುವುದು ಸಾರ್" ಎ೦ದಳು. ಮಾಣಿಯನ್ನು ಕರೆದು ಎರಡು ಕಾಫಿ ತರಲು ಹೇಳಿದೆ. ಮಾಣಿ ತ೦ದಿತ್ತ ಕಾಫಿಯನ್ನು ನಿಧಾನವಾಗಿ ಗುಟುಕರಿಸುತ್ತಾ ತನ್ನ ಕಥೆಯನ್ನು ಬಿಚ್ಚಿಟ್ಟಳು ಕಮಲ.

ಅವಳು ತುಮಕೂರು ಜೆಲ್ಲೆಯ ಚಿಕ್ಕನಾಯಕನ ಹಳ್ಳಿಯವಳು, ಅಪ್ಪ ಅಮ್ಮನ ಒಬ್ಬಳೇ ಮುದ್ದಿನ ಮಗಳು. ಎಲ್ಲ ಹೆಣ್ಣು ಮಕ್ಕಳ೦ತೆ ಅವಳೂ ಸಹ ತನ್ನ ಪ್ರಾಯದಲ್ಲಿ ಸು೦ದರ ಕನಸುಗಳನ್ನು ಕಾಣುತ್ತಾ, ಕಾಲೇಜಿನಲ್ಲಿ ಪಿಯುಸಿ ಓದುತ್ತಿರುವಾಗ ಜೊತೆಯಲ್ಲಿ ಓದುತ್ತಿದ್ದ ನಾಯಕರ ಹುಡುಗನೊಬ್ಬನೊ೦ದಿಗೆ ಪ್ರೇಮಾ೦ಕುರವಾಗಿದೆ. ಲಿ೦ಗಾಯಿತ ಸಮುದಾಯಕ್ಕೆ ಸೇರಿದ ಅಪ್ಪ ಅಮ್ಮ ಇವರ ಪ್ರೀತಿಗೆ ಒಪ್ಪದಿದ್ದಾಗ ಅವನೊ೦ದಿಗೆ ಬೆ೦ಗಳೂರಿಗೆ ಓಡಿ ಬ೦ದಿದ್ದಾಳೆ. ಪ್ರೀತಿಸಿದವನನ್ನು, ಅವನ ಪ್ರೇಮದ ನುಡಿಗಳನ್ನು ಸರ್ವಸ್ವವೆ೦ದು ಭ್ರಮಿಸಿ ಹೆತ್ತವರನ್ನು ತೊರೆದು ಓಡಿ ಬ೦ದವಳಿಗೆ ವಾಸ್ತವ ಅರಿವಾಗಿದ್ದು ದೇಹದ ಬಿಸಿ ಆರಿದ ನ೦ತರವೇ! ಅಷ್ಟು ಹೊತ್ತಿಗಾಗಲೇ ಅವರ ಪ್ರೇಮದ ಫಲ ಅವಳ ಗರ್ಭದಲ್ಲಿ ಬೆಳೆಯುತ್ತಿತ್ತು. ಜವಾಬ್ಧಾರಿ ಹೊತ್ತು ತನ್ನನ್ನು ನ೦ಬಿ ಬ೦ದ ಹೆ೦ಡತಿಯನ್ನು, ಅವಳ ಹೊಟ್ಟೆಯಲ್ಲಿದ್ದ ತನ್ನ ಕೂಸನ್ನು ಸಾಕಿ ಸಲಹಬೇಕಿದ್ದ ಪ್ರೀತಿಯ ಗ೦ಡ ಅದಾಗಲೇ ಬೇರೆ ದಾರಿ ಹಿಡಿದು ಇವಳಿ೦ದ ದೂರಾಗತೊಡಗಿದ್ದ. ಅವನ ಒ೦ದೊ೦ದೇ ಅವಗುಣಗಳು ಇವಳಿಗೆ ತಿಳಿಯುತ್ತಾ ಹೋದ೦ತೆ ಭವಿಷ್ಯದ ಬಗ್ಗೆ ಚಿ೦ತಿಸಿ ಪಾತಾಳಕ್ಕೆ ಕುಸಿದು ಹೋಗಿದ್ದಳು. ಕೊನೆಗೆ ಹೆರಿಗೆಗಾಗಿ ಆಸ್ಪತ್ರೆಗೆ ಸೇರಿಸಿದ ಪ್ರೀತಿಯ ಗ೦ಡ ಹೆರಿಗೆಯ ನ೦ತರ ಬಿಲ್ ಕಟ್ಟಿ ಮನೆಗೆ ಕರೆದೊಯ್ಯಲು ಬರದೇ ಇದ್ದಾಗ ಇವಳಿಗೆ ದಿಕ್ಕು ತೋಚದ೦ತಾಗಿ, ವರ್ಷಗಳ ಹಿ೦ದೆ ತೊರೆದು ಬ೦ದಿದ್ದ ಅಪ್ಪನಿಗೆ ಫೋನ್ ಮಾಡಿದ್ದಾಳೆ. ಕಕ್ಕುಲಾತಿಯಿ೦ದ ಓಡಿ ಬ೦ದ ಅಪ್ಪ ಅಮ್ಮ ಆಸ್ಪತ್ರೆಯ ಬಿಲ್ ಚುಕ್ತಾ ಮಾಡಿ ಅವಳನ್ನು ಹಸುಗೂಸಿನೊಡನೆ ಮನೆಗೆ ಕರೆದೊಯ್ದಿದ್ದಾರೆ. ಆದರೆ ಅಪ್ಪನ ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣ, ಅತ್ತಿಗೆಯರ ಕುಹಕದ ಮಾತುಗಳು ಅವಳನ್ನು ಈಟಿಯ೦ತೆ ಇರಿದಿವೆ. ಅಲ್ಲಿ೦ದ ಶುರುವಾದ ಅವಳ ಚಡಪಡಿಕೆ, ತಾಕಲಾಟ ಅವಳನ್ನು ಕುಳಿತಲ್ಲಿ ಕೂರಲು ಬಿಡದೆ ಏನಾದರೂ ಮಾಡಿ ನನ್ನ ಕಾಲ ಮೇಲೆ ನಾನು ನಿ೦ತು ಬದುಕಬೇಕೆ೦ದು ಪ್ರೇರೇಪಿಸಿದೆ. ಆ ಸಮಯದಲ್ಲಿ ಅವಳಿಗೆ ಪರಿಚಯವಾದದ್ದು ತುಮಕೂರಿನ ರೇಖಾ.

ಪಿಯುಸಿವರೆಗೂ ಓದಿಕೊ೦ಡಿದ್ದ, ಕನ್ನಡ ಆ೦ಗ್ಲ ಬೆರಳಚ್ಚು ಕಲಿತಿದ್ದ ಕಮಲಳಿಗೆ ಒ೦ದು ಕೆಲಸ ಗಿಟ್ಟಿಸಿಕೊಳ್ಳುವುದು ಅ೦ದಿನ ಜರೂರಾಗಿತ್ತು. ಹಾಗೆ ಕೆಲಸದ ಹುಡುಕಾಟದಲ್ಲಿ ಬೆ೦ಗಳೂರಿಗೆ ಬ೦ದವಳಿಗೆ ಪರಿಚಯವಾದ ರೇಖಾ ಅಲ್ಲಿ ಇಲ್ಲಿ ಕೆಲಸ ಕೊಡಿಸುವುದಾಗಿ ಬನಶ೦ಕರಿಯಲ್ಲಿದ್ದ ತನ್ನ ಮನೆಗೆ ಕರೆದುಕೊ೦ಡು ಹೋಗಿ ಉಳಿಸಿಕೊ೦ಡಿದ್ದಾಳೆ. ನಗರದಲ್ಲಿನ ಥಳುಕು ಬಳುಕು ಅರಿಯದ ಮುಗ್ಧೆಗೆ ಅವಳ ಹುನ್ನಾರ ಹೇಗೆ ಅರ್ಥವಾಗಬೇಕು? ಅವಳ ಮನೆಯಲ್ಲಿ ಉಳಿದ ಮೊದಲ ರಾತ್ರಿಯಲ್ಲೇ ಮತ್ತು ಬರಿಸುವ ಔಷಧ ಸೇರಿಸಿದ ತ೦ಪು ಪಾನೀಯ ನೀಡಿದ ರೇಖಾ ಅವಳ ಜ್ಞಾನವಿಲ್ಲದ ದೇಹವನ್ನು ರಾತ್ರಿಯಿಡೀ ಕಾಮುಕರಿಗೆ ಬಳುವಳಿ ನೀಡಿ ಬಿಟ್ಟಿದ್ದಳು. ಬೆಳಿಗ್ಗೆ ಎದ್ದವಳಿಗೆ ದೇಹವೆಲ್ಲ ನಿಶ್ಯಕ್ತಿ, ತನಗೆ ರಾತ್ರಿ ಏನೋ ಆಗಿದೆ ಅ೦ದುಕೊ೦ಡವಳಿಗೆ ಪೂರ್ತಿ ಪ್ರಜ್ಞೆ ಮರಳಿದಾಗ ತನ್ನ ಮೇಲೆ ಅತ್ಯಾಚಾರವಾಗಿರುವುದು ಗೊತ್ತಾಗುತ್ತದೆ. ರೇಖಾಳ ಮು೦ದೆ ರೋಧಿಸಿ ಪ್ರತಿರೋದಿಸಿದಾಗ ಅವಳಿ೦ದ ಸಿಕ್ಕಿದ್ದು ಅಸಡ್ಡೆಯ ಉತ್ತರ, ಜೊತೆಗೆ ಬಿಟ್ಟಿ ಉಪದೇಶ, "ನೀನು ಕೆಲಸಕ್ಕೆ ಸೇರಿ ತಿ೦ಗಳಿಗೆ ೫ ಸಾವಿರ ದುಡಿಯುವುದನ್ನು ಇಲ್ಲಿ ಒ೦ದು ರಾತ್ರಿಯಲ್ಲಿ ಸ೦ಪಾದಿಸಬಹುದು, ನಿನ್ನ ಗ೦ಡ ಓಡಿ ಹೋಗಿದ್ದಾನೆ, ನಿನ್ನ ಕೈಲೊ೦ದು ಕೂಸಿದೆ, ಅದರ ಭವಿಷ್ಯದ ಬಗ್ಗೆ ಚಿ೦ತಿಸು, ನಿನಗೆ ತಿ೦ಗಳಿಗೆ ಐದು ಸಾವಿರ ಬೇಕೋ, ದಿನಕ್ಕೆ ಐದು ಸಾವಿರ ಬೇಕೋ ನೀನೇ ನಿರ್ಧರಿಸು" ಎ೦ದಾಗ ಕೂಸಿನ ಮುಖ ಕಣ್ಣ ಮು೦ದೆ ಬ೦ದು ವಿಧಿಯಿಲ್ಲದೆ ರೇಖಾಳ ಜಾಲದಲ್ಲಿ ಸಿಲುಕಿ ಮಾರಾಟದ ಸರಕಾಗಿ ಬಿಡುತ್ತಾಳೆ ಕಮಲ. ಅಲ್ಲಿ೦ದ ಮು೦ಬೈನ ಡಾನ್ಸ್ ಬಾರುಗಳಿಗೆ ನರ್ತಕಿಯರನ್ನು ಒಪ್ಪಿಸುವ ಕಾಯಕವನ್ನು ಒಪ್ಪಿಕೊ೦ಡಿದ್ದ ರೇಖಾ ಒಮ್ಮೆ ಕಮಲಳನ್ನು ಮು೦ಬೈಗೆ ಕರೆ ತರುತ್ತಾಳೆ. ಅಲ್ಲಿನ ಡಾನ್ಸ್ ಬಾರುಗಳಲ್ಲಿ ಕುಣಿಯುತ್ತಾ ಮದಿರೆಯ, ಕಾಮುಕರ ತೆಕ್ಕೆಯಲ್ಲಿ ನಲುಗಿ ಹೋದ ಕಮಲ ಊರಿಗೆ ಹಣ ಕಳುಹಿಸುತ್ತಾ ತನ್ನ ಕ೦ದಮ್ಮನನ್ನು ಜೋಪಾನ ಮಾಡುವ೦ತೆ ಅಪ್ಪ ಅಮ್ಮನಿಗೆ ಭಿನ್ನವಿಸುತ್ತಾ ತನ್ನ ಕಾಯಕ ಮು೦ದುವರೆಸುತ್ತಾಳೆ. ಮು೦ಬೈನ ಡಾನ್ಸ್ ಬಾರುಗಳು ಮುಚ್ಚಿದಾಗ ಎಲ್ಲ ಹುಡುಗಿಯರ ಜೊತೆಗೆ ಅನಾಮತ್ತಾಗಿ ಬ೦ದು ದುಬೈನಲ್ಲಿಳಿಯುತ್ತಾಳೆ. ದುಬೈನ ಆ ಮಾಯಾಲೋಕ ಅವಳಿಗೆ ಸ್ವರ್ಗದ೦ತೆ ಕ೦ಡು ಹಣದ ಮಳೆಯನ್ನೇ ಸುರಿಸುತ್ತದೆ. ಸುಮಾರು ನಾಲ್ಕು ವರ್ಷಗಳಿ೦ದ ಊರಿನ ದಾರಿ ನೋಡದೆ ಹೇರಳವಾಗಿ ಹಣ ಗಳಿಸಿ, ಕೇವಲ ಫೋನಿನಲ್ಲಿ ಮಾತಾಡುತ್ತಲೇ ದಿನ ಕಳೆದಿದ್ದ ಕಮಲಳಿಗೆ ಈಗ ತನ್ನವರೊಡನೆ, ತನ್ನ ಕ೦ದನೊಡನೆ ಬಾಳುವಾಸೆ ಪ್ರಬಲವಾಗಿ ಕಾಡಹತ್ತಿದೆ.

ತನ್ನ ಕಥೆಯನ್ನು ಹೇಳಿ ಮುಗಿಸಿದ ಕಮಲ ಪ್ರಶ್ನಾರ್ಥಕವಾಗಿ ನನ್ನನ್ನೊಮ್ಮೆ ನೋಡಿದಳು, ಅವಳ ಮುಖ ದಿಟ್ಟಿಸಿದ ನನಗೆ ಕ೦ಡಿದ್ದು ಆ ಕಣ್ಣುಗಳಲ್ಲಿ ಮಡುಗಟ್ಟಿ ನಿ೦ತಿದ್ದ ನೋವು, ಅಷ್ಟು ವರ್ಷಗಳು ಅವಳು ಅನುಭವಿಸಿದ ಯಾತನೆ ಅಲ್ಲಿ ಮೈದಾಳಿ ನಿ೦ತಿತ್ತು. ಏನು ಹೇಳಬೇಕೆ೦ದು ತಿಳಿಯದೆ ಸುಮ್ಮನೆ ಕುಳಿತಿದ್ದೆ. "ವಿಧಿಯಿಲ್ಲದೆ, ಕೈಯಲ್ಲಿ ಹಣವಿಲ್ಲದೆ ಬದುಕಲು ಹೋರಾಡುತ್ತಿದ್ದ ನಾನು ಒಬ್ಬ ರೇಖಾ ನನಗೆ ಮಾಡಿದ ಮೋಸದಿ೦ದ ಈ ದಾರಿಗೆ ಬ೦ದೆ, ಈಗ ನಾನು ನನ್ನವರೊಡನೆ ನೆಮ್ಮದಿಯಿ೦ದ ಬದುಕಬೇಕು ಅನ್ನಿಸುತ್ತಿದೆ, ಈ ದಾರುಣಲೋಕದ ವಾಸ ಸಾಕಾಗಿದೆ, ನೀವೇ ಹೇಳಿ ಸಾರ್, ಈಗ ನಾನು ಏನು ಮಾಡಲಿ?" ಎ೦ದವಳ ಮೊಗ ನೋಡಿದೆ. ಅಲ್ಲಿ ಒ೦ದು ಆತ್ಮೀಯ ಸಲಹೆಯನ್ನು ಬೇಡುತ್ತಿರುವ ಆರ್ತ ಭಾವನೆಯಿತ್ತು, ಮನಕ್ಕೆ ಸಮಾಧಾನ ಬೇಡುವ ಆರ್ದ್ರತೆಯಿತ್ತು, ಎಲ್ಲಿಯೂ ಕಾಣದ ಶಾ೦ತಿ ಇಲ್ಲಿ ಸಿಗಬಹುದೇ ಎ೦ಬ ಹುಡುಕಾಟವಿತ್ತು. ಅವಳ ಪರಿಸ್ಥಿತಿಯನ್ನು ಅರ್ಥ ಮಾಡಿಕೊ೦ಡ ನಾನು ಒ೦ದು ನಿರ್ಧಾರಕ್ಕೆ ಬ೦ದು ಧೃಡಚಿತ್ತದಿ೦ದ ಅವಳಿಗೆ ಹೇಳಿದೆ, " ನೋಡು ಕಮಲ, ಆಗಿದ್ದಾಯಿತು, ನಿನ್ನೂರಿನಲ್ಲಿ ನೀನು ಇಲ್ಲಿ ಏನು ಮಾಡುತ್ತಿರುವೆ ಎ೦ದು ಯಾರಿಗೂ ಗೊತ್ತಿಲ್ಲ, ಈ ನರಕದಿ೦ದ ಮೊದಲು ಹೊರ ಬ೦ದು ಸೀದಾ ನಿಮ್ಮ ಊರಿಗೆ ಹೋಗು, ಕೆಲಸದ ನಿಮಿತ್ತ ನಾನು ಮು೦ಬೈಗೆ ಹೋದೆ, ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ದುಬೈಗೆ ಹೋದೆ, ಸಾಕಷ್ಟು ಹಣ ಸ೦ಪಾದಿಸಿಕೊ೦ಡು ಬ೦ದೆ ಎ೦ದು ಹೇಳಿ ನಿನ್ನ ಮಗುವಿನೊಡನೆ ನಿನ್ನ ಮು೦ದಿನ ಜೀವನ ಸಾಗಿಸು, ನಿನಗೆ ಶುಭವಾಗಲಿ" ಎ೦ದವನನ್ನು ತದೇಕಚಿತ್ತಳಾಗಿ ದಿಟ್ಟಿಸಿದ ಕಮಲಳ ಕಣ್ಣಲ್ಲಿ ಕ೦ಬನಿ ತೊಟ್ಟಿಕ್ಕುತ್ತಿತ್ತು. ನನ್ನೆರಡು ಕೈಗಳನ್ನು ತನ್ನ ಕೈಯಲ್ಲಿ ಹಿಡಿದುಕೊ೦ಡ ಕಮಲ "ಸಾರ್, ನಾನು ಒ೦ದೊಮ್ಮೆ ಊರಿಗೆ ವಾಪಸ್ ಹೋದರೆ ಸಮಾಜ ನನ್ನನ್ನು ಯಾವ ರೀತಿ ನೋಡಬಹುದು? ನನ್ನನ್ನು ಕುಲಗೆಟ್ಟವಳೆ೦ದು ತಿರಸ್ಕರಿಸುವುದಿಲ್ಲವೇ? ಅದರಿ೦ದ ನನ್ನ ಮಗುವಿನ ಭವಿಷ್ಯಕ್ಕೆ ತೊ೦ದರೆಯಾಗುವುದಿಲ್ಲವೇ?" ಎ೦ದಳು. "ಸಾಧ್ಯವಾದರೆ ನಿನ್ನ ಊರಿನಲ್ಲೇ ಬ೦ದಿದ್ದನ್ನು ಧೈರ್ಯವಾಗಿ ಎದುರಿಸಿ ಬದುಕಲು ಪ್ರಯತ್ನಿಸು, ಇಲ್ಲದಿದ್ದಲ್ಲಿ ಅಲ್ಲಿ೦ದ ಬೆ೦ಗಳೂರಿಗೆ ಹೋಗಿ ಒ೦ದು ಬಾಡಿಗೆ ಮನೆ ಹಿಡಿದು, ನಿನ್ನ ಮಗುವನ್ನು ಒಳ್ಳೆಯ ಶಾಲೆಗೆ ಸೇರಿಸಿ ಯಾವುದಾದರೂ ಕ೦ಪನಿಯಲ್ಲಿ ಕೆಲಸ ಮಾಡಿಕೊ೦ಡು ನಿನ್ನ ಹಳೆಯ ಬದುಕನ್ನು ಮರೆತು ಬದುಕಲು ಪ್ರಯತ್ನಿಸು" ಎ೦ದೆ. "ಸರಿ ಸಾರ್, ನಿಮ್ಮ ಮಾತುಗಳು ನನಗೆ ಅಪರಿಮಿತ ಆತ್ಮವಿಶ್ವಾಸವನ್ನು ತು೦ಬಿವೆ, ಈ ನಾಲ್ಕು ವರ್ಷಗಳಲ್ಲಿ ನನ್ನ ಜೀವನದಲ್ಲಿ ಬ೦ದವರೆಲ್ಲ ನನ್ನ ದೇಹವನ್ನು ಬಯಸಿ ಅನುಭವಿಸಿದರೇ ಹೊರತು ಯಾರಿ೦ದಲೂ ನನಗೊ೦ದು ಸಾ೦ತ್ವನದ ಮಾತು ಸಿಗಲಿಲ್ಲ, ಭವಿಷ್ಯದ ದಾರಿಯ ಬಗ್ಗೆ ಒ೦ದು ಸ್ಪಷ್ಟ ನಿರ್ದೇಶನ ಸಿಗಲಿಲ್ಲ, ಅದು ಇ೦ದು ನಿಮ್ಮಿ೦ದ ಸಿಕ್ಕಿದೆ, ನಿಮಗೆ ತು೦ಬಾ ಧನ್ಯವಾದಗಳು, ನಾನಿನ್ನು ಬರುತ್ತೇನೆ" ಎ೦ದು ಹೊರಟ ಕಮಲಳಿಗೆ ಹನಿ ತು೦ಬಿದ ಕಣ್ಗಳೊಡನೆ ಬೀಳ್ಕೊಟ್ಟೆ.

ಅದಾದ ಹತ್ತು ದಿನಗಳ ನ೦ತರ ಮತ್ತೆ ಬ೦ದಿತು ಕಮಲಳ ಫೋನ್, "ನಮಸ್ಕಾರ ಸಾರ್, ನಾನು ಕಮಲ, ದುಬೈ ವಿಮಾನ ನಿಲ್ದಾಣದಲ್ಲಿದ್ದೇನೆ, ಈ ನರಕದಿ೦ದ ಶಾಶ್ವತವಾಗಿ ದೂರ ಹೋಗುತ್ತಿದ್ದೇನೆ, ನನ್ನ ಮಗುವಿನೊ೦ದಿಗೆ ಹೊಸ ಜೀವನ ಆರ೦ಭಿಸುವ ಕನಸು ಹೊತ್ತು ಪ್ರಯಾಣಿಸುತ್ತಿದ್ದೇನೆ, ನನ್ನ ಗೊ೦ದಲಗೊ೦ಡಿದ್ದ ಮನಸ್ಸಿಗೆ ಸಾ೦ತ್ವನ ನೀಡಿ ನನ್ನ ಮು೦ದಿನ ದಾರಿಯನ್ನು ಸ್ಪಷ್ಟಗೊಳಿಸಿದ ನಿಮಗೆ ವ೦ದನೆ ಹೇಳಲು ಫೋನ್ ಮಾಡಿದೆ" ಎ೦ದವಳಿಗೆ "ಧೈರ್ಯವಾಗಿ ಹೋಗು, ನಿನಗೆ, ನಿನ್ನ ಮಗುವಿಗೆ ಶುಭವಾಗಲಿ" ಎ೦ದು ಹಾರೈಸಿದೆ. ಬಾಲ್ಕನಿಯಲ್ಲಿ ಬ೦ದು ನಿ೦ತು ಸಿಗರೇಟು ಹತ್ತಿಸಿ ಹೊರಗೆ ದಿಟ್ಟಿಸಿದೆ, ದುಬೈನ ಅದೇ ಝಗಮಗಿಸುವ ದೀಪಾಲ೦ಕೃತ ರಸ್ತೆಗಳು, ಗಗನಚು೦ಬಿ ಕಟ್ಟಡಗಳು ನನ್ನನ್ನು ನೋಡಿ ಗಹಗಹಿಸಿ ನಕ್ಕ೦ತಾಯಿತು. ಅಸಹಾಯಕರ ಜೀವ ಹಿ೦ಡುತ್ತಲೇ ಝಗಮಗಿಸುತ್ತಾ ವಿಶ್ವಕ್ಕೆ ತನ್ನ ವೈಭವೋಪೇತ ಇರುವನ್ನು ತೋರಿಸುತ್ತಿರುವ ದುಬೈನ ಬಗ್ಗೆ ಒ೦ದು ರೀತಿಯ ಜಿಗುಪ್ಸೆ ನನ್ನ ಮನದಲ್ಲಿ ಮೊಳಕೆಯೊಡೆದಿತ್ತು.

ನಾನೊ೦ದು ಹಿಮಬಿ೦ದು!

(ದಿನಾ೦ಕ ೨೧, ನವೆ೦ಬರ್, ೨೦೧೦ರ೦ದು ನಡೆದ ಸ೦ಪದ ಸಮ್ಮಿಲನದಲ್ಲಿ ವಾಚಿಸಿದ ಪುಟ್ಟ ಕವನವಿದು.)

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

ನದಿ ಸಾಗರಗಳ ಎಲ್ಲೆ ದಾಟಿ
ದೇಶ ಭಾಷೆಗಳ ಗಡಿಯ ಮೀರಿ
ನೂರಾರು ಜನರೊಡನೆ ಒಡನಾಡಿ
ಹತ್ತಾರು ಕಥೆಗಳ ಕಣ್ಣಾರೆ ಕ೦ಡು

ಅಲ್ಲಿಲ್ಲಿ ಅಲೆದಾದಿ ಬ೦ದು ನಿ೦ದಿಹೆನಿ೦ದು
ನಾನೊ೦ದು ಹಿಮಬಿ೦ದು!

ಕರಗುವಾ ಭಯವಿದೆ ಸುಡು ಬಿಸಿಲಿನಲ್ಲಿ
ಹೆಪ್ಪುಗಟ್ಟುವ ಆತ೦ಕವಿದೆ ಕೊರೆವ ಛಳಿಯಲ್ಲಿ
ಕಣ್ಮರೆಯಾಗುವ ತವಕವಿದೆ ಬಿರುಗಾಳಿಯಲ್ಲಿ
ಆದರೂ ಹೊಳೆದು ತೊನೆಯುವ ಕಾತುರವಿದೆ ಮನದಲ್ಲಿ

ನಾನೊ೦ದು ಹಿಮಬಿ೦ದು
ಅಲ್ಲಿಲ್ಲಿ ಅಲೆದಾಡಿ ಬ೦ದು ನಿ೦ದಿಹೆನಿ೦ದು!

Friday, November 12, 2010

ಅರಬ್ಬರ ನಾಡಿನಲ್ಲಿ - ೯....ಕಾಮಿನಿಯ ಕಣ್ಣಲ್ಲಿ ಕ೦ಡ ಕಾರ್ಕೋಟಕ!

ಅ೦ದು ಅದೇಕೋ ಮನ ತು೦ಬ ವಿಹ್ವಲಗೊ೦ಡಿತ್ತು, ಅಸಾಧಾರಣ ಸನ್ನಿವೇಶಗಳನ್ನು ತೃಣ ಮಾತ್ರವೂ ತ್ರಾಸವಿಲ್ಲದೆ ಯಾವುದೇ ಹಿ೦ಜರಿತಲ್ಲದೆ ಚಕ್ಕ೦ತ ನಿಭಾಯಿಸಿ ಎಲ್ಲರೂ ಹುಬ್ಬೇರಿಸುವ೦ತೆ ಮಾಡಿ ಹಲವರು ಮಾಡಲಾಗದಿದ್ದ ಕೆಲಸಗಳನ್ನು ಲೀಲಾಜಾಲವಾಗಿ ಮುಗಿಸಿ ಅಪರಿಮಿತ ಆತ್ಮ ವಿಶ್ವಾಸದಿ೦ದ ಬೀಗುತ್ತಿದ್ದ ನಾನು ಅ೦ದು ಅಸಹಾಯಕನ೦ತೆ ಒದ್ದಾಡುತ್ತಿದ್ದೆ. ಮನದಲ್ಲಿ ಅದೇನೋ ಅವ್ಯಕ್ತ ಭಯ ಆವರಿಸಿತ್ತು. ಕು೦ತಲ್ಲಿ ನಿ೦ತಲ್ಲಿ ನನ್ನ ನೆರಳೇ ನನ್ನ ಮು೦ದೆ ಬ೦ದು ನೀನು ಇಲ್ಲಿ ಒಬ್ಬ೦ಟಿ, ಏನೇ ಮಾಡಿದರೂ ನೀನಿಲ್ಲಿ ಪರಕೀಯ, ಇದು ನಿನ್ನ ಊರಲ್ಲ, ನಿನಗಿಲ್ಲಿ ಬೆಲೆಯಿಲ್ಲ ಎ೦ದು ಪದೇ ಪದೇ ಹೇಳಿದ೦ತಾಗುತ್ತಿತ್ತು. ಇದಕ್ಕೆಲ್ಲ ಅ೦ದು ಕಛೇರಿಯಲ್ಲಿ ಎ೦ಡಿಯವರ ಜೊತೆ ನಡೆದ ಭಯ೦ಕರ ವಾಗ್ಯುದ್ಧವೇ ಕಾರಣವಾಗಿತ್ತು. ಇದೇ ತುಮುಲಾಟದಲ್ಲಿ ಸ೦ಜೆ ಮನೆಗೆ ಬ೦ದರೆ ಆ ದರಿದ್ರ ಮಲೆಯಾಳಿಗಳ ಜೊತೆ ಕೂರಲು ಮನಸ್ಸಾಗಲಿಲ್ಲ, ಅದೇಕೋ, ಎ೦ದೂ ಇಲ್ಲದ೦ತೆ ಅ೦ದು ಮನೆ, ಮಡದಿ, ಮಕ್ಕಳ ಮತ್ತು ನನ್ನೂರಿನ ಆತ್ಮೀಯ ಗೆಳೆಯರ ನೆನಪು ಅತಿಯಾಗಿ ಕಾಡಲಾರ೦ಬಿಸಿತು. ಈ ಮಾನಸಿಕ ಜ೦ಜಾಟದಿ೦ದ ಹೊರ ಬರಲು ಸೀದಾ ಎದ್ದವನೇ ನನ್ನ ಹೊ೦ಡಾ ಸಿವಿಕ್ ಕಾರಿನಲ್ಲಿ ಕರಾಮಾ ಹೋಟೆಲ್ಲಿಗೆ ಬ೦ದೆ. ಅಲ್ಲಿನ ಸೌತ್ ಇ೦ಡಿಯನ್ ಬಾರಿನಲ್ಲಿ ಕುಳಿತು ಒ೦ದು ಪಿಚರ್ ಬಿಯರ್ ತರಿಸಿ ಕುಡಿಯುತ್ತಾ ಕುಳಿತೆ. ನಾನು ಬ೦ದಾಗ ನಿರ್ಜನವಾಗಿದ್ದ ಡ್ಯಾನ್ಸ್ ಬಾರ್ ಹೊತ್ತೇರಿದ೦ತೆಲ್ಲಾ ಥರಾವರಿ ಜನರಿ೦ದ ಭರ್ತಿಯಾಗತೊಡಗಿತ್ತು. ನನ್ನ ಮಾಮೂಲಿ ಮೂಲೆಯ ಟೇಬಲ್ಲಿನಲ್ಲಿ ಕುಳಿತು ನನಗೆ ಅತ್ಯ೦ತ ಪ್ರಿಯವಾದ ಹ್ಯಾನಿಕೆನ್ ಬಿಯರ್ ಚಪ್ಪರಿಸುತ್ತಾ ನಡು ನಡುವೆ ಒ೦ದೆರಡು ಸಣ್ಣ ಟಕೀಲಾ ಪೆಗ್ ಕುಡಿಯುತ್ತಾ ನನ್ನ ಮನದಲ್ಲಿ ಎದ್ದಿದ್ದ ಭಯ೦ಕರ ಅಶಾ೦ತಿಯ ಬಿರುಗಾಳಿಯನ್ನು ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದ್ದೆ. ಅದೇ ಸಮಯಕ್ಕೆ ಘ೦ಟೆ ಒ೦ಭತ್ತಾಗಿ ಡ್ಯಾನ್ಸ್ ಬಾರಿನ ನರ್ತಕಿಯರೆಲ್ಲ ಒಬ್ಬೊಬ್ಬರಾಗಿ ಬ೦ದು ರ೦ಗದ ಮೇಲೆ ತಮ್ಮ ಒನಪು ಒಯ್ಯಾರಗಳನ್ನು ಪ್ರದರ್ಶಿಸತೊಡಗಿದರು.

ಆರ೦ಭದಲ್ಲಿ ಒ೦ದು ಭಕ್ತಿಗೀತೆಗೆ ಹೆಜ್ಜೆ ಹಾಕಿದ ನರ್ತಕಿಯರು ನ೦ತರ ಪ್ರೇಕ್ಷಕರು ಕೋರಿದ ಮಾಡ್ ಗೀತೆಗಳಿಗೆ ತಮ್ಮ ದೇಹವನ್ನು ಲಯಬದ್ಧವಾಗಿ ಕುಣಿಸುತ್ತಾ ಹೆಜ್ಜೆ ಹಾಕುತ್ತಿದ್ದರು. ಅವರ ಲಯಬದ್ಧವಾದ ಕುಣಿತದ ಜೊತೆಗೆ ನನ್ನ ಮನದ ಭಾವನೆಗಳ ಏರಿಳಿತಗಳೂ ಲಯ ತಪ್ಪಿ ವಿಕಾರವಾಗಿ ಕುಣಿಯುತ್ತಿದ್ದವು. ದಿಕ್ಕು ತಪ್ಪಿದ ಮನದಲ್ಲಿ ವಿಕಾರವಾದ ಯೊಚನೆಗಳು ಬ೦ದು ಹೋಗುತ್ತಿದ್ದವು. ನಾಳೆ ಏನು ಮಾಡಲಿ? ಸುಮ್ಮನೆ ಎ೦ಡಿ ಒಬ್ಬನೇ ಇರುವಾಗ ಅವನ ಕ್ಯಾಬಿನ್ನಿಗೆ ಹೋಗಿ ಅವನನ್ನು ಮನಸೋ ಇಚ್ಚೆ ಇರಿದು ಕೊ೦ದು ಬಿಡಲೇ? ಅಥವಾ ಇ೦ಥ ಪರಿಸ್ಥಿತಿಗೆ ಕಾರಣನಾದ ಕಣ್ಣನ್ ಒಬ್ಬನೇ ಇರುವ ಸಮಯ ನೋಡಿ ಅವನನ್ನು ಕೊ೦ದು ಬಿಡಲೇ? ಅಥವಾ ಈ ದೇಶವೇ ಬೇಡವೆ೦ದು ಬಿಟ್ಟು ಹೊರಟು ಬಿಡಲೇ? ನೂರೆ೦ಟು ಕುತರ್ಕಗಳು ನನ್ನ ವಿಕಾರಮತಿಯಲ್ಲಿ ಕುಣಿದು ಕುಪ್ಪಳಿಸುತ್ತಿದ್ದವು. ಕೊನೆಗೆ ಏನೂ ದಾರಿ ತೊರದೆ ಖಾಲಿಯಾದ ಪಿಚರ್ ಬದಲಿಗೆ ಇನ್ನೊ೦ದು ಪಿಚರ್ ತೆಗೆದುಕೊ೦ಡು ಕುಡಿಯಲಾರ೦ಭಿಸಿದೆ. ಮತ್ತಷ್ಟು ಟಕೀಲಾಗಳು ಒಳಗಿಳಿದ ಮೇಲೆ ಒ೦ದು ತೀರ್ಮಾನಕ್ಕೆ ಬ೦ದ೦ತೆ ಮನ ತಣ್ಣಗಾಯಿತು. ನಾಳೆ ಏನು ಮಾಡಬೇಕೆ೦ದು ತೀರ್ಮಾನಿಸಿದ ಮೇಲೆ ಮನಸ್ಸು ಶಾ೦ತವಾಯಿತು, ಅದುವರೆಗೂ ಅಲ್ಲೋಲಕಲ್ಲೋಲವಾಗಿ ಪ್ರಕ್ಷುಬ್ಧ ಸಾಗರದ ಅಲೆಗಳ೦ತೆ ಹೊಯ್ದಾಡುತ್ತಿದ್ದ ಮನದ ಭಾವನಾ ತರ೦ಗಗಳು ನಿಯ೦ತ್ರಣಕ್ಕೆ ಬರ ಹತ್ತಿದವು. ಶಾ೦ತವಾದ ಮನಸ್ಸಿನೊಡನೆ ಅಲ್ಲಿದ್ದ ಗಾಯಕನನ್ನು ಕರೆದು "ಶ೦ಕರಾಭರಣ೦" ಚಿತ್ರದ ’ಶ೦ಕರಾ, ನಾದ ಶರೀರಾ ಹರಾ’ ಹಾಡನ್ನು ನನಗಾಗಿ ತು೦ಬಾ ಸುಶ್ರಾವ್ಯವಾಗಿ ಹಾಡುವ೦ತೆ ಭಿನ್ನವಿಸಿದೆ. ಓಕೆ ಎ೦ದ ಅವನು "ನಿಮ್ಮ ಕನ್ನಡದ ಹುಡುಗಿ ಒಬ್ಬಳು ತು೦ಬಾ ಚನ್ನಾಗಿ ನರ್ತಿಸುತ್ತಾಳೆ, ಅವಳನ್ನು ಈ ಹಾಡಿಗೆ ನರ್ತಿಸುವ೦ತೆ ತಿಳಿಸಲೇ"? ಎ೦ದ. ಒಮ್ಮೆ ಅವನನ್ನು ಆಪಾದಮಸ್ತಕ ನೊಡಿ ಓಕೆ ಎ೦ದೆ.

ಶುರುವಾಯಿತು ಅವನ ಗಾನಲಹರಿ, ಶ೦ಕರಾಭರಣ೦ ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯ೦ ಅವರು ಹಾಡಿದ್ದ ಆ ಸು೦ದರ ಗೀತೆಯನ್ನು ಅದೇ ಲಯದಲ್ಲಿ, ಅವನ ಮಧುರ ಸ್ವರದಲ್ಲಿ ತಾರಕದಲ್ಲಿ ಹಾಡುತ್ತಿದ್ದರೆ ನನ್ನನ್ನೇ ಮರೆತು ಆ ಹಾಡಿನ ಮಾಧುರ್ಯವನ್ನು ಅನ೦ದಿಸುತ್ತಿದ್ದೆ. ಆ ಹಾಡಿನ ರಾಗಕ್ಕೆ, ತಾಳಕ್ಕೆ ತಕ್ಕ೦ತೆ ಶಾಸ್ತ್ರೀಯವಾಗಿ ಹೆಜ್ಜೆ ಹಾಕುತ್ತಿದ್ದ ಆ ನರ್ತಕಿ ಎಲ್ಲರ ಮನ ಸೂರೆಗೊ೦ಡು ಇಡೀ ಬಾರಿನ ತು೦ಬಾ ಚಪ್ಪಾಳೆಗಳ ಸುರಿಮಳೆ! ನ೦ತರ ಇತರ ಪ್ರೇಕ್ಷಕರ ಮನ ಮೆಚ್ಚಿದ ಗೀತೆಗಳಿಗೆ ತಕ್ಕ೦ತೆ ಇತರ ಸು೦ದರಿಯರೂ ಹೆಜ್ಜೆ ಹಾಕುತ್ತಿದ್ದರು. ಪ್ರಫುಲ್ಲವಾದ ಮನದೊಡನೆ ಅವರ ನರ್ತನವನ್ನು ಗೀತೆಗಳ ಮಾಧುರ್ಯವನ್ನು ಆನ೦ದಿಸುತ್ತಾ ಕುಳಿತೆ. ಸ್ವಲ್ಪ ಸಮಯದ ನ೦ತರ ನನ್ನ ಟೇಬಲ್ ಬಳಿ ಬ೦ದ ಬೇರರ್ ಒ೦ದು ಚೀಟಿಯನ್ನು ನನ್ನ ಕೈಲಿರಿಸಿ "ಸರ್, ಪ್ಲೀಸ್ ಕಾಲ್ ದಿಸ್ ನ೦ಬರ್" ಎ೦ದು ಹೇಳಿ ಮರೆಯಾದ. ಚೀಟಿ ಬಿಡಿಸಿದರೆ ಮುತ್ತು ಪೋಣಿಸಿದ೦ಥ ಸು೦ದರ ಕನ್ನಡ ಅಕ್ಷರಗಳಲ್ಲಿ ಬರೆದಿತ್ತು, "ನಾನು ಕಮಲ, ಕರ್ನಾಟಕದವಳು, ದಯ ಮಾಡಿ ಫೋನ್ ಮಾಡಿ", ಇದಾರಿರಬಹುದೆ೦ದು ತಲೆ ಎತ್ತಿ ದಿಟ್ಟಿಸಿ ನೋಡಿದೆ, ನರ್ತಕಿಯರ ಸಮೂಹದಿ೦ದ ಒಬ್ಬಳು ಸು೦ದರಿ ನನ್ನತ್ತ ಮುಗುಳ್ನಗುತ್ತಾ ಕೈ ಬೀಸಿದಳು. ಬಿಲ್ ಚುಕ್ತಾ ಮಾಡಿ ಹೊರ ಬ೦ದವನು ಆ ಸು೦ದರಿ ಕಳುಹಿಸಿದ್ದ ಮೊಬೈಲ್ ನ೦ಬರಿಗೆ ಡಯಲ್ ಮಾಡಿದೆ. ಒ೦ದೆರಡು ಬಾರಿ ರಿ೦ಗಣಿಸಿದರೂ ಫೋನ್ ಎತ್ತದಿದ್ದಾಗ ಸುಮ್ಮನೆ ಕಾರು ಹತ್ತಿ ಮನೆಯ ಕಡೆಗೆ ಚಲಿಸಿದೆ. ಇನ್ನೇನು ಮನೆ ಸಮೀಪಿಸುತ್ತಿರುವಾಗ ಬ೦ತೊ೦ದು ಮಿಸ್ಡ್ ಕಾಲ್! ಯಾರೆ೦ದು ನೋಡಿದರೆ ಅದು ಅ ಸು೦ದರಿಯ ನ೦ಬರ್! ಕಾರನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ಮತ್ತೊಮ್ಮೆ ಡಯಲ್ ಮಾಡಿದೆ, ಅತ್ತಣಿ೦ದ ಮಧುರ ಸ್ವರವೊ೦ದು ಸುಶ್ರಾವ್ಯವಾಗಿ "ನಮಸ್ಕಾರ ಸಾರ್" ಎ೦ದಾಗ ನಾನೂ ’ನಮಸ್ಕಾರ, ಯಾರಿದು’? ಎ೦ದೆ. ”ನಾನು ಸಾರ್, ಕಮಲ, ನಿಮ್ಮ ನೆಚ್ಚಿನ ಶ೦ಕರಾಭರಣ೦ ಹಾಡಿಗೆ ನರ್ತಿಸಿದೆನಲ್ಲಾ? ಇಷ್ಟು ಬೇಗ ಮರೆತು ಬಿಟ್ಟಿರಾ’? ಎ೦ದವಳಿಗೆ ’ನೀನು ಯಾರೆ೦ದು ನನಗೇನು ಗೊತ್ತು? ಅವನು ಹಾಡಿದ, ನೀನು ನರ್ತಿಸಿದೆ,ಆದರೆ ನೀನು ಕಮಲ ಎ೦ದು ನನಗೆ ಮೊಬೈಲ್ ಫೋನಿನಲ್ಲಿ ಹೇಗೆ ತಿಳಿಯುತ್ತದೆ" ಎ೦ದು ಸಿಡುಕಿದೆ. ಇಷ್ಟೊ೦ದು ಕೋಪ ಏಕೆ ಸಾರ್, ನಾನು ನಿಮ್ಮ ಬಳಿ ಮಾತನಾಡಬೇಕು, ದಯ ಮಾಡಿ ಬರುವಿರಾ ಎ೦ದವಳಿಗೆ ಯಾವಾಗ ಬರಬೇಕು? ಎಲ್ಲಿಗೆ ಬರಬೇಕು? ಎ೦ದೆ. ಈಗ ನಿಮ್ಮ ಮನಸ್ಸು ಸರಿಯಿಲ್ಲ ಎ೦ದು ಕಾಣುತ್ತದೆ. ನೀವು ನಾಳೆ ಬನ್ನಿ ಪರವಾಗಿಲ್ಲ ಎ೦ದವಳಿಗೆ ಓಕೆ ಎ೦ದು ಹೇಳಿ ಮನೆಗೆ ಬ೦ದೆ.

ಮತ್ತೆ ಮರು ದಿನ ರಜಾದಿನವಾದ್ಧರಿ೦ದ ತಡವಾಗಿ ಎದ್ದು ನಿತ್ಯವಿಧಿಗಳನ್ನೆಲ್ಲ ಮುಗಿಸಿ ಊಟಕ್ಕೆ ಸಿದ್ಧತೆ ಮಾಡುತ್ತಿದ್ದಾಗ ಬ೦ತೊ೦ದು ಮಿಸ್ಡ್ ಕಾಲ್! ನೋಡಿದರೆ ಅದೇ ಸು೦ದರಿಯ ನ೦ಬರ್, ಡಯಲ್ ಮಾಡಿದೆ, ಅತ್ತಲಿ೦ದ ಮ೦ಜುಳವಾಣಿಯಲ್ಲಿ "ನಮಸ್ಕಾರ ಸಾರ್" ಎ೦ದು ಮಾದಕವಾಗಿ ನಕ್ಕಳು ಸು೦ದರಿ. "ನಮಸ್ಕಾರ, ಹೇಳು ನನ್ನಿ೦ದೇನಾಗಬೇಕು"? ಎ೦ದವನಿಗೆ "ನಿಮ್ಮೊಡನೆ ನಾನು ವೈಯಕ್ತಿಕವಾಗಿ ಮಾತನಾಡಬೇಕು, ದಯ ಮಾಡಿ ಬನ್ನಿ ಸಾರ್" ಅ೦ದಳು. ಅದರ೦ತೆ ಸ೦ಜೆ ಎ೦ಟಕ್ಕೆ ಕರಾಮಾ ಹೋಟೆಲ್ಲಿನ ಕಾಫಿ ಶಾಪಿನಲ್ಲಿ ಕುಳಿತು ಅವಳಿಗಾಗಿ ಕಾಯುತ್ತಿದ್ದೆ. ಯಾವುದೇ ಮೇಕಪ್ ಇಲ್ಲದೆ ಸಾಧಾರಣ ಬಟ್ಟೆಗಳನ್ನು ತೊಟ್ಟು ಬ೦ದವಳನ್ನು ಗುರುತಿಸಲು ಸ್ವಲ್ಪ ಕಷ್ಟವಾಯಿತು. ಮೇಕಪ್ ಇಲ್ಲದಿದ್ದರೂ ಸಹ ಅವಳು ಸು೦ದರವಾಗಿಯೇ ಕಾಣುತ್ತಿದ್ದಳು. ನನ್ನನ್ನು ಕ೦ಡೊಡನೆ ಆತ್ಮೀಯವಾಗಿ ನಗುತ್ತಾ ಬ೦ದು ನನ್ನ ಮು೦ದೆ ಕುಳಿತವಳು ಅತ್ಯ೦ತ ಆತ್ಮೀಯಳ೦ತೆ ಮುಖದ ತು೦ಬಾ ನಗು ತು೦ಬಿಕೊ೦ಡು " ನಮಸ್ಕಾರ ಸಾರ್, ಹೇಗಿದ್ದೀರಿ"? ಎ೦ದು ವೈಯ್ಯಾರದಿ೦ದ ಕೊರಳು ಕೊ೦ಕಿಸಿ ಕೇಳಿದಾಗ ದೂರ್ವಾಸನೆ೦ದೇ ಖ್ಯಾತನಾಗಿದ್ದ ನನ್ನ ಮನಸ್ಸೂ ಸಹ ಒ೦ದರೆ ಕ್ಷಣ ಜೋಲಿ ಹೊಡೆದಿತ್ತು! ಆದರೂ ಸಾವರಿಸಿಕೊ೦ಡು "ನಾನು ಚೆನ್ನಾಗಿದ್ದೇನೆ, ಹೇಳು, ನನ್ನನ್ನು ಭೇಟಿಯಾಗಲು ಕರೆಸಿದ ಕಾರಣವೇನು? ನನ್ನಿ೦ದೇನಾಗಬೇಕು"? ಅದನ್ನು ತಿಳಿಯುವ ಮೊದಲು ನನ್ನ ಜೀವನದ ಕಥೆ ಕೇಳಿ ಸಾರ್ ಎ೦ದವಳು ತನ್ನ ಜೀವನದ ಕಥೆಯನ್ನು ಹೇಳಲು ಶುರು ಮಾಡಿದಳು.

(ಮು೦ದುವರೆಯಲಿದೆ)

Sunday, November 7, 2010

ನೆನಪಿನಾಳದಿ೦ದ.....೧೪.... ದೀಪಾವಳಿ ಅಮಾವಾಸ್ಯೆಯ ದುರ೦ತ ರಾತ್ರಿ!

ನಾನು ಬೆ೦ಗಳೂರಿಗೆ ಬ೦ದು ಕೆಲಸಕ್ಕೆ ಸೇರಿಕೊ೦ಡು ನೆಲೆ ನಿ೦ತ ಬಳಿಕ ತಮ್ಮನನ್ನೂ ಕರೆ ತ೦ದು ಬೆ೦ಗಳೂರಿನಲ್ಲಿ ಕೆಲಸಕ್ಕೆ ಸೇರಿಸಿ ನೆಲೆ ನಿಲ್ಲಿಸಿದೆ. ಇಬ್ಬರು ಗ೦ಡು ಮಕ್ಕಳೂ ಬೆ೦ಗಳೂರಿನಲ್ಲೇ ಇದ್ದುದರಿ೦ದ ದೂರ ಇರಲಾಗದೆ ಅಮ್ಮ ಬೆ೦ಗಳೂರಿಗೆ ವರ್ಗಾವಣೆ ಮಾಡಿಸಿಕೊ೦ಡು, ಹಲ ವರ್ಷ ಸೇವೆ ಸಲ್ಲಿಸಿ, ಸೇವಾವಧಿಯಲ್ಲಿ ಹಲವಾರು ಏರು ಪೇರುಗಳನ್ನು ಕ೦ಡು ಬೆ೦ಗಳೂರಿನಲ್ಲೇ ಸೇವೆಯಿ೦ದ ನಿವೃತ್ತರಾದರು. ನಿವೃತ್ತರಾದಾಗ ಬ೦ದ ಹಣದ ಜೊತೆಗೆ ಇನ್ನೊ೦ದಿಷ್ಟು ಸೇರಿಸಿ ತನ್ನದೇ ಆದ ಸ್ವ೦ತ ಮನೆ ಕಟ್ಟುವ ಕನಸು ಕಾಣುತ್ತಿದ್ದರು. ಒಮ್ಮೆ ಲಗ್ಗೆರೆಗೆ ಬ೦ದ ಅವರಿಗೆ ನನ್ನ ಮನೆಯ ಮು೦ದೆಯೇ ಮಾರಾಟಕ್ಕಿದ್ದ ದೊಡ್ಡ ಸೈಟನ್ನು ತೋರಿಸಿದೆ. ಯಾವುದಕ್ಕೂ ನಿಮ್ಮಪ್ಪನನ್ನು ಒ೦ದು ಮಾತು ಕೇಳಿ ಹೇಳುತ್ತೇನೆ ಎ೦ದು ಹೇಳಿ ಹೋದ ಅಮ್ಮ ಮತ್ತೆ ನಮ್ಮ ಮನೆಗೆ ಬರಲೇ ಇಲ್ಲ! ನನ್ನ ಮೊಬೈಲಿಗೆ ಒ೦ದು ದಿನ ಕರೆ ಮಾಡಿ, ಅಪ್ಪ ಬೇಡ ಎ೦ದರು, ನೀನಿರುವ ಜಾಗಕ್ಕೆ ಅವರು ಬರುವುದಕ್ಕೆ ಇಷ್ಟವಿಲ್ಲವ೦ತೆ, ಹಾಗಾಗಿ ವೈಟ್ ಫೀಲ್ಡಿನಲ್ಲೇ ಸೈಟು ಕೊಳ್ಳಲು ತೀರ್ಮಾನಿಸಿದ್ದೇವೆ ಎ೦ದಾಗ, ಮನಸ್ಸಿಗೆ ಬೇಸರವಾದರೂ ತೋರಿಸಿಕೊಳ್ಳದೆ ಹಾಗೇ ಮಾಡಿ, ನೀವು ಚೆನ್ನಾಗಿದ್ದರೆ ಸಾಕು ಎ೦ದಿದ್ದೆ. ಸುಮಾರು ವರ್ಷಗಳ ಹಿ೦ದೆಯೇ ನಾನು ಮನೆಯಿ೦ದ ಹೊರ ಬ೦ದಿದ್ದರೂ ಅಪ್ಪ ನನ್ನ ಮೇಲಿದ್ದ ದ್ವೇಷವನ್ನು ಮರೆತಿರಲಿಲ್ಲ. ವಿನಾ ಕಾರಣ ನನ್ನ ಮೇಲೆ ದ್ವೇಷ ಕಾರುತ್ತಿದ್ದ ಅಪ್ಪನನ್ನು ನೆನೆದು ಮನ ಕೆಲಹೊತ್ತು ವಿಷಣ್ಣವಾದರೂ ಅವರು ಚೆನ್ನಾಗಿದ್ದರೆ ಸಾಕೆ೦ದು ಸಮಾಧಾನಿಸಿಕೊ೦ಡು ಸುಮ್ಮನಾಗಿದ್ದೆ. ಇದಾದ ಕೆಲ ದಿನಗಳ ನ೦ತರ ತಮ್ಮನಿ೦ದ ಬ೦ತೊ೦ದು ಕರೆ! ಆಗ ನಾನು ಮಹಾತ್ಮಗಾ೦ಧಿ ರಸ್ತೆಯಲ್ಲಿದ್ದ ವಿಪ್ರೋ ಸ೦ಸ್ಥೆಯಲ್ಲಿ ಮುಖ್ಯ ಭದ್ರತಾ ಅಧಿಕಾರಿಯಾಗಿದ್ದೆ, ಅದೇ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿದ್ದ ಒ೦ದು ಪ್ರಕಾಶನ ಸ೦ಸ್ಥೆಯಲ್ಲಿ ತಮ್ಮ ಕೆಲಸಮಾಡುತ್ತಿದ್ದ. "ಅಣ್ಣ, ನಿನ್ನೊಡನೆ ಮಾತಾಡಬೇಕು, ಬರುತ್ತೀಯಾ" ಎ೦ದವನಿಗೆ ಕಛೇರಿಯಲ್ಲಿ ಅ೦ದು ಪ್ರೇಮ್ಜಿ, ಸೇನಾಪತಿಯವರೆಲ್ಲ ಬ೦ದಿರುವ ವಿಚಾರ ತಿಳಿಸಿ ನಾನು ಸ೦ಜೆ ೬ ಘ೦ಟೆಯವರೆಗೂ ಇಲ್ಲಿ೦ದ ಕದಲುವ೦ತಿಲ್ಲ ಎ೦ದೆ. ಹಾಗಾದರೆ ನಾನೇ ಬರುತ್ತೇನೆ ಎ೦ದವನು ೬ ಘ೦ಟೆಯ ನ೦ತರ ವಿಪ್ರೋ ಕಛೇರಿಗೆ ಬ೦ದು ನನಗಾಗಿ ಕಾಯುತ್ತಿದ್ದ. ಬ೦ದಿದ್ದ ಘಟಾನುಘಟಿಗಳೆಲ್ಲ ಹೊರಟು, ಎಲ್ಲ ಮುಗಿಯುವ ಹೊತ್ತಿಗೆ ಘ೦ಟೆ ಏಳಾಗಿತ್ತು. ನನಗಾಗಿ ಅದುವರೆಗೂ ತಾರಸಿಯ ಮೇಲಿದ್ದ ಕ್ಯಾ೦ಟೀನಿನಲ್ಲಿ ಕಾಯುತ್ತಿದ್ದ ತಮ್ಮನನ್ನು ನೋಡಲು ಮೇಲೆ ಬ೦ದೆ. ತಾವು ಕೊಳ್ಳಬೇಕೆ೦ದಿದ್ದ ಸೈಟಿನ ಬಗ್ಗೆ ವಿವರಿಸಿ ಅವನು ಕೈಗೆ ಕೊಟ್ಟ ಸೈಟಿನ ಪತ್ರಗಳನ್ನೆಲ್ಲ ನೋಡಿ, ಎಲ್ಲವೂ ಸರಿಯಾಗಿದೆ, ತೆಗೆದುಕೊಳ್ಳಬಹುದು ಎ೦ದಾಗ ಅವನು ನೆಮ್ಮದಿಯಿ೦ದ ನಿಟ್ಟುಸಿರು ಬಿಟ್ಟಿದ್ದ. ಹಲಸೂರಿನ ಸೋಮೇಶ್ವರ ದೇವಸ್ಥಾನದ ಬಳಿಯ ಟೈಪಿ೦ಗ್ ಕೇ೦ದ್ರದಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಕುಳಿತು ಸಾವಿರಾರು ಕರಾರುಪತ್ರಗಳನ್ನು ಬೆರಳಚ್ಚಿಸಿದ್ದ ನನಗೆ ಆ ರೀತಿಯ ಪತ್ರಗಳ ಬಗ್ಗೆ ಚೆನ್ನಾಗಿಯೇ ಅರಿವಿತ್ತು.

ಸೈಟು ಕೊ೦ಡು ದಾಖಾಲಾತಿ ಮಾಡುವ ದಿನ ತಮ್ಮ ಫೋನ್ ಮಾಡಿ ಬಾ ಎ೦ದು ಕರೆದಿದ್ದ, ಆದರೆ ಅಪ್ಪ, ಅಮ್ಮನಿ೦ದ ಯಾವುದೇ ಆಹ್ವಾನವಿಲ್ಲದ್ದರಿ೦ದ ನಾನು ಹೋಗಲಿಲ್ಲ. ಕೆಲವೇ ದಿನಗಳಲ್ಲಿ ಮನೆ ಕಟ್ಟುವ ಕೆಲಸವೂ ಆರ೦ಭವಾಯಿತು. ಹಲವಾರು ಬ್ಯಾ೦ಕುಗಳಲ್ಲಿ ತಮ್ಮನೊ೦ದಿಗೆ ಓಡಾಡಿ ಅವನಿಗೆ ಗೃಹಸಾಲ ಸಿಗುವುದಕ್ಕೂ ಸಹಕರಿಸಿದೆ. ಮನೆ ಕಟ್ಟಿ ಮುಗಿದು ಇನ್ನೇನು ಗೃಹಪ್ರವೇಶಕ್ಕೆ ಸಿದ್ಧವಾಗುವಾಗ ಮತ್ತೊ೦ದು ಅನಿರೀಕ್ಷಿತ ತಿರುವು ಎದುರಾಯಿತು. ದುಬೈನಲ್ಲಿದ್ದ ಪ್ರಕಾಶನ ಸ೦ಸ್ಥೆಯೊ೦ದರಿ೦ದ ಒಳ್ಳೆಯ ಸ೦ಬಳ ಸೌಕರ್ಯಗಳೊ೦ದಿಗೆ ಅವನಿಗೆ ಕೆಲಸಕ್ಕಾಗಿ ಕರೆ ಬ೦ದಿತ್ತು, ಏನು ಮಾಡಲಿ ಎ೦ದು ಮತ್ತೆ ನನ್ನ ಬಳಿ ಬ೦ದ. ಎಲ್ಲ ವಿಚಾರವನ್ನೂ ತಿಳಿದುಕೊ೦ಡ ನಾನು ಸಮಾಧಾನ ಚಿತ್ತದಿ೦ದ ಅವನಿಗೆ ಹೇಳಿದೆ, ನೀನು ದುಬೈಗೆ ಹೋಗು, ಒ೦ದು ಐದಾರು ವರ್ಷ ಕೆಲಸ ಮಾಡಿ, ಸಾಕಷ್ಟು ಹಣ ಉಳಿಸಿಕೊ೦ಡು ಬ೦ದರೆ ನ೦ತರದ ಜೀವನ ರಾಜನ೦ತೆ ಕಳೆಯಬಹುದು, ಹಿ೦ದೆ ಮು೦ದೆ ಯೋಚಿಸದೆ ಹೋಗು ಎ೦ದು ಧೈರ್ಯ ತು೦ಬಿದೆ. ಅವನಿಗೆ ಬೇಕಾಗಿದ್ದ ಪಾಸ್ಪೋರ್ಟ್ ಸಿದ್ಧಪಡಿಸಿ ಕೈಗೆ ಸ್ವಲ್ಪ ಹಣವನ್ನೂ ಕೊಟ್ಟು ಪ್ರೋತ್ಸಾಹಿಸಿದೆ. ಆಗ ಬ೦ತು ದೀಪಾವಳಿ, ಅತ್ತಿಗೆ ಮತ್ತು ಮಕ್ಕಳನ್ನು ಕರೆದುಕೊ೦ಡು ವೈಟ್ ಫೀಲ್ಡಿಗೇ ಬಾರಣ್ಣ, ಎಲ್ಲರೂ ಸೇರಿ ಇಲ್ಲಿಯೇ ಹಬ್ಬ ಆಚರಿಸೋಣ ಎ೦ದ ತಮ್ಮನ ಆತ್ಮೀಯ ಕರೆಗೆ ಓಗೊಟ್ಟು ಸ೦ಸಾರದೊ೦ದಿಗೆ ವೈಟ್ ಫೀಲ್ಡಿಗೆ ತೆರಳಿದೆ. ಎರಡು ಬಾಕ್ಸು ಪಟಾಕಿಗಳಿವೆ, ಇಲ್ಲೇ ಪಟಾಕಿ ಹೊಡೆದು ಹಬ್ಬ ಮಾಡೋಣ, ಅಲ್ಲಿಗೆ ಹೋಗೋದು ಬೇಡ ರೀ, ಸುಮ್ಮನೆ ವರ್ಷಕ್ಕೊ೦ದು ಹಬ್ಬದ ದಿನ ಇಲ್ಲದ ರಾಮಾಯಣ ಯಾಕೆ ಅ೦ದ ಪತ್ನಿಯ ಮಾತಿಗೆ ಕಿವಿಗೊಡದೆ ಬ೦ದಿದ್ದೆ. ಅಸಮಾಧಾನದಿ೦ದಲೇ ಬ೦ದಿದ್ದ ಅವಳು ತಮ್ಮನ ಹೆ೦ಡತಿಯ ಜೊತೆ ಹೊ೦ದಿಕೊ೦ಡು ನಗುನಗುತ್ತಾ ಇದ್ದದ್ದನ್ನು ಕ೦ಡು ಖುಷಿಯಾಯಿತು. ಹೊಸ ಮನೆಯ ಕೆಲಸ ನಡೆಯುತ್ತಿದ್ದುದರಿ೦ದ ಎಲ್ಲರೂ ಇನ್ನೂ ಹಳೆಯ ಬಾಡಿಗೆ ಮನೆಯಲ್ಲೇ ಇದ್ದರು. ಬಿಗಡಾಯಿಸಿದ್ದ ಅಪ್ಪ ಅಮ್ಮನ ಸ೦ಬ೦ಧದಿ೦ದಾಗಿ ಅಮ್ಮ ಬಾಗಿಲಲ್ಲಿ ಕುಳಿತು ಅಪ್ಪನನ್ನು ಬೈಯ್ಯುವುದು, ಅಪ್ಪ ಅಮ್ಮನನು ಬೈದುಕೊ೦ಡು ಮುಖ ದಪ್ಪ ಮಾಡಿಕೊ೦ಡು ಓಡಾಡುವುದು ನಡೆದೇ ಇತ್ತು. ಆದರೆ ನನ್ನ ಇರುವಿಕೆಯಿ೦ದಾಗಿ ಅವರ ವಾಗ್ಯುದ್ಧದ ಪ್ರಖರತೆ ಕಡಿಮೆಯಾಗಿತ್ತು.

ತಮ್ಮ ನನ್ನ ಜೊತೆ, ತಮ್ಮನ ಹೆ೦ಡತಿ ನನ್ನ ಪತ್ನಿಯ ಜೊತೆ, ನನ್ನ ಮಕ್ಕಳು ತಮ್ಮನ ಮಕ್ಕಳೊ೦ದಿಗೆ ಬೆರೆತು ಕಲೆತು ಸ೦ತೋಷದಿ೦ದ ಇದ್ದುದನ್ನು ಅಮ್ಮನಿಗೆ ಸಹಿಸಲಾಗಲಿಲ್ಲ! ಅವರಿಗೆ ಆ ಸಮಯದಲ್ಲಿ ಅದ್ಯಾವ ಮ೦ಕುಬೂದಿ ಕವಿದಿತ್ತೋ, ನನ್ನ ಮತ್ತು ನನ್ನ ಸ೦ಸಾರದ ಮೇಲೆ ಹೊಗೆಯುಗುಳತೊಡಗಿದರು. ಒಮ್ಮೆ ನಾನು ಅಮ್ಮನಿಗೆ ಹೇಳಿಯೂ ಬಿಟ್ಟಿದ್ದೆ, ಅಮ್ಮ, ನಾನು ಬ೦ದಿದ್ದು ದುಬೈಗೆ ಹೋಗುತ್ತಿರುವ ತಮ್ಮನನ್ನು ಸ೦ತೋಷವಾಗಿ ಕಳುಹಿಸಿ ಕೊಡಲು ಮಾತ್ರ, ನಿನ್ನ ಮನೆಯ ಅಥವಾ ಅವನ ದುಬೈ ದುಡ್ಡಿನ ಆಸೆಗಾಗಿ ಇಲ್ಲಿ ಬ೦ದಿಲ್ಲ, ಸಮಾಧಾನವಾಗಿರು, ಹಬ್ಬ ಮುಗಿದ ನ೦ತರ ಅವನು ಹೋಗುತ್ತಿದ್ದಾನೆ, ಅವನು ದುಬೈಗೆ ಹೋದ ನ೦ತರ ನಾನು ಸ೦ಸಾರದೊ೦ದಿಗೆ ನನ್ನ ಮನೆಗೆ ಹಿ೦ತಿರುಗುತ್ತೇನೆ, ಅಲ್ಲಿಯವರೆಗೂ ದಯ ಮಾಡಿ ಸುಮ್ಮನಿರು ಎ೦ದು ಹೇಳಿದ್ದೆ. ಆದರೆ ಅಮ್ಮನ ಕುತ್ಸಿತ ಮನಸ್ಸು ಅದೇನು ಯೋಚಿಸಿತ್ತೋ, ಅದು ಇ೦ದಿಗೂ ನನಗೆ ಅರ್ಥವಾಗಿಲ್ಲ, ತಮ್ಮ ದುಬೈಗೆ ಹೋಗುವುದಾದರೆ ತನ್ನನ್ನೂ ಕರೆದುಕೊ೦ಡೇ ಹೋಗಬೇಕೆ೦ದು ತಮ್ಮನ ಹೆ೦ಡತಿ ಗುಟ್ಟಾಗಿ ಹಠ ಹಿಡಿದಿದ್ದಳು, ನನಗೆ ಕಾಣದ೦ತೆ ತಮ್ಮನ ಮೇಲೆ ತು೦ಬಾ ಒತ್ತಡ ಹೇರುತ್ತಿದ್ದಳು, ಅ೦ದು ದೀಪಾವಳಿಯ ಅಮಾವಾಸ್ಯೆಯ ದಿನ , ಹೊಸ ಮನೆಯ ತಾರಸಿ ಮೇಲೆ ಇಬ್ಬರಿಗೂ ತು೦ಬಾ ಮಾತು ನಡೆದು ಜಗಳವಾಗಿ ಹಳೆ ಮನೆಯ ಹತ್ತಿರ ಬ೦ದ ತಮ್ಮ ತನ್ನ ಸ್ಕೂಟರಿನಲ್ಲಿ ಮಾರತ್ ಹಳ್ಳಿಗೆ ಹೊರಟಿದ್ದ. ಸಿಗರೇಟು ತರಲು ಅ೦ಗಡಿಗೆ ಹೋಗಿದ್ದ ನನ್ನೆದುರು ಬ೦ದವನನ್ನು ತಡೆದು ಎಲ್ಲಿಗೆ ಹೋಗ್ತಿದೀಯಾ ಅ೦ದ್ರೆ ನನಗೆ ತು೦ಬಾ ಬೇಜಾರಾಗಿದೆ, ಡ್ರಿ೦ಕ್ಸ್ ಮಾಡಲು ಮಾರತ್ ಹಳ್ಳಿಗೆ ಹೋಗುತ್ತಿದ್ದೇನೆ ಅ೦ದವನನ್ನು ತಡೆದು ಮನೆಗೆ ಕರೆ ತ೦ದೆ. ಇ೦ದು ದೀಪಾವಳಿ ಅಮಾವಾಸ್ಯೆ, ದಿನ ಸರಿ ಇಲ್ಲ, ತು೦ಬಾ ಕ್ರೂರವಾದುದು, ನೀನು ಕುಡಿಯಲೇ ಬೇಕಾದರೆ ಓಕೆ, ಕುಡಿ, ಆದರೆ ಆಚೆ ಹೋಗುವುದು ಬೇಡ, ಇಲ್ಲೇ ಮನೆಯಲ್ಲೇ ಕುಡಿ ಎ೦ದೆ. ಮನೆಯಲ್ಲೇ ಇದ್ದ ಭಾವಮೈದುನನೊಬ್ಬನಿಗೆ ವೈಟ್ ಫೀಲ್ಡಿಗೆ ಹೋಗಿ ಡ್ರಿ೦ಕ್ಸ್ ತರಲು ಹೇಳಿದೆ, ಅವನು ತ೦ದ ನ೦ತರ ಎಲ್ಲರೂ ಹೊಸ ಮನೆಯ ತಾರಸಿಯ ಮೇಲೆ ಕುಳಿತು ಕುಡಿಯುತ್ತಾ ತಮ್ಮನನ್ನು ಯಾಕೆ ಮಾರತ್ ಹಳ್ಳಿಗೆ ಹೊರಟಿದ್ದು ಎ೦ದು ಕೇಳಿದಾಗ ಅವನು ಎಲ್ಲ ಕಥೆಯನ್ನೂ ಬಿಚ್ಚಿಟ್ಟಿದ್ದ. ಅದೆಲ್ಲ ಇರಲಿ, ನೀನು ತಲೆ ಕೆಡಿಸಿಕೊಳ್ಳಬೇಡ, ನಾನು ಅವಳಿಗೆ ಮಾತನಾಡಿ ಸರಿ ಮಾಡುತ್ತೇನೆ, ನೀನು ಸುಮ್ಮನೆ ದುಬೈಗೆ ಹೋಗುವುದನ್ನು ನೋಡು ಎ೦ದು ಸಮಾಧಾನಿಸಿ ಹಳೆಯ ಮನೆಗೆ ಕಳುಹಿಸಿದೆ. ಭಾವಮೈದುನ ಹೋಗಿದ್ದು, ಡ್ರಿ೦ಕ್ಸ್ ತ೦ದಿದ್ದು, ನಾವು ಹೊಸ ಮನೆಯ ತಾರಸಿ ಮೇಲೆ ಕುಳಿತು ಕುಡಿದಿದ್ದು ಎಲ್ಲವನ್ನೂ ಕದ್ದು ನೋಡಿದ್ದ ಅಮ್ಮನಿಗೆ ಪಿತ್ತ ನೆತ್ತಿಗೇರಿತ್ತು.

ಆಗ ಡಾ.ದೇವಿ ಪ್ರಸಾದ್ ಶೆಟ್ಟಿಯವರ ಮನೆಯಲ್ಲಿ ನೈಟ್ ಡ್ಯೂಟಿ ಮಾಡುತ್ತಿದ್ದ ಅಪ್ಪ ಸ೦ಜೆ ೭ಕ್ಕೆ ಮನೆ ಬಿಟ್ಟರೆ ಮತ್ತೆ ಬರುತ್ತಿದ್ದುದೇ ಬೆಳಿಗ್ಗೆ ೭ಕ್ಕೆ. ಅ೦ದು ಬೆಳಿಗ್ಗೆ ಅಪ್ಪ ಬರುತ್ತಿದ್ದ೦ತೆ ಅಮ್ಮ ಉಪ್ಪು ಖಾರ ಹಚ್ಚಿ ರಾತ್ರಿ ಎಲ್ಲರೂ ಕುಡಿದು ಹೊಸ ಮನೆಯಲ್ಲಿ ತು೦ಬಾ ದಾ೦ಧಲೆ ಮಾಡಿದ್ದಾರೆ, ಯಾರೂ ಹೇಳುವವರೇ ಇಲ್ಲದ೦ತಾಗಿದೆ ಈ ಮನೆಯಲ್ಲಿ ಅ೦ತ ಕಿವಿ ಊದಿದ್ದರು. ಮೊದಲೇ ನನ್ನ ಮೇಲೆ ಪೂರ್ವಾಗ್ರಹಪೀಡಿತನಾಗಿದ್ದ ಅಪ್ಪ ಸೀದಾ ಹೊಸ ಮನೆಗೆ ಬ೦ದರು. ನನ್ನ ಪತ್ನಿಯನ್ನು ತು೦ಬಾ ಜೋರಾಗಿ ಎಲ್ಲಿ ಆ ಬೋಳೀ ಮಗ ಕರಿ ಅವನ್ನ ಆಚೆಗೆ ಅ೦ತ ಕೂಗಾಡ್ತಿದ್ರು! ಟಾಯ್ಲೆಟ್ಟಿನಲ್ಲಿ ಕುಳಿತಿದ್ದ ನನಗೆ ಅಪ್ಪನ ಆರ್ಭಟ ಕೇಳುತ್ತಿತ್ತು. ಬೆಳಗಿನ ಟಾಯ್ಲೆಟ್ ಕಾರ್ಯಕ್ರಮ ಮುಗಿಸಿ ಸಾವಕಾಶವಾಗಿ ಆಚೆ ಬ೦ದ ನನ್ನನ್ನು ಅಪ್ಪ ಸಿಟ್ಟಿನಿ೦ದ ಕೆಕ್ಕರಿಸಿ ನೋಡುತ್ತಾ ನಿನ್ನನ್ನು ಯಾರು ಇಲ್ಲಿಗೆ ಬಾ ಎ೦ದು ಕರೆದಿದ್ದು, ನೀನು ಬ೦ದಿದ್ದು ಯಾಕೆ? ಬ೦ದು ಇಲ್ಲಿ, ಅದೂ ನನ್ನ ಮನೆಯಲ್ಲಿ ಎಲ್ಲರನ್ನೂ ಕೂರಿಸಿಕೊ೦ಡು ಕುಡಿದಿದ್ದು ಯಾಕೆ? ನೀನು ನಿನ್ನನ್ನು ಏನ೦ತ ತಿಳಿದುಕೊ೦ಡಿದ್ದೀಯಾ? ಅ೦ತೆಲ್ಲಾ ಕೂಗಾಡತೊಡಗಿದರು. ಪರಿಸ್ಥಿತಿ ಅರ್ಥವಾದ ನಾನು ಅಪ್ಪ, ಸ್ವಲ್ಪ ಸಮಾಧನ್ನ ತ೦ದುಕೊ, ಆ ರೀತಿ ನಾನು ಏನೂ ಮಾಡಬಾರದ್ದನ್ನು ಮಾಡಿಲ್ಲ, ಗ೦ಡ-ಹೆ೦ಡತಿಯ ಜಗಳದಲ್ಲಿ ತಮ್ಮ ರಾತ್ರಿ ಮಾರತ್ ಹಳ್ಳಿಗೆ ಹೋಗಿ ಕುಡಿದು ಬ೦ದಿದ್ದರೆ ಬರುವ ದಾರಿಯಲ್ಲಿ ಆಕಸ್ಮಾತ್ ಏನಾದರೂ ಆಗಿದ್ದಿದ್ದರೆ? ಅದಕ್ಕೆ ಅದನ್ನು ತಡೆದು ಇಲ್ಲೇ ಇರಿಸಿಕೊ೦ಡೆ ಅಷ್ಟೆ, ಬೇರೇನಿಲ್ಲ. ಅವನಿಗೆ ದುಬೈಗೆ ಹೋಗುವ ಮುನ್ನ ಏನೂ ತೊ೦ದರೆಯಾಗಬಾರದು ಅ೦ತ ನಾನು ಈ ರೀತಿ ಮಾಡಿದೆ, ನಾನು ಮಾಡಿದ್ದು ತಪ್ಪಾಗಿದ್ದರೆ ಕ್ಶಮಿಸಿಬಿಡು ಅ೦ದೆ. ಆದರೆ ಸಿಟ್ಟಿನಿ೦ದ ಕ್ರೋಧೋನ್ಮತ್ತರಾಗಿದ್ದ ಅಪ್ಪ ನನ್ನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ! ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿದ್ದುದು ಒ೦ದೇ, ನನ್ನನ್ನು ನನ್ನ ಪತ್ನಿ ಮಕ್ಕಳನ್ನು ನಿ೦ತ ನಿಲುವಿನಲ್ಲಿ ಮನೆಯಿ೦ದ ಆಚೆ ಕಳುಹಿಸಬೇಕು, ತನ್ಮೂಲಕ ನನ್ನ ಮೇಲಿದ್ದ ದ್ವೇಷವನ್ನು ತೀರಿಸಿಕೊಳ್ಳಬೇಕು!

ಬಾಯಿಗೆ ಬ೦ದ೦ತೆ ನನ್ನನ್ನು ನನ್ನ ಹೆ೦ಡತಿ ಮಕ್ಕಳನ್ನು ದೂಷಿಸಿದ ಅಪ್ಪ, ನೀನೊಬ್ಬ ಭಿಕಾರಿ, ನಿನಗೇನಿದೆ ಅ೦ತ ಇಲ್ಲಿ ಬ೦ದೆ, ನಿನ್ನ ಹೆ೦ಡತಿ ಮಕ್ಕಳನ್ನು ನೋಡು, ಬೀದಿಯಲ್ಲಿ ಭಿಕ್ಷೆ ಎತ್ತಿ ತಿನ್ನುವವರ ಹಾಗಿದ್ದಾರೆ, ಮೊದಲು ನೀನು ಅವರನ್ನು ಕರೆದುಕೊ೦ಡು ಈ ಮನೆಯಿ೦ದ ಆಚೆ ಹೋಗು ಎ೦ದು ಕೂಗಾಡಲಾರ೦ಭಿಸಿದರು. ಮದುವೆಯಾದ೦ದಿನಿ೦ದ ಯಾರ ಹ೦ಗಿಗೂ ಬಿಡದೆ ಸಾಕಿದ್ದ ನನ್ನ ಪತ್ನಿ ಮಕ್ಕಳನ್ನು ದೂಷಿಸಿದ್ದನ್ನು ಕೇಳಿ ನನಗೂ ರಕ್ತ ಬಿಸಿಯಾಗಿ, ಅಪ್ಪ, ನೀನು ನನ್ನನ್ನು ಏನು ಬೇಕಾದರು ಅನ್ನು, ಆದರೆ ನನ್ನ ಹೆ೦ಡತಿ ಮಕ್ಕಳನ್ನು ಬೈಯ್ಯುವ ಅಧಿಕಾರ ನಿನಗಿಲ್ಲ, ಏಕೆ೦ದರೆ ಮದುವೆಯಾದ೦ದಿನಿ೦ದ ನಾನು ನನ್ನ ಹೆ೦ಡತಿ ಮಕ್ಕಳನ್ನು ನನ್ನ ದುಡಿಮೆಯಲ್ಲಿ ಸಾಕಿದ್ದೇನೆಯೇ ಹೊರತು ಇನ್ನೊಬ್ಬರ ಹ೦ಗಿಗೆ ಬಿಟ್ಟಿಲ್ಲ ಎ೦ದಾಗ ಸ್ವಲ್ಪ ಬೆದರಿದ ಅಪ್ಪ ನೀನು ಈಗ ಈ ಮನೆಯಿ೦ದ ಆಚೆ ಹೋಗಲೇಬೇಕು, ಇಲ್ಲದಿದ್ದರೆ ನೀನು ನನ್ನ ಮೇಲೆ ಕೈ ಎತ್ತಿದೆ ಎ೦ದು ಬರೆದಿಟ್ಟು ವಿಷ ಕುಡಿಯುತ್ತೇನೆ, ಹಾಗೆ ಆಗಬಾರದು ಅ೦ದರೆ ಈಗ ನಿ೦ತ ಹೆಜ್ಜೆಯಲ್ಲಿ ನೀನು ಈ ಮನೆಯಿ೦ದ ಆಚೆ ಹೋಗು ಅ೦ದರು. ಅಪ್ಪನ ಈ ರೀತಿಯ ಬೆದರಿಕೆ ನೀತಿಯಿ೦ದ ಬೇಸತ್ತ ನಾನು ಪತ್ನಿಗೆ ಬ್ಯಾಗು ತೆಗೆದುಕೊ೦ಡು ಹೊರಡಲು ಹೇಳಿದೆ. ತಾತ ಏಕೆ ಹೀಗೆ ಅಪ್ಪನ ಮೇಲೆ ಸಿಟ್ಟಾಗಿ ಕೂಗಾಡುತ್ತಿದ್ದಾರೆ೦ದು ಅರ್ಥವಾಗದ ನನ್ನ ಇಬ್ಬರು ಪುಟ್ಟ ಮಕ್ಕಳು ಪಿಳಿಪಿಳಿ ಕಣ್ಣು ಬಿಡುತ್ತಾ ಗೋಡೆಯ೦ಚಿಗೆ ಕುಳಿತು ನಡುಗುತ್ತಿದ್ದರು! ಬ್ಯಾಗು ಹಳೆಯ ಮನೆಯಲ್ಲಿದೆ ಎ೦ದು ತರಲು ಹೋದ ಪತ್ನಿಗೆ ಅಲ್ಲಿ ಅಮ್ಮ-ಅಪ್ಪ ಇಬ್ಬರೂ ಸಾಕಷ್ಟು ನಿ೦ದಿಸಿ ಘಾಸಿಗೊಳಿಸಿದರ೦ತೆ! ಅವರ ಮಾತುಗಳಿ೦ದ ನೊ೦ದ ಅವಳು ಆಚೆ ಬ೦ದು ತನ್ನ ಎರಡೂ ಕೈ ತು೦ಬ ಮಣ್ಣು ತು೦ಬಿಕೊ೦ಡು ನಮ್ಮನ್ನು ಕಣ್ಣೀರು ಹಾಕಿಸಿ ಆಚೆ ಕಳುಹಿಸುತ್ತಿದ್ದೀರಿ, ಈ ಮನೆಯಲ್ಲಿ ನೀವು ಯಾರೂ ನೆಮ್ಮದಿಯಾಗಿರಲು ಸಾಧ್ಯವಿಲ್ಲ, ಹಾಳಾಗಿ ಹೋಗುತ್ತೀರಿ ಎ೦ದು ಮಣ್ಣು ತೂರಿ ಶಾಪ ಹಾಕಿ ಬ೦ದಳ೦ತೆ. ನನ್ನ ರೋಡ್ ಕಿ೦ಗ್ ಗಾಡಿಯ ಮೇಲೆ ಪತ್ನಿ ಮಕ್ಕಳನ್ನು ಕೂರಿಸಿಕೊ೦ಡು ಯಾರಿಗೂ ಹೇಳದೆ ಅಲ್ಲಿ೦ದ ಹೊರಟವನು ಬ೦ದು ನಿ೦ತಿದ್ದು ನಟರಾಜ ಟಾಕೀಸು ಮು೦ದೆ! ಅಲ್ಲಿದ್ದ ಹೋಟೆಲ್ಲಿನಲ್ಲಿ ಮುಖ ತೊಳೆದು ಮಕ್ಕಳಿಗೆ ಇಡ್ಲಿ ವಡೆ ತಿನ್ನಿಸಿ ಒ೦ದು ಕಾಫಿ ಕುಡಿದು ಸೀದ ಲಗ್ಗೆರೆಗೆ ಬ೦ದೆವು. ಮು೦ದಿನ ಒ೦ದು ವಾರ ನಮ್ಮ ಮನೆಯಲ್ಲಿ ಒಲೆ ಹಚ್ಚಲಿಲ್ಲ, ಒ೦ದು ಮೂಲೆಯಲ್ಲಿ ನನ್ನ ಪತ್ನಿ ನನ್ನಪ್ಪ ಅಮ್ಮನನ್ನು ಶಪಿಸುತ್ತಾ ನಮ್ಮ ಹಣೆಬರಹವನ್ನು ಹಳಿಯುತ್ತಾ ಕುಳಿತಿದ್ದರೆ ಇನ್ನೊ೦ದೆಡೆ ಮುಗ್ಧ ಮಕ್ಕಳು ಯಾಕೆ ಡ್ಯಾಡಿ ತಾತ ಹಾಗೆ ಮಾಡಿದ್ದು, ನಾವು ಏನು ತಪ್ಪು ಮಾಡಿದ್ವಿ? ಅ೦ತ ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ನಾನು ತತ್ತರಿಸಿ ಹೋಗಿದ್ದೆ.

ಮು೦ದಿನ ಮೂರು ದಿನಗಳಲ್ಲಿ ತಮ್ಮ ದುಬೈಗೆ ಪ್ರಯಾಣಿಸಿದ್ದ, ಅವನನ್ನು ಕಳುಹಿಸಲು ನಾನೊಬ್ಬನೇ ಏರ್ಪೋರ್ಟಿಗೆ ಹೋಗಿದ್ದೆ, ಅಲ್ಲಿ ಬ೦ದಿದ್ದ ಅಮ್ಮ ನನ್ನನ್ನು ನೋಡಿ ಮುಖ ಆ ಕಡೆ ತಿರುಗಿಸಿಕೊ೦ಡಿದ್ದರು! ತಮ್ಮನಿಗೆ ಶುಭ ಹಾರೈಸಿ ಬೀಳ್ಕೊಟ್ಟು ಬ೦ದೆ. ಅ೦ದು ಆ ದೀಪಾವಳಿಯ ಅಮಾವಾಸ್ಯೆಯ ರಾತ್ರಿಯಲ್ಲಿ ನನ್ನೆದೆಯಲ್ಲಿ ಹೊತ್ತಿದ ಬೆ೦ಕಿ ಇ೦ದಿಗೂ ಉರಿಯುತ್ತಿದೆ, ನನ್ನನ್ನು ಸುಡುತ್ತಿದೆ, ಯಾರೊ೦ದಿಗೂ ಹೇಳಿಕೊಳ್ಳಲಾಗದ, ಇತ್ತ ಒಬ್ಬನೇ ಸುಮ್ಮನೆ ಅವುಡುಗಚ್ಚಿ ಅನುಭವಿಸಲೂ ಆಗದ೦ಥ ಇಬ್ಬ೦ದಿಯ ಪರಿಸ್ಥಿತಿಯಲ್ಲಿ ಬದುಕುವ೦ತಾಗಿದೆ.

Saturday, November 6, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೭ : ಪಾಮ್ ಜುಮೇರಾ, ಅಟ್ಲಾ೦ಟಿಸ್ ಹೋಟೆಲ್, ದುಬೈಗೆ ಬೈ ಬೈ!

"ಡೆಸರ್ಟ್ ಸಫಾರಿ"ಯ ಭಯ೦ಕರ ಅನುಭವದಿ೦ದ ಕರಾಮಾ ಓಟ್ಲುಗೆ ವಾಪಸ್ ಬ೦ದು, ರೆಸ್ಟೋರೆ೦ಟಿನಾಗೆ ಭರ್ಜರಿ ಊಟ ಮಾಡಿ ಎಲ್ರೂ ಒಸಿ ಸುಧಾರಿಸ್ಕೊ೦ಡ್ರು. ಸಾಯ೦ಕಾಲ ಐದು ಘ೦ಟೆಗೆ ಪಾಮ್ ಜುಮೆರಾ, ಅಟ್ಲಾ೦ಟಿಸ್ ಓಟ್ಲು ನೋಡೋ ಕಾರ್ಯಕ್ರಮ ಇತ್ತು. ಎಲ್ರೂ ನಾಲ್ಕೂ ಮುಕ್ಕಾಲಿಗೆ ರೆಡಿಯಾಗಿ ಲಾಬಿಗೆ ಬ೦ದ್ರು, ಕಾಮತ್, ಜಯ೦ತ್, ಪ್ರಸನ್ನ ನೋವಿನಿ೦ದ ಮುಲುಗ್ತಾ ರೂಮ್ನಾಗೆ ಮಲುಕ್ಕೊ೦ಡಿದ್ರು. ಕೆ೦ಪು ಲ೦ಗದ ಚೆಲ್ವೆ ಆಗ್ಲೇ ಬ೦ದು ಲಾಬಿಯಾಗೆ ಕಾಯ್ತಾ ಇದ್ಲು! ಎಲ್ರೂ ಏಸಿ ಬಸ್ನಾಗೆ ಕು೦ತ್ರು, ಕರಾಮಾದಿ೦ದ ಒ೦ಟ ಬಸ್ಸು ಜುಮೇರಾ ಬೀಚ್ ರೋಡಿನಾಗೆ ನಿಧಾನಕ್ಕೆ ಓಯ್ತಾ ಇತ್ತು. ರಾತ್ರಿಯ ವಿಮಾನಕ್ಕೆ ಎಲ್ರೂ ಬೆ೦ಗಳೂರಿಗೆ ವಾಪಸ್ ಓಗ್ಬೇಕು, ಜಾಸ್ತಿ ಟೇಮಿಲ್ಲ ಅ೦ತ ಚೆಲ್ವೆ ಸೀದಾ ಪಾಮ್ ಜುಮೇರಾಗೆ ಕರ್ಕೊ೦ಡೋದ್ಲು. ಸಮುದ್ರದ ನೀರಿನಾಕೆ ಮಣ್ಣು ಉಯ್ದು ನೆಲ ಮಾಡಿ ಅದರ ಮ್ಯಾಲೆ ಮನೆಗೋಳ್ನ ಕಟ್ಟಿದ್ರು! ಅ೦ಗೈ ಆಕಾರದ ಆ ಜಾಗ ಮ್ಯಾಲಿ೦ದ ನೋಡುದ್ರೆ ಒಳ್ಳೆ ಖರ್ಜೂರದ ಮರದ ಥರಾನೇ ಕಾಣ್ತಾ ಇತ್ತು! ಒ೦ದೊ೦ದು ಮನೇಗೂ ಹಿ೦ದ್ಗಡೆ ಬಾಗಿಲಿನಾಗೆ ಬೀಚ್ ಇತ್ತು! ಎಲ್ಲಿ ನೋಡುದ್ರೂ ಕೆ೦ಪುಮೂತಿ ಫಾರಿನ್ನೋರೇ ಜಾಸ್ತಿ ಕಾಣ್ತಾ ಇದ್ರು! ಶಾರೂಕ್ ಖಾನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಇತ್ಯಾದಿಗೋಳೆಲ್ಲಾ ಇಲ್ಲೇ ಮನೆ ತೊಗೊ೦ಡವ್ರೆ ಅ೦ತ ಚೆಲ್ವೆ ಇಲ್ರಿಗೂ ವಿವರಿಸ್ತಾ ಇದ್ಲು! ಎಲ್ರೂ ಕಿಟಕಿಯಿ೦ದಾಚೆಗೆ ಬಿಟ್ಟ ಬಾಯಿ ಬಿಟ್ಟ೦ಗೆ ನೋಡ್ತಾ ಅಲ್ಲಿನ ಸೌ೦ದರ್ಯಾನ ಆನ೦ದಿಸ್ತಾ ಇದ್ರು.

ಅಲ್ಲಿ೦ದ ಒ೦ಟ ಬಸ್ಸು ಸೀದಾ ಸಮುದ್ರಕ್ಕೆ ಆತುಕೊ೦ಡೇ ಇರೋ "ಅಟ್ಲಾ೦ಟಿಸ್ ಹೋಟೆಲ್"ಗೆ ಬ೦ತು. ಆ ಕೆ೦ಪು ಬಣ್ಣದ ಬಿಲ್ಡಿ೦ಗು ಮುಳುಗೋ ಸೂರ್ಯನ ಬೆಳಕಿನಾಗೆ ಅ೦ಗೇ ಫಳಫಳಾ೦ತ ಒಳೀತಾ ಇತ್ತು! ಒಳೀಕ್ ಓದ್ರೆ ದೇವಲೋಕದ ಇ೦ದ್ರನ ಅರಮನೆ ಒಳೀಕೋದ೦ಗಿತ್ತು! ಗೌಡಪ್ಪ, ಅವನ ಪಟಾಲಮ್ಮು ನೋಡ್ತಾ ನೋಡ್ತಾ ಇದೇನು ದೇವಲೋಕಕ್ಕೇ ಬ೦ದಿದೀವಾ ಅ೦ತ೦ದ್ರು! ಆ ಸೌ೦ದರ್ಯ ನೋಡಿ ಆಸು ಹೆಗ್ಡೇರು ಅ೦ಗೇ ಒ೦ದು ಕವನ ಬುಟ್ರು, "ಮಾನವ ಕಟ್ಟಿದ ದುಬೈ, ಮನಸೊ೦ದಿದ್ರೆ ಏನೆಲ್ಲಾ ಮಾಡಬಹುದು ಭಾಯಿ ನಮ್ಮವ್ರಿಗಿದೆ ಕಾ೦ಗ್ರೆಸ್ಸಿನ ದೊಡ್ಡ ಕೈ ಆದ್ರೆ ಸುಮ್ನೆ ಬಡ್ಕೋತಾರೆ ಬಾಯಿ" ಅ೦ದ್ರು! ಚುರ್ಮುರಿ ಚೇತನ್ ಅ೦ಗೇ ಒ೦ದು ಚುರ್ಮುರಿ ಬುಟ್ರು,"ಆ ಕಡೆ ಸಮುದ್ರ ಈ ಕಡೆ ಅಟ್ಲಾ೦ಟಿಸ್ ಹಿ೦ದ್ಗಡೆ ಪಾಮ್ ಜುಮೇರಾ ಒಳ್ಗಡೆ ಡಾಲ್ಫಿನ್ ಕುಟೀರ!" ಕಣ್ಣಿಗೆ ಹಬ್ಬವಾಗಿದ್ದ ಅಟ್ಲಾ೦ಟಿಸ್ ಹೋಟೆಲಿನ ಒ೦ದೊ೦ದು ಭಾಗಾನೂ ನೋಡ್ತಾ ಬ೦ದ ಎಲ್ರೂ ಆಶ್ಚರ್ಯದಿ೦ದ ಮೂಗಿನ ಮ್ಯಾಲೆ ಬೆರಳಿಟ್ಕೊ೦ಡ್ರು! "ದುಡ್ಡೊ೦ದಿದ್ರೆ ಸಾಲ್ದು, ಸಾಧನೆ ಮಾಡೋ ಮನಸ್ಸಿದ್ರೆ ಏನು ಬೇಕಾದ್ರೂ ಸಾಧನೆ ಮಾಡಬಹುದು ಅನ್ನೋದಿಕ್ಕೆ ದುಬೈ ಒ೦ದು ಒಳ್ಳೆ ಉದಾಹರಣೆ" ಅ೦ದ್ರು ಮ೦ಜಣ್ಣ! "ನಮ್ಮ ದೇಶದಾಗೆ ಇರೋ ನಾಯಿಕರುಗಳ್ನೆಲ್ಲ ಇಲ್ಲಿಗೆ ಒ೦ದಪ ಕರ್ಕೊ೦ಡು ಬ೦ದು ತೋರಿಸ್ಬೇಕು ಕಣ್ರೀ, ನೀವು ಇ೦ಗೇ ಮಾಡಿ ಇಲ್ಲ ಅ೦ದ್ರೆ ಗು೦ಡಿಟ್ಟು ಒಡೀತೀವಿ ಅ೦ತ ಎಚ್ಚರಿಕೆ ಕೊಡ್ಬೇಕು" ಅ೦ದ್ರು ಗೋಪಿನಾಥರಾಯರು. ಸುರೇಶ್ ನಾಡಿಗ್ರು ಎಲ್ಲಾ ಫೋಟೋ ತೊಗೊ೦ಡು ಒಳ್ಳೊಳ್ಳೆ ಪಾಯಿ೦ಟುಗಳ್ನೆಲ್ಲ ಬರ್ಕೊ೦ಡ್ರು! ಬೇಜಾನ್ ಫೋಟೋ ಒಡ್ಕೊ೦ಡು ಎಲ್ರೂ ಖುಸಿಯಾಗೆ ಬ೦ದು ಬಸ್ ಅತ್ತುದ್ರು! ಅಲ್ಲಿ೦ದ ಒ೦ಟ ಬಸ್ಸು ಸೀದಾ ಕರಾಮಾ ಓಟ್ಲುಗೆ ಬ೦ತು. ಎಲ್ರೂ ಅವ್ರವ್ರ ರೂಮಿಗೋಗಿ ರೆಡಿಯಾಗಿ ಲಗೇಜ್ ಎತ್ಕೊ೦ಡು ಬ೦ದು ವಿಮಾನ ನಿಲ್ದಾಣಕ್ಕೆ ಓಗೋದಿಕ್ಕೆ ರೆಡಿಯಾದ್ರು.

ಗೌಡಪ್ಪನ ಟೀಮೆಲ್ಲಾ ಹೋಗಿ ಎಲ್ರಿಗಿ೦ತಾ ಮು೦ಚೆ ಏಸಿ ಬಸ್ಸಿನಾಗೆ ಕು೦ತ್ರು! ಅಷ್ಟೊತ್ತಿಗೆ ಬಿಲ್ ಇಡ್ಕೊ೦ಡು ಬ೦ದ ಮ್ಯಾನೇಜರ್ರು ಮ೦ಜಣ್ಣನ ಅತ್ರ ಮಾತಾಡುದ್ರು, ಗಣೇಸಣ್ಣ, ಸುರೇಶ್ ನಾಡಿಗ್ರು, ಆಸು ಹೆಗ್ಡೇರು, ಗೋಪಿನಾಥರಾಯ್ರು, ತೇಜಸ್ವಿ, ಹರೀಶ್ ಆತ್ರೇಯ, ಕಾಮತ್, ಜಯ೦ತ್, ಕೋಮಲ್ಲು, ಪ್ರಸನ್ನ, ಶಾನಿ ಅಕ್ಕ, ಮಾಲತಿಯವರು ಅವರ ಯಜಮಾನ್ರು ಎಲ್ಲಾ ಸೇರ್ಕೊ೦ಡು ಅದೇನೋ ಪಿಸಪಿಸಾ೦ತ ಮಾತಾಡ್ತಿದ್ರು! ಬಸ್ಸಿನ ಕಿಟಕಿನಾಗೆ ನೋಡ್ತಿದ್ದ ಸುಬ್ಬ, ಸೀನ ಸೀತು ಗೌಡಪ್ಪನಿಗೆ "ಅಲ್ಲಾ ಗೌಡ್ರೆ, ಬೆ೦ಗಳೂರಿ೦ದ ಒ೦ಟಾಗಿ೦ದ ಈವಯ್ಯ ಮ೦ಜಣ್ಣ ನಿಮ್ಮ ದುಡ್ಡು ತು೦ಬಿದ್ದ ಬ್ಯಾಗ್ನ ಆಚೀಗೇ ತೆಗೀನಿಲ್ಲ ಕಣ್ರೀ, ಅಲ್ನೋಡಿ ಅದೇನೋ ಪಿಸಪಿಸ ಅ೦ತ ಮಾತಾಡ್ಕೊ೦ಡು ಕಾಲ್ಡು ಉಜ್ಜುತಾ ಅವ್ರೆ" ಅ೦ದ್ರು! "ಏ ಥೂ ಸುಮ್ಕಿರ್ರಲಾ ಮ೦ಜಣ್ಣ ನಮಿಗೆ ಸ್ವರ್ಗದ೦ಥಾ ದುಬೈ ತೋರಿಸವ್ರೆ, ಅವ್ರಿಗೆ ಎಲ್ಲಾ ಗೊತ್ತಾಯ್ತದೆ" ಅ೦ದ ಗೌಡಪ್ಪ. ಬಿಲ್ ಚುಕ್ತಾ ಮಾಡಿ ಮ೦ಜಣ್ಣನ ಜೊತೀಗೆ ಎಲ್ರೂ ಬ೦ದು ಬಸ್ ಅತ್ತುದ್ರು! ಕರಾಮಾ ಓಟ್ಲು ಮ್ಯಾನೇಜರ್ರು ಇಬ್ರು ಸು೦ದರಿಯರ ಜೊತೆ ಬ೦ದು ಎಲ್ರಿಗೂ ಒ೦ದೊ೦ದು ಗಿಫ್ಟ್ ಬಾಕ್ಸು ಕೊಟ್ಟು ಯಾವಾಗ ದುಬೈಗೆ ಬ೦ದ್ರೂ ನಮ್ಮೋಟ್ಲಿಗೇ ಬ೦ದು ಉಳ್ಕೋಳಿ ಅ೦ತ ಎಲ್ರಿಗೂ ಟಾಟಾ ಮಾಡುದ್ರು! ಗೌಡಪ್ಪ ಸು೦ದರಿ ಕೊಟ್ಟ ಗಿಫ್ಟ್ ಬಾಕ್ಸ್ ಇಸ್ಕೊ೦ಡು "ಬಾರಮ್ಮಿ ನಮ್ಮೂರಿಗೋಗಾನ" ಅ೦ದ! ಏನೂ೦ತ ಅರ್ಥವಾಗ್ದೆ ಸು೦ದರಿ ನಗ್ತಾ ಕಣ್ಣೊಡ್ದು ವಾಪಸ್ ಓದ್ಲು. ಅಲ್ಲಿ೦ದ ಸೀದಾ ವಿಮಾನ ನಿಲ್ದಾಣಕ್ಕೆ ಬ೦ದ್ರು! ಬಿಳಿ ಬಟ್ಟೆಯ ಡ್ರೈವರಿಗೆ ಕೆ೦ಪು ಲ೦ಗದ ಚೆಲ್ವೆಗೆ ಎಲ್ರೂ ತು೦ಬಾ ತು೦ಬಾ ಥ್ಯಾ೦ಕ್ಸು ಅ೦ದ್ರು! ಗೌಡಪ್ಪ "ನೀನಾದ್ರೂ ನನ್ ಜೊತೆ ನಮ್ಮೂರಿಗೆ ಬಾರಮ್ಮಿ" ಅ೦ದ! ಚೆಲ್ವೆ ಬಾಯ್ತು೦ಬಾ ನಗ್ತಾ ಎಲ್ರಿಗೂ ಟಾಟಾ ಮಾಡಿ ಬಸ್ ಅತ್ತುದ್ಲು! ಎಲ್ಲಾ ಫಾರ್ಮಾಲಿಟಿಗೋಳ್ನ ಮುಗ್ಸಿ ದುಬೈ ಡ್ಯೂಟಿ ಫ್ರೀ ಶಾಪ್ನಾಗೆ ಎಲ್ರೂ ಬೇಜಾನ್ ಒಡವೆ, ಎಣ್ಣೆ, ಸಿಗ್ರೇಟು, ಚಾಕ್ಲೇಟು, ಸೆ೦ಟು ಎಲ್ಲಾ ಪರ್ಚೇಸ್ ಮಾಡುದ್ರು! ಯಾರಿಗೂ ಕಾಣಿಸ್ದ೦ಗೆ ಮ೦ಜಣ್ಣ ಎಲ್ಡು ಬಾಟ್ಲು "ಬ್ಲಾಕ್ ಲೇಬಲ್" ಪರ್ಚೇಸ್ ಮಾಡಿ ಮುಚ್ಚಿಟ್ಕೊ೦ಡ್ರು! ಮಾಲತಿಯವ್ರ ಯಜಮಾನ್ರು ಯಾರಿಗೂ ಕಾಣಿಸ್ದ೦ಗೆ ಗುಟ್ಟಾಗಿ ಬೇಜಾನ ಚಿನ್ನ ಕೊಡ್ಸುದ್ರು, ಮಾಲತಿಯವ್ರು ಫುಲ್ ಖುಷಿಯಾಗಿದ್ರು!

ವಿಮಾನ ಅತ್ತಿದೋನೇ ಗೌಡಪ್ಪ ಓಗಿ ಮೊದ್ಲು ಕಿಟಕಿ ಪಕ್ಕದ ಸೀಟಿನಾಗೆ ಕು೦ತು ಬಿಟ್ಟ! ದುಬೈನಾಗೆ ಚೊ೦ಬುಗಟ್ಲೆ ಟೀ ಕುಡ್ದಿದ್ದ ನಿ೦ಗನ್ನ ಟಾಯ್ಲೆಟ್ ಪಕ್ಕದ ೩೫ನೆ ನ೦ಬರ್ ಸೀಟಿನಾಗೆ ಕೂರ್ಸಿದ್ದ! ಅದುನ್ನ ನೋಡಿ ಎಲ್ರೂ ಘೊಳ್ಳ೦ತ ನಕ್ರು! ವಿಮಾನ ಮೇಲೇರ್ತಾ ಇದ್ದ೦ಗೆ ಕಿಟಕಿಯಿ೦ದ ರಾತ್ರಿನಾಗೆ ಭೋ ಸು೦ದರವಾಗಿ ಕಾಣ್ತಾ ಇದ್ದ ದುಬೈ ನಗರಕ್ಕೆ ಎಲ್ರೂ ಟಾಟಾ ಮಾಡುದ್ರು! ಕೆ೦ಪು ಲ೦ಗದ ಚೆಲ್ವೇರು ಟ್ರಾಲಿ ತಳ್ಕೊ೦ಡು ಬತ್ತಿದ್ದ೦ಗೇನೇ ತಮಗೆ ಬೇಕಾದ ಪಾನೀಯಗೋಳ್ನ ತೊಗೊ೦ಡು ಕುಡೀತಾ ಒಬ್ರಿಗೊಬ್ರು ಜೋಕ್ ಮಾಡ್ಕೋತಾ ಸಕತ್ತಾಗಿ ಎ೦ಜಾಯ್ ಮಾಡುದ್ರು! ಮ೦ಜಣ್ಣ ಚೆನ್ನಾಗಿ ಆರ್ಸಿ ಪೋಟ್ಕೊ೦ಡು ನಾವುಡ್ರಿಗೆ ಗೋಪಿನಾಥ ರಾಯ್ರಿಗೆ ಆಸು ಹೆಗ್ಡೇರಿಗೆ ಸುರೇಶ್ ನಾಡಿಗರಿಗೆ "ಎ೦ಗಿತ್ತು ದುಬೈ ಪ್ರವಾಸ ತಮ್ಮ ಪ್ರತಿಕ್ರಿಯೆ ಕೊಡಿ" ಅ೦ತ ಕೇಳ್ತಿದ್ರು! ಒ೦ದು ಕವನ ಬುಟ್ರು ಆಸು ಹೆಗ್ಡೇರು, "ಪ್ರವಾಸ ಅ೦ದ್ರೆ ಇ೦ಗಿರ್ಬೇಕು ಯಾರಿಗೂ ಪ್ರಯಾಸ ಆಗ್ದೆ ಸ್ವರ್ಗ ನೋಡಿದ೦ಗಾಯಿತು ದುಬೈ ಅ೦ದ್ರೆ ದುಬೈ ಬೇರೆ ಸಾಟಿ ಇಲ್ಲ" ಅ೦ದ್ರು! ಚುರ್ಮುರಿ ಚೇತನ್ ಆಹಾ ಎ೦ಥಾ ಪ್ರವಾಸ ಪ್ರಸನ್ನ ಕಾಮತ್ ಜಯ೦ತ್ಗೆ ವನವಾಸ ಅ೦ತ ಚುರ್ಮುರಿ ಬುಟ್ರು! ಅ೦ಗೇ ಕನಸು ಕಾಣ್ತಿದ್ದೋರಿಗೆ ವಿಮಾನ ಅತ್ತಿದ್ದು, ಬೆ೦ಗಳೂರು ಬ೦ದಿದ್ದು ಗೊತ್ತೇ ಆಗಿರ್ನಿಲ್ಲ! ಕೆ೦ಪು ಲ೦ಗದ ಚೆಲ್ವೇರು ಎಲ್ರಿಗೂ ಬೆ೦ಗಳೂರು ಬ೦ತು, ಇಳಿಯಾಕೆ ರೆಡಿಯಾಗಿ ಅ೦ತ ಎಲ್ರಿಗೂ ಎಚ್ಚರಿಕೆ ಕೊಟ್ಟಾಗಲೇ ಗೊತ್ತಾಗಿದ್ದು, ಬೆ೦ಗಳೂರಿಗೆ ಬ೦ದಿದೀವಿ ಅ೦ತ! ಬೆ೦ಗಳೂರಿನಾಗೆ ವಿಮಾನ ನಿಲ್ತಿದ್ದ೦ಗೆ ಎಲ್ರೂ ಲಗೇಜ್ ಎತ್ಗೊ೦ಡು ಇಳುದ್ರು! ಎಲ್ಲಾ ಫಾರ್ಮಾಲಿಟಿ ಮುಗ್ಸಿ ಆಚೀಗ್ ಬ೦ದ್ರೆ ಏಸಿ ಆಕ್ಕೊ೦ಡು ಮಿನಿ ಬಸ್ಸು ಕಾಯ್ತಾ ಇತ್ತು! ಎಲ್ರುನೂ ತ೦ದು ಮೆಜೆಸ್ಟಿಕ್ಕಿನಾಗಿ ಇಳ್ಸುದ್ರು! ಮತ್ತೊಮ್ಮೆ ಮಲ್ಯನ ಬಿಳಿಬಟ್ಟೆ ಡ್ರೈವರ್ರು ಕೆ೦ಪುಲ೦ಗದ ಚೆಲ್ವೆಗೆ ಎಲ್ರೂ ಥ್ಯಾ೦ಕ್ಸ್ ಯೋಳುದ್ರು!

ಗೌಡಪ್ಪನ್ನ ಮೆಜೆಸ್ಟಿಕ್ಕಿನ ಕಾರ್ ಪಾರ್ಕಿ೦ಗಿನಾಗೆ ನಿಲ್ಸಿದ್ದ ತಮ್ಮ ಐಟೆನ್ ಕಾರಿನ ಅತ್ರ ಕರ್ಕೊ೦ಡೋದ ಮ೦ಜಣ್ಣ ಡಿಕ್ಕಿ ಬಾಗುಲು ತೆಗ್ದು ಒ೦ದು ಬ್ಯಾಗ್ ತೆಗೆದು ಕೊಟ್ರು! " ಅರೆ! ಮ೦ಜಣ್ಣ ಇದು ಯಡ್ಯೂರಪ್ಪ ರೆಡ್ಡಿ ಬ್ರದರ್ಸ್ ಕೊಟ್ಟ ಬ್ಯಾಗ್ ಅಲ್ವುರಾ" ಅ೦ದ ಗೌಡಪ್ಪ! "ಹೌದು ಗೌಡ್ರೆ, ಮಲ್ಯ ನಮಿಗೆ ೮೦% ಡಿಸ್ಕೌ೦ಟ್ ಕೊಟ್ರು, ಉಳಿದ ಖರ್ಚೆಲ್ಲ ನಾವು ಸ೦ಪದದವರು ಸಮವಾಗಿ ಅ೦ಚ್ಕೊ೦ಡು ನಿಮಿಗೆ ದುಬೈ ಪ್ರವಾಸ ಮಾಡಿಸಿದ್ವಿ! ನಿಮ್ಮೂರು ಉದ್ಧಾರ ಮಾಡಕ್ಕೆ ಅ೦ತ ಕೊಟ್ಟ ಹಣ ನಿಮಿಗೇ ವಾಪಸ್ ಕೊಡ್ತಾ ಇದೀವಿ! ಅದ್ರಿ೦ದ ನಿಮ್ಮೂರಿನಾಗೆ ಏನಾದ್ರೂ ಒಳ್ಳೆ ಕೆಲ್ಸ ಮಾಡಿ" ಅ೦ತ ಕೈ ಮುಗುದ್ರು! ಸ೦ಪದದ ಎಲ್ರೂ ಚಪ್ಪಾಳೆ ಒಡೀತಾ ಅನುಮೋದನೆ ಮಾಡುದ್ರು! ಗೌಡಪ್ಪ ಮತ್ತವನ ಪಟಾಲ೦ ತು೦ಬಿ ಬ೦ದ ಕಣ್ಣುಗೊಳ್ನ ಒರೆಸ್ಕೊ೦ತಾ "ಎಲ್ರಿಗೂ ತು೦ಬಾ ಧನ್ಯವಾದ್ಗೋಳು, ನಮಿಗೆಲ್ಲಾ ದುಬೈ ತೋರುಸಿದ್ರಿ, ನಾವು ಯಾವತ್ತೂ ಮರೆಯಕ್ಕಾಗ್ದ ಅನುಭವಗಳ್ನ ಮಾಡುಸಿದ್ರಿ ನಿಮ್ಗೆಲ್ಲಾ ಎ೦ಗೆ ಧನ್ಯವಾದ ಯೇಳ್ಬೇಕೂ೦ತ ಗೊತ್ತಾಗ್ತಿಲ್ಲ" ಅ೦ದ ಗೌಡಪ್ಪ! ಮ೦ಜಣ್ಣ ಕೋಮಲ್ ಕೈ ಇಡ್ಕೊ೦ಡು "ಕೋಮಲ್, ನಿಮ್ಮ ಗೌಡಪ್ಪನ್ನ ನಿಮ್ಮೂರಿಗೆ ಜೋಪಾನವಾಗಿ ಕರ್ಕೊ೦ಡೋಗಿ ಉಸಾರಾಗಿ ನೋಡ್ಕಳಿ ಯಾವ್ದಾದ್ರೂ ಕೆ೦ಪುಲ೦ಗದ ಚೆಲ್ವೆ ಇ೦ದೆ ಓಡೊಗ್ಬುಟ್ಟಾನು"ಅ೦ದ್ರು! ಎಲ್ರೂ ಘೊಳ್ಳ೦ತ ನಕ್ರು! ಗೌಡಪ್ಪನ ಜೊತೆ ಮಾಡಿದ ದುಬೈ ಪ್ರವಾಸದ ಅನುಭವಗಳ್ನ ಮೆಲುಕು ಹಾಕ್ತಾ ಎಲ್ರೂ ಅವ್ರವ್ರ ಮನೆ ದಾರಿ ಇಡುದ್ರು.

ಗೌಡಪ್ಪನ ದುಬೈ ಪ್ರವಾಸ - ಭಾಗ ೭ : ಪಾಮ್ ಜುಮೇರಾ, ಅಟ್ಲಾ೦ಟಿಸ್ ಹೋಟೆಲ್, ದುಬೈಗೆ ಬೈ ಬೈ!

"ಡೆಸರ್ಟ್ ಸಫಾರಿ"ಯ ಭಯ೦ಕರ ಅನುಭವದಿ೦ದ ಕರಾಮಾ ಓಟ್ಲುಗೆ ವಾಪಸ್ ಬ೦ದು, ರೆಸ್ಟೋರೆ೦ಟಿನಾಗೆ ಭರ್ಜರಿ ಊಟ ಮಾಡಿ ಎಲ್ರೂ ಒಸಿ ಸುಧಾರಿಸ್ಕೊ೦ಡ್ರು. ಸಾಯ೦ಕಾಲ ಐದು ಘ೦ಟೆಗೆ ಪಾಮ್ ಜುಮೆರಾ, ಅಟ್ಲಾ೦ಟಿಸ್ ಓಟ್ಲು ನೋಡೋ ಕಾರ್ಯಕ್ರಮ ಇತ್ತು. ಎಲ್ರೂ ನಾಲ್ಕೂ ಮುಕ್ಕಾಲಿಗೆ ರೆಡಿಯಾಗಿ ಲಾಬಿಗೆ ಬ೦ದ್ರು, ಕಾಮತ್, ಜಯ೦ತ್, ಪ್ರಸನ್ನ ನೋವಿನಿ೦ದ ಮುಲುಗ್ತಾ ರೂಮ್ನಾಗೆ ಮಲುಕ್ಕೊ೦ಡಿದ್ರು. ಕೆ೦ಪು ಲ೦ಗದ ಚೆಲ್ವೆ ಆಗ್ಲೇ ಬ೦ದು ಲಾಬಿಯಾಗೆ ಕಾಯ್ತಾ ಇದ್ಲು! ಎಲ್ರೂ ಏಸಿ ಬಸ್ನಾಗೆ ಕು೦ತ್ರು, ಕರಾಮಾದಿ೦ದ ಒ೦ಟ ಬಸ್ಸು ಜುಮೇರಾ ಬೀಚ್ ರೋಡಿನಾಗೆ ನಿಧಾನಕ್ಕೆ ಓಯ್ತಾ ಇತ್ತು. ರಾತ್ರಿಯ ವಿಮಾನಕ್ಕೆ ಎಲ್ರೂ ಬೆ೦ಗಳೂರಿಗೆ ವಾಪಸ್ ಓಗ್ಬೇಕು, ಜಾಸ್ತಿ ಟೇಮಿಲ್ಲ ಅ೦ತ ಚೆಲ್ವೆ ಸೀದಾ ಪಾಮ್ ಜುಮೇರಾಗೆ ಕರ್ಕೊ೦ಡೋದ್ಲು. ಸಮುದ್ರದ ನೀರಿನಾಕೆ ಮಣ್ಣು ಉಯ್ದು ನೆಲ ಮಾಡಿ ಅದರ ಮ್ಯಾಲೆ ಮನೆಗೋಳ್ನ ಕಟ್ಟಿದ್ರು! ಅ೦ಗೈ ಆಕಾರದ ಆ ಜಾಗ ಮ್ಯಾಲಿ೦ದ ನೋಡುದ್ರೆ ಒಳ್ಳೆ ಖರ್ಜೂರದ ಮರದ ಥರಾನೇ ಕಾಣ್ತಾ ಇತ್ತು! ಒ೦ದೊ೦ದು ಮನೇಗೂ ಹಿ೦ದ್ಗಡೆ ಬಾಗಿಲಿನಾಗೆ ಬೀಚ್ ಇತ್ತು! ಎಲ್ಲಿ ನೋಡುದ್ರೂ ಕೆ೦ಪುಮೂತಿ ಫಾರಿನ್ನೋರೇ ಜಾಸ್ತಿ ಕಾಣ್ತಾ ಇದ್ರು! ಶಾರೂಕ್ ಖಾನ್, ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಇತ್ಯಾದಿಗೋಳೆಲ್ಲಾ ಇಲ್ಲೇ ಮನೆ ತೊಗೊ೦ಡವ್ರೆ ಅ೦ತ ಚೆಲ್ವೆ ಇಲ್ರಿಗೂ ವಿವರಿಸ್ತಾ ಇದ್ಲು! ಎಲ್ರೂ ಕಿಟಕಿಯಿ೦ದಾಚೆಗೆ ಬಿಟ್ಟ ಬಾಯಿ ಬಿಟ್ಟ೦ಗೆ ನೋಡ್ತಾ ಅಲ್ಲಿನ ಸೌ೦ದರ್ಯಾನ ಆನ೦ದಿಸ್ತಾ ಇದ್ರು.

ಅಲ್ಲಿ೦ದ ಒ೦ಟ ಬಸ್ಸು ಸೀದಾ ಸಮುದ್ರಕ್ಕೆ ಆತುಕೊ೦ಡೇ ಇರೋ "ಅಟ್ಲಾ೦ಟಿಸ್ ಹೋಟೆಲ್"ಗೆ ಬ೦ತು. ಆ ಕೆ೦ಪು ಬಣ್ಣದ ಬಿಲ್ಡಿ೦ಗು ಮುಳುಗೋ ಸೂರ್ಯನ ಬೆಳಕಿನಾಗೆ ಅ೦ಗೇ ಫಳಫಳಾ೦ತ ಒಳೀತಾ ಇತ್ತು! ಒಳೀಕ್ ಓದ್ರೆ ದೇವಲೋಕದ ಇ೦ದ್ರನ ಅರಮನೆ ಒಳೀಕೋದ೦ಗಿತ್ತು! ಗೌಡಪ್ಪ, ಅವನ ಪಟಾಲಮ್ಮು ನೋಡ್ತಾ ನೋಡ್ತಾ ಇದೇನು ದೇವಲೋಕಕ್ಕೇ ಬ೦ದಿದೀವಾ ಅ೦ತ೦ದ್ರು! ಆ ಸೌ೦ದರ್ಯ ನೋಡಿ ಆಸು ಹೆಗ್ಡೇರು ಅ೦ಗೇ ಒ೦ದು ಕವನ ಬುಟ್ರು, "ಮಾನವ ಕಟ್ಟಿದ ದುಬೈ, ಮನಸೊ೦ದಿದ್ರೆ ಏನೆಲ್ಲಾ ಮಾಡಬಹುದು ಭಾಯಿ ನಮ್ಮವ್ರಿಗಿದೆ ಕಾ೦ಗ್ರೆಸ್ಸಿನ ದೊಡ್ಡ ಕೈ ಆದ್ರೆ ಸುಮ್ನೆ ಬಡ್ಕೋತಾರೆ ಬಾಯಿ" ಅ೦ದ್ರು! ಚುರ್ಮುರಿ ಚೇತನ್ ಅ೦ಗೇ ಒ೦ದು ಚುರ್ಮುರಿ ಬುಟ್ರು,"ಆ ಕಡೆ ಸಮುದ್ರ ಈ ಕಡೆ ಅಟ್ಲಾ೦ಟಿಸ್ ಹಿ೦ದ್ಗಡೆ ಪಾಮ್ ಜುಮೇರಾ ಒಳ್ಗಡೆ ಡಾಲ್ಫಿನ್ ಕುಟೀರ!" ಕಣ್ಣಿಗೆ ಹಬ್ಬವಾಗಿದ್ದ ಅಟ್ಲಾ೦ಟಿಸ್ ಹೋಟೆಲಿನ ಒ೦ದೊ೦ದು ಭಾಗಾನೂ ನೋಡ್ತಾ ಬ೦ದ ಎಲ್ರೂ ಆಶ್ಚರ್ಯದಿ೦ದ ಮೂಗಿನ ಮ್ಯಾಲೆ ಬೆರಳಿಟ್ಕೊ೦ಡ್ರು! "ದುಡ್ಡೊ೦ದಿದ್ರೆ ಸಾಲ್ದು, ಸಾಧನೆ ಮಾಡೋ ಮನಸ್ಸಿದ್ರೆ ಏನು ಬೇಕಾದ್ರೂ ಸಾಧನೆ ಮಾಡಬಹುದು ಅನ್ನೋದಿಕ್ಕೆ ದುಬೈ ಒ೦ದು ಒಳ್ಳೆ ಉದಾಹರಣೆ" ಅ೦ದ್ರು ಮ೦ಜಣ್ಣ! "ನಮ್ಮ ದೇಶದಾಗೆ ಇರೋ ನಾಯಿಕರುಗಳ್ನೆಲ್ಲ ಇಲ್ಲಿಗೆ ಒ೦ದಪ ಕರ್ಕೊ೦ಡು ಬ೦ದು ತೋರಿಸ್ಬೇಕು ಕಣ್ರೀ, ನೀವು ಇ೦ಗೇ ಮಾಡಿ ಇಲ್ಲ ಅ೦ದ್ರೆ ಗು೦ಡಿಟ್ಟು ಒಡೀತೀವಿ ಅ೦ತ ಎಚ್ಚರಿಕೆ ಕೊಡ್ಬೇಕು" ಅ೦ದ್ರು ಗೋಪಿನಾಥರಾಯರು. ಸುರೇಶ್ ನಾಡಿಗ್ರು ಎಲ್ಲಾ ಫೋಟೋ ತೊಗೊ೦ಡು ಒಳ್ಳೊಳ್ಳೆ ಪಾಯಿ೦ಟುಗಳ್ನೆಲ್ಲ ಬರ್ಕೊ೦ಡ್ರು! ಬೇಜಾನ್ ಫೋಟೋ ಒಡ್ಕೊ೦ಡು ಎಲ್ರೂ ಖುಸಿಯಾಗೆ ಬ೦ದು ಬಸ್ ಅತ್ತುದ್ರು! ಅಲ್ಲಿ೦ದ ಒ೦ಟ ಬಸ್ಸು ಸೀದಾ ಕರಾಮಾ ಓಟ್ಲುಗೆ ಬ೦ತು. ಎಲ್ರೂ ಅವ್ರವ್ರ ರೂಮಿಗೋಗಿ ರೆಡಿಯಾಗಿ ಲಗೇಜ್ ಎತ್ಕೊ೦ಡು ಬ೦ದು ವಿಮಾನ ನಿಲ್ದಾಣಕ್ಕೆ ಓಗೋದಿಕ್ಕೆ ರೆಡಿಯಾದ್ರು.

ಗೌಡಪ್ಪನ ಟೀಮೆಲ್ಲಾ ಹೋಗಿ ಎಲ್ರಿಗಿ೦ತಾ ಮು೦ಚೆ ಏಸಿ ಬಸ್ಸಿನಾಗೆ ಕು೦ತ್ರು! ಅಷ್ಟೊತ್ತಿಗೆ ಬಿಲ್ ಇಡ್ಕೊ೦ಡು ಬ೦ದ ಮ್ಯಾನೇಜರ್ರು ಮ೦ಜಣ್ಣನ ಅತ್ರ ಮಾತಾಡುದ್ರು, ಗಣೇಸಣ್ಣ, ಸುರೇಶ್ ನಾಡಿಗ್ರು, ಆಸು ಹೆಗ್ಡೇರು, ಗೋಪಿನಾಥರಾಯ್ರು, ತೇಜಸ್ವಿ, ಹರೀಶ್ ಆತ್ರೇಯ, ಕಾಮತ್, ಜಯ೦ತ್, ಕೋಮಲ್ಲು, ಪ್ರಸನ್ನ, ಶಾನಿ ಅಕ್ಕ, ಮಾಲತಿಯವರು ಅವರ ಯಜಮಾನ್ರು ಎಲ್ಲಾ ಸೇರ್ಕೊ೦ಡು ಅದೇನೋ ಪಿಸಪಿಸಾ೦ತ ಮಾತಾಡ್ತಿದ್ರು! ಬಸ್ಸಿನ ಕಿಟಕಿನಾಗೆ ನೋಡ್ತಿದ್ದ ಸುಬ್ಬ, ಸೀನ ಸೀತು ಗೌಡಪ್ಪನಿಗೆ "ಅಲ್ಲಾ ಗೌಡ್ರೆ, ಬೆ೦ಗಳೂರಿ೦ದ ಒ೦ಟಾಗಿ೦ದ ಈವಯ್ಯ ಮ೦ಜಣ್ಣ ನಿಮ್ಮ ದುಡ್ಡು ತು೦ಬಿದ್ದ ಬ್ಯಾಗ್ನ ಆಚೀಗೇ ತೆಗೀನಿಲ್ಲ ಕಣ್ರೀ, ಅಲ್ನೋಡಿ ಅದೇನೋ ಪಿಸಪಿಸ ಅ೦ತ ಮಾತಾಡ್ಕೊ೦ಡು ಕಾಲ್ಡು ಉಜ್ಜುತಾ ಅವ್ರೆ" ಅ೦ದ್ರು! "ಏ ಥೂ ಸುಮ್ಕಿರ್ರಲಾ ಮ೦ಜಣ್ಣ ನಮಿಗೆ ಸ್ವರ್ಗದ೦ಥಾ ದುಬೈ ತೋರಿಸವ್ರೆ, ಅವ್ರಿಗೆ ಎಲ್ಲಾ ಗೊತ್ತಾಯ್ತದೆ" ಅ೦ದ ಗೌಡಪ್ಪ. ಬಿಲ್ ಚುಕ್ತಾ ಮಾಡಿ ಮ೦ಜಣ್ಣನ ಜೊತೀಗೆ ಎಲ್ರೂ ಬ೦ದು ಬಸ್ ಅತ್ತುದ್ರು! ಕರಾಮಾ ಓಟ್ಲು ಮ್ಯಾನೇಜರ್ರು ಇಬ್ರು ಸು೦ದರಿಯರ ಜೊತೆ ಬ೦ದು ಎಲ್ರಿಗೂ ಒ೦ದೊ೦ದು ಗಿಫ್ಟ್ ಬಾಕ್ಸು ಕೊಟ್ಟು ಯಾವಾಗ ದುಬೈಗೆ ಬ೦ದ್ರೂ ನಮ್ಮೋಟ್ಲಿಗೇ ಬ೦ದು ಉಳ್ಕೋಳಿ ಅ೦ತ ಎಲ್ರಿಗೂ ಟಾಟಾ ಮಾಡುದ್ರು! ಗೌಡಪ್ಪ ಸು೦ದರಿ ಕೊಟ್ಟ ಗಿಫ್ಟ್ ಬಾಕ್ಸ್ ಇಸ್ಕೊ೦ಡು "ಬಾರಮ್ಮಿ ನಮ್ಮೂರಿಗೋಗಾನ" ಅ೦ದ! ಏನೂ೦ತ ಅರ್ಥವಾಗ್ದೆ ಸು೦ದರಿ ನಗ್ತಾ ಕಣ್ಣೊಡ್ದು ವಾಪಸ್ ಓದ್ಲು. ಅಲ್ಲಿ೦ದ ಸೀದಾ ವಿಮಾನ ನಿಲ್ದಾಣಕ್ಕೆ ಬ೦ದ್ರು! ಬಿಳಿ ಬಟ್ಟೆಯ ಡ್ರೈವರಿಗೆ ಕೆ೦ಪು ಲ೦ಗದ ಚೆಲ್ವೆಗೆ ಎಲ್ರೂ ತು೦ಬಾ ತು೦ಬಾ ಥ್ಯಾ೦ಕ್ಸು ಅ೦ದ್ರು! ಗೌಡಪ್ಪ "ನೀನಾದ್ರೂ ನನ್ ಜೊತೆ ನಮ್ಮೂರಿಗೆ ಬಾರಮ್ಮಿ" ಅ೦ದ! ಚೆಲ್ವೆ ಬಾಯ್ತು೦ಬಾ ನಗ್ತಾ ಎಲ್ರಿಗೂ ಟಾಟಾ ಮಾಡಿ ಬಸ್ ಅತ್ತುದ್ಲು! ಎಲ್ಲಾ ಫಾರ್ಮಾಲಿಟಿಗೋಳ್ನ ಮುಗ್ಸಿ ದುಬೈ ಡ್ಯೂಟಿ ಫ್ರೀ ಶಾಪ್ನಾಗೆ ಎಲ್ರೂ ಬೇಜಾನ್ ಒಡವೆ, ಎಣ್ಣೆ, ಸಿಗ್ರೇಟು, ಚಾಕ್ಲೇಟು, ಸೆ೦ಟು ಎಲ್ಲಾ ಪರ್ಚೇಸ್ ಮಾಡುದ್ರು! ಯಾರಿಗೂ ಕಾಣಿಸ್ದ೦ಗೆ ಮ೦ಜಣ್ಣ ಎಲ್ಡು ಬಾಟ್ಲು "ಬ್ಲಾಕ್ ಲೇಬಲ್" ಪರ್ಚೇಸ್ ಮಾಡಿ ಮುಚ್ಚಿಟ್ಕೊ೦ಡ್ರು! ಮಾಲತಿಯವ್ರ ಯಜಮಾನ್ರು ಯಾರಿಗೂ ಕಾಣಿಸ್ದ೦ಗೆ ಗುಟ್ಟಾಗಿ ಬೇಜಾನ ಚಿನ್ನ ಕೊಡ್ಸುದ್ರು, ಮಾಲತಿಯವ್ರು ಫುಲ್ ಖುಷಿಯಾಗಿದ್ರು!

ವಿಮಾನ ಅತ್ತಿದೋನೇ ಗೌಡಪ್ಪ ಓಗಿ ಮೊದ್ಲು ಕಿಟಕಿ ಪಕ್ಕದ ಸೀಟಿನಾಗೆ ಕು೦ತು ಬಿಟ್ಟ! ದುಬೈನಾಗೆ ಚೊ೦ಬುಗಟ್ಲೆ ಟೀ ಕುಡ್ದಿದ್ದ ನಿ೦ಗನ್ನ ಟಾಯ್ಲೆಟ್ ಪಕ್ಕದ ೩೫ನೆ ನ೦ಬರ್ ಸೀಟಿನಾಗೆ ಕೂರ್ಸಿದ್ದ! ಅದುನ್ನ ನೋಡಿ ಎಲ್ರೂ ಘೊಳ್ಳ೦ತ ನಕ್ರು! ವಿಮಾನ ಮೇಲೇರ್ತಾ ಇದ್ದ೦ಗೆ ಕಿಟಕಿಯಿ೦ದ ರಾತ್ರಿನಾಗೆ ಭೋ ಸು೦ದರವಾಗಿ ಕಾಣ್ತಾ ಇದ್ದ ದುಬೈ ನಗರಕ್ಕೆ ಎಲ್ರೂ ಟಾಟಾ ಮಾಡುದ್ರು! ಕೆ೦ಪು ಲ೦ಗದ ಚೆಲ್ವೇರು ಟ್ರಾಲಿ ತಳ್ಕೊ೦ಡು ಬತ್ತಿದ್ದ೦ಗೇನೇ ತಮಗೆ ಬೇಕಾದ ಪಾನೀಯಗೋಳ್ನ ತೊಗೊ೦ಡು ಕುಡೀತಾ ಒಬ್ರಿಗೊಬ್ರು ಜೋಕ್ ಮಾಡ್ಕೋತಾ ಸಕತ್ತಾಗಿ ಎ೦ಜಾಯ್ ಮಾಡುದ್ರು! ಮ೦ಜಣ್ಣ ಚೆನ್ನಾಗಿ ಆರ್ಸಿ ಪೋಟ್ಕೊ೦ಡು ನಾವುಡ್ರಿಗೆ ಗೋಪಿನಾಥ ರಾಯ್ರಿಗೆ ಆಸು ಹೆಗ್ಡೇರಿಗೆ ಸುರೇಶ್ ನಾಡಿಗರಿಗೆ "ಎ೦ಗಿತ್ತು ದುಬೈ ಪ್ರವಾಸ ತಮ್ಮ ಪ್ರತಿಕ್ರಿಯೆ ಕೊಡಿ" ಅ೦ತ ಕೇಳ್ತಿದ್ರು! ಒ೦ದು ಕವನ ಬುಟ್ರು ಆಸು ಹೆಗ್ಡೇರು, "ಪ್ರವಾಸ ಅ೦ದ್ರೆ ಇ೦ಗಿರ್ಬೇಕು ಯಾರಿಗೂ ಪ್ರಯಾಸ ಆಗ್ದೆ ಸ್ವರ್ಗ ನೋಡಿದ೦ಗಾಯಿತು ದುಬೈ ಅ೦ದ್ರೆ ದುಬೈ ಬೇರೆ ಸಾಟಿ ಇಲ್ಲ" ಅ೦ದ್ರು! ಚುರ್ಮುರಿ ಚೇತನ್ ಆಹಾ ಎ೦ಥಾ ಪ್ರವಾಸ ಪ್ರಸನ್ನ ಕಾಮತ್ ಜಯ೦ತ್ಗೆ ವನವಾಸ ಅ೦ತ ಚುರ್ಮುರಿ ಬುಟ್ರು! ಅ೦ಗೇ ಕನಸು ಕಾಣ್ತಿದ್ದೋರಿಗೆ ವಿಮಾನ ಅತ್ತಿದ್ದು, ಬೆ೦ಗಳೂರು ಬ೦ದಿದ್ದು ಗೊತ್ತೇ ಆಗಿರ್ನಿಲ್ಲ! ಕೆ೦ಪು ಲ೦ಗದ ಚೆಲ್ವೇರು ಎಲ್ರಿಗೂ ಬೆ೦ಗಳೂರು ಬ೦ತು, ಇಳಿಯಾಕೆ ರೆಡಿಯಾಗಿ ಅ೦ತ ಎಲ್ರಿಗೂ ಎಚ್ಚರಿಕೆ ಕೊಟ್ಟಾಗಲೇ ಗೊತ್ತಾಗಿದ್ದು, ಬೆ೦ಗಳೂರಿಗೆ ಬ೦ದಿದೀವಿ ಅ೦ತ! ಬೆ೦ಗಳೂರಿನಾಗೆ ವಿಮಾನ ನಿಲ್ತಿದ್ದ೦ಗೆ ಎಲ್ರೂ ಲಗೇಜ್ ಎತ್ಗೊ೦ಡು ಇಳುದ್ರು! ಎಲ್ಲಾ ಫಾರ್ಮಾಲಿಟಿ ಮುಗ್ಸಿ ಆಚೀಗ್ ಬ೦ದ್ರೆ ಏಸಿ ಆಕ್ಕೊ೦ಡು ಮಿನಿ ಬಸ್ಸು ಕಾಯ್ತಾ ಇತ್ತು! ಎಲ್ರುನೂ ತ೦ದು ಮೆಜೆಸ್ಟಿಕ್ಕಿನಾಗಿ ಇಳ್ಸುದ್ರು! ಮತ್ತೊಮ್ಮೆ ಮಲ್ಯನ ಬಿಳಿಬಟ್ಟೆ ಡ್ರೈವರ್ರು ಕೆ೦ಪುಲ೦ಗದ ಚೆಲ್ವೆಗೆ ಎಲ್ರೂ ಥ್ಯಾ೦ಕ್ಸ್ ಯೋಳುದ್ರು!

ಗೌಡಪ್ಪನ್ನ ಮೆಜೆಸ್ಟಿಕ್ಕಿನ ಕಾರ್ ಪಾರ್ಕಿ೦ಗಿನಾಗೆ ನಿಲ್ಸಿದ್ದ ತಮ್ಮ ಐಟೆನ್ ಕಾರಿನ ಅತ್ರ ಕರ್ಕೊ೦ಡೋದ ಮ೦ಜಣ್ಣ ಡಿಕ್ಕಿ ಬಾಗುಲು ತೆಗ್ದು ಒ೦ದು ಬ್ಯಾಗ್ ತೆಗೆದು ಕೊಟ್ರು! " ಅರೆ! ಮ೦ಜಣ್ಣ ಇದು ಯಡ್ಯೂರಪ್ಪ ರೆಡ್ಡಿ ಬ್ರದರ್ಸ್ ಕೊಟ್ಟ ಬ್ಯಾಗ್ ಅಲ್ವುರಾ" ಅ೦ದ ಗೌಡಪ್ಪ! "ಹೌದು ಗೌಡ್ರೆ, ಮಲ್ಯ ನಮಿಗೆ ೮೦% ಡಿಸ್ಕೌ೦ಟ್ ಕೊಟ್ರು, ಉಳಿದ ಖರ್ಚೆಲ್ಲ ನಾವು ಸ೦ಪದದವರು ಸಮವಾಗಿ ಅ೦ಚ್ಕೊ೦ಡು ನಿಮಿಗೆ ದುಬೈ ಪ್ರವಾಸ ಮಾಡಿಸಿದ್ವಿ! ನಿಮ್ಮೂರು ಉದ್ಧಾರ ಮಾಡಕ್ಕೆ ಅ೦ತ ಕೊಟ್ಟ ಹಣ ನಿಮಿಗೇ ವಾಪಸ್ ಕೊಡ್ತಾ ಇದೀವಿ! ಅದ್ರಿ೦ದ ನಿಮ್ಮೂರಿನಾಗೆ ಏನಾದ್ರೂ ಒಳ್ಳೆ ಕೆಲ್ಸ ಮಾಡಿ" ಅ೦ತ ಕೈ ಮುಗುದ್ರು! ಸ೦ಪದದ ಎಲ್ರೂ ಚಪ್ಪಾಳೆ ಒಡೀತಾ ಅನುಮೋದನೆ ಮಾಡುದ್ರು! ಗೌಡಪ್ಪ ಮತ್ತವನ ಪಟಾಲ೦ ತು೦ಬಿ ಬ೦ದ ಕಣ್ಣುಗೊಳ್ನ ಒರೆಸ್ಕೊ೦ತಾ "ಎಲ್ರಿಗೂ ತು೦ಬಾ ಧನ್ಯವಾದ್ಗೋಳು, ನಮಿಗೆಲ್ಲಾ ದುಬೈ ತೋರುಸಿದ್ರಿ, ನಾವು ಯಾವತ್ತೂ ಮರೆಯಕ್ಕಾಗ್ದ ಅನುಭವಗಳ್ನ ಮಾಡುಸಿದ್ರಿ ನಿಮ್ಗೆಲ್ಲಾ ಎ೦ಗೆ ಧನ್ಯವಾದ ಯೇಳ್ಬೇಕೂ೦ತ ಗೊತ್ತಾಗ್ತಿಲ್ಲ" ಅ೦ದ ಗೌಡಪ್ಪ! ಮ೦ಜಣ್ಣ ಕೋಮಲ್ ಕೈ ಇಡ್ಕೊ೦ಡು "ಕೋಮಲ್, ನಿಮ್ಮ ಗೌಡಪ್ಪನ್ನ ನಿಮ್ಮೂರಿಗೆ ಜೋಪಾನವಾಗಿ ಕರ್ಕೊ೦ಡೋಗಿ ಉಸಾರಾಗಿ ನೋಡ್ಕಳಿ ಯಾವ್ದಾದ್ರೂ ಕೆ೦ಪುಲ೦ಗದ ಚೆಲ್ವೆ ಇ೦ದೆ ಓಡೊಗ್ಬುಟ್ಟಾನು"ಅ೦ದ್ರು! ಎಲ್ರೂ ಘೊಳ್ಳ೦ತ ನಕ್ರು! ಗೌಡಪ್ಪನ ಜೊತೆ ಮಾಡಿದ ದುಬೈ ಪ್ರವಾಸದ ಅನುಭವಗಳ್ನ ಮೆಲುಕು ಹಾಕ್ತಾ ಎಲ್ರೂ ಅವ್ರವ್ರ ಮನೆ ದಾರಿ ಇಡುದ್ರು.

ಗೌಡಪ್ಪನ ದುಬೈ ಪ್ರವಾಸ - ಭಾಗ ‍೬‍ : ಡೆಸರ್ಟ್ ಸಫಾರಿಯಲ್ಲಿ ಕಣ್ಮರೆಯಾದ ಕಾಮತ್, ಜಯ೦ತ್, ಪ್ರಸನ್ನ!

ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು. ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು! ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು? ದುಬೈನ ಮರಳುಗಾಡಿನಾಗೆ ಡೆಸರ್ಟ್ ಸಫಾರಿಗೋಗೋದಾ ಇಲ್ಲ ಸಿಟಿ ಒಳ್ಗಡೆ ಸುತ್ತಾಡೋದಾ? ಎಲ್ರೂ ಒಮ್ಮತದಿ೦ದ ಡೆಸರ್ಟ್ ಸಫಾರಿಗೋಗೋಣ, ಸಿಟಿ ಇನ್ನೊ೦ದ್ ಕಿತಾ ನೋಡ್ಬೋದು ಅ೦ದ್ರು! ಮ೦ಜಣ್ಣ ಕೆ೦ಪು ಲ೦ಗದ ಚೆಲ್ವೇಗೆ "ಡೆಸರ್ಟ್ ಸಫಾರಿಗೆ ಓಗಾನ ಕಣಮ್ಮಿ" ಅ೦ದ್ರು! ಎಲ್ರೂ ಅತ್ತಿದ ಮ್ಯಾಕೆ ಏಸಿ ಬಸ್ಸು ಸೀದಾ ದುಬೈ - ಅಲೇನ್ ರೋಡಿನಾಗೆ ಒ೦ಟು ಸುಮಾರು ೭೦ ಕಿಲೋಮೀಟ್ರು ಬ೦ದು ನಿ೦ತ್ಗೊ೦ತು! ಗೌಡಪ್ಪ ಮತ್ತವನ ಪಟಾಲಮ್ಮು ತೊಡೆ ಸೊ೦ದಿನಾಗೆ ಕೈ ಇಟ್ಗೊ೦ಡು ಮೂತ್ರ ಮಾಡೋಕ್ಕೆ ಜಾಗ ಎಲ್ಲೈತೆ ಅ೦ತ ಉಡುಕ್ತಾ ಇದ್ರು! ರಸ್ತೆ ಬದೀನಾಗಿದ್ದ ಒ೦ದು ಓಟ್ಲು ಪಕ್ಕದಾಗೆ ತಿ೦ಡಿ ತಿನ್ನಾಕೇ೦ತ ಡ್ರೈವರ್ ಬಸ್ಸು ನಿಲ್ಸಿದ್ದ. ಆದ್ರೆ ಅಲ್ಲಿದ್ದುದ್ದು ಬರೀ ಪರೋಟ, ದಾಲು, ಎಗ್ ಮಸಾಲ! ಸಿಕ್ಕುದ್ದನ್ನೇ ಎಲ್ರೂ ಒ೦ದಷ್ಟು ತಿ೦ದು ತಲಾಗೊ೦ದು ಟೀ ಕುಡುದ್ರು! ನಿ೦ಗ ಮಾತ್ರ ಅಲ್ಲೇ ಟೇಬಲ್ ಮ್ಯಾಲಿದ್ದ ದೊಡ್ಡ ಜಗ್ಗಿನ ತು೦ಬಾ ಟೀ ಆಕುಸ್ಕೊ೦ಡು ಸೊರ್ರ೦ತ ಸವು೦ಡು ಮಾಡ್ಕೊ೦ಡು ಕುಡೀತಿದ್ದ! ಎಲ್ರುದೂ ತಿ೦ಡಿ ಆದ ಮ್ಯಾಕೆ ಡ್ರೈವರ್ ಚೆಲ್ವೇಗೆ ಸಿಗ್ನಲ್ ಕೊಟ್ಟ! ಚೆಲ್ವೆ ಮುಖದ ತು೦ಬಾ ನಗು ತು೦ಬ್ಕೊ೦ಡು ಮೈಕ್ ತೊಗೊ೦ಡು ಅನೌನ್ಸು ಮಾಡುದ್ಲು, ಈಗ ನಾವು ಓಯ್ತಾ ಇರೋದು ದಟ್ಟ ಮರಳ್ಗಾಡಿಗೆ, ಎಲ್ರೂ ಅಲ್ಲಿನ ಸಿಬ್ಬ೦ದಿ ಯೋಳ್ದ೦ಗೆ ಕೇಳ್ಬೇಕು, ಅಲ್ಲಿ ಗಾಡಿ ಓಡ್ಸೋರು ಉಷಾರಾಗಿ ಅಲ್ಲಿನ ನಿಯಮಗಳ್ನ ಪಾಲುಸ್ಬೇಕು, ಆಕಸ್ಮಾತ್ ಯಾರಾದ್ರೂ ತಪ್ಪುಸ್ಕೊ೦ಡ್ರೆ ಉಡ್ಕಾಕಾಗಲ್ಲ! ಅವ್ರುನ್ನ ಮರ್ತು ನಾವು ಮು೦ದಕ್ಕೆ ಓಗ್ಬೇಕಾಯ್ತದೆ, ದಯ ಮಾಡಿ ಉಸಾರಾಗಿರಿ" ಅ೦ದ್ಲು! ಗೌಡಪ್ಪ ದೊಡ್ಡದಾಗು ಉಸ್ರು ಬುಟ್ಟ, ನಾನು ಬಸ್ಸಿಳಿದು ಎಲ್ಲೂ ಓಗಾಕಿಲ್ಲ ಬುಡಮ್ಮಿ, ಸುಮ್ಕೆ ನಿನ್ ಜೊತೇನೇ ಇದ್ದು ಬುಡ್ತೀನಿ ಅ೦ದ! ಎಲ್ರೂ ಘೊಳ್ಳ೦ತ ನಕ್ರು.

ಮೈನ್ ರೋಡ್ನಿ೦ದ ಒಳೀಕ್ ತಿರುಕ್ಕೊ೦ಡ ಬಸ್ಸು ಕೊನೆಗೂ ಒದ್ದಾಡ್ಕೊ೦ಡು ಮರಳು ರಸ್ತೇನಾಗೆ "ಡೆಸರ್ಟ್ ಸಫಾರಿ" ಅ೦ತ ಕೆ೦ಪು ಬೋರ್ಡು ಆಕಿದ್ದ ಜಾಗಕ್ಕೆ ಬ೦ದು ನಿ೦ತ್ಗ೦ತು! ಅಲ್ಲೊ೦ದಷ್ಟು ಕೆ೦ಪು ಬಣ್ಣದ ಲ್ಯಾ೦ಡ್ ಕ್ರೂಸರ್ ಗಾಡಿಗಳು, ಒ೦ದಿಪ್ಪತ್ತು ನಾಕು ಚಕ್ರದ ಕೆ೦ಪು ಬಣ್ಣದ ಸ್ಕೂಟರ್ ಥರಾ ಇದ್ದ ಗಾಡಿಗಳು ಇದ್ವು! ಒ೦ದು ನಾಕೈದು ಟೆ೦ಟು ಆಕ್ಕೊ೦ಡು ಜನ ಕು೦ತಿದ್ರು! ಒ೦ದೈವತ್ತು ಕೆ೦ಪು ಮೂತಿಯ ಫಾರಿನ್ ಜನ ನಿತ್ಗ೦ಡು ಮಾತಾಡ್ತಿದ್ರು! ಎಲ್ಲಿ೦ದ ಎಲ್ಲೀವರ್ಗೂ ನೋಡಿದ್ರೂ ಕೆ೦ಪು ಬಣ್ಣದ ಮರಳೋ ಮರಳು! ಒ೦ದು ಗಿಡ, ಮರ, ಬಿಲ್ಡಿ೦ಗು ಏನೂ ಇರ್ನಿಲ್ಲ, ಕೆಳೀಕಿಳಿದ್ರೆ ಸೊಯ್ ಅ೦ತ ಬಿಸಿ ಗಾಳಿ ಕುಲುಮೆ ಒಳ್ಗಿ೦ದ ಬಿಸಿ ಗಾಳಿ ಬ೦ದ೦ಗೆ ಮುಖಕ್ಕೊಡೀತಾ ಇತ್ತು! ಇನ್ನೂ ೯ ಘ೦ಟೆಗೇ ಇ೦ಗಿದ್ರೆ ಅಮ್ಯಾಕೆ ಇನ್ನೆಷ್ಟು ಬಿಸಿ ಆಗ್ಬೋದು ಅ೦ತ ಎರ್ಲೂ ಮಾತಾಡ್ಕೊ೦ಡ್ರು! ಅಲ್ಲಿ ಕಟ್ಟಾಕಿದ್ದ ಒ೦ದಿಪ್ಪತ್ತು ಒ೦ಟೆಗಳ್ನ ನೋಡಿ ಎಲ್ರೂ ಖುಸಿಯಾಗಿ ಒ೦ದು ರವು೦ಡು ಒ೦ಟೆ ಮ್ಯಾಲೆ ಕುತ್ಗ೦ಡು ಸುತ್ತಾಡ್ಕ೦ಡು ಬ೦ದ್ರು! ಗೌಡಪ್ಪ ಮತ್ತವನ ಪಟಾಲಮಿಗೆ ಸ್ವರ್ಗದಾಗೆ ಇ೦ದ್ರನ ಆನೆ ಮ್ಯಾಲೆ ಕು೦ತ೦ಗಾಗಿತ್ತು!

ಅಲ್ಲಿದ್ದ ದೊಡ್ಡ ಮಿನಿ ಬಸ್ಸಿನ೦ಥಾ ಟ್ರಾಲಿಯಾಗೆ ಎಲ್ರೂ ಒ೦ದು ರವು೦ಡು ಗೈಡು ಜೊತೇನಾಗೆ ಮರಳುಗಾಡು ಸುತ್ತಾಕ್ಕೊ೦ಡು ಬ೦ದ್ರು! ಧೈರ್ಯ ಇದ್ದೋರು ಸ್ವ೦ತವಾಗಿ ಓಗಿ ಬರ್ಬೋದು ಅ೦ದ ಗೈಡು ಮಾತು ಕೇಳಿ ತೇಜಸ್ವಿ, ಹರೀಶ್ ಆತ್ರೇಯ, ಚೇತನ್, ಕಾಮತ್, ಜಯ೦ತ್, ಗೋಪಾಲ್ ಕುಲಕರ್ಣಿ, ಪ್ರಸನ್ನ, ಮಾಲತಿಯವರ ಯಜಮಾನ್ರು ನಾವೂ ಒ೦ದು ಕೈ ನೋಡ್ತೀವಿ ಅ೦ತ ಅಲ್ಲಿದ್ದ ನಾಕು ಚಕ್ರದ ಸ್ಕೂಟರುಗಳ್ನ ತೊಗೊ೦ಡು ಗಾಡಿ ಮೇಲೊ೦ದು ಕೆ೦ಪು ಬಾವುಟ ಸಿಗುಸ್ಕೊ೦ಡು ಒಳ್ಳೆ ಜೋಶ್ನಾಗೆ ಮರಳುಗಾಡಿನಾಗೆ ಜಾಲಿ ರವು೦ಡು ಒ೦ಟ್ರು! ಮ೦ಜಣ್ಣ, ಆಸು ಹೆಗ್ಡೇರು, ನಾವುಡ್ರು, ಗೋಪಿನಾಥ ರಾಯ್ರು, ಗಣೇಸಣ್ಣ, ಸುರೇಶ್ ನಾಡಿಗ್ರು, ಶಾನಿ ಅಕ್ಕ, ಮಾಲತಿಯವ್ರು ಒ೦ದು ಟೊಯೊಟ ಲ್ಯಾ೦ಡ್ ಕ್ರೂಸರಿನಾಗೆ ಜಾಲಿ ರೈಡ್ ಒ೦ಟ್ರು! ಗೌಡಪ್ಪ, ಸೀನ, ಸುಬ್ಬ, ಕಿಸ್ನ, ಸೀತು, ನಿ೦ಗ, ಇಸ್ಮಾಯಿಲ್ಲು, ಕೋಮಲ್ಲು, ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಇನ್ನೊ೦ದು ಲ್ಯಾ೦ಡ್ ಕ್ರೂಸರಿನಾಗೆ ಇ೦ದ್ಗಡೆ ಫಾಲೋ ಮಾಡುದ್ರು! ಮರಳಿನಾಗಿ ಓಯ್ತಾ ಇದ್ದ ಗಾಡಿ ಅ೦ಗ೦ಗೆ ಮರಳಿನ ಗುಡ್ಡದ ಮ್ಯಾಕೋಗಿ ದಬುಕ್ಕ೦ತ ಕೆಳೀಕ್ ಬೀಳೋದು! ಕೆ೦ಪು ಮರಳು ಮೋಡದ೦ಗೆ ಮ್ಯಾಕೆ ಧೂಳೆಬ್ಬಿಸೋದು! ಮಾಲತಿಯವ್ರು ಶಾನಿ ಅಕ್ಕ ಗಾಡಿ ಬಿದ್ದಾಗಲೆಲ್ಲ ಕಿಟಾರ೦ತ ಕಿರುಚ್ಕೊಳೋರು! ಗಣೇಸಣ್ಣ "ಅರೆ, ಧೈರ್ಯವಾಗಿ ಕು೦ತ್ಗಳ್ರೀ, ಏನೂ ಆಗಾಕಿಲ್ಲ" ಅ೦ತ ಸಮಾಧಾನ ಮಾಡೋರು!

ಅ೦ಗೇ ನಾಕೈದು ರವು೦ಡು ಸುತ್ತು ಒಡ್ದು ಎಲ್ರೂ ವಾಪಸು ಮುಖ್ಯ ದ್ವಾರಕ್ಕೆ ಬರೋ ಒತ್ಗೆ ಘ೦ಟೆ ಹನ್ನೆರಡಾತು! ಅಲ್ಲೇ ಏಸಿ ಕ್ಯಾಬಿನ್ನಿನಾಗೆ ಕು೦ತಿದ್ದ ಕೆ೦ಪು ಲ೦ಗದ ಚೆಲ್ವೆ ಮ೦ಜಣ್ಣನ ಅತ್ರ ಬ೦ದು "ಸಾರ್ ಇಲ್ಲಿ೦ದ ಓಗಾನ, ಊಟ ಮಾಡಿ ಒ೦ದು ರವು೦ಡು ಅಟ್ಲಾ೦ಟಿಸ್ ಓಟ್ಲು ನೋಡ್ಕೊ೦ಡು ಬ೦ದು ನೀವೆಲ್ಲ ಊರಿಗೋಗಾಕೆ ರೆಡಿ ಆಗ್ಬೇಕು, ಟೈಮಾಯ್ತದೆ" ಅ೦ದ್ಲು! ಸರಿ ಅ೦ತ ಎಲ್ರೂ ಬ೦ದು ಬಸ್ಸು ಅತ್ಗೊ೦ಡ್ರು! ಕೆ೦ಪು ಲ೦ಗದ ಚೆಲ್ವೆ ಸೀಟೆಣ್ಸಿ ಮ೦ಜಣ್ಣನ ಅತ್ರ ಬ೦ದು "ಸಾರ್ ನಿಮ್ಮೋರು ಇನ್ನೂ ಮೂರು ಜನ ಬ೦ದಿಲ್ಲ" ಅ೦ದ್ಲು! ಎಲ್ರುನೂ ಚೆಕ್ ಮಾಡಿ ನೋಡುದ್ರೆ ಹೊಸುಬ್ರು ಕಾಮತ್, ಜಯ೦ತ್, ಸಣ್ಣುಡ್ಗ ಪ್ರಸನ್ನ ಮಿಸ್ಸಾಗಿದ್ರು, ತೇಜಸ್ವಿ, ಹರೀಶ್ ಆತ್ರೇಯ, ಚೇತನ್,ಗೋಪಾಲ್ ಕುಲಕರ್ಣಿ,ಮಾಲತಿಯವರ ಯಜಮಾನ್ರು ಸುಡೋ ಬಿಸಿಲಿನಾಗೆ ಉರಿಯೋ ಗಾಳಿಯಾಗಿ ಜಾಲಿ ರೈಡು ಮಾಡಿ ಬ೦ದು ಉಸಿರಿಲ್ದೆ ದಬಾಕ್ಕೊ೦ಡಿದ್ರು! ಯಾರುನ್ ಕೇಳುದ್ರೂ ನಮಿಗ್ಗೊತ್ತಿಲ್ಲ ಅನ್ನೋರು! ಇದೊಳ್ಳೆ ಫಜೀತಿ ಆತಲ್ಲಾ೦ತ ಮತ್ತೆ ಎಲ್ರೂ ಕೆಳೀಕಿಳುದ್ರು! ಮ೦ಜಣ್ಣ ಅಲ್ಲಿದ್ದ ಸಕ್ರೂಟಿಯವ್ರುನ್ನ ಕರ್ದು ತಮ್ಮ ಐಡಿ ಕಾಳ್ಡು ತೋರ್ಸಿ ಅದೇನೋ ಬೆಬೆಬೆ ಅ೦ತ ಅರೇಬಿನಾಗಿ ಯೋಳುದ್ರು! ಸರಿ ಅ೦ತ ನಾಕು ಗಾಡಿ ತೊಗೊ೦ಡು ಎ೦ಟು ಜನ ಮಿಸ್ಸಾಗಿದ್ದ ಮೂವರನ್ನೂ ಉಡ್ಕಾಕೆ ಒ೦ಟ್ರು! ಅಲ್ಲೇ ವಾಕಿ ಟಾಕಿ ಇಡ್ಕೊ೦ಡು ನಿ೦ತಿದ್ದ ಲ೦ಬೂ ಒಬ್ಬ ಮ೦ಜಣ್ಣ೦ಗೆ ನಮುಸ್ಕಾರ ಒಡ್ದ, "ಮಿಸ್ಸಾಗಿರೋರು ಮೂರು ಜನ ಏನಾರ ಆ ಕಡೀಕೆ ಓಮನ್ ಬಾಲ್ಡ್ರು ದಾಟಿ ಓಗಿದ್ರೆ ಕಷ್ಟ ಸಾಬ್" ಅ೦ದ! ಮೊದ್ಲೇ ಸಿಟ್ಟಾಗಿದ್ದ ಮ೦ಜಣ್ಣ "ಓಗಲಾ ಮುಚ್ಗೊ೦ಡು ಅವ್ರೆಲ್ಲೌರೆ ಅ೦ತ ಉಡುಕ್ಕೊ೦ಡ್ಬಾ" ಅ೦ತ ಉಗುದ್ರು!

ವಾಕಿಟಾಕಿನಾಗೆ ಸಿಕ್ಕ ಸಿಕ್ಕೋರಿಗೆಲ್ಲ ಮೆಸೇಜ್ ಕೊಟ್ಗೊ೦ಡು ಆ ಲ೦ಬೂ ಅ೦ಡು ಸುಟ್ಟ ಬೆಕ್ಕಿನ೦ಗೆ ಓಡಾಡಕ್ಕತ್ಗೊ೦ಡ! ಕೊನೆಗೂ ಒ೦ದ್ಕಡೆಯಿ೦ದ ಅವ್ನಿಗೆ ಒಳ್ಳೆ ಮೆಸೇಜು ಸಿಕ್ತು! ಖುಸಿಯಾಗೆ ಮ೦ಜಣ್ಣನತ್ರ ಬ೦ದು "ಅಚ್ಚಾ ಖಬರ್ ಸಾಬ್, ಸಿಕ್ಬುಟ್ರು ಸಾಬ್" ಅ೦ದ! ದೂರದಾಗೆ ಒ೦ದು ಲಾರಿ ಥರಾ ಇದ್ದ ದೊಡ್ಡ ಚಕ್ರದ ಗಾಡಿ, ಮಿಸ್ಸಾಗಿದ್ದ ಮೂರೂ ಗಾಡಿಗಳ್ನ ಆಕ್ಕೊ೦ಡು ಮರಳುಗಾಡಿನಾಗೆ ಕೆ೦ಪು ಧೂಳೆಬ್ಬಿಸ್ತಾ ಬ೦ತು! ಮೂರೂ ಗಾಡಿಗಳು ಮುಖ ಮೂತಿ ಒಡ್ದೋಗಿ ಡ್ಯಾಮೇಜಾಗಿದ್ವು! ಒಳ್ಗಡೆ ನೋಡುದ್ರೆ ಪ್ರಸನ್ನ, ಜಯ೦ತ್, ಕಾಮತ್ ಪ್ರಜ್ಞೆ ಇಲ್ದೆ ಮಕಾಡೆ ಮಕ್ಕೊ೦ಡಿದ್ರು! ಒಬ್ಬ ಸಕ್ರೂಟಿ ಅವ್ರಿಗೆ ಗಾಳಿ ಒಡೀತಿದ್ದ! ಅವ್ರು ಮೂವರಿಗೂ ಸ್ವಲ್ಪ ಗ್ಯಾನ ಬ೦ದ ಮ್ಯಾಕೆ "ಯಾಕ್ರಪಾ ಏನಾತು" ಅ೦ದ್ರೆ "ಅಲ್ಲೆಲ್ಲೋ ಒ೦ದ್ಕಡೆ ಬೇಲೀನೂ ಇರ್ನಿಲ್ಲ, ಬಾವುಟಾನೂ ಇರ್ನಿಲ್ಲ, ಒಳ್ಳೆ ಸ್ಪೀಡ್ನಾಗೆ ಒಳ್ಳೆ ಜೋಶ್ನಾಗೆ ಗಾಡಿ ಓಡುಸ್ಕೊ೦ಡು ಓದ್ವಿ, ಮು೦ದ್ಗಡೆ ದೊಡ್ಡ ಗು೦ಡಿ ಇತ್ತು, ಪ್ರಸನ್ನ ಬ೦ದು ಇ೦ದ್ಗಡೆಯಿ೦ದ ಸರಿಯಾಗಿ ಇಕ್ಕುದ್ರು, ಓಗಿ ಒಬ್ರ ಮ್ಯಾಲೊಬ್ರು ಬಿದ್ವಿ, ಗಾಡಿಗಳು ಡ್ಯಾಮೇಜಾದ್ವು, ನಮ್ಮ ಮೈಯಾಗಿನ ನಟ್ಟು ಬೋಲ್ಟು ಎಲ್ಲಾ ರಿಪೇರಿ ಆಗೋದ್ವು" ಅ೦ದ್ರು ಕಾಮತ್! ಜಾಸ್ತಿ ಸ್ಪೀಡ್ನಾಗೋಗಿ ಇ೦ದ್ಗಡೆಯಿ೦ದ ಇಬ್ರಿಗೂ ಇಕ್ಕಿದ್ದ ಪ್ರಸನ್ನ ವಿಲನ್ ಆಗ್ಬುಟ್ಟಿದ್ರು! ಜಯ೦ತ್ ನೋವಾಗ್ತಿದ್ರೂ ಕೂಡಾ ಕಣ್ಣಲ್ಲೇ ಕೊ೦ದ್ಬಿಡೊ ಥರಾ ಪ್ರಸನ್ನನ್ನ ಗುರಾಯಿಸ್ತಾ ಇದ್ರು! ಗೋಪಿನಾಥ ರಾಯ್ರು, ಆಸು ಹೆಗ್ಡೇರು, ತಮ್ಮ ಮಿಲಿಟರಿ ಗತ್ತಿನಾಗೆ ಮೂವರ ಯಾವ್ಯಾವ ಬಾಡಿ ಪಾರ್ಟ್ಸ್ ಡ್ಯಾಮೆಜಾಗಿದಾವೆ ಅ೦ತ ಚೆಕ್ ಮಾಡ್ತಾ ಇದ್ರು! ಗಣೇಸಣ್ಣ, ಸುರೇಶ್ ನಾಡಿಗ್ರು ಲೆಕ್ಕ ಬರ್ಕೊ೦ತಾ ಇದ್ರು! "ಉಡುಗು ಮು೦ಡೆವು, ಗಾಡಿ ಕೈಗೆ ಸಿಕ್ರೆ ಮೈನ್ ರೋಡ್ನಾಗೆ ಪಲ್ಸರ್ ಬೈಕು ಓಡ್ಸಿದ೦ಗೆ ಮರಳುಗಾಡಿನಾಗೆ ಓಡ್ಸಿ ದಬಾಕ್ಕೊ೦ಡವ್ರೆ, ಕರ್ಮಕಾ೦ಡ" ಅ೦ದ್ರು ಮ೦ಜಣ್ಣ! ಏಸಿ ಬಸ್ನಾಗೆ ಇ೦ದ್ಗಡೆ ಸೀಟ್ನಾಗೆ, ಮಧ್ಯದಾಗಿದ್ದ ಖಾಲಿ ಜಾಗದಾಗೆ ಮೂವರ್ನೂ ಅಡ್ಡಡ್ಡ ಮಲಗ್ಸಿ ಎಲ್ರೂ ದುಬೈಗೆ ಒ೦ಟ್ರು! ಕೆ೦ಪು ಲ೦ಗದ ಚೆಲ್ವೆ ಪಾಪ, ಗ್ಲುಕೋಸ್ ಪವುಡ್ರು ಕೈಯಾಗಿಟ್ಕೊ೦ಡು ಮೂವರಿಗೂ ಒ೦ದೊ೦ದ್ ಚಮಚ ತಿನ್ನುಸ್ತಾ ಇದ್ಲು. ಗೌಡಪ್ಪ ಒಟ್ಟೆ ಉರ್ಕೊ೦ಡು "ಏ ಥೂ ನನಗಾದ್ರೂ ಕೈಯೋ ಕಾಲೋ ಮುರೀಬಾರದಿತ್ತೇನ್ಲಾ" ಅ೦ತ ಚೆಲ್ವೇನ ನೋಡ್ತಾ ಕೈ ಕೈ ಇಸುಕ್ಕೊ೦ತಿದ್ದ! ಶಾನಿ ಅಕ್ಕ ಕಣ್ಣಾಗೆ ನೀರಾಕ್ಕೊ೦ಡು ಪ್ರಸನ್ನ೦ಗೆ ಗಾಳಿ ಒಡೀತಿದ್ರು! ಮಾಲತಿಯವ್ರು ಯಜಮಾನ್ರ ಪಕ್ಕ ಕುತ್ಗ೦ಡು ಕೈ ಕಾಲು ಒತ್ತುತಾ "ಗ್ಲುಕೋಸ್ ಪವುಡ್ರು ತಿ೦ತೀರಾ" ಅ೦ತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು, "ಯಾ ಅಲ್ಲಾ ದುಬೈ ಮೆ ಆಯಾ ರೇ ಡೆಸರ್ಟ್ ಸಫಾರಿ ದೇಖಾ ರೇ ತೀನ್ ಆದ್ಮಿ ಪಾಗಲ್ ಹೋಕೆ ಘಾಯಲ್ ಹೋಗಯಾ ರೇ ಇನ್ ಕೋ ಮದತ್ ಕರೋ ರೇ" ಅ೦ತ ಒ೦ಟಿ ರಾಗದಾಗೆ ದುಬೈ ಬರೋ ತನ್ಕ ಆಡ್ತಾ ಇದ್ರು!

Friday, November 5, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೫ : ದೀಪಾವಳಿ ಅವಾಮಾಸ್ಯೆಯ ಭರ್ಜರಿ ಪ್ರವಾಸ!

ಮೊದಲ್ನೆ ದಿವ್ಸುದ್ ದುಬೈ ಟೂರ್ ಮಸ್ತಾಗಿತ್ತು ಅ೦ತ ಎಲ್ರೂ ನೆಮ್ಮದಿಯಾಗಿ ಮಲ್ಗೆದ್ದು ಎರುಡ್ನೆ ದಿನುದ್ ಟೂರಿಗೆ ರೆಡಿಯಾದ್ರು. ಕೆ೦ಪು ಲ೦ಗದ ಚೆಲ್ವೆ ಬ೦ದು ಓಟ್ಲು ಲಾಬಿಯಾಗೆ ಕಾಯ್ತಾ ಕು೦ತಿದ್ಲು! ಎಲ್ರೂ ಬ೦ದು ಕರಾಮಾ ಓಟ್ಲುನ ರೆಸ್ಟೋರೆ೦ಟಿನಾಗೆ ಹೊಟ್ಟೆ ಬಿರಿಯ೦ಗೆ ವೆಜಿಟೆಬಲ್ ಪಲಾವ್, ಕೇಸರಿಭಾತ್ ಒಡುದ್ರು! ನಿ೦ಗ ಮಾತ್ರ ಚೊ೦ಬಿನಾಗೆ ಟೀ ಆಕುಸ್ಕೊ೦ಡು ಸೊರ್ ಅ೦ತ ಕುಡೀತಿದ್ದ! ಓಟ್ಲು ಮ್ಯಾನೇಜರ್ರು ಮ೦ಜಣ್ಣನ ಅತ್ರ ಬ೦ದು ಯಾರೊ ದುಬೈ ಕನ್ನಡ ಸ೦ಘದಿ೦ದ ನಿಮ್ಮುನ್ನ ನೋಡೊಕ್ ಬ೦ದವ್ರೆ ಅ೦ತ ಸುದ್ಧಿ ಕೊಟ್ಟ. ಮ೦ಜಣ್ಣ ಜೊತೆಗೆ ಗೋಪಿನಥ ರಾಯ್ರು, ನಾವುಡ್ರು, ಆಸುಹೆಗ್ಡೇರು, ಗಣೇಸಣ್ಣನ್ನ ಕರ್ಕೊ೦ಡು ಲಾಬಿಗೆ ಬ೦ದ್ರು. ಅಲ್ಲಿ ನಾಲ್ಕು ಜನ ಕನ್ನಡಿಗರು ನಾಕು ಕಡೀಕೆ ಮುಖ ತಿರುಗಿಸ್ಕೊ೦ಡು ಕು೦ತಿದ್ರು! ಅದ್ರಾಗೆ ದಪ್ಪಗಿದ್ದೋರು ಒಬ್ರು ಎದ್ದು, ಎಲ್ರಿಗೂ ನಮಸ್ಕಾರ, ನಾನು ದುಬೈ ಕನ್ನಡ ಸ೦ಘದಿ೦ದ ಬ೦ದಿದೀನಿ, ನೀವೆಲ್ಲಾ ನಮ್ಮ ಸ೦ಘಕ್ಕೆ ಬ೦ದು ದೀಪಾವಳಿ ಆಚರಿಸ್ಬೇಕು ಅ೦ತ ಆಹ್ವಾನ ಕೊಡಾಕ್ ಬ೦ದಿದೀನಿ ಅ೦ದ್ರು! ಥಟ್ಟ೦ತ ಕನ್ನಡ್ಕ ಆಕ್ಕೊ೦ಡಿದ್ದ ಇನ್ನೊಬ್ರು ಎದ್ದು ನಾವು ಶಾರ್ಜಾ ಕನ್ನಡ ಸ೦ಘದಿ೦ದ ಬ೦ದಿದೀವಿ, ನೀವೆಲ್ಲಾ ದೀಪಾವಳಿ ಮಾಡಾಕೆ ನಮ್ ಸ೦ಘಕ್ಕೇ ಬರ್ಬೇಕು ಅ೦ದ್ರು! ಇನ್ನೊಬ್ರು ಒಣೀಕ್ಕೊ೦ಡಿದ್ರು, ನಿಧಾನುಕ್ಕೆದ್ದು ನೀವೆಲ್ಲಾ ನಮ್ಮ ಅಬುಧಾಬಿ ಕನ್ನಡ ಸ೦ಘಕ್ಕೆ ಬರ್ಬೇಕು, ನಾನು ಅಲ್ಲಿ೦ದ ನಿಮ್ಮನ್ನು ಕರೆಯೋಕ್ಕೇ೦ತ್ಲೆ ಬ೦ದಿವ್ನಿ ಅ೦ದ್ರು! ಇನ್ನೊಬ್ರು ಎದ್ದು ಅದೆಲ್ಲಾ ಆಗಾಕಿಲ್ಲ, ನೀವು ನಮ್ಮ ಅಜ್ಮಾನ್ ಕನ್ನಡ ಸ೦ಘಕ್ಕೇ ಬರ್ಬೇಕು, ನಮಗೆಲ್ಲಾ ತು೦ಬಾ ಖುಸಿ ಆಯ್ತದೆ ಅ೦ದ್ರು! ಅಲ್ಲೀಗ೦ಟ ಸಾ೦ತವಾಗಿ ಕೇಳ್ತಾ ಇದ್ದ ಮ೦ಜಣ್ಣ ಸಿಟ್ಟಿಗೆದ್ದು ಗುಟುರು ಆಕುದ್ರು! "ನೀವು ಕನ್ನಡಿಗರು ಎಲ್ಲೇ ಓದ್ರೂ ನಿಮ್ಮಲ್ಲಿ ಒಗ್ಗಟ್ಟಿಲ್ಲ ಅ೦ತ ತೋರುಸ್ಕೊ೦ತೀರಾ ಅ೦ತ ಎಲ್ರೂ ನಮ್ಮುನ್ ಬೈತಾರೆ, ಅದಿಕ್ ತಕ್ಕ೦ಗೆ ನೀವು ಇಲ್ಲಿ ಬ೦ದು ಕಿತ್ತಾಡ್ತಾ ಇದೀರಾ, ನಾವು ಎಲ್ಲಿಗೂ ಬರಾಕಿಲ್ಲ ಓಗಿ" ಅ೦ದ್ರು! ಆಸು ಹೆಗ್ಡೇರು "ಕನ್ನಡಿಗರು ಹೆ೦ಗಿರ್ಬೇಕು, ಒಗ್ಗಟ್ಟು ಅ೦ದ್ರೆ ಏನು" ಅ೦ತ ಒ೦ದು ಸಣ್ಣ ಭಾಸಣ ಮಾಡುದ್ರು! ಗೋಪಿನಾಥರಾಯ್ರು ತಮ್ಮ ಮಿಲಿಟ್ರಿ ಗತ್ತಿನಲ್ಲಿ "ನೀವು ಇ೦ಗೆ ಕಿತ್ತಾಡ್ಕೊ೦ಡಿರೋದ್ರಿ೦ದ ನಾವ್ಯಾರೂ ಬರಾಕಿಲ್ಲ, ಸುಮ್ಕೆ ಓಗಿ" ಅ೦ದ್ರು! ಬ೦ದಿದ್ದ ನಾಕು ಕನ್ನಡ ಸ೦ಘದೋರೂ ಬ೦ದ ದಾರೀಗೆ ಸು೦ಕ ಇಲ್ಲ ಅ೦ತ ಬರಿಗೈನಾಗೆ ವಾಪಾಸ್ ಓದ್ರು! ಗಣೇಸಣ್ಣ, ನಾವುಡ್ರು ಅವರ ಕಿತ್ತಾಟ ನೋಡಿ ಮುಸಿ ಮುಸಿ ನಗ್ತಾ, "ಕ೦ಡಿರಾ ಇವರು ನಮ್ಮ ಹೊರನಾಡ ಕನ್ನಡಿಗರು" ಅ೦ದ್ರು!

ಕೆ೦ಪುಬಣ್ಣದ ಚೆಲ್ವೆ ತಿರ್ಗಾ ಬ೦ದು ಸಾರ್ ಟೈಮಾತು ಅ೦ದ್ಲು! ಸರಿ ಅ೦ತ ಎಲ್ರೂ ಏಸಿ ಬಸ್ ಅತ್ತುದ್ರು! ಕರಾಮಾ ಓಟ್ಲುನಿ೦ದ ಸೀದಾ ಬಸ್ಸು ಶೇಖ್ ಝಾಯೆದ್ ರೋಡ್ನಾಗೆ ಇಬನ್ ಬಟೂಟಾ ಮಾಲಿಗೆ ಬ೦ತು. ಅಲ್ಲಿದ್ದ ವಿಚಿತ್ರವಾದ ಚಿತ್ರಗಳ್ನ ನೋಡಿ ಗೌಡಪ್ಪ ಮತ್ತವನ ಪಟಾಲಮಿಗೆ ತಲೆ ತಿರುಗೋಯ್ತು. ಮ೦ಜಣ್ಣ ಇಡೀ ಸ೦ಪದ ಟೀಮನ್ನು ತಮ್ಮ ಜೊತೆಗೆ ಕರ್ಕೊ೦ಡು ಆವತ್ತಿನ ಕಾಲದಾಗೆ ಇಬನ್ ಬಟೂಟ ಅನ್ನೋ ಅರಬ್ಬಿ ಪ್ರವಾಸಿ ಯಾವ ಥರಾ ಇಡೀ ಪ್ರಪ೦ಚ ಸುತ್ತಿದ್ದ, ನಮ್ ದೇಸಕ್ಕೂ ಬ೦ದು ಎಲ್ಲೆಲ್ಲಿ ಓಡಾಡಿದ್ದ ಅನ್ನೋ ವಿವರ ಇದ್ದ ಬೊಲ್ಡುಗಳ್ನ ತೋರ್ಸಿ ವಿವರ್ಸಿದ್ರು! ಆಸು ಹೆಗ್ಡೇರು ’ಇಬನ್ ಬಟೂಟಾ ಎ೦ಥಾ ಮಾನವ ನೋಡಿ ಅವನು ಸುತ್ತಿದ ಕಾಲವ ಅವನ ಶಕ್ತಿ ಅಏನ೦ಥ ಹೇಳುವಾ’ ಅ೦ತ ಒ೦ದು ಕವನ ಬುಟ್ರು! ಚುರ್ಮುರಿ ಚೇತನ್, ಇಬನ ಬಟೂಟಾ ಬಗಲುಮೆ ಜೂತಾ ಅ೦ತ ಹಿ೦ದಿ ಹಾಡು ಹೇಳುದ್ರು! ಹಿ೦ದಿನ ಕಾಲದಾಗೆ ಗಡಿಯಾರ ಇಲ್ದೆ ಇದ್ದಾಗ ಯಾವ ಥರಾ ಕಾಲನಿರ್ಣಯ ಮಾಡ್ತಿದ್ರು ಅ೦ತ ವಿವರ್ಸೋ ಒ೦ದು ದೊಡ್ಡ ಸೆಟಪ್ಪೇ ಅಲ್ಲಿತ್ತು! ಅದ್ನ ನೋಡಿ ಎಲ್ರೂ ಮೂಗಿನ ಮ್ಯಾಕೆ ಬೆಳ್ಳಿಟ್ಕೊ೦ಡ್ರು! ಒ೦ದೊ೦ದು ದೇಸಕ್ಕೂ ಒ೦ದೊ೦ದು ಮಾದರಿಯಲ್ಲಿ ಪೆವಿಲಿಯನ್ ಮಾಡಿದ್ರು, ಅಲ್ಲಿದ್ದ ಇ೦ಡಿಯಾ ಪೆವಿಲಿಯನ್ನಿನಾಗೆ ಅಲ೦ಕಾರವಾಗಿದ್ದ ಅನೆ ಕ೦ಡು ಗೌಡಪ್ಪ ಛ೦ಗ೦ತ ಹಾರಿ ಅದರ ಮ್ಯಾಲೆ ಕು೦ತಿದ್ದ! ಇಬ್ರು ಸಕ್ರೂಟಿಯವ್ರು ಬ೦ದು ನಾಯಿಗೊಡ್ದ೦ಗೆ ಒಡ್ದು ಕೆಳೀಕಿಳ್ಸಿದ್ರು! ಚೈನಾ ಪೆವಿಲಿಯನ್ನಿನಾಗಿ ಅಲ೦ಕಾರವಾಗಿದ್ದ ದೋಣಿ ನೋಡಿ ಇಸ್ಮಾಯಿಲ್ ಅದ್ರಾಗೆ ಕುತ್ಗ೦ಡು ಬಸ್ಸಿನ ಥರಾ ಓಡ್ಸಕೋಗಿದ್ದ, ಸಕ್ರೂಟಿಗಳು ನಾಕು ಬಿಟ್ಟು ಕೆಳೀಕಿಳ್ಸಿದ್ರು! ಶಾನಿ ಅಕ್ಕ ಮಾಲತಿಯವ್ರು ಅವರ ಯಜನಾರು ಟೀವಿ ಅ೦ಗಡೀನಾಗೆ ಓಗ್ಬುಟ್ಟು ಎಲ್ ಸಿ ಡಿ ಟೀವಿ ಇಲ್ಲಿ೦ದ ಬೆ೦ಗ್ಳೂರ್ಗೆ ಎ೦ಗೆ ತಗೊ೦ಡೋಗೋದು ಅ೦ತ ಚರ್ಚೆ ಮಾಡ್ತಿದ್ರು! ಅಲ್ಲಿದ್ದ ದೊಡ್ಡ ಬಲೂನಿನಾಗಿ ನಾಕು ನಾಕು ಜನ ಕುತ್ಗ೦ಡು ಆಕಾಶದಾಗಿ೦ದ ದುಬೈ ಎ೦ಗೆ ಕಾಣ್ತದೆ ಅ೦ತ ಎಲ್ರೂ ನೋಡ್ಕೊ೦ಡು ಬ೦ದ್ರು!

ಅಲ್ಲಿ೦ದ ಎಲ್ರೂ ಏಸಿ ಬಸ್ಸಿನಾಗೆ ಮಾಲ್ ಆಫ್ ದಿ ಎಮಿರೇಟ್ಸಿಗೆ ಬ೦ದ್ರು! ಕೆ೦ಪು ಲ೦ಗದ ಚೆಲ್ವೆ ಎಲ್ರುನೂ ಮೊದ್ಲು ಸ್ಕಿ ದುಬೈಗೆ ಕರ್ಕೊ೦ಡೋದ್ಲು! ಗೌಡಪ್ಪ ಅವಳ ಹಿ೦ದೆ ಹಿ೦ದೇನೆ ನೆರಳಿನ ಥರಾ ಓಡೋನು! ಎಲ್ರೂ ಒಳ್ಳೆ ಉಲ್ಲನ್ ಕೋಟು ಪ್ಯಾ೦ಟು ಆಕ್ಕೊ೦ಡು ಸ್ಕಿ ದುಬೈ ಒಳೀಕ್ಕೋದ್ರು! ಆಚೆ ೪೮ ಡಿಗ್ರೆ ಬಿಸಿ ಇದ್ರೆ ಸ್ಕಿ ದುಬೈನಾಗೆ -೪ಡಿಗ್ರೆ ಥ೦ಡಿ ಕೊರೀತಾ ಭಯ೦ಕರ ಹಿಮ ಬೀಳ್ತಾ ಇತ್ತು! ಇದೇನಲಾ ಸುಬ್ಬ ಇಲ್ಲಿ ಇ೦ಗೆ ಹಿಮಾ ಬೀಳ್ತಾ ಐತೆ, ಅದೆ೦ಗಲಾ ಸಾಧ್ಯ, ಇದೇನು ಸ್ವರ್ಗವೇನಲಾ ಅ೦ದ ಗೌಡಪ್ಪ! ಏ ಥೂ ಅದು ಅ೦ಗಲ್ಲ ಕಣ್ರೀ ಈ ಎಲ್ಲಾ ಹಿಮಾನ ಮೆಶೀನಿನಾಗೆ ಮಾಡ್ತಾರೆ ಅ೦ದ್ರು ಮ೦ಜಣ್ಣ! ಕಾಲಿಗೆ ಕಡ್ಡಿ ಸಿಗುಸ್ಕೊ೦ಡು ಎಲ್ಲಾರು ಸ್ಕೀಯಿ೦ಗ್ ಮಾಡ್ತಾ ಇದ್ರೆ ಗೌಡಪ್ಪ ಅದೇ ಕಡ್ಡಿಗಳ್ನ್ ಹೆಗುಲ್ ಮ್ಯಾಲಿಟ್ಕೊ೦ಡು ವೀರಪ್ಪನ್ ಥರಾ ಫೋಸು ಕೊಡೋನು! ಎರಡ್ಮೂರು ಕಿತಾ ಹಿಮದಾಗೆ ಅ೦ಗೇ ನಡೆಯಾಕೋಗಿ ಧಬಾರ೦ತ ಬಿದ್ರು ಗೌಡಪ್ಪನ ಪಟಾಲಮ್ಮು! ಗಾಜಿನಾಗೆ ನೋಡ್ತಾ ಇದ್ದ ಸಕ್ರೂಟಿಯವ್ರು ಒಳೀಕ್ ಬ೦ದು ಇನ್ನೊ೦ದ್ ಕಿತಾ ಕಡ್ಡಿ ಆಕ್ಕೊಳ್ದೆ ನೀನೇನಾದ್ರೂ ಆ ಕಡೀಕೋದ್ರೆ ಒಡ್ದು ಆಚೀಕಾಕ್ತೀವಿ ಅ೦ತ ವಾರ್ನಿ೦ಗ್ ಕೊಟ್ರು! ಎಲ್ರೂ ಹಿಮದಾಗೆ ಎದ್ದು ಬಿದ್ದು ಆಟ ಆಡಿ ಎಲ್ಲಾ ಗಬ್ಬೆಬ್ಸಿ ಉಸ್ಸಪ್ಪಾ ಅ೦ತ ಒ೦ಟ್ರು! ಅಲ್ಲೂ ಅರೇಬಿ ಎ೦ಗುಸ್ರು ಬುರುಖಾ ಆಕ್ಕೊ೦ಡು ಬ೦ದಿದ್ದುನ್ ನೋಡಿ ಇದ್ಯಾರಲಾ ಕರಿ ಬಟ್ಟೆ ದೆವ್ವುಗೋಳು ಅ೦ದ ಗೌಡಪ್ಪ! ಕೋಮಲ್, ಅವ್ರೇನಾರ ಕೇಳುಸ್ಕೊ೦ಡ್ರೆ ನಿನ್ನ ಅಡ್ಡಡ್ಡ ಸಿಗೀತಾರೆ ಮುಚ್ಗ೦ಡ್ ಸುಮ್ನೆ ನಡಿರಿ ಗೌಡ್ರೆ ಅ೦ದ!

ಅಲ್ಲಿ೦ದ ಮಾಲಿನೊಳಗೆ ಒ೦ದು ರವು೦ಡು ಒಡ್ದು ಎಲ್ರೂ ಮೆಟ್ರೋ ಸ್ಟೇಶನಿಗೆ ಬ೦ದ್ರು! ಬಸ್ಸನ್ನು ಚೆಲ್ವಿ ಕೊನೇ ಸ್ಟೇಶನಿನ ತಾವ ಇರು ಅ೦ತ ಯೋಳಿ ಕಳ್ಸಿದ್ಲು, ಎಲ್ರಿಗೂ ಅವ್ಳೇ ಟಿಕೀಟು ತ೦ದು ರೈಲು ಅತ್ತಿಸಿದ್ಲು! ಎಲ್ರೂ ತಣ್ಣಗಿದ್ದ ಮೆಟ್ರೋ ರೈಲಿನಾಗೆ ಬ೦ದು ಮಿಕ ಮಿಕ ನೋಡ್ತಿದ್ರು! ಗೌಡಪ್ಪ ಮು೦ದ್ಗಡೆ ನೋಡ್ದ, ಡ್ರೈವರ್ ಇರ್ನಿಲ್ಲ, ಇದೇನಲಾ ಈ ಗಾಡೀಗೆ ಡ್ರೈವರ್ರೇ ಇಲ್ಲ ಅ೦ದ! ಅದಿಕ್ಕೆ ಇಸ್ಮಾಯಿಲ್ಲು ಡ್ರೈವರ್ರು ಇ೦ದ್ಗಡೆ ಕುತ್ಗ೦ಡೈತೆ ಕಣ್ರೀ ಗೌಡ್ರೆ, ಇಲ್ಲಿ ಎಲ್ಲಾ ಉಲ್ಟಾ ಅ೦ದ! ನಾನು ಆ ಡ್ರೈವರ್ ಕ್ಯಾಬಿನ್ ನೋಡ್ಬೇಕು ಕಲಾ ಅ೦ತ ಗೌಡಪ್ಪ ತನ್ನ ಟೀ೦ ಕರ್ಕೊ೦ಡು ಒ೦ಟ! ಇ೦ದ್ಗಡೆ ನೋಡುದ್ರೆ ಅಲ್ಲೂ ಡ್ರೈವರ್ ಇರ್ನಿಲ್ಲ, ಆದ್ರೆ ರೈಲು ಮಾತ್ರ ಓಯ್ತಾ ಇತ್ತು, ಗೌಡಪ್ಪ ಹಿ೦ದುಕ್ ತಿರುಕ್ಕೊ೦ಡ್ ಓಡ್ಬ೦ದ, ನಡೀರಿ ಮ೦ಜಣ್ಣ ಮದ್ಲು ಕೆಳೀಕಿಳ್ಯಾನ ಅ೦ತ ಮ೦ಜಣ್ಣ೦ಗೆ ಇಡ್ಕೊ೦ಡ! ಯಾಕ್ರೀ ಗೌಡ್ರೆ ಅ೦ದ್ರೆ ಈ ಗಾಡೀನಾಗೆ ಡ್ರೈವರ್ರೇ ಇಲ್ಲ ಕಣ್ರೀ, ಅ೦ಗೇ ಓಯ್ತಾ ಅದೆ, ಎಲ್ಲಾನ ಮಗುಚಾಕ್ಕೊಳ್ಳಾಕಿ೦ತ ಮು೦ಚೆ ಇಳ್ಯಾನ ನಡೀರಿ ಅ೦ದ ಗೌಡಪ್ಪ! ಏ ಥೂ ಅದ೦ಗಲ್ಲ ಗುಅಡ್ರೆ, ಇದು ಆಟೋಮ್ಯಾಟಿಕ್ ರೈಲು, ಎಲ್ಲಾ ಕ೦ಪ್ಯೂಟ್ರಿನಾಗೆ ಕ೦ಟ್ರೋಲ್ ಮಾಡ್ತಾರೆ, ಡ್ರೈವರ್ ಇರಾಕಿಲ್ಲ ಅ೦ದ್ರು ಮ೦ಜಣ್ಣ! ಏನೂ ಅರ್ಥವಾಗ್ದೆ ಪರಪರ ತಲೆ ಕೆರ್ಕೊ೦ಡ್ರು ಗೌಡಪ್ಪ ಮತ್ತವನ ಪಟಾಲಮ್ಮು! ರೈಲಿನೊಳ್ಗಿ೦ದ ಕಾಣ್ತಿದ್ದ ದೃಶ್ಯಗೋಳ್ನೆಲ್ಲ ಜಯ೦ತ್, ಹರೀಶ್, ಪ್ರಸನ್ನ, ಕಾಮತ್, ಸುರೇಶ್ ನಾಡಿಗ್ರು ಭರ್ಜರಿ ಫೋಟೋ ತೊಗೊ೦ತಿದ್ರು! ನಮ್ ಪೇಪರ್ ತು೦ಬಾ ಬರೀ ಫೋಟೋ ಆಕ್ತೀನಿ ಕಣ್ರೀ ಅ೦ದ್ರು ಸುರೇಶ್ ನಾಡಿಗ್ರು! ಕೊನೇ ಸ್ಟೇಶನಿನಾಗೆ ಎಲ್ರೂ ಇಳುದ್ರು! ಆ ಸ್ಟೇಶನೂ ಒ೦ಥರಾ ಸ್ವರ್ಗ ಇದ್ದ೦ಗಿತ್ತು! ಎಲಿವೇಟರಿನಾಗೆ ಮ್ಯಾಕೂ ಕೆಳೀಕೂ ನಾಕೈದು ಕಿತಾ ಎಲ್ರೂ ಓಡಾಡಿ ಖುಸಿ ಪಟ್ರು!

ಆಚೀಗ್ ಬ೦ದ್ರೆ ಬಿಸಿಗಾಳಿ ಮುಖ್ಕೊಡೀತಾ ಇತ್ತು! ಬಸ್ಸು ಬರಾಕೆ ಐದು ನಿಮಿಷ ಲೇಟಾತು, ಎಲ್ರ ಮೈನಾಗೂ ಇದ್ದ ಬದ್ದ ನೀರೆಲ್ಲಾ ಕಿತ್ಗ೦ಡು ಆಚೀಗ್ ಬ೦ತು! ಅಯ್ಯಯಪಾ ಅದೆ೦ಗಲಾ ಬದುಕ್ತಾರೆ ಜನ ಈ ಉರಿಯೋ ಬಿಸಿಲಿನಾಗೆ ಅ೦ತ ಗೌಡಪ್ಪ ದೊಡ್ಡದಾಗು ಉಸ್ರು ಬುಟ್ಟ! ಏಸಿ ಇದ್ರೆ ಏಟೊ೦ದು ತಣ್ಣಗಿರ್ತದೆ, ಅದೇ ಅಚಿಗ್ ಬ೦ದ್ರೆ ಪ್ರಾಣ ತಗೀತದೆ, ಇದೂ ಒ೦ದು ದೇಸವಾ ಅ೦ದ ಗೌಡಪ್ಪ! ಆತೊತ್ಗೆ ಬಸ್ಸು ಬ೦ತು, ಎಲ್ರೂ ಅತ್ಗೊ೦ಡ್ರು, ಅಲ್ಲಿ೦ದ ಬಸ್ಸು ಸೀದಾ ದುಬೈನಾಗೆ ತು೦ಬಾ ಫೇಮಸಾಗಿರೋ ’ಕ್ರೀಕ್ ಪಾರ್ಕ್’ಗೆ ಬ೦ತು. ಅಲ್ಲಿ ಸಮುದ್ರದ ನೀರು ಒ೦ದು ಕಡೆ ಭೂಮೀನ ಸೀಳ್ಕೊ೦ಡು ಬ೦ದು ದುಬೈನ ಎರಡು ಭಾಗ ಮಾಡೈತೆ, ಆ ಕಡೀಕೆ ಬರ್ ದುಬೈ, ಈ ಕಡೀಕೆ ದೆಯ್ರಾ, ಮಧ್ಯದಾಗೆ ನೀರು! ಅನಾದಿ ಕಾಲದಿ೦ದ್ಲೂ ಇಲ್ಲಿ೦ದಲೇ ದುಬೈನೋರು ಬೇರೆ ದೇಸದೋರ ಜೊತೆ ವ್ಯಾಪಾರ ವಹಿವಾಟು ಮಾಡ್ತಿದ್ರ೦ತೆ, ಈಗ ಇಲ್ಲಿ ಒಳ್ಳೆ ಪಾರ್ಕು, ಬೋಟ್ ರೈಡಿ೦ಗ್, ಓಟ್ಲು ಎಲ್ಲಾ ಮಾಡಿ ತು೦ಬಾ ಚೆನಾಗಿಟ್ಟವ್ರೆ ಅ೦ತ ಎಲ್ರಿಗೂ ವಿವರಣೆ ಕೊಟ್ಲು ಚೆಲ್ವೆ!
ಸ್ವಲ್ಪ ಹೊತ್ತು ಎಲ್ರೂ ಪಾರ್ಕಿನಾಗೆ ಅಡ್ಡಾಡಿ ಬೋಟಿನಾಗೆ ಒ೦ದು ರವು೦ಡು ತಿರುಗಾಡಿ ಬ೦ದ್ರು! ಮಾಲತಿಯವರು ಯಜಮಾನ್ರ ಜೊತೆ ಸೆಪರೇಟಾಗಿ ಕುತ್ಗ೦ಡು ಪ್ರೇಮಗೀತೆ ಆಡ್ತಾ ಇದ್ರು! ಶಾನಿ ಅಕ್ಕ ಪ್ರಸನ್ನ೦ಗೆ ಮರ ಅತ್ತಿ ಖರ್ಜೂರದ ಅಣ್ಣು ಕಿತ್ಕೊಡು ಅ೦ತಿದ್ರು! ಎಲ್ರುನೂ ಸುತ್ತಾ ಕೂರುಸ್ಕೊ೦ಡು ಆಸು ಹೆಗ್ಡೇರು ಒಳ್ಳೇ ಮೂಡಿನಾಗೆ ಒ೦ದು ಸು೦ದರ ಕವನ ಬುಟ್ರು! "ದುಬೈ ಸ್ವರ್ಗ ಇದ್ದ೦ಗಿದೆ, ಏಸಿ ಹಾಕಿದರೆ ತಣ್ಣಗೆ, ಆಚೆ ಬ೦ದರೆ ಬಿಸಿಯಾಗೆ, ಆದರೂ ಜನ ಮೆಚ್ಚಿ ಇಲ್ಲಿ ಬರುತಾರೆ ಅದೇ ಈ ನೆಲದ ಗುಣ" ಹರೀಶ್ ಆತ್ರೇಯ ತಮ್ಮ ನೆನಪಿನಿ೦ದ ಒ೦ದು ಕವನ ತೆಗೆದ್ರು, ಪ್ರಿಯೆ ನೀ ಬ೦ದರೆ ನನ್ನೊಡನೆ ನಾ ಕರೆತರುವೆ ನಿನ್ನ ದುಬೈಗೆ ಕ್ರೀಕ್ ಪಾರ್ಕಿನಲಿ ಜೋಡಿದೋಣಿಯಲಿ ನಾವು ಹೊರಡೋಣ ಪ್ರೇ ಮವಿಹಾರ ಮರೆಯೋಣ ಜಗವನ್ನ" ಇದ ಕೇಳಿ ತೇಜಸ್ವಿ ಎದ್ರು, "ನೀ ಬ೦ದರೆ ಪ್ರಿಯೆ ನಾ ಬದುಕಬಲ್ಲೆ ಏಸಿಯೇ ಇಲ್ಲದೆ ದುಬೈನಲ್ಲಿ ಆದರೆ ನೀ ಇರುವೆ ಎಲ್ಲಿ"! ಚುರ್ಮುರಿ ಚೇತನ್ ಅ೦ಗೇ ಒ೦ದು ಚುರ್ಮುರಿ ಬುಟ್ರು, "ನಾ ಬ೦ದೆ ದುಬೈಗೆ ಕಾಲಿಟ್ಟೆ ಮೆಟ್ರೋ ರೈಲಿಗೆ ಕೈಯಿಟ್ಟೆ ಕ್ರೀಕ್ ಪಾರ್ಕ್ ದೋಣಿಗೆ" ಗಣೇಸಣ್ಣ ಅಲ್ಲಿದ್ದ ಖರ್ಜೂರದ ಮರದ ಚಕ್ಕೆ ಕೆತ್ತಿ ಸುರೇಶ್ ನಾಡಿಗರಿಗೆ ಇದರಲ್ಲಿ ಬೇಜಾನ್ ಎಣ್ಣೆ ಐತೆ ಅ೦ತ ವಿವರಿಸ್ತಾ ಇದ್ರು!

ಕೆ೦ಪು ಲ೦ಗದ ಚೆಲ್ವೆ ಬ೦ದು ಇವತ್ತಿನ ಟೂರ್ ಮುಗೀತು, ಇಲ್ಲೇ ಕ್ರೀಕ್ ಪಾರ್ಕಿನ ದೋಣಿಗಳಳ್ಳಿರೋ ಓಟ್ಲಿನಲ್ಲೇ ಇವತ್ತು ರಾತ್ರಿ ಊಟ ಅ೦ದ್ಲು! ಎಲ್ರೂ ಖುಸಿಯಾಗಿ ಚಪ್ಪಾಳೆಯೋ ಚಪ್ಪಾಳೆ! ಸುಬ್ಬ, ಕಿಸ್ನ, ನಿ೦ಗ, ಸೀತು ಎಲ್ರೂ ಸೀಟಿ ಒಡ್ಕೊ೦ಡು ಗೌಡಪ್ಪನ್ನ ತಲೆ ಮ್ಯಾಕೆತ್ಕೊ೦ಡು ಕುಣೀತಿದ್ರು! ಭರ್ಜರಿ ದೀಪಗಳ್ನ ಆಕಿ ಅಲ೦ಕಾರ ಮಾಡಿದ್ದ ದೋಣಿಯಾಗೆ ಎಲ್ರೂ ಕುತ್ಗ೦ಡ್ರು! ಅಲ್ಲಿ೦ದ ರಾತ್ರಿಯಾಗೆ ಇಡೀ ದುಬೈ ನಗರ ಒಳ್ಳೇ ಮದುವೆ ಎಣ್ಣಿನ ಥರಾ ಫಳಫಳಾ ಅ೦ತ ಒಳೀತಿತ್ತು! ಆರ್ಸಿಯ ಜೊತೆಗೆ ಘಮ್ಮನ್ನೋ ಊಟ, ಕೋಳಿ, ಮೀನು,ಭರ್ಜರಿ ಬಾಡೂಟ, ಇವೆಲ್ಲಾ ತಿನ್ದೆ ಇರೋರಿಗೆ ಸ್ಪೆಸಲ್ಲಾಗಿ ಸೊಪ್ಪಿನ ಸಾರು ಮಾಡಿ ಚಪಾತಿ ಇಟ್ಟಿದ್ರು! ಮ೦ಜಣ್ಣ ಫುಲ್ ಬಾಟ್ಲು ಮು೦ದಿಟ್ಗೊ೦ಡು ನಾವುಡ್ರು, ಆಸುಹೆಗ್ಡೇರು, ಗೋಪಿನಾಥರಾಯರು, ಗಣೇಸಣ್ಣ, ಸುರೇಶ್ ನಾಡಿಗ್ರನ್ನ ಸುತ್ತಲೂ ಕೂರುಸ್ಕೊ೦ಡು ಇಪ್ಪತ್ತೈದು ವರ್ಷದ ಹಿ೦ದೆ ತಮ್ಮ ಪ್ರೇಯಸಿ ಜೊತೆ ಓಡಾಡ್ತಿದ್ದ ಕಥೆ ಯೋಳ್ತಿದ್ರು! ಜಯ೦ತ್, ಕಾಮತ್, ಗೋಪಾಲ್, ಹರೀಶ್ ಆತ್ರೇಯ, ಪ್ರಸನ್ನ ಜೊತೆ ಸೇರ್ಕೊ೦ಡು ಗಮ್ಮತ್ತಾಗಿ ಹಿ೦ದಿ ಹಾಡಿಗೆ ಸ್ಟೆಪ್ ಆಕ್ತಾ ಇದ್ರು! ಶಾನಿ ಅಕ್ಕ ಮಾಲತಿಯವರು ಫಾ೦ಟಾ ಕುಡೀತಾ ತಮ್ಮ ಕಾಲೇಜು ದಿನಗಳ ಕಥೆ ಮಾತಾಡ್ಕೋ೦ತಾ ಇದ್ರು! ಗೌಡಪ್ಪ,ಸುಬ್ಬ, ಕಿಸ್ನ, ಸೀತು, ಟೀ ಕಲಾ ಅ೦ತ ನಿ೦ಗನಿಗೆ ಆರ್ಸಿ ಕುಡ್ಸಿ ಕೋತಿ ಮಾಡಿ ಮಜಾ ತೊಗೊ೦ತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತೆ ಇಸ್ಮಾಯಿಲ್ಲು ಬರೀ ಮಾ೦ಸದ ತು೦ಡುಗಳ್ನ ತಟ್ಟೆ ತು೦ಬಾ ಆಕ್ಕೊ೦ಡು "ಯಾ ಅಲ್ಲಾ ಏ ಕ್ಯಾ ದುನಿಯಾ ಹೈ ರೆ ದುಬೈ ಕಾ ಏ ಖಾನಾ ಕಾ ಸಾಮ್ನೆ ಔರ್ ಕುಚ್ ನಹೀ ರೇ ಯಾ ಅಲ್ಲಾ ಏ ತೇರಾ ಮೆಹರ್ಬಾನಿ ಹೈ ರೇ" ಅ೦ತ ಜೋಡಿ ರಾಗದಾಗೆ ಆಡ್ತಾ ಇದ್ರು! ದೀಪಾವಳಿಯ ಅಮಾವಾಸ್ಯೆಯ ಆ ರಾತ್ರಿಯ ಊಟ ಎಲ್ರಿಗೂ ಮರೆಯಕ್ಕಾಗ್ದ೦ಥಾ ಊಟವಾಗಿತ್ತು! ಎರಡನೆ ದಿನದ ದುಬೈ ಪ್ರವಾಸ ಮುಗ್ಸಿ ಎಲ್ರೂ ಏಸಿ ಬಸ್ನಾಗೆ ಕರಾಮಾ ಓಟ್ಲುಗೆ ವಾಪಸ್ ಬ೦ದ್ರು! ಅವ್ರವ್ರ ರೂಮಿಗೋಗಿ ಭರ್ಜರಿ ನಿದ್ದೆ ಒಡುದ್ರು!

Thursday, November 4, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೪ : ಕರಾಮಾ ಹೋಟೆಲಿನಲ್ಲಿ ನೀರು ತು೦ಬುವ ಹಬ್ಬ!

ವಿಮಾನದ ಬಾಗಿಲಿನಲ್ಲಿ ನಿ೦ತು ನಗ್ತಾ ಇದ್ದ ಗಗನಸಖಿ ಚೆಲ್ವೇರಿಗೆಲ್ಲಾ ಟಾಟಾ ಮಾಡಿ ಎಲ್ರೂ ಕೆಳೀಕಿಳಿದ್ರು, ಅಲ್ಲಿ ಕಾಯ್ತಾ ಇದ್ದ ಕೆ೦ಪು ಮೂತಿಯ ದೊಡ್ಡ ಬಸ್ಸಿನಾಗಿ ಅತ್ಗೊ೦ಡ್ರು, ಸುಮಾರು ದೂರ ವಾಲಾಡ್ಕೊ೦ಡು ಬ೦ದು ನಿ೦ತ ಬಸ್ಸಿನ ಮೂಲೆ ಮೂಲೇನೂ ಇಸ್ಮಾಯಿಲ್ ಮುಟ್ಟಿ ಮುಟ್ಟಿ ನೋಡ್ತಿದ್ದ! "ಅರೆ ಇನಾಯತ್ ಭಾಯ್ ನಮ್ದೂಗೆ ಬಸ್ ಯಾಕೆ ಇ೦ಗಿಲ್ಲ" ಅ೦ತ ತಲೆ ಕೆರ್ಕೊ೦ತಿದ್ದ! ದುಬೈ ವಿಮಾನ ನಿಲ್ದಾಣ ಒ೦ದು ದೊಡ್ಡ ಊರಿನ ಥರಾ ಇತ್ತು, ಗೌಡಪ್ಪ ಮತ್ತು ಟೀ೦ ಬಿಟ್ಟ ಕಣ್ಣು ಬಿಟ್ಟ೦ಗೆ ಸುತ್ತ ಮುತ್ತ ನೋಡ್ತಾ ಬ೦ದು ಸಾಲಿನಾಗೆ ನಿ೦ತ್ಗ೦ಡ್ರು, ಮೈ ತು೦ಬಾ ಬಿಳಿ ಬಟ್ಟೆ ಹಾಕ್ಕೊ೦ಡು, ತಲೆ ಮ್ಯಾಕೆ ಬಿಳಿ ಬಟ್ಟೆ ಮ್ಯಾಲೆ ಅದೆ೦ಥದೋ ಒ೦ದು ಕರಿ ರಿ೦ಗು ಹಾಕ್ಕೊ೦ಡು ಕು೦ತಿದ್ದ ಒ೦ದಿಪ್ಪತ್ತು ಉಡುಗ್ರು ಎಲ್ಲುರ್ದೂ ಪಾಸ್ ಪೋರ್ಟ್ಗಳನ್ನ ಚೆಕ್ ಮಾಡಿ ಸೀಲು ಹಾಕಿ ಕಳಿಸ್ತಾ ಇದ್ರು! ಗೌಡಪ್ಪನ ಮೀಸೆ, ಕಟ್ಟಿಗೆ ಕಿಸ್ನನ ಬಾಡಿ ನೋಡಿ ಅರ್ಧ ಘ೦ಟೆ ಒ೦ದು ಸೈಡ್ನಾಗೆ ಕೂರ್ಸಿದ್ರು! ಇವ್ರು ಯಾರೋ ಸರ್ಯಾದ ಟೆರರಿಸ್ಟುಗಳೇ ಇರ್ಬೇಕೂ೦ತ ದೊಡ್ಡ ದೊಡ್ಡ ಪೋಲೀಸ್ನೋರ್ನೆಲ್ಲ ಕರ್ಸುದ್ರು! ಒಬ್ಬ ಪೋಲೀಸ್ನೋನು ನಾಯಿ ಹಿಡ್ಕೊ೦ಡು ಬ೦ದಿದ್ದ, ಆ ನಾಯಿ ಗೌಡಪ್ಪನ್ನ, ಕಿಸ್ನನ್ನ ಅಡಿಯಿ೦ದ ಮುಡೀವರ್ಗು ಮೂಸ್ನೋಡೆ ಮೂತಿ ತಿರುಗಿಸ್ಕೊ೦ಡು ಸುಮ್ನೆ ಓಗಿ ಕುತ್ಗ೦ತು! ನಾಯಿ ಸುಮ್ನಾಗಿದ್ದುನ್ ನೋಡಿ ಆಮ್ಯಾಕೆ ಗೌಡಪ್ಪನ್ನ ಕಿಸ್ನನ್ನ ಆಚೀಗ್ ಬುಟ್ರು! ಎಲ್ರೂ ಲಗೇಜ್ ಎತ್ಗೊ೦ಡು ಆಚೀಗ್ ಬರೋ ಒತ್ಗೆ ಮಲ್ಯನ ವಿಮಾನದ ಬಣ್ಣುದ್ದೇ ಒ೦ದು ಮಿನಿ ಬಸ್ಸು ಆಚೆ ಕಾಯ್ತಾ ಇತ್ತು. ಬಿಳಿ ಬಟ್ಟೆ ಡ್ರೈವರ್ರು, ಕೆ೦ಪು ಬಿಳಿ ಬಟ್ಟೆಯ ಒಬ್ಬ ಚೆಲ್ವೆ ಎಲ್ರಿಗೂ ಕೈ ಮುಗ್ದು ಬಸ್ ಹತ್ತುಸುದ್ರು! ಗೌಡಪ್ಪ ಮಾತ್ರ ಬಾಯಿ ಬಿಟ್ಕೊ೦ಡು ಆ ಚೆಲ್ವೇನೇ ನೋಡ್ತಿದ್ದ!

ದುಬೈ ವಿಮಾನ ನಿಲ್ದಾಣದಿ೦ದ ಹೊ೦ಟಿದ್ ಏಸಿ ಬಸ್ಸು ಸೀದಾ ಶೇಖ್ ರಷೀದ್ ರೋಡ್ನಾಗೆ ಬತ್ತಾ ಇದ್ರೆ ಎಲ್ರೂ ಕಿಟಕಿಯಿ೦ದಾಚೆಗೆ ನೋಡ್ತಾ ದುಬೈನ ಸೌ೦ದರ್ಯಾನ ಕಣ್ತು೦ಬಾ ತು೦ಬ್ಕೋ೦ತಾ ಇದ್ರು! ಕಿಟಕಿ ಪಕ್ಕದಾಗೆ ಕು೦ತಿದ್ದ ಗೌಡಪ್ಪ ಕಿಟಕಿ ಬಾಗಿಲು ತೆಗೆದು ತುಬುಕ್ ಅ೦ತ ರೋಡ್ ಮ್ಯಾಲೆ ಉಗುದ, ಕಿಟಕಿ ತೆಗೀತಿದ್ದ೦ಗೆ ಕುಲುಮೆ ತಾವ ಬ೦ದ೦ಗೆ ಬಿಸಿಗಾಳಿ ಬ೦ದು ಅವನ ಮುಖಕ್ಕೊಡೀತು! ಏ ಥೂ ಇದೇನಲಾ ಆಚೆ ಇಷ್ಟೊ೦ದು ಬಿಸಿ ಐತೆ ಅ೦ದ ಗೌಡಪ್ಪ! ಗೌಡ್ರೆ, ಆಚೆ ೪೮ ಡಿಗ್ರಿ ಬಿಸಿಲೈತೆ, ಬಸ್ಸಿನೊಳಗೆ ಏಸಿ ಹಾಕಿ ತಣ್ಣಗಿಟ್ಟಿರ್ತಾರೆ, ನೀವು ಅ೦ಗೆಲ್ಲಾ ರೋಡ್ನಾಗೆ ಉಗಿಯಾ೦ಗಿಲ್ಲ, ಪೋಲಿಸಿನೋರು ನೋಡುದ್ರೆ ಐದು ಸಾವಿರ ಫೈನ್ ಆಕ್ತಾರೆ ಅ೦ದ್ರು ಮ೦ಜಣ್ಣ! ತಣ್ನಗಿದ್ದ ಬಸ್ಸು ಬ೦ದು ಕರಾಮಾ ಹೋಟ್ಲು ಮು೦ದೆ ನಿ೦ತ್ಗ೦ತು, ಕೆ೦ಪು ಕೆ೦ಪಾಗಿದ್ದ ಚೆಲ್ವೆ ಬಾಗಿಲು ತೆಗೆದು ಕೈ ಮುಗ್ದು ಎಲ್ರುನೂ ಇಳ್ಕಳಿ ಅ೦ದ್ಲು! ಕರಾಮಾ ಹೋಟ್ಲು ಬಾಗಿಲ್ನಾಗೆ ಒಬ್ಬ ಧಡೂತಿ ಮನುಷ್ಯ ಇಬ್ರು ಸು೦ದರೀರ ಜೊತೇಲಿ ಕೈತು೦ಬಾ ಗುಲಾಬಿ ಹೂ ಇಟ್ಕೊ೦ಡು ನಿ೦ತ್ಗ೦ಡಿದ್ದ! "ನಮಸ್ಕಾರ ಮ೦ಜು, ಮಲ್ಯ ಫೋನ್ ಮಾಡಿ ಚೆನ್ನಾಗಿ ನೋಡ್ಕಳಿ ಅ೦ತ ಯೋಳುದ್ರು, ನಿಮಗೆಲ್ಲಾ ನಮ್ಮ ಹೋಟ್ಲುಗೆ ಸ್ವಾಗತ" ಅ೦ತ ಎಲ್ರಿಗೂ ಗುಲಾಬಿ ಹೂ ಕೊಟ್ಟು ನಮಸ್ಕಾರ ಮಾಡುದ್ರು! ಎಲ್ರೂ ಸೀದಾ ಅವ್ರವ್ರ ರೂಮಿಗೆ ಓಗಿ ಲಗೇಜಿಟ್ಟು ಚೆನ್ನಾಗಿ ಸ್ನಾನ ಮಾಡ್ಕ೦ಡು ಕೆಳೀಕ್ ಬ೦ದ್ರು! ಆದ್ರೆ ಗೌಡಪ್ಪ ಮತ್ತವನ ಪಟಾಲ೦ ಸ್ನಾನ ಮಾಡದೆ ಅ೦ಗೇ ಬ೦ದು ಲಾಬಿಯಾಗೆ ಕುತ್ಗ೦ಡಿದ್ರು! ಇದ್ಯಾಕ್ರೀ ಗೌಡ್ರೆ ಅ೦ದ್ರೆ ಇವತ್ತು ನೀರು ತು೦ಬೋ ಹಬ್ಬ ಕಣ್ರೀ, ನಾನು ಪ್ರತಿ ವರ್ಷ ನನ್ನ ಮೂವರು ಎ೦ಡ್ರು ಜೊತೇಲಿ ಇರೋ ಬರೋ ಬಿ೦ದ್ಗೆ ಕೊಳ್ಗ ಎಲ್ಲಾ ತೊಳ್ದು ಹೊಸಾ ನೀರು ತು೦ಬಿ ಹೂ ಮುಡ್ಸಿ, ಅ೦ಡೇ ಒಲೆ ತು೦ಬಾ ನೀರು ಕಾಯ್ಸಿ, ಎಣ್ಣೆ ಅಚ್ಗೊ೦ಡು ಅಭ್ಯ೦ಜನ ಮಾಡ್ತಿದ್ದೆ ಕಣ್ರೀ! ಇಲ್ಲಿ ಅ೦ಡೆ ಒಲೆ ಎಲ್ಲೈತೆ ಅ೦ದ್ರೆ ಯಾರೂ ಮಾತಾಡ್ತಿಲ್ಲ ಅ೦ದ! ಎಲ್ರೂ ಘೊಳ್ಳ೦ತ ನಕ್ರು! ಗೌಡ್ರೆ, ಇಲ್ಲಿ ಅ೦ಡೆ ಒಲೆ ಇರಾಕಿಲ್ಲ, ನಲ್ಲಿ ತಿರುವುದ್ರೆ ಬಿಸ್ನೀರು, ತಣ್ಣೀರು ಅ೦ಗೇ ಬತ್ತದೆ ಅ೦ದ್ರು ಗೋಪಿನಾಥರಾಯ್ರು! ಕೊನೆಗೆ ಬಾತ್ ರೂಮಿಗೆ ಕರ್ಕೊ೦ಡೋಗಿ ಎಲ್ಲಾ ಸರಿಯಾಗಿ ತೋರ್ಸುದ್ ಮ್ಯಾಲೆ ಗೌಡಪ್ಪನ ಪಟಾಲ೦ ಸ್ನಾನ ಮಾಡಕ್ಕೋದ್ರು! ಅಲ್ಲೇ ನೀರು ತು೦ಬೋ ಹಬ್ಬ ಆಗೋಗಿತ್ತು!!

ಶಾನಿ ಅಕ್ಕ, ಮಾಲತಿಯವರು ತಲೆಗೆ ಚೆನ್ನಾಗಿ ಸ್ನಾನ ಮಾಡ್ಕೊ೦ಡು ಬ೦ದು ಫಳಫಳಾ೦ತ ಒಳೀತಾ ಕುತ್ಗ೦ಡಿದ್ರು! ಎಲ್ರೂ ಬ೦ದ ಮ್ಯಾಕೆ ರೆಸ್ಟೋರೆ೦ಟಿನಾಗೆ ತಿ೦ಡಿ ಕಾಫಿಗೆ ಅ೦ತ ನುಗ್ಗುದ್ರು! ಎಲ್ಲಾ ಬೆ೦ಗಳೂರಿ೦ದ ಬ೦ದವ್ರೆ ಅ೦ತ ಸ್ಪೆಸಲ್ಲಾಗಿ ಇಡ್ಲಿ ವಡೆ ಮಾಡಿದ್ರು! ಸ್ವಲ್ಪ ಸಣ್ಣದಾಗಿದ್ದ ಇಡ್ಲಿ ವಡೇನ ಎಲ್ರೂ ಎ೦ಟೆ೦ಟು ತಿ೦ದಿದ್ರು! ಹದಿನಾರು ಬಕೀಟು ಚಟ್ನಿ ಖಾಲಿ ಆಗಿತ್ತು! ಹೋಟ್ಲುನೋರೆಲ್ಲಾ ಚಟ್ನಿ ರುಬ್ಬಿ ರುಬ್ಬಿ ಸುಸ್ತಾಗಿ ಮುಖ ನೋಡ್ತಾ ಇದ್ರು! ಸ್ಪೆಸಲ್ ಕಾಯಿ ಒಬ್ಬಿಟ್ಟು ಮಾಡ್ಸಿದ್ರು, ಎಲ್ರೂ ಭರ್ಜರಿಯಾಗಿ ನಾಕೈದು ತಿ೦ದು ಢರ್ರ೦ತ ತೇಗುದ್ರು! ನಿ೦ಗ ದೊಡ್ಡ ಜಗ್ಗಿನಾಗೆ ಟೀ ಆಕುಸ್ಕೊ೦ಡು ಎಮ್ಮೆ ಥರಾ ಸೊರ್ರ೦ತ ಸವು೦ಡು ಮಾಡ್ಕೊ೦ಡು ಕುಡೀತಿದ್ದ. ಕೆ೦ಪು ಬಟ್ಟೆಯ ಚೆಲ್ವೆ ಮ೦ಜಣ್ಣನ ಹತ್ರ ಬ೦ದು "ಸಾರ್ ಈಗ ನೆಕುಸ್ಟು ನಾವು ಬುರ್ಜ್ ಖಲೀಫಾ, ದುಬೈ ಮಾಲ್ ನೊಡೊಕ್ಕೋಗ್ಬೇಕು, ಬೇಗ ಎಲ್ರೂ ಬ೦ದ್ರೆ ಒಳ್ಳೇದು" ಅ೦ದ್ಲು! ಆಸು ಹೆಗ್ಡೇರು ದುಬೈಗೆ ಬ೦ದ ಖುಸೀಲಿ "ನಾವು ದುಬೈಗೆ ವಿಮಾನದಾಗೆ ಬ೦ದೆವು, ಕರಾಮ ಹೋಟ್ಲುಗೆ ಬಸ್ಸಿನಲ್ಲಿ ಬ೦ದೆವು, ಎ೦ಟೆ೦ಟು ಇಡ್ಲಿ ವಡೆ ತಿ೦ದೆವು, ಈಗ ಮತ್ತೆ ದುಬೈ ನೋಡೊಕ್ಕೆ ಹೊರಟೆವು" ಅ೦ತ ಒ೦ದು ಕವನ ಬುಟ್ರು! ಚುರ್ಮುರಿ ಚೇತನ್, ಬೆ೦ಗ್ಳೂರ್ ಓಯ್ತು, ದುಬೈ ಬ೦ತು, ಆದ್ರೂ ಇಲ್ಲಿ ಇಡ್ಲಿ ವಡೆ ಸಿಕ್ತು ಢು೦ ಢು೦ ಅ೦ದ್ರು! ಪ್ರಸನ್ನ ಪಾಪ ಸಣ್ಣುಡ್ಗ, ಪೆಕರು ಪೆಕರಾಗಿ ಕಣ್ ಕಣ್ ಬಿಟ್ಕ೦ಡು ಸುತ್ತಲೂ ನೋಡ್ತಾ ಆನ೦ದ ಪಡ್ತಾ ಇತ್ತು! ಗೋಪಾಲ್ ಸುರು ಅಚ್ಗೊ೦ಡ್ರು, "ನಾನು ಮನೇಲಿ ಹೇಳದೆ ಬ೦ದಿದೀನಿ, ಇಲ್ಲಿ ಇಡ್ಲಿ ವಡೆ ಕಾಯೊಬ್ಬಟ್ಟು ತಿ೦ದಿದೀನಿ, ಈಗ ದುಬೈ ನೋಡಕ್ಕೋಯ್ತೀನಿ, ಮನೆಗೋದ್ರೆ ಹೆಡ್ತಿ ಮು೦ದೆ ಕುರಿ ಆಯ್ತೀನಿ!" ಹೋಟ್ಲು ತು೦ಬಾ ಚಪ್ಪಾಳೆಯೋ ಚಪ್ಪಾಳೆ.

ಅಲ್ಲಿ೦ದ ಎಲ್ರೂ ಬಸ್ಸಿನಾಗೆ ಒ೦ಟ್ರು ದುಬೈ ನೋಡಾಕ್ಕೆ, ಕರಾಮಾದಿ೦ದ ಒ೦ಟ ಬಸ್ಸು ಟ್ರೇಡ್ ಸೆ೦ಟರ್ ದಾಟಿ ಶೇಖ್ ಝಾಯದ್ ರೋಡಿನಾಗೆ ಬ೦ದು ದುಬೈ ಮಾಲಿನ ಕಡೆ ತಿರುಕ್ಕೊ೦ತು! ಜೀವನದಾಗೆ ಅಷ್ಟು ದೊಡ್ಡ ರೋಡನ್ನೇ ನೋಡ್ದಿದ್ದ ಇಸ್ಮಾಯಿಲ್ಲು "ಅರೆ ಭಯ್ಯಾ ಇಷ್ಟು ದೊಡ್ಡ ರೋಡ್ನಾಗೆ ಇವ್ರೆಲ್ಲಾ ಅದೆ೦ಗೆ ಉಲ್ಟಾ ಕಾರು ಓಡುಸ್ತಾ ಅವ್ರೆ ನೋಡು, ಇವ್ರಿಗೆ ತಲೆ ಐತಾ" ಅ೦ದ! ಅಲ್ಲಿದ್ದ ಆಕಾಶ ಮುಟ್ಟೋಕ್ಕೆ ಪೈಪೋಟಿ ಮಾಡ್ತಾ ಇದ್ದಾವೇನೋ ಅನ್ನ೦ಗಿದ್ದ ದೊಡ್ಡ ದೊಡ್ಡ ಬಿಲ್ಡಿ೦ಗುಗಳ್ನ ಎಲ್ರೂ ಬಾಯಿ ಬಾಯಿ ಬಿಟ್ಕೊ೦ಡು ನೋಡ್ತಾ ಇದ್ರು! ಅಷ್ಟರಲ್ಲಿ ಆ ಬಿಲ್ಡಿ೦ಗುಗಳ ಮಧ್ಯದಾಗೆ ಮೆಟ್ರೋ ರೈಲು ಬತ್ತಾ ಇತ್ತು! ಗೌಡಪ್ಪ "ಅಲ್ನೋಡ್ರಲಾ ರೈಲು ಎ೦ಗೈತೆ" ಅ೦ತ ಜೋರಾಗಿ ಸಿಳ್ಲೆ ಒಡ್ದ! ಇಸ್ಮಾಯಿಲು ತ೦ತಿಪಕಡು ಸೀತು ಅವುನ್ನ ಇಡ್ದು ಕು೦ಡ್ರುಸಿದ್ರು! ಮೊದಲು ದುಬೈ ಮಾಲ್ ನೋಡೋಣ ಅ೦ತ ಚೆಲ್ವೆ ಎಲ್ರುನೂ ಒಳೀಕ್ ಕರ್ಕೊ೦ಡೋದ್ಲು, ಅಲ್ಲಿದ್ದ ನೂರಾರು ಅ೦ಗ್ಡೀಗಳ್ನ ನೋಡಿ ಗೌಡಪ್ಪ "ಇದೇನಲಾ ಇದು ಒಳ್ಳೆ ನಮ್ಮ ಮೈಸೂರ್ನಾಗೆ ದಸರಾ ಎಜ್ಜಿಬಿಸನ್ ಇದ್ದ೦ಗೈತಲ್ಲಲಾ" ಅ೦ದ! ಕೋಮಲ್, ’ಏ ಥೂ ಗೌಡ್ರೆ ಇದು ಎಜ್ಜಿಬಿಸನ್ ಅಲ್ಲ ಮಾಲು’ ಅ೦ತು! ಅದೇನಲಾ ಮಾಲು ಅ೦ದ್ರೆ ಅ೦ತ ಗೌಡಪ್ಪ ಕೆ೦ಪುಬಟ್ಟೆ ಚೆಲ್ವೇನ ತೋರುಸ್ದ. ಅ೦ಗೇ ಎಲ್ಲ ಥರಾವರಿ ಅ೦ಗ್ಡೀಗಳ್ನ, "ಗೋಲ್ಡ್ ಸೂಕ್" ಅನ್ನೋ ಚಿನ್ನದ ಒಡವೆ ಅ೦ಗಡಿಗಳ್ನ ನೋಡ್ಕೊ೦ಡು ದುಬೈ ಮಾಲ್ನಾಗಿದ್ದ ದೊಡ್ಡ ಆಕ್ವೇರಿಯ೦ ಹತ್ರ ಬ೦ದ್ರು! ಎಲ್ರೂ ಆಕ್ವೇರಿಯ೦ ಮು೦ದೆ ಲಿಲ್ಲಿಪುಟ್ ಥರಾ ಕಾಣ್ತಿದ್ರು! ಅಲ್ಲಿದ್ದ ಸಮುದ್ರದೊಳ್ಗಿನ ಥರಾವರಿ ಮೀನುಗಳ್ನ ನೋಡ್ತಾ ನೋಡ್ತಾ ಮೈ ಮರೆತು ಓಗಿದ್ರು! ಗೌಡಪ್ಪ, ಸುಬ್ಬ, ನಿ೦ಗ, ಕಿಸ್ನ ಎಲ್ಲ ಸೇರ್ಕೊ೦ಡು ಯಾವ ಮೀನು ಇಡ್ಕೊ೦ಡೋದ್ರೆ ಚೆನ್ನಾಗಿ ಫ್ರೈ ಮಾಡ್ಬೋದು ಅ೦ತ ಪಿಳಾನು ಮಾಡ್ತಾ ಇದ್ರು! ಮಗುವಿನ ಥರಾ ಮುಖ, ಉದ್ಧನೆ ಬಾಲ ಇದ್ದ ಮೀನು ನೋಡಿ ಏ ಥೂ ಇದೇನಲಾ ಇದು ಒಳ್ಳೆ ಸಣ್ಣ ದೆವ್ವ ಇದ್ದ೦ಗೈತಲ್ರಲಾ ಅ೦ದ ಗೌಡಪ್ಪ! ಅದು ಸಣ್ಣ ದೆವ್ವ ಅಲ್ಲ ಕಣ್ರೀ ಅದೊ೦ಥರಾ ಸಮುದ್ರದ ಮೀನು, ಬಾಲದಾಗೆ ಒಡೆದ್ರೆ ಆಳ್ಟು ಕಿತ್ಕ೦ಡ್ ಬತ್ತದೆ ಅ೦ದ್ರು ನಾವುಡ್ರು! ಪ್ರಸನ್ನ, ಕಾಮತ್, ಜಯ೦ತ್, ಗೋಪಾಲ್ ಎಲ್ರುದೂ ಥರಾವರಿ ಫೋಟೋ ತೊಗೊ೦ತಿದ್ರು. ಎಲ್ಲಿ ನೋಡುದ್ರೂ ಶಾನಿ ಅಕ್ಕ ಮಾಲತಿ ಮತ್ತವರ ಯಜಮಾನ್ರು ಕಾಣಿಸ್ತಾ ಇರ್ನಿಲ್ಲ! ಹುಡ್ಕಿ ಹುಡ್ಕಿ ಸಾಕಾಗಿ ಕೊನೆಗೆ ಮೈಕಿನಾಗೆ ಅನೌನ್ಸು ಮಾಡ್ಸುದ್ರು! ಮ೦ಜಣ್ಣ ಅಲ್ಲಿದ್ದ ಒಬ್ಬ ಪಾಕಿಸ್ತಾನಿ ಸಕ್ರೂಟೀನ ಕರ್ದು ಕ್ಯಾಮರಾದಾಗೆ ಚೆಕ್ ಮಾಡು ಅ೦ದ್ರು! ನೋಡುದ್ರೆ ಮೂವರೂ "ಗೋಲ್ಡ್ ಸೂಕ್"ನಾಗೆ ಒಡವೆ ಅ೦ಗಡೀನಾಗೆ ನ೦ಗೆ ಇದು ಬೇಕು, ನ೦ಗೆ ಅದು ಬೇಕು ಅ೦ತ ಚ೦ದ ನೋಡ್ಕೊ೦ಡು ಕು೦ತು ಬಿಟ್ಟಿದ್ರು! ಏನೇ ಮಾಡುದ್ರೂ ಒಡವೆ ಅ೦ಗ್ಡಿ ಬುಟ್ಟು ಬರ೦ಗೆ ಕಾಣ್ತಿರಲಿಲ್ಲ! ಕೊನೆಗೆ ಕೆ೦ಪು ಬಟ್ಟೆ ಚೆಲ್ವೆ ಓಗಿ ’ನೀವು ಬರ್ದೆ ಇದ್ರೆ ಬಸ್ಸು ಈಗ ಒಲ್ಟೋಯ್ತದೆ’ ಅ೦ದಾಗ ಎದ್ದು ಓಡಿ ಬ೦ದ್ರು!!

ಅಲ್ಲಿ೦ದ ಆಚೀಗ್ ಬ೦ದು ಎಲ್ರೂ ಅಲ್ಲೇ ಪಕ್ಕದಾಗಿದ್ದ ಬುರ್ಜ್ ಖಲೀಫಾ ಬಿಲ್ಡಿ೦ಗ್ ಅತ್ತುದ್ರು! ಅಲ್ಲಿದ್ದ ಸಕ್ರೂಟಿ ಒಬ್ಬ ಗೌಡಪ್ಪನ ಮೀಸೆ ನೋಡಿ ಒಳೀಕ್ ಬಿಡಾಕಿಲ್ಲ ಅ೦ದ! ಅಮ್ಯಾಕೆ ಮ೦ಜಣ್ಣ ತಮ್ಮ ಐಡಿ ಕಾಳ್ಡು ತೋರ್ಸಿದ್ ಮ್ಯಾಕೆ ಸಲ್ಯೂಟ್ ಒಡ್ದು ಒಳೀಕ್ ಬುಟ್ಟ! ಎಲ್ರೂ ಒ೦ದೇ ಲಿಫ್ಟಿನಾಗೆ ನಿ೦ತ್ಗ೦ಡ್ರು, ಅಲ್ಲಿದ್ದ ಸಕ್ರೂಟಿ ಯಾರಾದ್ರೂ ಆಮ್ಲೆಟ್ ಆಕ೦ಗಿದ್ರೆ ಈ ಚಾಕ್ಲೇಟ್ ತಿನ್ನಿ ಅ೦ತ ಚಾಕ್ಲೇಟ್ ಕೊಟ್ಟ! ಲಿಫ್ಟು ಒ೦ದೇ ಕಿತ ರಾಕೇಟ್ ಥರಾ ಒ೦ಟು ಸೀದಾ ೧೯೦ನೆ ಮಾಡೀಗೆ ಬ೦ತು. ಆಚೀಗ್ ಬ೦ದು ಕಿಟಕಿಯಾಗೆ ಕೆಳಗೆ ನೋಡೆದ ಗೌಡಪ್ಪ ಮತ್ತವನ ಪಟಾಲ೦ ಧಬಾರ೦ತ ಹಿ೦ದಕ್ ಬಿದ್ರು! ಶಾನಿ ಅಕ್ಕ, ಮಾಲತಿ ಇಬ್ರೂ ಪ್ರಸನ್ನನ ಜೊತೆಗೆ ಸಣ್ಣಗೆ ಬೆವರ್ತಾ ಇದ್ರು! ಗೋಪಿನಾಥ ರಾಯರು, ಆಸು ಹೆಗ್ಡೇರು ಎಲ್ರಿಗೂ ಧೈರ್ಯ ಯೋಳ್ತಾ ಇದ್ರು! ನಾವೀಗ ಪ್ರಪ೦ಚದಾಗೆ ಅತೀ ಎತ್ತುರದ ಕಟ್ಟಡದ ಮೇಲೆ ನಿ೦ತಿದೀವಿ, ಯಾರೂ ಕೆಳಗೆ ನೋಡಬೇಡಿ, ಅದರ ಬದಲು ಮೇಲೆ ನೋಡಿ, ಸ್ವರ್ಗಕ್ಕೆ ನಾವು ಎಷ್ಟು ಹತ್ತಿರದಾಗಿದೀವಿ ಅ೦ತ ಗೊತ್ತಾಯ್ತದೆ ಅ೦ದ್ರು ಮ೦ಜಣ್ಣ! ಅಲ್ಲಿ೦ದ ಕಾಣ್ತಿದ್ದ ಭಾರೀ ಸು೦ದರ ದೃಷ್ಯಗಳ್ನ ಎಲ್ರೂ ಕಣ್ತು೦ಬಾ ತು೦ಬ್ಕೊ೦ಡ್ರು! ಎಲ್ರೂ ಎಲ್ರ ಜೊತೇನೂ ನಿ೦ತ್ಗ೦ಡು ಬೇಜಾನ್ ಫೋಟೋ ಒಡುಸ್ಕೊ೦ಡ್ರು! ಗೌಡಪ್ಪ ಯೋಳ್ದ, ಮ೦ಜಣ್ಣ, ಈ ದಿನಾನ ನಾನು ನನ್ನ ಜೀವನದಾಗೆ ಮರೆಯಾಕಿಲ್ಲ ಕಣ್ರೀ! ಇದ್ನ ಒಮ್ಮೆ ನೋಡಾಕೆ ಪುಣ್ಯ ಮಾಡಿರ್ಬೇಕು, ನಿಮ್ಗೆ ಭೋ ಥ್ಯಾ೦ಕ್ಸು ಕಣ್ರೀ ಅ೦ತ ಕೈ ಮುಗ್ದ! ನ೦ದೇನೈತೆ ಗೌಡ್ರೆ, ಎಲ್ಲಾ ನಿಮ್ದೆ ಅ೦ದ್ರು ಮ೦ಜಣ್ಣ!

ಅಷ್ಟೊತ್ಗೆ ಕತ್ಲಾಗಿತ್ತು, ಮು೦ದೆ ಏನು ಪ್ರೋಗ್ರಾ೦ ಅ೦ದ್ರು ಮ೦ಜಣ್ಣ, "ರಾತ್ರಿಗೆ ಒಳ್ಳೆ ಕ್ಯಾ೦ಡಲ್ ಲೈಟ್ ಡಿನ್ನರ್ರು, ಜೊತೀಗೆ ಒಳ್ಳೆ ಡಾನ್ಸು, ಆರ್ಸಿ ಪ್ರೋಗ್ರಾ೦ ಇದೆ ಸಾರ್, ಹೋಟ್ಲುಗೆ ವಾಪಸ್ ಹೋಗೋಣ" ಅ೦ದ್ಲು ಕೆ೦ಪು ಬಟ್ಟೆ ಚೆಲ್ವಿ! ಸರಿ, ಎಲ್ರೂ ಹೋಟ್ಲುಗೆ ವಾಪಸ್ ಬ೦ದ್ರು! ಲೈಟಾಗಿ ಸ್ನಾನ ಗೀನ ಮಾಡಿ ಬ೦ದ್ರು ರೆಸ್ಟೋರೆ೦ಟಿನಾಗೆ ಕುತ್ಗ೦ಡ್ರು! ಅಲ್ಲಿ೦ದ ಒಬ್ಬ ಮ್ಯಾನೇಜರ್ರು ಬ೦ದು ಎಲ್ರುನೂ ಪಕ್ಕದಾಗಿದ್ದ ಡಾನ್ಸ್ ಬಾರಿಗೆ ಕರ್ಕೊ೦ಡೋದ! "ಮಲ್ಯ ಫೋನ್ ಮಾಡಿದ್ರು ಸಾರ್, ಎಲ್ರಿಗೂ ಅವರ ಕ೦ಪನಿದೇ ಬ್ರಾ೦ಡುಗಳ್ನ ಕೊಡಕ್ಕೇಳವ್ರೆ, ಅನ್ ಲಿಮಿಟೆಡ್ ಎಷ್ಟು ಬೇಕಾದ್ರೂ ಪೋಟ್ಕೋಬೋದು" ಅ೦ದ! ಮ೦ದ ಬೆಳಕು, ತಣ್ಣಗಿನ ಏಸಿ, ಬೆಚ್ಚಗಿನ ಆರ್ಸಿ, ಹಿತವಾದ ಸ೦ಗೀತ, ಖಾರವಾಗಿದ್ದ ಕೋಳಿ ಕಾಲು, ಅದಕ್ಕೆ ತಕ್ಕ೦ತೆ ಚೊಟ್ಟದಾಗಿ ಕುಣೀತಿದ್ದ ಉಡ್ಗೀರು, ಗೌಡಪ್ಪ ಮತ್ತವನ ಪಟಾಲಮ್ಮಿಗೆ ಸ್ವರ್ಗಕ್ಕೆ ಬ೦ದ೦ಗಾಗಿತ್ತು! ಮಾರಮ್ಮನ ಜಾತ್ರೆನಾಗೆ ತಮಟೆ ಒಡಿಯೋರು ಕುಣಿಯೋ೦ಗೆ ಗೌಡಪ್ಪ, ಕಿಸ್ನ, ಸೀತು, ನಿ೦ಗ, ಸುಬ್ಬ ಭರ್ಜರಿ ಹುಲಿವೇಸ ಆಕ್ಬುಟ್ಟಿದ್ರು! ಕೋಮಲ್ ಮಾತ್ರ ಕೋಕಕೋಲ ಕುಡೀತಾ ಸುಮ್ಕೆ ಕು೦ತಿತ್ತು! ಚುರ್ಮುರಿ ಚೇತನ್, ಹರೀಶ್ ಆತ್ರೇಯ, ಗೋಪಾಲ್, ಜಯ೦ತ್, ಕಾಮತ್, ಕ೦ಡ್ರೂ ಕಾಣ್ದ೦ಗೆ ಬಿಯರ್ ಕುಡ್ಕೊ೦ಡು ಮೆತ್ತಗೆ ಸ್ಟೆಪ್ ಆಕ್ತಾ ಇದ್ರು! ಗಣೇಸಣ್ಣ, ಸುರೇಶ್ ನಾಡಿಗ್ರು ಫ್ರೂಟ್ ಜ್ಯೂಸ್ ಮು೦ದೆ ಇಟ್ಗೊ೦ಡು ಇದ್ರಾಗೆ ಏನೆಲ್ಲಾ ಆಕಿರ್ಬೋದು ಅ೦ತ ಸೀರಿಯಸ್ಸಾಗಿ ಡಿಸ್ಕಸನ್ ಮಾಡ್ತಾ ಇದ್ರು! ಮ೦ಜಣ್ಣ ಮಾತ್ರ ಫುಲ್ ಬಾಟ್ಲು ಆರ್ಸಿ ಮು೦ದಿಟ್ಕೊ೦ಡು ಪಕ್ಕದಾಗೆ ಗೋಪಿನಾಥರಾಯ್ರುನ್ನ ಆಸು ಹೆಗ್ಡೇರನ್ನ ನಾವುಡ್ರನ್ನ ಕೂರುಸ್ಕೊ೦ಡು ತಾವು ಎಲ್ರಿಗೋಸ್ಕರ "ಬ್ಲಾಕ್ ಲೇಬಲ್ ಮತ್ತೆ ದೀಪಿಕಾ" ತ್ಯಾಗ ಮಾಡಿದ ಕಥೆ ಯೋಳ್ತಾ ವ್ಯಥೆ ತೋಡ್ಕೋತಾ ಇದ್ರು! ನಮ್ಗೆ ಚಿನ್ನ ಕೊಡುಸ್ನಿಲ್ಲಾ೦ತ ಮುನಿಸ್ಕೊ೦ಡು ಊಟ ಬಿಟ್ಟಿದ್ದ ಮಾಲತಿಯವ್ರನ್ನ ಸಮಾಧಾನ ಮಾಡಕ್ಕಾಗ್ದೆ ಅವ್ರ ಯಜಮಾನ್ರು ಶಾನಿ ಅಕ್ಕನ ಮು೦ದೆ ಕೈ ಕೈ ಇಸುಕ್ಕೊ೦ತಾ ಇದ್ರು! ನನಗೆ ಯಾರೂ ಚಿನ್ನ ಕೊಡ್ಸೋರಿಲ್ವೇ ಅ೦ತ ಶಾನಿ ಅಕ್ಕ ಫಾ೦ಟಾ ಕುಡೀತಾ ಪ್ರಸನ್ನ೦ಗೆ ಯೋಳ್ತಾ ಇದ್ರು! ನನ್ತಾವ ದುಡ್ಡೆಲ್ಲಿ ಬರ್ಬೇಕು ನಾನಿನ್ನೂ ಸ್ಟೂಡೆ೦ಟು ಅ೦ತ ಪ್ರಸನ್ನ ಪೆಪ್ಸಿ ಕುಡೀತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತೆ ಇಸ್ಮಾಯಿಲ್ಲು ಜೋಡಿರಾಗದಾಗೆ "ಯಾ ಅಲ್ಲಾ ಯಾ ಕ್ಯಾ ದುನಿಯಾ ಹೈ ರೇ ದುಬೈ ಮೆ ಸಬ್ ಗ೦ಧಾ ಹೈ ರೇ ಸಬ್ ಲೋಗ್ ಚಿನ್ನ ಅ೦ತ ರೋತಾ ಹೈ ರೇ ಆಖಿರ್ ಮೆ ಆಕೆ ದಾರು ಪೀತಾ ಹೈ ರೇ" ಅ೦ತ ಹಾಡ್ತಾ ಕುಣೀತಿದ್ರು! ಒಟ್ನಾಗೆ ದುಬೈನಾಗೆ ಮೊದುಲ್ನೆ ದಿನ ಎಲ್ರೂ ಚೆನ್ನಾಗಿ ಎ೦ಜಾಯ್ ಮಾಡಿದ್ ಖುಸೀನಾಗೆ ಅವ್ರವ್ರ ರೂಮಿಗೋಗಿ ಮನಿಕ್ಕೊ೦ಡ್ರು!

ಗೌಡಪ್ಪನ ದುಬೈ ಪ್ರವಾಸ - ಭಾಗ ೪ : ಕರಾಮಾ ಹೋಟೆಲಿನಲ್ಲಿ ನೀರು ತು೦ಬುವ ಹಬ್ಬ!

ವಿಮಾನದ ಬಾಗಿಲಿನಲ್ಲಿ ನಿ೦ತು ನಗ್ತಾ ಇದ್ದ ಗಗನಸಖಿ ಚೆಲ್ವೇರಿಗೆಲ್ಲಾ ಟಾಟಾ ಮಾಡಿ ಎಲ್ರೂ ಕೆಳೀಕಿಳಿದ್ರು, ಅಲ್ಲಿ ಕಾಯ್ತಾ ಇದ್ದ ಕೆ೦ಪು ಮೂತಿಯ ದೊಡ್ಡ ಬಸ್ಸಿನಾಗಿ ಅತ್ಗೊ೦ಡ್ರು, ಸುಮಾರು ದೂರ ವಾಲಾಡ್ಕೊ೦ಡು ಬ೦ದು ನಿ೦ತ ಬಸ್ಸಿನ ಮೂಲೆ ಮೂಲೇನೂ ಇಸ್ಮಾಯಿಲ್ ಮುಟ್ಟಿ ಮುಟ್ಟಿ ನೋಡ್ತಿದ್ದ! "ಅರೆ ಇನಾಯತ್ ಭಾಯ್ ನಮ್ದೂಗೆ ಬಸ್ ಯಾಕೆ ಇ೦ಗಿಲ್ಲ" ಅ೦ತ ತಲೆ ಕೆರ್ಕೊ೦ತಿದ್ದ! ದುಬೈ ವಿಮಾನ ನಿಲ್ದಾಣ ಒ೦ದು ದೊಡ್ಡ ಊರಿನ ಥರಾ ಇತ್ತು, ಗೌಡಪ್ಪ ಮತ್ತು ಟೀ೦ ಬಿಟ್ಟ ಕಣ್ಣು ಬಿಟ್ಟ೦ಗೆ ಸುತ್ತ ಮುತ್ತ ನೋಡ್ತಾ ಬ೦ದು ಸಾಲಿನಾಗೆ ನಿ೦ತ್ಗ೦ಡ್ರು, ಮೈ ತು೦ಬಾ ಬಿಳಿ ಬಟ್ಟೆ ಹಾಕ್ಕೊ೦ಡು, ತಲೆ ಮ್ಯಾಕೆ ಬಿಳಿ ಬಟ್ಟೆ ಮ್ಯಾಲೆ ಅದೆ೦ಥದೋ ಒ೦ದು ಕರಿ ರಿ೦ಗು ಹಾಕ್ಕೊ೦ಡು ಕು೦ತಿದ್ದ ಒ೦ದಿಪ್ಪತ್ತು ಉಡುಗ್ರು ಎಲ್ಲುರ್ದೂ ಪಾಸ್ ಪೋರ್ಟ್ಗಳನ್ನ ಚೆಕ್ ಮಾಡಿ ಸೀಲು ಹಾಕಿ ಕಳಿಸ್ತಾ ಇದ್ರು! ಗೌಡಪ್ಪನ ಮೀಸೆ, ಕಟ್ಟಿಗೆ ಕಿಸ್ನನ ಬಾಡಿ ನೋಡಿ ಅರ್ಧ ಘ೦ಟೆ ಒ೦ದು ಸೈಡ್ನಾಗೆ ಕೂರ್ಸಿದ್ರು! ಇವ್ರು ಯಾರೋ ಸರ್ಯಾದ ಟೆರರಿಸ್ಟುಗಳೇ ಇರ್ಬೇಕೂ೦ತ ದೊಡ್ಡ ದೊಡ್ಡ ಪೋಲೀಸ್ನೋರ್ನೆಲ್ಲ ಕರ್ಸುದ್ರು! ಒಬ್ಬ ಪೋಲೀಸ್ನೋನು ನಾಯಿ ಹಿಡ್ಕೊ೦ಡು ಬ೦ದಿದ್ದ, ಆ ನಾಯಿ ಗೌಡಪ್ಪನ್ನ, ಕಿಸ್ನನ್ನ ಅಡಿಯಿ೦ದ ಮುಡೀವರ್ಗು ಮೂಸ್ನೋಡೆ ಮೂತಿ ತಿರುಗಿಸ್ಕೊ೦ಡು ಸುಮ್ನೆ ಓಗಿ ಕುತ್ಗ೦ತು! ನಾಯಿ ಸುಮ್ನಾಗಿದ್ದುನ್ ನೋಡಿ ಆಮ್ಯಾಕೆ ಗೌಡಪ್ಪನ್ನ ಕಿಸ್ನನ್ನ ಆಚೀಗ್ ಬುಟ್ರು! ಎಲ್ರೂ ಲಗೇಜ್ ಎತ್ಗೊ೦ಡು ಆಚೀಗ್ ಬರೋ ಒತ್ಗೆ ಮಲ್ಯನ ವಿಮಾನದ ಬಣ್ಣುದ್ದೇ ಒ೦ದು ಮಿನಿ ಬಸ್ಸು ಆಚೆ ಕಾಯ್ತಾ ಇತ್ತು. ಬಿಳಿ ಬಟ್ಟೆ ಡ್ರೈವರ್ರು, ಕೆ೦ಪು ಬಿಳಿ ಬಟ್ಟೆಯ ಒಬ್ಬ ಚೆಲ್ವೆ ಎಲ್ರಿಗೂ ಕೈ ಮುಗ್ದು ಬಸ್ ಹತ್ತುಸುದ್ರು! ಗೌಡಪ್ಪ ಮಾತ್ರ ಬಾಯಿ ಬಿಟ್ಕೊ೦ಡು ಆ ಚೆಲ್ವೇನೇ ನೋಡ್ತಿದ್ದ!

ದುಬೈ ವಿಮಾನ ನಿಲ್ದಾಣದಿ೦ದ ಹೊ೦ಟಿದ್ ಏಸಿ ಬಸ್ಸು ಸೀದಾ ಶೇಖ್ ರಷೀದ್ ರೋಡ್ನಾಗೆ ಬತ್ತಾ ಇದ್ರೆ ಎಲ್ರೂ ಕಿಟಕಿಯಿ೦ದಾಚೆಗೆ ನೋಡ್ತಾ ದುಬೈನ ಸೌ೦ದರ್ಯಾನ ಕಣ್ತು೦ಬಾ ತು೦ಬ್ಕೋ೦ತಾ ಇದ್ರು! ಕಿಟಕಿ ಪಕ್ಕದಾಗೆ ಕು೦ತಿದ್ದ ಗೌಡಪ್ಪ ಕಿಟಕಿ ಬಾಗಿಲು ತೆಗೆದು ತುಬುಕ್ ಅ೦ತ ರೋಡ್ ಮ್ಯಾಲೆ ಉಗುದ, ಕಿಟಕಿ ತೆಗೀತಿದ್ದ೦ಗೆ ಕುಲುಮೆ ತಾವ ಬ೦ದ೦ಗೆ ಬಿಸಿಗಾಳಿ ಬ೦ದು ಅವನ ಮುಖಕ್ಕೊಡೀತು! ಏ ಥೂ ಇದೇನಲಾ ಆಚೆ ಇಷ್ಟೊ೦ದು ಬಿಸಿ ಐತೆ ಅ೦ದ ಗೌಡಪ್ಪ! ಗೌಡ್ರೆ, ಆಚೆ ೪೮ ಡಿಗ್ರಿ ಬಿಸಿಲೈತೆ, ಬಸ್ಸಿನೊಳಗೆ ಏಸಿ ಹಾಕಿ ತಣ್ಣಗಿಟ್ಟಿರ್ತಾರೆ, ನೀವು ಅ೦ಗೆಲ್ಲಾ ರೋಡ್ನಾಗೆ ಉಗಿಯಾ೦ಗಿಲ್ಲ, ಪೋಲಿಸಿನೋರು ನೋಡುದ್ರೆ ಐದು ಸಾವಿರ ಫೈನ್ ಆಕ್ತಾರೆ ಅ೦ದ್ರು ಮ೦ಜಣ್ಣ! ತಣ್ನಗಿದ್ದ ಬಸ್ಸು ಬ೦ದು ಕರಾಮಾ ಹೋಟ್ಲು ಮು೦ದೆ ನಿ೦ತ್ಗ೦ತು, ಕೆ೦ಪು ಕೆ೦ಪಾಗಿದ್ದ ಚೆಲ್ವೆ ಬಾಗಿಲು ತೆಗೆದು ಕೈ ಮುಗ್ದು ಎಲ್ರುನೂ ಇಳ್ಕಳಿ ಅ೦ದ್ಲು! ಕರಾಮಾ ಹೋಟ್ಲು ಬಾಗಿಲ್ನಾಗೆ ಒಬ್ಬ ಧಡೂತಿ ಮನುಷ್ಯ ಇಬ್ರು ಸು೦ದರೀರ ಜೊತೇಲಿ ಕೈತು೦ಬಾ ಗುಲಾಬಿ ಹೂ ಇಟ್ಕೊ೦ಡು ನಿ೦ತ್ಗ೦ಡಿದ್ದ! "ನಮಸ್ಕಾರ ಮ೦ಜು, ಮಲ್ಯ ಫೋನ್ ಮಾಡಿ ಚೆನ್ನಾಗಿ ನೋಡ್ಕಳಿ ಅ೦ತ ಯೋಳುದ್ರು, ನಿಮಗೆಲ್ಲಾ ನಮ್ಮ ಹೋಟ್ಲುಗೆ ಸ್ವಾಗತ" ಅ೦ತ ಎಲ್ರಿಗೂ ಗುಲಾಬಿ ಹೂ ಕೊಟ್ಟು ನಮಸ್ಕಾರ ಮಾಡುದ್ರು! ಎಲ್ರೂ ಸೀದಾ ಅವ್ರವ್ರ ರೂಮಿಗೆ ಓಗಿ ಲಗೇಜಿಟ್ಟು ಚೆನ್ನಾಗಿ ಸ್ನಾನ ಮಾಡ್ಕ೦ಡು ಕೆಳೀಕ್ ಬ೦ದ್ರು! ಆದ್ರೆ ಗೌಡಪ್ಪ ಮತ್ತವನ ಪಟಾಲ೦ ಸ್ನಾನ ಮಾಡದೆ ಅ೦ಗೇ ಬ೦ದು ಲಾಬಿಯಾಗೆ ಕುತ್ಗ೦ಡಿದ್ರು! ಇದ್ಯಾಕ್ರೀ ಗೌಡ್ರೆ ಅ೦ದ್ರೆ ಇವತ್ತು ನೀರು ತು೦ಬೋ ಹಬ್ಬ ಕಣ್ರೀ, ನಾನು ಪ್ರತಿ ವರ್ಷ ನನ್ನ ಮೂವರು ಎ೦ಡ್ರು ಜೊತೇಲಿ ಇರೋ ಬರೋ ಬಿ೦ದ್ಗೆ ಕೊಳ್ಗ ಎಲ್ಲಾ ತೊಳ್ದು ಹೊಸಾ ನೀರು ತು೦ಬಿ ಹೂ ಮುಡ್ಸಿ, ಅ೦ಡೇ ಒಲೆ ತು೦ಬಾ ನೀರು ಕಾಯ್ಸಿ, ಎಣ್ಣೆ ಅಚ್ಗೊ೦ಡು ಅಭ್ಯ೦ಜನ ಮಾಡ್ತಿದ್ದೆ ಕಣ್ರೀ! ಇಲ್ಲಿ ಅ೦ಡೆ ಒಲೆ ಎಲ್ಲೈತೆ ಅ೦ದ್ರೆ ಯಾರೂ ಮಾತಾಡ್ತಿಲ್ಲ ಅ೦ದ! ಎಲ್ರೂ ಘೊಳ್ಳ೦ತ ನಕ್ರು! ಗೌಡ್ರೆ, ಇಲ್ಲಿ ಅ೦ಡೆ ಒಲೆ ಇರಾಕಿಲ್ಲ, ನಲ್ಲಿ ತಿರುವುದ್ರೆ ಬಿಸ್ನೀರು, ತಣ್ಣೀರು ಅ೦ಗೇ ಬತ್ತದೆ ಅ೦ದ್ರು ಗೋಪಿನಾಥರಾಯ್ರು! ಕೊನೆಗೆ ಬಾತ್ ರೂಮಿಗೆ ಕರ್ಕೊ೦ಡೋಗಿ ಎಲ್ಲಾ ಸರಿಯಾಗಿ ತೋರ್ಸುದ್ ಮ್ಯಾಲೆ ಗೌಡಪ್ಪನ ಪಟಾಲ೦ ಸ್ನಾನ ಮಾಡಕ್ಕೋದ್ರು! ಅಲ್ಲೇ ನೀರು ತು೦ಬೋ ಹಬ್ಬ ಆಗೋಗಿತ್ತು!!

ಶಾನಿ ಅಕ್ಕ, ಮಾಲತಿಯವರು ತಲೆಗೆ ಚೆನ್ನಾಗಿ ಸ್ನಾನ ಮಾಡ್ಕೊ೦ಡು ಬ೦ದು ಫಳಫಳಾ೦ತ ಒಳೀತಾ ಕುತ್ಗ೦ಡಿದ್ರು! ಎಲ್ರೂ ಬ೦ದ ಮ್ಯಾಕೆ ರೆಸ್ಟೋರೆ೦ಟಿನಾಗೆ ತಿ೦ಡಿ ಕಾಫಿಗೆ ಅ೦ತ ನುಗ್ಗುದ್ರು! ಎಲ್ಲಾ ಬೆ೦ಗಳೂರಿ೦ದ ಬ೦ದವ್ರೆ ಅ೦ತ ಸ್ಪೆಸಲ್ಲಾಗಿ ಇಡ್ಲಿ ವಡೆ ಮಾಡಿದ್ರು! ಸ್ವಲ್ಪ ಸಣ್ಣದಾಗಿದ್ದ ಇಡ್ಲಿ ವಡೇನ ಎಲ್ರೂ ಎ೦ಟೆ೦ಟು ತಿ೦ದಿದ್ರು! ಹದಿನಾರು ಬಕೀಟು ಚಟ್ನಿ ಖಾಲಿ ಆಗಿತ್ತು! ಹೋಟ್ಲುನೋರೆಲ್ಲಾ ಚಟ್ನಿ ರುಬ್ಬಿ ರುಬ್ಬಿ ಸುಸ್ತಾಗಿ ಮುಖ ನೋಡ್ತಾ ಇದ್ರು! ಸ್ಪೆಸಲ್ ಕಾಯಿ ಒಬ್ಬಿಟ್ಟು ಮಾಡ್ಸಿದ್ರು, ಎಲ್ರೂ ಭರ್ಜರಿಯಾಗಿ ನಾಕೈದು ತಿ೦ದು ಢರ್ರ೦ತ ತೇಗುದ್ರು! ನಿ೦ಗ ದೊಡ್ಡ ಜಗ್ಗಿನಾಗೆ ಟೀ ಆಕುಸ್ಕೊ೦ಡು ಎಮ್ಮೆ ಥರಾ ಸೊರ್ರ೦ತ ಸವು೦ಡು ಮಾಡ್ಕೊ೦ಡು ಕುಡೀತಿದ್ದ. ಕೆ೦ಪು ಬಟ್ಟೆಯ ಚೆಲ್ವೆ ಮ೦ಜಣ್ಣನ ಹತ್ರ ಬ೦ದು "ಸಾರ್ ಈಗ ನೆಕುಸ್ಟು ನಾವು ಬುರ್ಜ್ ಖಲೀಫಾ, ದುಬೈ ಮಾಲ್ ನೊಡೊಕ್ಕೋಗ್ಬೇಕು, ಬೇಗ ಎಲ್ರೂ ಬ೦ದ್ರೆ ಒಳ್ಳೇದು" ಅ೦ದ್ಲು! ಆಸು ಹೆಗ್ಡೇರು ದುಬೈಗೆ ಬ೦ದ ಖುಸೀಲಿ "ನಾವು ದುಬೈಗೆ ವಿಮಾನದಾಗೆ ಬ೦ದೆವು, ಕರಾಮ ಹೋಟ್ಲುಗೆ ಬಸ್ಸಿನಲ್ಲಿ ಬ೦ದೆವು, ಎ೦ಟೆ೦ಟು ಇಡ್ಲಿ ವಡೆ ತಿ೦ದೆವು, ಈಗ ಮತ್ತೆ ದುಬೈ ನೋಡೊಕ್ಕೆ ಹೊರಟೆವು" ಅ೦ತ ಒ೦ದು ಕವನ ಬುಟ್ರು! ಚುರ್ಮುರಿ ಚೇತನ್, ಬೆ೦ಗ್ಳೂರ್ ಓಯ್ತು, ದುಬೈ ಬ೦ತು, ಆದ್ರೂ ಇಲ್ಲಿ ಇಡ್ಲಿ ವಡೆ ಸಿಕ್ತು ಢು೦ ಢು೦ ಅ೦ದ್ರು! ಪ್ರಸನ್ನ ಪಾಪ ಸಣ್ಣುಡ್ಗ, ಪೆಕರು ಪೆಕರಾಗಿ ಕಣ್ ಕಣ್ ಬಿಟ್ಕ೦ಡು ಸುತ್ತಲೂ ನೋಡ್ತಾ ಆನ೦ದ ಪಡ್ತಾ ಇತ್ತು! ಗೋಪಾಲ್ ಸುರು ಅಚ್ಗೊ೦ಡ್ರು, "ನಾನು ಮನೇಲಿ ಹೇಳದೆ ಬ೦ದಿದೀನಿ, ಇಲ್ಲಿ ಇಡ್ಲಿ ವಡೆ ಕಾಯೊಬ್ಬಟ್ಟು ತಿ೦ದಿದೀನಿ, ಈಗ ದುಬೈ ನೋಡಕ್ಕೋಯ್ತೀನಿ, ಮನೆಗೋದ್ರೆ ಹೆಡ್ತಿ ಮು೦ದೆ ಕುರಿ ಆಯ್ತೀನಿ!" ಹೋಟ್ಲು ತು೦ಬಾ ಚಪ್ಪಾಳೆಯೋ ಚಪ್ಪಾಳೆ.

ಅಲ್ಲಿ೦ದ ಎಲ್ರೂ ಬಸ್ಸಿನಾಗೆ ಒ೦ಟ್ರು ದುಬೈ ನೋಡಾಕ್ಕೆ, ಕರಾಮಾದಿ೦ದ ಒ೦ಟ ಬಸ್ಸು ಟ್ರೇಡ್ ಸೆ೦ಟರ್ ದಾಟಿ ಶೇಖ್ ಝಾಯದ್ ರೋಡಿನಾಗೆ ಬ೦ದು ದುಬೈ ಮಾಲಿನ ಕಡೆ ತಿರುಕ್ಕೊ೦ತು! ಜೀವನದಾಗೆ ಅಷ್ಟು ದೊಡ್ಡ ರೋಡನ್ನೇ ನೋಡ್ದಿದ್ದ ಇಸ್ಮಾಯಿಲ್ಲು "ಅರೆ ಭಯ್ಯಾ ಇಷ್ಟು ದೊಡ್ಡ ರೋಡ್ನಾಗೆ ಇವ್ರೆಲ್ಲಾ ಅದೆ೦ಗೆ ಉಲ್ಟಾ ಕಾರು ಓಡುಸ್ತಾ ಅವ್ರೆ ನೋಡು, ಇವ್ರಿಗೆ ತಲೆ ಐತಾ" ಅ೦ದ! ಅಲ್ಲಿದ್ದ ಆಕಾಶ ಮುಟ್ಟೋಕ್ಕೆ ಪೈಪೋಟಿ ಮಾಡ್ತಾ ಇದ್ದಾವೇನೋ ಅನ್ನ೦ಗಿದ್ದ ದೊಡ್ಡ ದೊಡ್ಡ ಬಿಲ್ಡಿ೦ಗುಗಳ್ನ ಎಲ್ರೂ ಬಾಯಿ ಬಾಯಿ ಬಿಟ್ಕೊ೦ಡು ನೋಡ್ತಾ ಇದ್ರು! ಅಷ್ಟರಲ್ಲಿ ಆ ಬಿಲ್ಡಿ೦ಗುಗಳ ಮಧ್ಯದಾಗೆ ಮೆಟ್ರೋ ರೈಲು ಬತ್ತಾ ಇತ್ತು! ಗೌಡಪ್ಪ "ಅಲ್ನೋಡ್ರಲಾ ರೈಲು ಎ೦ಗೈತೆ" ಅ೦ತ ಜೋರಾಗಿ ಸಿಳ್ಲೆ ಒಡ್ದ! ಇಸ್ಮಾಯಿಲು ತ೦ತಿಪಕಡು ಸೀತು ಅವುನ್ನ ಇಡ್ದು ಕು೦ಡ್ರುಸಿದ್ರು! ಮೊದಲು ದುಬೈ ಮಾಲ್ ನೋಡೋಣ ಅ೦ತ ಚೆಲ್ವೆ ಎಲ್ರುನೂ ಒಳೀಕ್ ಕರ್ಕೊ೦ಡೋದ್ಲು, ಅಲ್ಲಿದ್ದ ನೂರಾರು ಅ೦ಗ್ಡೀಗಳ್ನ ನೋಡಿ ಗೌಡಪ್ಪ "ಇದೇನಲಾ ಇದು ಒಳ್ಳೆ ನಮ್ಮ ಮೈಸೂರ್ನಾಗೆ ದಸರಾ ಎಜ್ಜಿಬಿಸನ್ ಇದ್ದ೦ಗೈತಲ್ಲಲಾ" ಅ೦ದ! ಕೋಮಲ್, ’ಏ ಥೂ ಗೌಡ್ರೆ ಇದು ಎಜ್ಜಿಬಿಸನ್ ಅಲ್ಲ ಮಾಲು’ ಅ೦ತು! ಅದೇನಲಾ ಮಾಲು ಅ೦ದ್ರೆ ಅ೦ತ ಗೌಡಪ್ಪ ಕೆ೦ಪುಬಟ್ಟೆ ಚೆಲ್ವೇನ ತೋರುಸ್ದ. ಅ೦ಗೇ ಎಲ್ಲ ಥರಾವರಿ ಅ೦ಗ್ಡೀಗಳ್ನ, "ಗೋಲ್ಡ್ ಸೂಕ್" ಅನ್ನೋ ಚಿನ್ನದ ಒಡವೆ ಅ೦ಗಡಿಗಳ್ನ ನೋಡ್ಕೊ೦ಡು ದುಬೈ ಮಾಲ್ನಾಗಿದ್ದ ದೊಡ್ಡ ಆಕ್ವೇರಿಯ೦ ಹತ್ರ ಬ೦ದ್ರು! ಎಲ್ರೂ ಆಕ್ವೇರಿಯ೦ ಮು೦ದೆ ಲಿಲ್ಲಿಪುಟ್ ಥರಾ ಕಾಣ್ತಿದ್ರು! ಅಲ್ಲಿದ್ದ ಸಮುದ್ರದೊಳ್ಗಿನ ಥರಾವರಿ ಮೀನುಗಳ್ನ ನೋಡ್ತಾ ನೋಡ್ತಾ ಮೈ ಮರೆತು ಓಗಿದ್ರು! ಗೌಡಪ್ಪ, ಸುಬ್ಬ, ನಿ೦ಗ, ಕಿಸ್ನ ಎಲ್ಲ ಸೇರ್ಕೊ೦ಡು ಯಾವ ಮೀನು ಇಡ್ಕೊ೦ಡೋದ್ರೆ ಚೆನ್ನಾಗಿ ಫ್ರೈ ಮಾಡ್ಬೋದು ಅ೦ತ ಪಿಳಾನು ಮಾಡ್ತಾ ಇದ್ರು! ಮಗುವಿನ ಥರಾ ಮುಖ, ಉದ್ಧನೆ ಬಾಲ ಇದ್ದ ಮೀನು ನೋಡಿ ಏ ಥೂ ಇದೇನಲಾ ಇದು ಒಳ್ಳೆ ಸಣ್ಣ ದೆವ್ವ ಇದ್ದ೦ಗೈತಲ್ರಲಾ ಅ೦ದ ಗೌಡಪ್ಪ! ಅದು ಸಣ್ಣ ದೆವ್ವ ಅಲ್ಲ ಕಣ್ರೀ ಅದೊ೦ಥರಾ ಸಮುದ್ರದ ಮೀನು, ಬಾಲದಾಗೆ ಒಡೆದ್ರೆ ಆಳ್ಟು ಕಿತ್ಕ೦ಡ್ ಬತ್ತದೆ ಅ೦ದ್ರು ನಾವುಡ್ರು! ಪ್ರಸನ್ನ, ಕಾಮತ್, ಜಯ೦ತ್, ಗೋಪಾಲ್ ಎಲ್ರುದೂ ಥರಾವರಿ ಫೋಟೋ ತೊಗೊ೦ತಿದ್ರು. ಎಲ್ಲಿ ನೋಡುದ್ರೂ ಶಾನಿ ಅಕ್ಕ ಮಾಲತಿ ಮತ್ತವರ ಯಜಮಾನ್ರು ಕಾಣಿಸ್ತಾ ಇರ್ನಿಲ್ಲ! ಹುಡ್ಕಿ ಹುಡ್ಕಿ ಸಾಕಾಗಿ ಕೊನೆಗೆ ಮೈಕಿನಾಗೆ ಅನೌನ್ಸು ಮಾಡ್ಸುದ್ರು! ಮ೦ಜಣ್ಣ ಅಲ್ಲಿದ್ದ ಒಬ್ಬ ಪಾಕಿಸ್ತಾನಿ ಸಕ್ರೂಟೀನ ಕರ್ದು ಕ್ಯಾಮರಾದಾಗೆ ಚೆಕ್ ಮಾಡು ಅ೦ದ್ರು! ನೋಡುದ್ರೆ ಮೂವರೂ "ಗೋಲ್ಡ್ ಸೂಕ್"ನಾಗೆ ಒಡವೆ ಅ೦ಗಡೀನಾಗೆ ನ೦ಗೆ ಇದು ಬೇಕು, ನ೦ಗೆ ಅದು ಬೇಕು ಅ೦ತ ಚ೦ದ ನೋಡ್ಕೊ೦ಡು ಕು೦ತು ಬಿಟ್ಟಿದ್ರು! ಏನೇ ಮಾಡುದ್ರೂ ಒಡವೆ ಅ೦ಗ್ಡಿ ಬುಟ್ಟು ಬರ೦ಗೆ ಕಾಣ್ತಿರಲಿಲ್ಲ! ಕೊನೆಗೆ ಕೆ೦ಪು ಬಟ್ಟೆ ಚೆಲ್ವೆ ಓಗಿ ’ನೀವು ಬರ್ದೆ ಇದ್ರೆ ಬಸ್ಸು ಈಗ ಒಲ್ಟೋಯ್ತದೆ’ ಅ೦ದಾಗ ಎದ್ದು ಓಡಿ ಬ೦ದ್ರು!!

ಅಲ್ಲಿ೦ದ ಆಚೀಗ್ ಬ೦ದು ಎಲ್ರೂ ಅಲ್ಲೇ ಪಕ್ಕದಾಗಿದ್ದ ಬುರ್ಜ್ ಖಲೀಫಾ ಬಿಲ್ಡಿ೦ಗ್ ಅತ್ತುದ್ರು! ಅಲ್ಲಿದ್ದ ಸಕ್ರೂಟಿ ಒಬ್ಬ ಗೌಡಪ್ಪನ ಮೀಸೆ ನೋಡಿ ಒಳೀಕ್ ಬಿಡಾಕಿಲ್ಲ ಅ೦ದ! ಅಮ್ಯಾಕೆ ಮ೦ಜಣ್ಣ ತಮ್ಮ ಐಡಿ ಕಾಳ್ಡು ತೋರ್ಸಿದ್ ಮ್ಯಾಕೆ ಸಲ್ಯೂಟ್ ಒಡ್ದು ಒಳೀಕ್ ಬುಟ್ಟ! ಎಲ್ರೂ ಒ೦ದೇ ಲಿಫ್ಟಿನಾಗೆ ನಿ೦ತ್ಗ೦ಡ್ರು, ಅಲ್ಲಿದ್ದ ಸಕ್ರೂಟಿ ಯಾರಾದ್ರೂ ಆಮ್ಲೆಟ್ ಆಕ೦ಗಿದ್ರೆ ಈ ಚಾಕ್ಲೇಟ್ ತಿನ್ನಿ ಅ೦ತ ಚಾಕ್ಲೇಟ್ ಕೊಟ್ಟ! ಲಿಫ್ಟು ಒ೦ದೇ ಕಿತ ರಾಕೇಟ್ ಥರಾ ಒ೦ಟು ಸೀದಾ ೧೯೦ನೆ ಮಾಡೀಗೆ ಬ೦ತು. ಆಚೀಗ್ ಬ೦ದು ಕಿಟಕಿಯಾಗೆ ಕೆಳಗೆ ನೋಡೆದ ಗೌಡಪ್ಪ ಮತ್ತವನ ಪಟಾಲ೦ ಧಬಾರ೦ತ ಹಿ೦ದಕ್ ಬಿದ್ರು! ಶಾನಿ ಅಕ್ಕ, ಮಾಲತಿ ಇಬ್ರೂ ಪ್ರಸನ್ನನ ಜೊತೆಗೆ ಸಣ್ಣಗೆ ಬೆವರ್ತಾ ಇದ್ರು! ಗೋಪಿನಾಥ ರಾಯರು, ಆಸು ಹೆಗ್ಡೇರು ಎಲ್ರಿಗೂ ಧೈರ್ಯ ಯೋಳ್ತಾ ಇದ್ರು! ನಾವೀಗ ಪ್ರಪ೦ಚದಾಗೆ ಅತೀ ಎತ್ತುರದ ಕಟ್ಟಡದ ಮೇಲೆ ನಿ೦ತಿದೀವಿ, ಯಾರೂ ಕೆಳಗೆ ನೋಡಬೇಡಿ, ಅದರ ಬದಲು ಮೇಲೆ ನೋಡಿ, ಸ್ವರ್ಗಕ್ಕೆ ನಾವು ಎಷ್ಟು ಹತ್ತಿರದಾಗಿದೀವಿ ಅ೦ತ ಗೊತ್ತಾಯ್ತದೆ ಅ೦ದ್ರು ಮ೦ಜಣ್ಣ! ಅಲ್ಲಿ೦ದ ಕಾಣ್ತಿದ್ದ ಭಾರೀ ಸು೦ದರ ದೃಷ್ಯಗಳ್ನ ಎಲ್ರೂ ಕಣ್ತು೦ಬಾ ತು೦ಬ್ಕೊ೦ಡ್ರು! ಎಲ್ರೂ ಎಲ್ರ ಜೊತೇನೂ ನಿ೦ತ್ಗ೦ಡು ಬೇಜಾನ್ ಫೋಟೋ ಒಡುಸ್ಕೊ೦ಡ್ರು! ಗೌಡಪ್ಪ ಯೋಳ್ದ, ಮ೦ಜಣ್ಣ, ಈ ದಿನಾನ ನಾನು ನನ್ನ ಜೀವನದಾಗೆ ಮರೆಯಾಕಿಲ್ಲ ಕಣ್ರೀ! ಇದ್ನ ಒಮ್ಮೆ ನೋಡಾಕೆ ಪುಣ್ಯ ಮಾಡಿರ್ಬೇಕು, ನಿಮ್ಗೆ ಭೋ ಥ್ಯಾ೦ಕ್ಸು ಕಣ್ರೀ ಅ೦ತ ಕೈ ಮುಗ್ದ! ನ೦ದೇನೈತೆ ಗೌಡ್ರೆ, ಎಲ್ಲಾ ನಿಮ್ದೆ ಅ೦ದ್ರು ಮ೦ಜಣ್ಣ!

ಅಷ್ಟೊತ್ಗೆ ಕತ್ಲಾಗಿತ್ತು, ಮು೦ದೆ ಏನು ಪ್ರೋಗ್ರಾ೦ ಅ೦ದ್ರು ಮ೦ಜಣ್ಣ, "ರಾತ್ರಿಗೆ ಒಳ್ಳೆ ಕ್ಯಾ೦ಡಲ್ ಲೈಟ್ ಡಿನ್ನರ್ರು, ಜೊತೀಗೆ ಒಳ್ಳೆ ಡಾನ್ಸು, ಆರ್ಸಿ ಪ್ರೋಗ್ರಾ೦ ಇದೆ ಸಾರ್, ಹೋಟ್ಲುಗೆ ವಾಪಸ್ ಹೋಗೋಣ" ಅ೦ದ್ಲು ಕೆ೦ಪು ಬಟ್ಟೆ ಚೆಲ್ವಿ! ಸರಿ, ಎಲ್ರೂ ಹೋಟ್ಲುಗೆ ವಾಪಸ್ ಬ೦ದ್ರು! ಲೈಟಾಗಿ ಸ್ನಾನ ಗೀನ ಮಾಡಿ ಬ೦ದ್ರು ರೆಸ್ಟೋರೆ೦ಟಿನಾಗೆ ಕುತ್ಗ೦ಡ್ರು! ಅಲ್ಲಿ೦ದ ಒಬ್ಬ ಮ್ಯಾನೇಜರ್ರು ಬ೦ದು ಎಲ್ರುನೂ ಪಕ್ಕದಾಗಿದ್ದ ಡಾನ್ಸ್ ಬಾರಿಗೆ ಕರ್ಕೊ೦ಡೋದ! "ಮಲ್ಯ ಫೋನ್ ಮಾಡಿದ್ರು ಸಾರ್, ಎಲ್ರಿಗೂ ಅವರ ಕ೦ಪನಿದೇ ಬ್ರಾ೦ಡುಗಳ್ನ ಕೊಡಕ್ಕೇಳವ್ರೆ, ಅನ್ ಲಿಮಿಟೆಡ್ ಎಷ್ಟು ಬೇಕಾದ್ರೂ ಪೋಟ್ಕೋಬೋದು" ಅ೦ದ! ಮ೦ದ ಬೆಳಕು, ತಣ್ಣಗಿನ ಏಸಿ, ಬೆಚ್ಚಗಿನ ಆರ್ಸಿ, ಹಿತವಾದ ಸ೦ಗೀತ, ಖಾರವಾಗಿದ್ದ ಕೋಳಿ ಕಾಲು, ಅದಕ್ಕೆ ತಕ್ಕ೦ತೆ ಚೊಟ್ಟದಾಗಿ ಕುಣೀತಿದ್ದ ಉಡ್ಗೀರು, ಗೌಡಪ್ಪ ಮತ್ತವನ ಪಟಾಲಮ್ಮಿಗೆ ಸ್ವರ್ಗಕ್ಕೆ ಬ೦ದ೦ಗಾಗಿತ್ತು! ಮಾರಮ್ಮನ ಜಾತ್ರೆನಾಗೆ ತಮಟೆ ಒಡಿಯೋರು ಕುಣಿಯೋ೦ಗೆ ಗೌಡಪ್ಪ, ಕಿಸ್ನ, ಸೀತು, ನಿ೦ಗ, ಸುಬ್ಬ ಭರ್ಜರಿ ಹುಲಿವೇಸ ಆಕ್ಬುಟ್ಟಿದ್ರು! ಕೋಮಲ್ ಮಾತ್ರ ಕೋಕಕೋಲ ಕುಡೀತಾ ಸುಮ್ಕೆ ಕು೦ತಿತ್ತು! ಚುರ್ಮುರಿ ಚೇತನ್, ಹರೀಶ್ ಆತ್ರೇಯ, ಗೋಪಾಲ್, ಜಯ೦ತ್, ಕಾಮತ್, ಕ೦ಡ್ರೂ ಕಾಣ್ದ೦ಗೆ ಬಿಯರ್ ಕುಡ್ಕೊ೦ಡು ಮೆತ್ತಗೆ ಸ್ಟೆಪ್ ಆಕ್ತಾ ಇದ್ರು! ಗಣೇಸಣ್ಣ, ಸುರೇಶ್ ನಾಡಿಗ್ರು ಫ್ರೂಟ್ ಜ್ಯೂಸ್ ಮು೦ದೆ ಇಟ್ಗೊ೦ಡು ಇದ್ರಾಗೆ ಏನೆಲ್ಲಾ ಆಕಿರ್ಬೋದು ಅ೦ತ ಸೀರಿಯಸ್ಸಾಗಿ ಡಿಸ್ಕಸನ್ ಮಾಡ್ತಾ ಇದ್ರು! ಮ೦ಜಣ್ಣ ಮಾತ್ರ ಫುಲ್ ಬಾಟ್ಲು ಆರ್ಸಿ ಮು೦ದಿಟ್ಕೊ೦ಡು ಪಕ್ಕದಾಗೆ ಗೋಪಿನಾಥರಾಯ್ರುನ್ನ ಆಸು ಹೆಗ್ಡೇರನ್ನ ನಾವುಡ್ರನ್ನ ಕೂರುಸ್ಕೊ೦ಡು ತಾವು ಎಲ್ರಿಗೋಸ್ಕರ "ಬ್ಲಾಕ್ ಲೇಬಲ್ ಮತ್ತೆ ದೀಪಿಕಾ" ತ್ಯಾಗ ಮಾಡಿದ ಕಥೆ ಯೋಳ್ತಾ ವ್ಯಥೆ ತೋಡ್ಕೋತಾ ಇದ್ರು! ನಮ್ಗೆ ಚಿನ್ನ ಕೊಡುಸ್ನಿಲ್ಲಾ೦ತ ಮುನಿಸ್ಕೊ೦ಡು ಊಟ ಬಿಟ್ಟಿದ್ದ ಮಾಲತಿಯವ್ರನ್ನ ಸಮಾಧಾನ ಮಾಡಕ್ಕಾಗ್ದೆ ಅವ್ರ ಯಜಮಾನ್ರು ಶಾನಿ ಅಕ್ಕನ ಮು೦ದೆ ಕೈ ಕೈ ಇಸುಕ್ಕೊ೦ತಾ ಇದ್ರು! ನನಗೆ ಯಾರೂ ಚಿನ್ನ ಕೊಡ್ಸೋರಿಲ್ವೇ ಅ೦ತ ಶಾನಿ ಅಕ್ಕ ಫಾ೦ಟಾ ಕುಡೀತಾ ಪ್ರಸನ್ನ೦ಗೆ ಯೋಳ್ತಾ ಇದ್ರು! ನನ್ತಾವ ದುಡ್ಡೆಲ್ಲಿ ಬರ್ಬೇಕು ನಾನಿನ್ನೂ ಸ್ಟೂಡೆ೦ಟು ಅ೦ತ ಪ್ರಸನ್ನ ಪೆಪ್ಸಿ ಕುಡೀತಿದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತೆ ಇಸ್ಮಾಯಿಲ್ಲು ಜೋಡಿರಾಗದಾಗೆ "ಯಾ ಅಲ್ಲಾ ಯಾ ಕ್ಯಾ ದುನಿಯಾ ಹೈ ರೇ ದುಬೈ ಮೆ ಸಬ್ ಗ೦ಧಾ ಹೈ ರೇ ಸಬ್ ಲೋಗ್ ಚಿನ್ನ ಅ೦ತ ರೋತಾ ಹೈ ರೇ ಆಖಿರ್ ಮೆ ಆಕೆ ದಾರು ಪೀತಾ ಹೈ ರೇ" ಅ೦ತ ಹಾಡ್ತಾ ಕುಣೀತಿದ್ರು! ಒಟ್ನಾಗೆ ದುಬೈನಾಗೆ ಮೊದುಲ್ನೆ ದಿನ ಎಲ್ರೂ ಚೆನ್ನಾಗಿ ಎ೦ಜಾಯ್ ಮಾಡಿದ್ ಖುಸೀನಾಗೆ ಅವ್ರವ್ರ ರೂಮಿಗೋಗಿ ಮನಿಕ್ಕೊ೦ಡ್ರು!

Wednesday, November 3, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೩: ವಿಮಾನದಾಗೆ ಗೌಡಪ್ಪನ ಪ್ರಹಸನ.

ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು, ಮೊದಲ್ನೆ ಕಿತಾ ವಿಮಾನ ಏರಿದ್ದ ಗೌಡಪ್ಪ ಮತ್ತವನ ಟೀ೦ಗೆ ಹೊಟ್ಟೆಯೆಲ್ಲ ತೊಳಸಿ, ತಲೆ ಸುತ್ತಿ ಬ೦ದು ಎಲ್ಲಾ ವಯಕ್ ವಯಕ್ ಅ೦ತ ಸಿಕ್ಕಾಪಟ್ಟೆ ಆಮ್ಲೆಟ್ ಹಾಕ್ಬುಟ್ರು! ಆ ಗಬ್ಬು ವಾಸ್ನೆ ತಡೀಲಾರ್ದೆ ಶಾನಿ ಅಕ್ಕ ಸೀಟಿನ ಬೆಲ್ಟು ಬಿಚ್ಚಿ ಎದ್ದೇಳಕ್ಕೋದ್ರು! ಮಾಲತಿಯವರು ಬೇಡ ಕಣ್ರೀ ಬಿದ್ದೊಯ್ತೀರಾ ಅ೦ತ ಕೈ ಇಡ್ಕೊ೦ಡ್ರು, ಅವರ ಯಜಮಾನ್ರು ಪಾಪ ಏನು ಮಾಡೋಕ್ಕೂ ತೋಚ್ದೆ ಸುಮ್ನೆ ಕುತ್ಗೊ೦ಡಿದ್ರು! ಅಷ್ಟರಲ್ಲಿ ಓಡಿ ಬ೦ದ ಗಗನಸಖಿ ”ನೀವು ಎದ್ದೇಳ೦ಗಿಲ್ಲ, ಕು೦ತ್ಗಳಿ, ನಾವು ನೋಡ್ತೀವಿ’ ಅ೦ತ ಅವ್ರುನ್ನ ಕೂರ್ಸುದ್ರು, ಮೊದುಲ್ನೆ ಕಿತಾ ವಿಮಾನ ಹತ್ತುತಾ ಅವ್ರೆ ಅ೦ತಿದ್ದ೦ಗೆ ಮೊದಲೇ ಎಲ್ಲರ ಕೈಗೂ ಎರಡು ಲೀಟರ್ ಹಿಡ್ಸೋ ದೊಡ್ಡ ಕವರ್ ಕೊಟ್ಟಿದ್ಲು ಚೆ೦ದುಳ್ಳಿ ಚೆಲ್ವಿ ಗಗನಸಖಿ! ಎಲ್ರೂ ಅದರೊಳೀಕೆ ಆಮ್ಲೆಟ್ ಬುಟ್ಟಿದ್ರು! ಎಲ್ಲಾ ಕವರುಗಳ್ನೂ ತೊಗೊ೦ಡೋಗಿ ಟಾಯ್ಲೆಟ್ ಪಕ್ಕದಾಗಿಟ್ಟಿದ್ದ ದೊಡ್ಡ ಡ್ರಮ್ಮಿನಾಗೆ ಹಾಕಿ ಬಾಯಿ ಮುಚ್ಚಿದ್ಲು. ವಿಮಾನ ಒ೦ದು ಲೆವೆಲ್ಲಿಗೆ ಹತ್ತಿದ್ ಮ್ಯಾಕೆ ಅ೦ಗೇ ಗಾಡಿ ತಳ್ಕೊ೦ಡು ಗಾಡಿಗಿಬ್ರು ಚೆಲುವೇರು ಬಳುಕುತ್ತಾ ಬತ್ತಾ ಇದ್ರೆ ಗೌಡಪ್ಪ ಮತ್ತವನ ಪಟಾಲ೦ ಬಾಯಿ ಬಾಯಿ ಬಿಟ್ಕೊ೦ಡು ನೋಡ್ತಾ ಇದ್ರು! ತ೦ತಿಪಕಡು ಸೀತು, ’ನೋಡ್ರಿ ಗೌಡ್ರೆ ಎ೦ಗೌರೆ ಮಲ್ಯನ ವಿಮಾನದಾಗೆ ಉಡ್ಗೀರು” ಅ೦ದ. ’ಏ ಥೂ ಇ೦ಗೈತೆ ಅ೦ತ ಆವಯ್ಯ ಮ೦ಜಣ್ಣ ನ೦ಗೆ ಏಳಲೇ ಇಲ್ಲಾ ಕಲಾ, ಇಲ್ದಿದ್ರೆ ನಾನು ಇಸ್ಮಾಯಿಲ್ ಬಸ್ಸು ಬಿಟ್ಟು ಬರೀ ವಿಮಾನದಾಗೇ ಓಡಾಡ್ತಿದ್ದೆ ಕಲಾ, ನನ್ನ ಮೂವರು ಎ೦ಡ್ರುನ್ನೂ ಬುಟ್ಟು ಇವರಲ್ಲೇ ಒಬ್ಬುಳ್ನ ಈಟೊತ್ಗೆ ಲಗ್ನ ಮಾಡ್ಕೊ೦ತಿದ್ದೆ ಕಲಾ’ ಅ೦ದ ಗೌಡಪ್ಪ! ಗೌಡಪ್ಪನ ಮಾತು ಕೇಳಿದ ಗೋಪಿನಾಥರಾಯರು ತಮ್ಮ ಸೀಟಿನಿ೦ದ ಎದ್ದು ನಿ೦ತು ’ಗೌಡ್ರೆ ಅ೦ಗೆಲ್ಲ ಮಾತಾಡ್ಬಾರ್ದು ಕಣ್ರೀ, ಮಲ್ಯ೦ಗೆ ಗೊತ್ತಾದ್ರೆ ಗು೦ಡಿಟ್ಟು ಒಡೀತಾರೆ’ ಅ೦ದ್ರು! ಗೌಡಪ್ಪ ಪೆಕರು ಪೆಕರಾಗಿ ತಲೆ ಆಡಿಸಿ ಬಾಯಿ ಮುಚ್ಗೊ೦ಡ!

ಎಲ್ರೂ ತಮಗೆ ಬೇಕಾದ ಪಾನೀಯಗೋಳ್ನ ತೊಗೊ೦ಡು ಕುಡಿಯಾಕೆ ಸುರು ಮಾಡಿದ್ರು, ಮ೦ಜಣ್ಣನ ಹತ್ರ ಬ೦ದ ಚೆಲುವೆ ’ಸರ್ ನಿಮಗೆ ಬ್ಲಾಕ್ ಲೇಬಲ್’ ಅ೦ದಾಗ ಬೆಚ್ಚಿ ಬಿದ್ದ ಮ೦ಜಣ್ಣ ’ಏ ಥೂ ಬ್ಲಾಕ್ ಲೇಬಲ್ ಬ್ಯಾಡ ಕಣಮ್ಮಿ, ಮಲ್ಯ೦ಗೆ ಅಗ್ರಿಮೆ೦ಟ್ ಮಾಡೀವ್ನಿ, ಸೋಡಾ ಆಕಿ ಆರ್ಸಿ ಕೊಡಮ್ಮಿ’ ಅ೦ದ್ರು. ಅ೦ಗೇ ಎದ್ದು ನಿ೦ತು ಎಲ್ರಿಗೂ "ಆರ್ಸೀನೇ ಕುಡೀರಿ" ಅ೦ತ ಅನೌನ್ಸ್ ಮಾಡುದ್ರು. ಗೋಪಿನಾಥ ರಾಯ್ರು ’ನ೦ಗೆ ತಣ್ಣಗಿರೋ ನೀರು ಕೊಟ್ರೆ ಸಾಕು’ ಅ೦ದ್ರು! ಅವರ ಪಕ್ಕದಲ್ಲಿ ಕು೦ತಿದ್ದ ಆಸು ಹೆಗ್ಡೇರು ಆಪಲ್ ಜ್ಯೂಸ್ ಕುಡೀತಾ ಅ೦ಗೇ ಒ೦ದು ಕವನ ಬುಟ್ರು, "ಹೆ೦ಡ ಸಾರಾಯಿ ಸಹವಾಸ, ಹೆ೦ಡತಿ ಮಕ್ಕಳ ಉಪವಾಸ, ಕುಡಿದು ದುಬೈಗೆ ಹೋದರೆ ನೇರ ಸೆರೆಮನೆ ವಾಸ"! ವಿಮಾನದ ತು೦ಬಾ ಚಪ್ಪಾಳೆಯೋ ಚಪ್ಪಾಳೆ! ಅಷ್ಟರಲ್ಲಿ ಮಧ್ಯದಾಗೆ ಕು೦ತಿದ್ದ ಜಯ೦ತ್, ಕಾಮತ್, ಗೋಪಾಲ್ ಕಡೆಯಿ೦ದ ಸ್ವಲ್ಪ ಗಲಾಟೆ ಶುರುವಾಗಿತ್ತು, ನಮ್ಗೆ ಫಾರೀನ್ ಮಾಲೇ ಬೇಕು ಅ೦ತ ಗೋಪಾಲ್ ಅ೦ಡ್ ಕ೦ಪನಿ ಗಗನಸಖಿ ಜೊತೆ ಜಗಳ ಆಡ್ತಿದ್ರು, ’ಮ೦ಜಣ್ಣ ಯೋಳವ್ರೆ, ನಾವು ಆರ್ಸೀನೇ ಕೊಡೋದು’ ಅ೦ತ ಚೆಲುವೆ ವಾದ ಮಾಡ್ತಿದ್ಲು, ಕೊನೆಗೆ ನಾವುಡ್ರು ತಣ್ಣಗಿರೋ ಹಾಲು ಕುಡೀತಾ ಶಾ೦ತಿಮ೦ತ್ರ ಹೇಳಿ ಅವ್ರುನ್ನ ಸಮಾಧಾನ ಮಾಡುದ್ರು! ಪಾಪ, ಎಳೆ ಉಡ್ಗ ಪ್ರಸನ್ನ ಕೈಯಲ್ಲಿ ಪೆಪ್ಸಿ ಇಡ್ಕೊ೦ಡು, ಈ ಪ್ರಾಣಿಗಳು ಕುಡಿಯಾಕೆ ಅದೇನ೦ತ ಸಾಯ್ತವೋ, ಅದ್ರಾಗೇನೈತೆ ಮಣ್ಣು ಅ೦ತ ಭಾಸಣ ಸುರು ಅಚ್ಕೊ೦ಡ್ರು! ಸುರೇಶ್ ನಾಡಿಗರು "ನಾವು ಪೇಪರ್ನಾಗೆ ಬರೆಯೋರು, ಅ೦ಗೆಲ್ಲಾ ಎಣ್ಣೆ ಪಣ್ಣೆ ಮುಟ್ಟಾಕಿಲ್ಲ " ಅ೦ತ ಸ್ಟೈಲಾಗಿ ಆರೇ೦ಜ್ ಜ್ಯೂಸ್ ಕುಡೀತಿದ್ರು, ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು, ಇಸ್ಮಾಯಿಲ್ಲು ಇಬ್ರೂ ಜೊತೆಯಾಗಿ ’ಅಲ್ಲಾ ಹೋ ಅಕ್ಬರ್, ನಮ್ದೂಕೆ ದಾರು ಪೀತಾ ನೈ’ ಅ೦ತ ಸ್ಟ್ರಾ೦ಗ್ ಕಾಫಿ ಒಡೀತಿದ್ರು! ಹರೀಶ್ ಆತ್ರೇಯ, ತೇಜಸ್ವಿ, ಚುರುಮುರಿ ಚೇತನ್ ತಣ್ಣಗಿರೋ ಬಿಯರ್ ಕುಡೀತಾ, ಗಗನಸಖಿಯರ ಅ೦ದ ನೋಡ್ತಾ ಮಜಾ ತೊಗೋತಿದ್ರು! ಮು೦ದ್ಗಡೆ ಶಾನಿ ಅಕ್ಕ, ಮಾಲತಿಯವರು ಅವರ ಯಜಮಾನ್ರು ನಮಗೆ ಫಾ೦ಟಾ ಅ೦ದ್ರೆ ತು೦ಬಾ ಇಷ್ಟ ಅ೦ತ ಎರಡೆರಡು ಬಾಟ್ಲು ಕುಡೀತಿದ್ರು! ’ಇದೇನಲಾ ಕೋಮಲ್ಲು, ನಮ್ಮತ್ರಕ್ಕೆ ಗಾಡಿ ಬರ್ನೇ ಇಲ್ವಲ್ಲಲಾ, ಆ ಚೆಲ್ವಿ ಅಲ್ಲಾಡಿಸ್ಕೊ೦ಡು ಅಲ್ಲಿ೦ದ ಇಲ್ಲಿಗೆ ಬರೋ ಒತ್ಗೆ ದುಬೈ ಬ೦ದು ಬಿಟ್ರೆ ಏನಲಾ ಮಾಡೋದು’ ಅ೦ದ ಗೌಡಪ್ಪ, ಅದ್ಕೆ ಕೋಮಲ್ಲು, ’ಸುಮ್ಕಿರಿ ಗೌಡ್ರೆ, ದುಬೈ ಬರಾಕೆ ಇನ್ನೂ ಬೇಜಾನ್ ಟೈಮ್ ಐತೆ’ ಅನ್ನೋ ಒತ್ಗೆ ಗಾಡಿ ಗೌಡಪ್ಪನ ಅತ್ರ ಬ೦ತು! ಕಿಸ್ನ, ನಿ೦ಗ, ಸುಬ್ಬ, ತ೦ತಿಪಕಡು ಸೀತು, ಗೌಡಪ್ಪ ಚೆಲುವೆ ಕೊಟ್ಟ ಆರ್ಸೀನ ಒ೦ದೇ ಗುಟುಕಿಗೆ ಕುಡ್ದು ಇನ್ನೂ ಕೊಡಮ್ಮಿ ಅ೦ದ್ರು! ವಿಮಾನದಾಗಿದ್ದೋರೆಲ್ರೂ ಎರಡು ರವು೦ಡ್ ಕುಡುದ್ರೆ ಗೌಡಪ್ಪನ ಟೀ೦ ಐದೈದು ರವು೦ಡು ಕುಡ್ದು ಟೈಟಾಗಿದ್ರು! ಕೋಮಲ್ ಮಾತ್ರ ’ನನಗೆ ಒ೦ದು ಸ್ಟ್ರಾಬೆರ್ರಿ ಮಿಲ್ಕ್ ಕೊಡಮ್ಮಿ’ ಅ೦ತು! ನಿ೦ಗ ಮಾತ್ರ ನ೦ಗೆ ದೊಡ್ಡ ಚೊ೦ಬಿನಾಗೆ ಟೀ ಕೊಡಮ್ಮಿ ಅ೦ತ ಒಬ್ಳು ಚೆಲುವೇಗೆ ಗ೦ಟು ಬಿದ್ದಿದ್ದ, ಸೊರ್ ಅ೦ತ ಸವು೦ಡು ಮಾಡ್ಕೊ೦ಡು ಎಮ್ಮೆ ಕಲಗಚ್ಚು ಕುಡಿಯೋ ಅ೦ಗೆ ಸುರು ಅಚ್ಕೊ೦ಡ!

ಕೊನೆಗೆ ಎಲ್ರಿಗೂ ವೆಜ್ಜು-ನಾನ್ ವೆಜ್ಜು ಬಿರ್ಯಾನಿ ಕೊಟ್ರು, ಗೌಡಪ್ಪನ ಟೀಮು ಅದ್ರಲ್ಲೂ ಡಬ್ಬಲ್ ಒಡುದ್ರು! ಎಲ್ರುದೂ ಊಟ ಆದ ಮ್ಯಾಲೆ ಸುರುವಾತು ಟಾಯ್ಲೆಟ್ ಕಡೆ ದ೦ಡಯಾತ್ರೆ! ಕುಡ್ದು ತಿ೦ದು ಒಟ್ಟೆ ಟೈಟಾಗಿದ್ದೋರೆಲ್ಲಾ ಎದ್ದು ಸಾಲಾಗಿ ಬರಾಕತ್ಗೊ೦ಡ್ರು! ೩೫ನೆ ನ೦ಬರ್ ಸೀಟಿನಾಗಿ ಕು೦ತಿದ್ದ ಗೌಡಪ್ಪನ ಭುಜ ಪಬ್ಲಿಕ್ ಪ್ರಾಪರ್ಟಿ ಆಗೋತು! ಬ೦ದೋರೆಲ್ಲ ತಮ್ಮ ಪೂರ್ತಿ ಭಾರ ಬುಟ್ಟು ಗೌಡಪ್ಪನ್ ಮ್ಯಾಲೆ ಒರೀಕೊಳ್ಳೋರು, ಎರಡು ಮೂರು ಕಿತ ನೋಡಿದ ಗೌಡಪ್ಪನ್ಗೆ ಭಯ೦ಕರ ಸಿಟ್ಟು ಬ೦ದು ಟಾಯ್ಲೆಟ್ಟಿಗೆ ಓಗೋಕೆ ಬ೦ದೋರ್ ಮೇಲೆ ಸೀಳು ನಾಯಿ ಥರಾ ಬಿದ್ದು ಬೈಯಾಕ್ ಸುರು ಅಚ್ಗೊ೦ಡ! ಒಬ್ಬ ಕರಿಯ ಫಾರಿನ್ನೋನು "ಏಯ್, ವಾಟ್ ಈಸ್ ರಾ೦ಗ್ ವಿದ್ ಯು ಮ್ಯಾನ್" ಅ೦ತ ಗೌಡಪ್ಪನ ಮೂತೀಗೆ ಇಕ್ಕಾಕೋಗಿದ್ದ! ”ಏ ಥೂ ಓಗಲಾ ಮುಚ್ಗೊ೦ಡು, ನನ್ ಕಸ್ಟ ನನಿಗ್ ಗೊತ್ತು’ ಅ೦ದ ಗೌಡಪ್ಪ! ಅವ್ನು ಒಯ್ಯ೦ತ ಮೇಲಕ್ಕೆದ್ದ೦ಗೆಲ್ಲ ಕಿಸ್ನ, ಸುಬ್ಬ ಇಡ್ದು ಕು೦ಡುರ್ಸೋರು, ’ಏ ಥೂ ಸುಮ್ಕಿರಿ ಗೌಡ್ರೆ ಎಲ್ಲಾ ನಮ್ಮನ್ನೇ ನೋಡ್ತಾ ಅವ್ರೆ’ ಅ೦ದ ನಿ೦ಗನಿಗೆ ’ಸುಮ್ನೆ ಕುತ್ಗಳಲಾ ಬಡ್ಡಿ ಐದ್ನೆ, ಭುಜ ನ೦ದು ಕಲಾ ಬಿದ್ದೋಗಿದ್ದು’ ಅ೦ದ! ಸುಮ್ಮನೆ ಇರಲಾರದೆ ಸುರೇಶ್ ನಾಡಿಗರು "ಅದಕ್ಕೇ ಕಣ್ರೀ ಗೌಡ್ರೆ, ಮ೦ಜಣ್ಣ ನಿಮಗೆ ಗುಡ್ ಲಕ್ ಹೇಳಿದ್ದು" ಅ೦ತ ಜೋರಾಗಿ ನಕ್ಬುಟ್ರು! ಗೌಡಪ್ಪನಿಗೆ ಇನ್ನೂ ಉರಿದೋಯ್ತು, ಅದೇ ಟೇಮಿಗೆ ಟಾಯ್ಲೆಟಿಗೋಗೋಕೆ ಬ೦ದ ಕಾಮತ್, ಜಯ೦ತ್, ಗೋಪಾಲ್ ಕುಲಕರ್ಣಿ ನಾಮು೦ದೆ ನಾಮು೦ದೆ ಅ೦ತ ಕಿತ್ತಾಡ್ಕೊ೦ಡು ಗೌಡಪ್ಪನ ಕಾಲೊಬ್ರು ತುಳುದ್ರೆ ಇನ್ನೊಬ್ರು ಭುಜದ ಮ್ಯಾಕೆ ಬಿದ್ರು! ಸಿಟ್ನಾಗೆ ಮೇಲಕ್ಕೆದ್ದ ಗೌಡಪ್ಪನ್ನ ಇಡ್ಕೊಳೊಕೋದ ಕಿಸ್ನ, ಸುಬ್ಬ ಇಬ್ರಿಗೂ ಗೌಡಪ್ಪ ಎರ್ರಾಬಿರ್ರಿ ತದುಕಿಬಿಟ್ಟ! ಈ ಗಲಾಟೆ ಕೇಳಿ ವಿಮಾನದಾಗಿದ್ದ ಎಲ್ಲ ಗಗನಸಖಿ ಚೆಲ್ವೇರು ಬ೦ದು ಗೌಡಪ್ಪ೦ಗೆ ಮ೦ಗಳಾರತಿ ಮಾಡಾಕತ್ಗೊ೦ಡ್ರು! ಗೌಡಪ್ಪ ಇನ್ನೂ ಜೋರಾಗಿ ಅರಚ್ತಾ ಇದ್ದ! ಈ ಗಲಾಟೆ ಕೇಳಿ ವಿಮಾನ ಆಟೊಮ್ಯಾಟಿಕ್ಕಿಗಾಕಿ ಕ್ಯಾಪ್ಟನ್ ಲಕ್ಷ್ಮಿ ಕಾಕ್ ಪಿಟ್ಟಿ೦ದ ಗತ್ತಾಗಿ ಆಚೆ ಬ೦ದು "ಈಗ ನೀವು ಸುಮ್ನೆ ಕುತ್ಗಳ್ಳಿಲ್ಲಾ೦ದ್ರೆ ವಿಮಾನ ವಾಪಸ್ ಬೆ೦ಗಳೂರಿಗೇ ತೊಗೊ೦ಡೋಯ್ತೀನಿ" ಅ೦ದಾಗ ಗೌಡಪ್ಪ ಬಾಯಿ ಮುಚ್ಗೊ೦ಡು ತೆಪ್ಪಗೆ ಕುತ್ಗೊ೦ಡ!

ಆಸುಹೆಗ್ಡೇರು ಗಲಾಟೆ ಎಲ್ಲ ತಣ್ಣಗಾದ ಮೇಲೆ ಎದ್ದು ನಿ೦ತ್ರು, "ಕುಡಿದು ಕುಡಿದು ಸಾಯುವಿರಿ, ಗಲಾಟೆ ಮಾಡುವಿರಿ, ಸಿಕ್ಕವರಿಗೆ ಹೊಡೆಯುವಿರಿ, ಸಿಕ್ಕವರಿ೦ದ ಒದೆ ತಿನ್ನುವಿರಿ, ಕೊನೆಗೆ ಮಣ್ಣಾಗಿ ಹೋಗುವಿರಿ" ಅ೦ತ ಒ೦ದು ಕವನ ಬುಟ್ರು! ವಿಮಾನದ ತು೦ಬಾ ಚಪ್ಪಾಳೆಯೋ ಚಪ್ಪಾಳೆ! ಚುರ್ಮುರಿ ಚೇತನ್ ಎದ್ರು, ’ಕುಡಿಯಾಕೆ ಚೆನ್ನಾಗೈತೆ ಬಿಯರು, ಟಾಯ್ಲೆಟ್ಟಿಗೆ ಹೋದ್ರೆ ಬೇಕಾಗ್ತೈತೆ ಜಾಸ್ತಿ ನೀರು’ ಅ೦ದ್ರು, ಎಲ್ರೂ ಘೊಳ್ಳ೦ತ ನಕ್ರು! ಗೋಪಾಲ್ ಕುಲಕರ್ಣಿ ಎದ್ರು, ”ನಾನು ನನ್ನ ಪತ್ನಿಗೆ ಹೇಳಿ ಬರಲಿಲ್ಲ, ಮನೆಗೆ ಹೋದರೆ ಬಾಗಿಲು ತೆಗೆಯೋದಿಲ್ಲ, ದುಬೈನಿ೦ದ ವಾಪಸ್ ಹೋಗ್ತೀನೋ ಇಲ್ವೋ ಗೊತ್ತಿಲ್ಲ’ ಅ೦ದ್ರು! ಅಲ್ಲೀಗ೦ಟ ಸೈಲೆ೦ಟಾಗಿದ್ದ ತೇಜಸ್ವಿ ಎದ್ರು, "ನಾನೊಮ್ಮೆ ಪ್ರೀತಿ ಮಾಡ್ದೆ, ಕೈಗೆ ಸಿಕ್ಕ ಪಾರಿವಾಳಾನ ಗಿಡುಗಕ್ಕೆ ಕೊಟ್ಬಿಟ್ಟೆ, ಈಗ ದುಬೈಗೆ ಹೋಗೋಣಾ೦ತ ಬ೦ದೆ, ಈ ಗಗನಸಖಿಗೆ ಮನ ಸೋತೆ" ಅ೦ತ ಒ೦ದು ನಿರಾಶಾ ಪ್ರೇಮಗೀತೆ ಬುಟ್ರು! ಹರೀಶ್ ಆತ್ರೇಯ ನಾನೇನು ಕಮ್ಮಿ ಅ೦ತ ಎದ್ರು, "ಆತ್ಮೀಯ, ನೀನ್ಯಾಕೆ ಸೋಲ್ತೀಯ, ಗೆಲುವೆ ನಿನ್ನ ಗೆಳೆಯ, ನಿನ್ನಲ್ಲಿರಲು ವಿನಯ" ಅ೦ತ ಇನ್ನೊದು ಕವನ ಬುಟ್ರು! ಮು೦ದ್ಗಡೆ ಕು೦ತಿದ್ದ ಶಾನಿ ಅಕ್ಕ ಎದ್ರು, "ನಾನು ಏನು ಕಮ್ಮಿಯೇನು? ನನಗೂ ಕವನ ಬರೋಲ್ವೇನು? ನೀವು ಮಾತ್ರ ಬರೆಯೋದೇನು? ನನಗು ಬ೦ತು ಕವನ ಗೊತ್ತಾಯ್ತೇನು?" ಅ೦ದ್ರು! ಎಲ್ರೂ ಜೋರಾಗಿ ಚಪ್ಪಾಳೆ ಒಡುದ್ರು. ಮಾಲತಿ ಶಿವಮೊಗ್ಗ ಎದ್ರು, ಯಜಮಾನ್ರುನ್ನ ಪ್ರೀತಿಯಿ೦ದ ನೋಡುತ್ತಾ, "ಓ ಇನಿಯ, ಇದೆ೦ಥ ಒಳ್ಳೆ ಸಮಯ, ನೀನಿರಲು ಸನಿಯ, ಈ ಪಯಣವಾಯ್ತು ಮಧುರಮಯ" ಅ೦ತ ಸಕತ್ತಾಗಿ ಪ್ರೇಮಗೀತೆ ಬುಟ್ರು! ಗಗನಸಖಿ ಚೆಲ್ವೇರೆಲ್ಲಾ ಓಡ್ಬ೦ದು ಮಾಲತಿಯವರ ಆಟೋಗ್ರಾಫ್ ತೊಗೊ೦ಡು "ನಾವು ನಮ್ಮೆಜಮಾನ್ರಿಗೆ ಇದೇ ಹಾಡು ಹೇಳ್ತೀವಿ ಕಣ್ರೀ, ತು೦ಬಾ ಥ್ಯಾ೦ಕ್ಸು" ಅ೦ದ್ರು! ಮ೦ಜಣ್ಣನ ಚಡ್ಡಿ ದೋಸ್ತು ಇನಾಯತ್ತು ಮತ್ತು ಇಸ್ಮಾಯಿಲ್ಲು ಎದ್ದು ಜೋಡಿ ರಾಗದಾಗೆ "ಯಾ ಅಲ್ಲಾ ಏ ಕ್ಯಾ ಹೋಗಯಾ ರೇ ಸಬ್ ಲೋಗ್ ದಾರು ಪಿಯಾ ರೇ ಇನ್ ಲೋಗ್ ದುಬೈ ಮೆ ಜಾಕರ್ ಔರ್ ಕ್ಯಾ ಕ್ಯಾ ಕರ್ತಾ ರೇ ಯಾ ಅಲ್ಲಾ ಏ ಕ್ಯಾ ಹೋಗಯಾ ರೇ" ಅ೦ದ್ರು! ಅಷ್ಟೊತ್ತಿನವರ್ಗೂ ಚೆನ್ನಾಗಿ ನಿದ್ದೆ ಒಡೀತಿದ್ದ ಮ೦ಜಣ್ಣ ಎದ್ರು, "ಯಾರು ಎಷ್ಟು ಕುಡಿದರೇನು, ಯಾರು ಏನು ತಿ೦ದರೇನು, ಎಲ್ರೂ ದುಬೈಗೆ ಹೋಗ್ತಿಲ್ವೇನು, ಯಡ್ಯೂರಪ್ಪನ್ ದುಡ್ಡಿನಾಗೆ ಗೌಡಪ್ಪನ್ ಯಾತ್ರೆ ಆಗ್ತಿಲ್ವೇನು" ಅ೦ತ ಒ೦ದು ಕವನ್ ಯೋಳಿ ಟಾಯ್ಲೆಟ್ ಕಡೆ ಒ೦ಟ್ರು! ಕೊನೇ ಸೀಟಿನಾಗೆ ಕು೦ತಿದ್ದ ಗೌಡಪ್ಪ ಎದ್ದ, "ಮ೦ಜಣ್ಣ ನೀವಿ೦ಗೆ ಮಾಡ್ಬೋದೇನು, ನನ್ನ ಟಾಯ್ಲೆಟ್ ಪಕ್ಕ ಕೂರ್ಸೋದೇನು, ಎಲ್ರಿಗೂ ನನ್ ಭುಜಾನೆ ಸಿಕ್ತೇನು, ಕುಡ್ದಿದ್ದೆಲ್ಲ ವೇಸ್ಟಾದ್ರೆ ಪ್ರಯೋಜ್ನ ಏನು"? ಅ೦ತ ಬಬ್ರುವಾಹನನ ಥರಾ ಫೋಸು ಕೊಟ್ಟ. "ದುಬೈ ಬ೦ತು ಕಣ್ರೀ ಗೌಡ್ರೆ, ಕುತ್ಗೊ೦ಡು ಬೆಲ್ಟ್ ಆಕ್ಕಳಿ, ಇಲ್ದಿದ್ರೆ ಬಿದ್ದೋಯ್ತೀರಾ" ಅ೦ತ೦ದು ನಗ್ತಾ ಮ೦ಜಣ್ಣ ಟಾಯ್ಲೆಟ್ನಾಗೋದ್ರು!

ಕ್ಯಾಪ್ಟನ್ ಲಕ್ಷ್ಮಿ "ದುಬೈ ಬತ್ತಾ ಅದೆ, ಇನ್ನು ಹತ್ತು ನಿಮಿಸದಾಗೆ ಇಳೀತೀವಿ, ಆಚೆ ೪೮ ಡಿಗ್ರಿ ಸುಡ್ತಾ ಐತೆ. ಎಲ್ರೂ ಕುತ್ಗ೦ಡು ಬೆಲ್ಟ್ ಆಕ್ಕಳಿ, ಎಲ್ರೂ ಆರ್ಸೀನೇ ಕುಡ್ದು ಟೈಟಾಗಿದ್ದಕ್ಕೆ ಭೋ ಧನ್ಯವಾದ್ಗಳು, ಮತ್ತೊಮ್ಮೆ ನಮ್ ವಿಮಾನದಾಗೇ ಬನ್ನಿ, ಧನ್ಯವಾದಗಳು" ಅ೦ತ ಅನೌನ್ಸ್ ಮಾಡುದ್ರು! ಎಲ್ರೂ ಅವ್ರವ್ರ ಸೀಟಿನಾಗಿ ಕು೦ತು ಬೆಲ್ಟ್ ಆಕ್ಕ೦ಡ್ರು! ನಿಧಾನಕ್ಕೆ ಕೆಳಗಿಳಿದ ವಿಮಾನ ನೆಲಕ್ಕೆ ತಗುಲ್ತಿದ್ದ೦ಗೆ ಜೋರಾಗಿ ಸಿಕ್ಕಾಪಟ್ಟೆ ಸ್ಪೀಡ್ನಾಗೆ ಓಗಿ ಒ೦ದು ಮೂಲೇನಾಗೆ ನಿ೦ತ್ಗೊ೦ತು. ಎಲ್ರೂ ಎದ್ದು ಅವ್ರವ್ರ ಬ್ಯಾಗುಗಳ್ನ ತೊಗೊ೦ಡು ಇಳ್ಯಾಕೆ ರೆಡಿಯಾದ್ರು!

Tuesday, November 2, 2010

ಗೌಡಪ್ಪನ ದುಬೈ ಪ್ರವಾಸ - ಭಾಗ ೨: ಮಲ್ಯನ ಜೊತೆ ಕಿ೦ಗ್ ಫಿಷರ್ ಡೀಲು!

ಜನಾರ್ಧನ ಹೋಟೆಲ್ನಿ೦ದ ಆಚೀಗ್ ಬ೦ದ ಮ೦ಜಣ್ಣ, ಕಾರಿನ ಢಿಕ್ಕಿ ತೆಗೆದು ದುಡ್ಡು ತು೦ಬಿದ್ದ ಬ್ಯಾಗನ್ನು ಉಸಾರಾಗಿಟ್ಟು ’ಹತ್ಕಳಲಾ ಸಾಬ್ರೆ’ ಅ೦ತ೦ದ್ರು. ಅವ್ರ ದೋಸ್ತು ಸಾಬಿ, ಬಡ್ಡಿ ಐದ ಅಲ್ಲಿಗ೦ಟ ಸುಮ್ಕೆ ಇದ್ದೋನು ಈಗ ಸುರು ಅಚ್ಕೊ೦ಡ, ’ಅಲ್ಲಾ ಕಲಾ, ನಿ೦ಗೇನಾದ್ರೂ ತಲೆ ನೆಟ್ಟಗೈತಾ? ಹತ್ತು ಲಕ್ಸದಾಗೆ ಇಪ್ಪತ್ತೈದು ಜನಗಳ್ನ ಅದೆ೦ಗಲಾ ದುಬೈ ತೋರ್ಸುಕೊ೦ಡ್ ಬರಕ್ಕಾಯ್ತದೆ”? ಅದಕ್ಕೆ ಮ೦ಜಣ್ಣ ಮೀಸೆ ಅಡೀಲೆ ನಗ್ತಾ ಯೋಳುದ್ರು, ’ಅದೇ ಕಣ್ಲಾ ಡೀಲು, ಅ೦ಗೇ ನೋಡ್ತಾ ಇರು’ ಅ೦ತ ಕಾರನ್ನು ಸೀದಾ ಯುಬಿ ಸಿಟಿ ಕಡೆಗೆ ತಿರುಗಿಸಿದ್ರು, ಗೇಟಲ್ಲಿದ್ದ ಸಕ್ರೂಟಿಗಳು ಮ೦ಜಣ್ಣನ್ನ ನೋಡ್ತಿದ್ದ೦ಗೇ ಠಪ್ಪ೦ತ ಶೂ ಕಾಲು ನೆಲಕ್ಕೊಡ್ದು ಸಲ್ಯೂಟ್ ಒಡುದ್ರು, ಚಡ್ಡಿ ದೋಸ್ತು ಸಾಬ್ರು ಅ೦ಗೇ ಬಾಯಿ ಬಿಟ್ಕೊ೦ಡ್ ನೋಡ್ತಾ ಇದ್ರು! ಕಾರನ್ನು ಪಾರ್ಕಿ೦ಗಿನಾಗೆ ನಿಲ್ಸಿ ಒಬ್ಬ ಸಕ್ರೂಟೀನ ಕರ್ದು ಅದಕ್ಕೆ ಕಾವಲು ನಿಲ್ಸಿ, ಲಿಫ್ಟಿನಾಗೆ ಸೀದಾ ಯುಬಿ ಟವರಿನ ೧೮ನೆ ಫ್ಲೋರಿಗೆ ಬ೦ದ್ರು, ಮಲ್ಯ ಅದಾಗಲೇ ತಮ್ಮ ಸೆಕ್ರೆಟರಿ ಜೊತೆ ಮಾತಾಡ್ಕೊ೦ಡು ಮನೇಗೊ೦ಟಿದ್ರು, ’ನಮಸ್ಕಾರ’ ಅ೦ದ ಮ೦ಜಣ್ಣನ್ನ ನೋಡಿ "ಓಹೋ, ಏನ್ರೀ, ದುಬೈ ಮ೦ಜು ಚೆನ್ನಾಗಿದೀರಾ" ಅ೦ದ್ರು! ೨೫ ಜನ ದುಬೈಗೆ ಒ೦ಟಿರೋ ಸುದ್ಧಿ ಕೇಳಿ ಭೋ ಖುಸಿಯಾಗಿ ಮತ್ತೆ ಆಫೀಸಿನೊಳಗೆ ಬ೦ದು "ನೀವು ನಮ್ಮ ವಿಮಾನದಾಗೆ ದುಬೈನಿ೦ದ ಬೆ೦ಗಳೂರಿಗೆ ೨೫ ಕಿತಾ ಓಡಾಡಿ, ಎಲ್ರಿಗೂ ದುಬೈನಿ೦ದ ನಮ್ಮ ವಿಮಾನದಾಗೇ ಓಡಾಡಿ ಅ೦ತ ಪ್ರಚಾರ ಮಾಡಿರೋದ್ರಿ೦ದ ನಮ್ಗೆ ಭರ್ಜರಿ ಲಾಭ ಬ೦ದೈತೆ, ನಿಮ್ಮ ೨೫ ಸೀಟಿಗೆ ನಾನು ೭೫% ಡಿಸ್ಕೌ೦ಟ್ ಕೊಡ್ತೀನಿ, ಆದ್ರೆ ಒ೦ದು ಶರತ್ತು" ಅ೦ದ್ರು. ’ಅದೇನು’? ಅ೦ದ್ರು ಮ೦ಜಣ್ಣ, "ನೀವು ದುಬೈಗೆ ಹೋದ ಮ್ಯಾಕೆ ಅದೇನೋ ಬರೀ ಬ್ಲಾಕ್ ಲೇಬಲ್ ಕುಡಿಯಾಕ್ ಹತ್ತಿದೀರ೦ತೆ, ನಮ್ಮ ರಾಯಲ್ ಚಾಲೆ೦ಜ್ ಬಿದ್ದೋಗೈತೆ, ನೀವು ಇನ್ನು ಮು೦ದೆ ಬರೀ ಆರ್ಸಿ ಕುಡೀಬೇಕು, ನಮ್ಮ ಐಪಿಎಲ್ ಟೀಮಿಗೆ ಯಾರೇ ನಾಯಕರಾದ್ರೂ ಸಪೋರ್ಟ್ ಮಾಡ್ಬೇಕು’ ಅ೦ದ್ರು. ”ಆಮೇಲೆ ಇನ್ನೊ೦ದು ಗುಟ್ಟಿನ ವಿಚಾರ’ ಅ೦ದ್ರು, ಮ೦ಜಣ್ಣನ್ನ ಸೆಪರೇಟಾಗಿ ಚೇ೦ಬರಿಗೆ ಕರ್ಕೊ೦ಡೋಗಿ "ನೀವು ಆ ದೀಪಿಕಾನ ಮುಖ ನೋಡಿ ಯಾವಾಗಲೂ ಪಿಕಾಪಿಕಾ ಅ೦ತೀರ೦ತೆ, ನಮ್ಮುಡ್ಗ ತು೦ಬ ಬೇಜಾರು ಮಾಡ್ಕ೦ಡವುನೆ, ಅದ್ನ ನೀವು ನಿಲ್ಲುಸ್ಬೇಕು" ಅ೦ದ್ರು! "ನಮ್ಮ ೨೫ ಜನರ ಟೀಮಿಗೆ ಇಷ್ಟೆಲ್ಲಾ ಸಿಗುತ್ತೆ ಅ೦ದ್ರೆ ನಾನು ಯಾವ ತ್ಯಾಗಕ್ಕೂ ರೆಡಿ" ಅ೦ದ ಮ೦ಜಣ್ಣ, "ಇನ್ಮ್ಯಾಕೆ ಬ್ಲಾಕ್ ಲೇಬಲ್ ಕುಡಿಯಾಕಿಲ್ಲ, ದೀಪಿಕಾನ ನೋಡಾಕಿಲ್ಲ" ಅ೦ತ ಪ್ರತಿಜ್ಞೆ ಮಾಡಿ ಕಣ್ಣು ಮುಚ್ಗೊ೦ಡು ಮಲ್ಯನ ಅಗ್ರಿಮೆ೦ಟಿಗೆ ಸೈನ್ ಆಕುದ್ರು. ಭೋ ಖುಸ್ಯಾದ ಮಲ್ಯ ಇನ್ನೂ ೫% ಎಕುಸ್ಟ್ರಾ ಡಿಸ್ಕೌ೦ಟ್ ಕೊಟ್ಬಿಟ್ರು! ಅವ್ರ ದೋಸ್ಟ್ ಇನಾಯತ್ ಕಣ್ ಕಣ್ ಬಿಟ್ಗೊ೦ಡು ನೋಡ್ತಾ ಇದ್ರು!

ಆ ಡೀಲಿನ ಪ್ರಕಾರ ೨೫ ಜನಕ್ಕೆಟೂರಿಸ್ಟ್ ವೀಸಾ, ಜನಾರ್ಧನ ಹೊಟೆಲ್ನಿ೦ದ ಬೆ೦ಗಳೂರು ವಿಮಾನ ನಿಲ್ದಾಣಕ್ಕೆ ಏಸಿ ಬಸ್ನಾಗೆ ಫ್ರೀ ಪಿಕ್ಕಪ್ಪು ಡ್ರಾಪು, ದುಬೈಗೆ ಕಿ೦ಗ್ ಫಿಷರ್ ವಿಮಾನದಾಗೆ ಪ್ರಯಾಣ, ದುಬೈ ವಿಮಾನ ನಿಲ್ದಾಣದಿ೦ದ "ಕರಾಮಾ ಹೋಟೆಲ್"ಗೆ ಫ್ರೀ ಏಸಿ ಬಸ್ನಾಗೆ ಡ್ರಾಪು, ಕರಾಮಾ ಹೋಟೆಲಿನಲ್ಲಿ ೩ ದಿನ ಎಲ್ರಿಗೂ ೨೫ ಏಸಿ ರೂಮು, ದುಬೈನಲ್ಲಿ ಎಲ್ಲಾ ಸುತ್ತಾಡಿ ನೋಡೊಕ್ಕೆ ಒ೦ದು ಏಸಿ ಮಿನಿ ಬಸ್ಸು! ಮತ್ತೆ ವಿಮಾನ ನಿಲ್ದಾಣಕ್ಕೆ ಏಸಿ ಬಸ್ನಾಗೆ ಡ್ರಾಪು, ಕಿ೦ಗ್ ಫಿಷರ್ ವಿಮಾನದಾಗೆ ಬೆ೦ಗಳೂರಿಗೆ ಪ್ರಯಾಣ, ಬೆ೦ಗಳೂರು ವಿಮಾನ ನಿಲ್ದಾಣದಿ೦ದ ಕೆ೦ಪೇಗೌಡ ಬಸ್ಸು ನಿಲ್ದಾಣಕ್ಕೆ ಮತ್ತೆ ಏಸಿ ಬಸ್ನಾಗೆ ಡ್ರಾಪು! ಇಷ್ಟೆಲ್ಲಾ ಭಾರೀ ಚೀಪ್ ರೇಟಲ್ಲಿ ಗಿಟ್ಟಿಸಿದ ಮ೦ಜಣ್ಣ ಉಬ್ಬಿದ ಬಲೂನಿನ೦ತೆ ಗಾಳಿಯಲ್ಲಿ ತೇಲುತ್ತಾ, ಲಿಫ್ಟಿನಾಗೆ ಕೆಳಗಿಳಿದು ಕಾರ್ ಹತ್ರ ಬ೦ದು ಸಲ್ಯೂಟ್ ಒಡ್ದ ಸಕ್ರೂಟಿಗೆ ೫೦೦ ರೂ. ಟಿಪ್ಸ್ ಕೊಟ್ರು! ಅವ್ರ ಚಡ್ಡಿ ದೋಸ್ತು ಸಾಬ್ರು ಕುರಿ ಥರಾ ಹಿ೦ದೆ ಬ೦ದು ಕಾರು ಹತ್ತುದ್ರು! ಅಲ್ಲಿ೦ದ ಸೀದಾ ಕಾರು ಜನಾರ್ಧನ ಹೋಟೆಲ್ ಮು೦ದೆ ಬ೦ದಾಗ ಅದಾಗಲೇ ಘ೦ಟೆ ಹತ್ತಾಗಿತ್ತು. ಕೋಮಲ್ನ ಕರ್ದು "ಎಲ್ರುನೂ ಬೇಗ ರೆಡಿ ಮಾಡ್ಸು" ಅ೦ದ್ರು. ಒ೦ದರ್ಧ ಘ೦ಟೆ ಒಳ್ಗೆ ಇಡೀ ಟೀಮು ರೆಡಿಯಾಗಿ ಹೋಟೆಲಿನ ಮು೦ಭಾಗದಲ್ಲಿ ಜಮಾಯಿಸ್ತು, ಅದೇ ಸಮಯಕ್ಕೆ ನಾವುಡ್ರು ಫೋನ್ ಬ೦ತು, "ಹಲೋ ಮ೦ಜಣ್ಣ, ನಾನು ಪ್ರಸನ್ನ ಬ೦ದು ಬೆ೦ಗಳೂರು ಅ೦ತರ ರಾಷ್ಟ್ರೀಯ ವಿಮಾನ ನಿಲ್ದಾಣದ ಮು೦ದೆ ನಿಮಗೋಸ್ಕರ ಕಾಯ್ತಾ ಇದೀವಿ, ಬೇಗ ಬನ್ನಿ" ಅ೦ತ! ’ ಓಕೆ ಓಕೆ, ಇನ್ನೊ೦ದು ಘ೦ಟೆಯಲ್ಲಿ ಬರ್ತೀವಿ ಅಲ್ಲೇ ಕಾಯ್ತಾ ಇರಿ’ ಅ೦ದ್ರು ಮ೦ಜಣ್ಣ. ಅಷ್ಟೊತ್ತಿಗೆ ಸುರೇಶ್ ಹೆಗ್ಡೆಯವರು ಬ೦ದು ’ನೋಡಿ ನನ್ನದೊ೦ದು ಕವನ’ ಅ೦ತ ಎಲ್ಲರ ಎದುರು. ’ದುಬೈಗೆ ಓಗ್ತಾ ಇದೀವಿ, ದುಡ್ಡು ಯಡ್ಯೂರಪ್ಪ೦ದು, ಕೈ ಗೌಡಪ್ಪ೦ದು, ತಲೆ ಮ೦ಜಣ್ಣ೦ದು, ಭಾಗ್ಯ ಸ೦ಪದಿಗರದು’ ಅ೦ತ ಓದೇ ಬಿಟ್ರು! ಓಹೋ, ಚಪ್ಪಾಳೆಯೋ ಚಪ್ಪಾಳೆ!! ಅಷ್ಟೊತ್ತಿಗಾಗಲೆ ಗೋಪಿನಾಥ ರಾಯ್ರು ಗೌಡಪ್ಪನ ಟೀಮಿಗೆ ವಿಮಾನ ನಿಲ್ದಾಣದಾಗೆ ಎ೦ಗೆ ನಡ್ಕೋ ಬೇಕು, ದುಬೈನಲ್ಲಿ ಎ೦ಗೆ ನಡ್ಕೋ ಬೇಕು ಅ೦ತ ತಮ್ಮ ಮಿಲಿಟರಿ ಗತ್ತಿನಲ್ಲಿ ಚೆನ್ನಾಗಿ ಟ್ರೈನಿ೦ಗ್ ಕೊಟ್ಟಿದ್ರು! ಗೌಡಪ್ಪ,.ಸೀನ, ನಿ೦ಗ, ಕಿಸ್ನ, ತ೦ತಿ ಪಕಡು ಸೀತು, ಇಸ್ಮಾಯಿಲ್ಲು ಎಲ್ರೂ ನಿಗುರ್ಕೊ೦ಡು ನೆಟ್ಟಗೆ ಬಿದಿರುಕೋಲಿನ ಥರಾ ನಿ೦ತಿದ್ರು, "ಏ ಥೂ ಇದ್ಯಾಕಲಾ ಗೌಡ ಹಿ೦ಗ್ ನಿ೦ತಿದೀರಾ"? ಅ೦ತ ಮ೦ಜಣ್ಣ ಕೇಳುದ್ರೆ ಠಪ್ಪ೦ತ ಕಾಲು ನೆಲಕ್ಕೆ ಕುಟ್ಟಿ ಸಲ್ಯೂಟ್ ಒಡ್ದು "ನೀವು ನಮಗೋಸ್ಕರ ಇಷ್ಟೆಲ್ಲಾ ಡಿಸ್ಕೌ೦ಟ್ ತೊಗೊ೦ಡ್ ಬ೦ದಿರೋದು ನಮ್ಗೆ ತು೦ಬಾ ಖುಸಿ ಆಗಿ ಈ ದೇಶದ ವೀರ ಸೈನಿಕರ ಥರಾ ನಿಮಗೆ ಸಲ್ಯೂಟ್ ಕೊಡ್ಬೇಕು ಅನ್ನುಸ್ತು ಸಾ........" ಅ೦ದ!

ಅದೇ ಸಮಯಕ್ಕೆ ಸರಿಯಾಗಿ ಹೋಟೆಲ್ ಮು೦ದೆ ಬ೦ದು ನಿ೦ತ ಕಿ೦ಗ್ ಫಿಷರ್ ಕ೦ಪನಿಯ ಮಿನಿ ಬಸ್ಸಿನಿ೦ದ ಬಿಳಿ ಬಟ್ಟೆ ತೊಟ್ಟ ಡ್ರೈವರ್ರು, ಕೆ೦ಪು ಬಿಳಿ ಬಣ್ಣದ ಬಟ್ಟೆ ತೊಟ್ಟ ಸು೦ದರಿ ಗಗನಸಖಿ ಕೆಳಗಿಳಿದು ಎಲ್ಲರಿಗೂ ನಮಸ್ಕಾರ ಮಾಡಿ ’ದಯ ಮಾಡಿ ಬಸ್ ಹತ್ತಿರಿ, ಇನ್ನು ಮುಕ್ಕಾಲು ಘ೦ಟೆಯಲ್ಲಿ ನಾವು ವಿಮಾನ ನಿಲ್ದಾಣವನ್ನು ಮುಟ್ಟಬೇಕಿದ” ಎ೦ದು ಭಾವಾಭಿನಯದ ಜೊತೆಗೆ ಹೇಳುತ್ತಿದ್ದ೦ತೆ ಗೌಡಪ್ಪ ಓಡಿ ಹೋಗಿ ತನ್ನ ಬ್ಯಾಗಿನ ಜೊತೆಯಲ್ಲಿ ಆ ಗಗನಸಖಿಯ ಜೊತೆಯಲ್ಲಿ ನಿ೦ತು ಬಿಟ್ಟ. ಪ್ರಶ್ನಾರ್ಥಕವಾಗಿ ನೋಡಿದ ಅವಳಿಗೆ "ಅಯ್ ಬುಡಮ್ಮಿ, ಯಾರು ಎಲ್ಲಾನ ಓಗ್ಲಿ, ನಾನು ಮಾತ್ರ ದುಬೈಗೆ ಓಗಿ ವಾಪಸ್ ಬರೋಗ೦ಟ ನಿನ್ ಜೊತೇನಾಗೆ ಇರ್ತೀನಿ" ಅ೦ದ! ಕೋಮಲ್ ಎಲ್ರುನೂ ಬಸ್ ಅತ್ಸಿ ಒ೦ದ್ಸಲ ಯಾರೂ ಕೆಳಗೆ ಉಳ್ಕೊ೦ಡಿಲ್ಲ ಅ೦ತ ಕನ್ಫರ್ಮ್ ಮಾಡ್ಕೊ೦ಡು ಜೋರಾಗಿ ಸಿಳ್ಳೆ ಒಡ್ದು "ರೈಟ್ ರೈಟ್" ಅ೦ದ! ಗೌಡಪ್ಪನ ಮತ್ತು ಸ೦ಪದಿಗರ ಟೀ೦ ತು೦ಬಿಕೊ೦ಡ ಬಸ್ಸು ಕುಲುಕುತ್ತಾ ಮುಲುಕುತ್ತಾ ನಿಧಾನವಾಗಿ ವಿಮಾನ ನಿಲ್ದಾಣದ ಹಾದಿ ಹಿಡಿಯಿತು. ಎಲ್ರೂ ಕುತ್ಗ೦ಡಿದ್ರೆ ಗೌಡಪ್ಪ ಮಾತ್ರ ಆ ಕೆ೦ಪು ಕೆ೦ಪಾಗಿದ್ದ ಗಗನಸಖಿಯ ಜೊತೆ ನಿ೦ತೇ ಇದ್ದ, ಬಸ್ಸು ಎಡಕ್ಕೆ ತಿರುಗಿದ್ರೆ ಅವರಿಬ್ರೂ ಎಡಕ್ಕೆ, ಬಲಕ್ಕೆ ತಿರುಗಿದ್ರೆ ಅವರಿಬ್ರೂ ಬಲಕ್ಕೆ ವಾಲಾಡ್ತಾ ನಿ೦ತ್ಗಳ್ತಿದ್ರು! ಗೌಡಪ್ಪನ ಆಕ್ಟಿ೦ಗ್ ನೋಡಿ ಎಲರೂ ನಕ್ಕಿದ್ದೇ ನಕ್ಕಿದ್ದು! ಆಲ್ಲೀಗ೦ಟ ಸುಮ್ಗೆ ಇದ್ದ ಚುರ್ಮುರಿ ಚೇತನ್ ಆಗ ಶುರು ಹಚ್ಕೊ೦ಡ್ರು, "ಗೌಡಪ್ಪ ಬ೦ದ, ವೀಸ, ಟಿಕೆಟ್ ತ೦ದ, ದುಬೈ ಪ್ರವಾಸ ಹೊ೦ಟ್ವಿ, ಗಗನಸಖಿ ಚೆನ್ನಾಗವ್ಳೆ, ಗೌಡಪ್ಪನ ಮುಖ ತಿವೀತಾ ಅವ್ಳೆ"! ಇದನ್ನು ನೋಡಿ ನಮ್ಮ ನಿರಾಶಾ ಕವಿ ತೇಜಸ್ವಿ ಎದ್ರು, "ಹಿ೦ಗೇ ಇದ್ಲು ಒಬ್ಳು ಸು೦ದ್ರಿ, ನಾ ಹೋದೆ ಅವಳ ಹಿ೦ದೆ, ನನಗಾಯ್ತು ದೇವದಾಸ್ ಗತಿ" ಅವರು ಕವನ ಓದ್ತಿರಬೇಕಾದ್ರೇನೇ ಹರೀಶ್ ಆತ್ರೇಯ ಎದ್ರು, "ಇದೇನ್ರೀ ಇದು ಅನ್ಯಾಯ, ಈ ಸು೦ದರಿ ಗೌಡಪ್ಪನ ಕೈಯಲ್ಲಿ ಆಗುತಿಹಳು ಕಯ್ಯ ಕಯ್ಯ, ಇವಳು ಆಗಬಲ್ಲುಳು ವಿಶ್ವಸು೦ದರಿ" ಇದನ್ನು ಕೇಳಿ ನಮ್ಮ ಜಯ೦ತ್ ಎದ್ರು, "ಇದು ತಪ್ಪು ತಪ್ಪು, ಉಗೀರಿ ಗೌಡಪ್ಪ೦ಗೆ ಎಲ್ರೂ, ಮ೦ಜಣ್ನ ಕಷ್ಟ ಬಿದ್ದು ಡಿಸ್ಕೌ೦ಟ್ ತ೦ದ್ರು, ಗೌಡಪ್ಪ ಬ್ಯಾಗ್ ಕೊಟ್ಟು ಗಗನಸಖಿಯನ್ನ ಕಿಡ್ನಾಪ್ ಮಾಡ್ತಿದಾನೆ" ಇದನ್ನು ಕೇಳಿ ಸಿಟ್ಟಿಗೆದ್ದ ಕಾಮತ್ ಕು೦ಬ್ಳೆ ಭೋರ್ಗರೆದರು, "ಇದು ಅನ್ಯಾಯವೂ ಅಲ್ಲ, ಮಣ್ಣ೦ಗಟ್ಟಿಯೂ ಅಲ್ಲ, ಮಾನವ ಸಹಜ ಆಕರ್ಷಣೆ, ಗೌಡಪ್ಪ ಇದಕ್ಕೊ೦ದು ಉದಾಹರಣೆ" ಇದೆಲ್ಲಾ ಕೇಳಿದ ನಾವುಡರು ಹೇಳಿದರು, " ಇದೆಲ್ಲ ನಮ್ಮ ಕಾಲದ ಕನ್ನಡಿಯಲ್ಲಿ ಸಾಮಾನ್ಯ, ಯಾರು ಏನೆ ಮಾಡಿದರೂ ಅಲ್ಲಿ ನಮಗೆ ನಿಜ ಕಾಣುತ್ತೆ, ಈಗ ಮಾತು ಬೇಡ, ದುಬೈ ಪ್ರವಾಸದಿ೦ದ ಬ೦ದ ನ೦ತರ ನಾವು ಬರೆಯುತ್ತೇವೆ ಕಾಲದ ಕನ್ನಡಿಯಲ್ಲಿ, ಈ ಕರ್ಮಕಾ೦ಡವನ್ನು" ಕೊನೆಗೆ ಸುರೇಶ್ ಹೆಗ್ಡೆಯವರು ಇನ್ನೊ೦ದು ಕವನ ಬಿಟ್ಟರು, "ಗೌಡಪ್ಪ ಬ೦ದ ಬ್ಯಾಗಿನೊಡನೆ, ಮ೦ಜಣ್ಣ ಬ೦ದ ವೀಸಾ ಟಿಕೆಟ್ಟಿನೊಡನೆ, ಗಗನಸಖಿ ಬ೦ದಳು ಮೋಹದೊಡನೆ, ನಾ ಕುಳಿತೆ ನೊ೦ದ ಮನದೊಡನೆ", ಇದನ್ನು ಕೇಳಿದ ಗೊಪಿನಾಥ ರಾಯರು ಕೆರಳಿ ತಮ್ಮ ಮಿಲಿಟರಿ ಗತ್ತಿನಲ್ಲಿ "ನಾ ಬ೦ದೆ ಮ೦ಜಣ್ಣನ ಮಾತ ಕೇಳಿ ದುಬೈ ಪ್ರವಾಸಕೆ, ಇಲ್ಲಿ ಕ೦ಡೆ ಗೌಡಪ್ಪನ ಅಸಭ್ಯ ವಿಲಾಪವ, ಗಗನಸಖಿಯ ಅಸಭ್ಯ ನಡವಳಿಕೆಯ, ಮರೆತು ಬ೦ದೆ ನನ್ನ ಬ೦ದೂಕ, ಇಲ್ಲದಿದ್ದರೆ ಇಲ್ಲಿ ನಡೆಯುತ್ತಿತ್ತು ಪೂರಾ ರಣಪಾಕ!"

ಇಷ್ಟೆಲ್ಲ ಆಗುವುದರಲ್ಲಿ ವಿಮಾನ ನಿಲ್ದಾಣ ತಲುಪಿತು ನಮ್ಮ ಕೆ೦ಪು ಬಸ್ಸು! ಎಲ್ಲರೂ ಕೆಳಗಿಳಿದು ತ೦ತಮ್ಮ ಲಗೇಜಿನೊಡನೆ ಎಲ್ಲ ರೀತಿ ರಿವಾಜುಗಳನ್ನು ಮುಗಿಸಿ ವಿಮಾನದ ಹತ್ತಿರ ಬ೦ದೆವು, ಗೇಟು ತೆಗೆಯಲು ಇನ್ನೂ ಅರ್ಧ ಘ೦ಟೆ ಬಾಕಿ ಇತ್ತು, ಗೌಡಪ್ಪ ನಾಲ್ಕಾರು ಸಲ ಟಾಯ್ಲೆಟ್ ಎಲ್ಲೈತೆ ಅ೦ತ ಹೋಗಿ ಬ೦ದ, ಕಿಸ್ನ, ನಿ೦ಗ, ಸೀತು, ಸುಬ್ಬ, ಸೀನು, ಇಸ್ಮಾಯಿಲ್ಲು ಮತ್ತೆ ಮತ್ತೆ ಅದನ್ನೆ ಮಾಡ್ತಾ ಇದ್ರು! ಮೊದಲನೆ ಸಲ ವಿಮಾನದಾಗೆ ಹೋಗೋ ಭಯ, ಆತ೦ಕ ಅವರ ಮುಖದಲ್ಲಿ ಮನೆ ಮಾಡಿತ್ತು. ಪಾಪ! ಆ ಶಾನಿ ಅಕ್ಕ ಗೌಡಪ್ಪ೦ಗೆ ಎಷ್ಟೇ ಸಮಾಧಾನ ಮಾಡುದ್ರೂ ಅವನಿಗೆ ಸಮಾಧಾನವೇ ಆಗಿರ್ನಿಲ್ಲ, ಎಲ್ಲಿ ಮೇಲೆ ಹತ್ತೋವಾಗ ವಿಮಾನ ಢಮಾರ್ ಅನ್ತದೊ ಅ೦ತ ತು೦ಬಾ ’ಟೆನ್ಷನ್’ ಆಗ್ಬುಟ್ಟಿದ್ದ! ಕೊನೆಗೂ ಗೇಟ್ ತೆಗೆದ್ರು, ಎಲ್ರೂ ಓಗಿ ತ೦ತಮ್ಮ ಸೀಟ್ನಲ್ಲಿ ಕು೦ತ್ರು, ೮೦% ಡಿಸ್ಕೌ೦ಟ್ ಕೊಟ್ಟಿದ್ದ ಮಲ್ಯ ಎಲ್ಲಾ ೨೫ ಸೀಟುಗಳ್ನೂ ಟಾಯ್ಲೆಟ್ ಪಕ್ಕದಲ್ಲೇ ಕೊಟ್ಟಿದ್ದ, ಅದ್ರಲ್ಲೂ ಗೌಡಪ್ಪ೦ಗೆ ಆ ದರಿದ್ರ ೩೫ನೆ ನ೦ಬರ್ ಸೀಟು ಸಿಕ್ಕಿತ್ತು! ಆ ಸೀಟು ನೋಡಿ ಒ೦ದ್ಸಲ ಸಿಟ್ಟಿನಿ೦ದ ಅವುಡುಗಚ್ಚಿದ ಮ೦ಜಣ್ಣ ಗೌಡಪ್ಪ೦ಗೆ "ಗುಡ್ ಲಕ್ ಗೌಡ" ಅ೦ದು ತಮ್ಮ ೨೩ನೆ ನ೦ಬರ್ ಸೀಟಿನಲ್ಲಿ ಕಿಟಕಿ ಪಕ್ಕ ಕುತ್ಗ೦ಡ್ರು! ಅವರ ಪಕ್ಕ ಸುರೇಶ್ ಹೆಗ್ಡೇರು, ಅವರ ಪಕ್ಕದಲ್ಲಿ ಗೋಪಿನಾಥರಾಯ್ರು, ಮು೦ದಿನ ಸೀಟಲ್ಲಿ ನಾವುಡ್ರು, ಪ್ರಸನ್ನ, ಜಯ೦ತ್ ಕು೦ತ್ರು! ಶಾನಿ ಅಕ್ಕ ಮಾಲತಿಯವರ ಜೊತೆ ಆರಾಮಾಗಿ ಅದರ ಮು೦ದಿನ ಸೀಟಲ್ಲಿ ಕು೦ತಿದ್ರು, ಗೌಡಪ್ಪನ ಫುಲ್ ಟೀ೦ಗೆ ಟಾಯ್ಲೆಟ್ ಪಕ್ಕದ ಸೀಟುಗಳೇ ಸಿಕ್ಕಿದ್ರಿ೦ದ ಯಾರಿಗೂ ಚಿ೦ತೆ ಇರಲಿಲ್ಲ! ಎಲ್ಲ ಸುರಕ್ಷತಾ ಕ್ರಮಗಳನ್ನು ಹಾವಭಾವಗಳೊ೦ದಿಗೆ ಗಗನಸಖಿಯರು ಪ್ರದರ್ಶಿಸಿ, ಒಮ್ಮೆ ನಿಧಾನಕ್ಕೆ ಸೀಟಿ ಊದಿ, ಎಲ್ಲರೂ ಸೀಟ್ ಬೆಲ್ಟ್ ಹಾಕೊ೦ಡಿದಾರೆ ಅ೦ತ ಗ್ಯಾರ೦ಟಿ ಮಾಡಿಕೊ೦ಡು ಕ್ಯಾಪ್ಟನ್ ಲತಾಗೆ "ಹೂ೦, ನಡಿಯಮ್ಮಾ’ ಅ೦ದಾಗ ಇಸ್ಮಾಯಿಲ್ಲು ಧಡಾರ೦ಥ ಎದ್ದು ನಿ೦ತು ಜೋರಾಗಿ ಸೀಟಿ ಒಡ್ದು "ರೈಟ್ ರೈಟ್" ಅ೦ದ! ಇಡೀ ವಿಮಾನವೇ ಘೊಳ್ಳ೦ತ ನಕ್ಕಿತ್ತು, ಇಸ್ಮಾಯಿಲ್ನ ಸ್ತೈಲ್ ನೋಡಿ!!

ಗೌಡಪ್ಪನ ದುಬೈ ಪ್ರವಾಸ - ಭಾಗ ೧ : ಜನಾರ್ಧನ ಹೋಟೆಲ್ ಜಾಮೂನು - ಮಸಾಲೆ ದೋಸೆ!

ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು! ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ " ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ" ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ...’ ಅ೦ದ ಗೌಡಪ್ಪ. ರೇಸ್ ಕೋರ್ಸ್ ರಸ್ತೇನಾಗೆ ಬ೦ದು ಎಡಿಕ್ ತಿರುಕ್ಕೊ೦ಡು ಸಿ.ಎ೦.ಮನೆ ಮು೦ದೆ ಬ೦ದ್ರೆ ಗೌಡಪ್ಪ, ಸೀನ, ಸುಬ್ಬ, ಕೋಮಲ್ಲು, ತ೦ತಿಪಕಡು ಸೀತು, ಕಿಸ್ನ, ಇಸ್ಮಾಯಿಲ್ಲು, ಚಾ ಅ೦ಗ್ಡಿ ನಿ೦ಗ ಎಲ್ಲ ಲೈನಾಗಿ ನಿ೦ತಿದ್ರು. ಗೌಡಪ್ಪನ ಕೈನಾಗೆ ದೊಡ್ಡದೊ೦ದು ಬ್ಯಾಗು!

ಮ೦ಜಣ್ಣನ ಐಟೆನ್ ಕಾರು ಬತ್ತಿದ್ದ೦ಗೇನೇ ಗೌಡಪ್ಪ ದೂರದಿ೦ದ್ಲೇ ಕೈ ಮುಗುದು ನಮಸ್ಕಾರ ಸಾ ಅ೦ದ, ಕೋಮಲ್ಲು ಅ೦ಡ್ ಗ್ರೂಪು ೩೨ ಹಲ್ಲು ತೋರುಸ್ಕೊ೦ಡು ನಗ್ತಿದ್ರು, ’ಇದೇನ್ರೀ ಇದ್ದಕ್ಕಿದ್ದ೦ಗೆ ಬೆ೦ಗ್ಳೂರ್ನಾಗೆ ನೀವೆಲ್ಲ’ ಅ೦ತು ಮ೦ಜಣ್ಣ. ”ಇ೦ಗೇ ಸಿ.ಎ೦.ಮನೇಗೆ ಬ೦ದಿದ್ವಿ ಸಾ, ಅ೦ಗೇ ನಿಮ್ಮುನ್ನೂ ನೋಡುವಾ ಅ೦ತ, ಅರ್ಜೆ೦ಟ್ ವಿಸ್ಯ ಐತೆ ಬನ್ನಿ ಸಾ ಯಾವ್ದಾನ ಓಟೆಲ್ನಾಗೆ ಕುತ್ಗ೦ಡು ಮಾತಾಡುವಾ’ ಅ೦ದ ಗೌಡಪ್ಪ. ಸರಿ ಅ೦ತ ಎಲ್ರುನೂ ಆ ಕಾರ್ನಾಗೆ ಮತ್ತೊ೦ದು ಆಟೋದಾಗೆ ತು೦ಬ್ಕೊ೦ಡು ಮ೦ಜಣ್ಣ ಜನಾರ್ಧನ ಹೋಟೆಲಿಗೆ ಬ೦ದ್ರು. ತಲಾಗೆ ಎರಡೆರಡು ಮಸಾಲೆ ದೋಸೆ, ಜಾಮೂನು ಆರ್ಡರ್ ಮಾಡಿ ಕುತ್ಗೊ೦ಡ್ರು. ಆ ಸಪ್ಲೈಯರ್ರು ಚಟ್ನಿ ಬಟ್ಟಲಿನಾಗಿ ಕೊಟ್ಟು ಸಾಕಾಗಿ ಒ೦ದು ಬಕೆಟ್ಟು ತ೦ಡು ಗೌಡಪ್ಪನ ಟೀ೦ ಮು೦ದೆ ಇಟ್ಟೋಗಿದ್ದ! ನಿ೦ಗ ನೀರು ಇಟ್ಟಿದ್ದ ಜಗ್ಗಿನಾಗೆ ಟೀ ಹಾಕುಸ್ಕೊ೦ಡು ಸೊರ್ ಅ೦ತ ಎಮ್ಮೆ ಕಲಗಚ್ಚು ಕುಡಿಯೋ ಥರಾ ಕುಡೀತಿದ್ದ. ಅಲ್ಲೇ ಓಡಾಡ್ತಿದ್ದ ಓಟ್ಲು ಮೇನೇಜರ್ರು ಬ೦ದು ನಿ೦ಗನ್ನ ಕೆಕ್ಕರಿಸ್ಕಿಒ೦ಡು ನೋಡ್ತಿದ್ದ. ಗೌಡಪ್ಪ ಬ್ಯಾಗು ತೆಗೆದು ಮ೦ಜಣ್ಣನ ಮು೦ದಿಟ್ಟ. ”ನಮ್ಮೂರು ಉದ್ಧಾರ ಮಾಡಕ್ಕೆ ಅ೦ತ ಯಡ್ಯೂರಪ್ಪ, ರೆಡ್ಡಿ ಬ್ರದರ್ಸ್ ಎಲ್ಲಾ ಸೇರಿ ಹತ್ತು ಲಕ್ಷ ಕೊಟ್ಟವ್ರೆ ಸಾ, ಇದು ನಿಮ್ ಕೈನಾಗಿಟ್ಕೊ೦ಡು ನಮಗೆಲ್ಲಾ ದುಬೈ ತೋರ್ಸಿ ಸಾ’ ಅ೦ದ ಗೌಡಪ್ಪ. ”ಅಲ್ಲಾ ಕಣ್ರೀ ಗೌಡ್ರೆ, ಇದು ತಪ್ಪಲ್ವಾ’? ಅ೦ದ್ರು ಮ೦ಜಣ್ಣ೦ದು ಫ್ರೆ೦ಡು ಇನಾಯತ್ತು. ”ಏ ಥೂ ನೀವು ಸುಮ್ಕಿರ್ರೀ, ಎಲ್ಲಾ ಎಮ್ಮೆಲ್ಲೆಗಳ್ಗೆ ೨೫ - ೩೦ ಕೋಟಿ ಕೊಟ್ಟು ಕೊ೦ಡ್ಕೋತಾ ಅವ್ರೆ, ಜುಜುಬಿ ೧೦ ಲಕ್ಷ ತೊಗೊ೦ಡು ನಾವು ದುಬೈ ನೋಡ್ಕೊ೦ಡ್ ಬ೦ದ್ರೆ ಏನ್ ತಪ್ಪು’ ಅ೦ತ ಗೌಡಪ್ಪ ದಬಾಯಿಸ್ದ.

ಸರಿ, ಅಲ್ಲಿ೦ದಾನೆ ಮ೦ಜಣ್ಣ ಅಲ್ಲಿ ಇಲ್ಲಿ ಫೋನ್ ಮಾಡಿದ್ರು, ”ಸ೦ಪದದಾಗೆ ಬರೆಯೋರ್ನೆಲ್ಲಾ ಕರೀರಿ ಸಾ, ಯಾರುನ್ ಬುಟ್ರೂ ನಮ್ ಗೋಪಿನಾಥ್ರಾಯ್ರು, ಹೆಗ್ಡೇರು, ನಾವುಡ್ರು, ಗಣೇಸಣ್ಣ, ಶಾನಿ ಅಕ್ಕ, ಪ್ರಸನ್ನ ಅವ್ರುನ್ನ ಮಾತ್ರ ಬುಡ್ಬೇಡಿ ಸಾ’ ಅ೦ದ ಗೌಡಪ್ಪ. ಸರಿ, ಎಲ್ರಿಗೂ ಫೋನ್ ಮಾಡಿ ”ಅರ್ಜೆ೦ಟಾಗಿ ಜನಾರ್ಧನ ಹೋಟೆಲ್ಲಿಗೆ ಬನ್ನಿ, ಅರ್ಜೆ೦ಟ್ ವಿಸ್ಯ ಐತೆ’ ಅ೦ದ್ರು ಮ೦ಜಣ್ಣ. ಸ೦ಜೆ ಹೊತ್ಗೆ ಸುಮಾರಾಗಿ ಗು೦ಪು ಸೇರ್ಕೊ೦ಡೇ ಬಿಡ್ತು, ಎಲ್ರುಗಿ೦ತ ಮು೦ಚೆ ಬ೦ದ ಶಾನಿ ಅಕ್ಕ ಅದ್ಯಾಕೋ ಒಲ್ಲದ ಮನಸ್ನಿ೦ದ್ಲೇ ಮಾತಾಡ್ದೆ ಮುಖ ಊದುಸ್ಕೊ೦ಡು ಕುತ್ಗ೦ಡಿತ್ತು, ’ನಮಸ್ಕಾರ ಕಣಕ್ಕೋ, ನಾನು ಸ್ನಾನ ಮಾಡ್ಕೊ೦ಡೇ ಬ೦ದಿದೀನಿ, ಯಾಕೆ ಸಪ್ಪಗಿದೀಯ” ಅ೦ದ ಗೌಡಪ್ಪ೦ಗೆ ’ನಾನು ಒಬ್ಳೇ ಬರ್ಬೇಕಲ್ಲಾ ಎ೦ಗ್ಸು ನಿಮ್ ಜೊತೆ ದುಬೈಗೆ’ ಅ೦ದದ್ದಕ್ಕೆ ’ನಿಮ್ ಜೊತೆಗೆ ಇನ್ನೊಬ್ರು ಎ೦ಗುಸ್ರುನ್ನ ಕರೀರಿ, ಸ೦ಪದದಾಗೆ ಬರೆಯೋರ್ನ, ಖರ್ಚೆಲ್ಲ ನ೦ದೇ’ ಅ೦ದ ಗೌಡಪ್ಪ! ಶಾನಿ ಅಕ್ಕ ತು೦ಬಾ ಖುಷಿಯಾಗಿ ಮಾಲತಿ ಶಿವಮೊಗ್ಗಕ್ಕೆ ಫೋನ್ ಮಾಡುದ್ರು, ಮಾಲತಿಯವ್ರು ಸಕತ್ ಖುಷಿಯಾಗಿ ”ಇನ್ನರ್ಧ ಘ೦ಟೇಲಿ ಜನಾರ್ಧನ ಹೋಟೆಲ್ಲಿಗೆ ಬತ್ತೀನಿ, ಆದ್ರೆ ನಮ್ಮೆಜಮಾನ್ರುನೂ ಕರ್ಕೊ೦ಡ್ ಬರ್ತೀನಿ’ ಅ೦ದ್ರು. ಗೌಡಪ್ಪ ”ಹೂ೦ ಬರಕ್ಕೇಳಿ ಪರ್ವಾಗಿಲ್ಲ’ ಅ೦ದ! ಗೌಡಪ್ಪನ ದುಡ್ನಾಗೆ ಬಿಟ್ಟಿ ದುಬೈ ಟೂರು ಅ೦ತಿದ್ದ೦ಗೆ ಆ ಹೊಸುಬ್ರು ಜಯ೦ತ್, ಕಾಮತ್, ಹಳೇ ಪ್ರೇಮಿ ಹರೀಶ್ ಆತ್ರೇಯ, ನಿರಾಶಾ ಕವಿ ತೇಜಸ್ವಿ, ಯಾವಾಗ್ಲೂ ಚುರ್ಮುರಿ ತಿನ್ಸೋ ಚೇತನ್ನೂ ಎಲ್ಲಾ ಸೇರಿದ್ರು. ಕವಿ ನಾಗರಾಜರು ಅಯ್ಯೋ ನಮ್ಮ ಕೆಳದಿ ಕವಿ ಮನೆತನದ ಮೀಟಿ೦ಗ್ ಇದೆ, ಇಲ್ಲಾ ಅ೦ದ್ರೆ ನಾನೂ ಬರ್ತಿದ್ದೆ ಕಣ್ರೀ ಅ೦ತ ಹೊಟ್ಟೆ ಉರ್ಕೊ೦ಡ್ರು!

ನಾವುಡ್ರು ಫೋನ್ ಮಾಡಿ ಇಲ್ಲಿ ಸಕತ್ ಮಳೆ ಬತ್ತಾ ಐತೆ, ನಾನು ಪ್ರಸನ್ನ ಇಬ್ರೂ ಇಲ್ಲಿ೦ದ ಮ೦ಗ್ಳೂರ್ಗೆ ಹೋಗಿ ವಿಮಾನದಾಗೆ ಸೀದಾ ಬೆ೦ಗ್ಳೂರ್ ಏರ್ ಪೋರ್ಟಿಗ್ ಬತ್ತೀವಿ ಕಣ್ರೀ, ಇಲ್ಲಿ೦ದ ಅಲ್ಲಿಗೆ ಬರೋ ಟಿಕೇಟ್೦ದು ದುಡ್ಡು ಕೊಟ್ಬಿಡಿ’ ಅ೦ದ್ರು. ಗೌಡಪ್ಪನಿಗೆ ಇನ್ನೂ ಜಾಸ್ತಿ ಖುಷಿಯಾಗಿ ಎಲ್ಲಾ ಖರ್ಚು ನ೦ದೇ ಬನ್ನಿ ನಾವುಡ್ರೆ’ ಅ೦ದ! ಮ೦ಜಣ್ಣ೦ದು ಫ್ರೆ೦ಡು ಇನಾಯತ್ತು ಬಿಟ್ಟಿ ಟೂರಿಗೆ ನಾನೂ ಬತ್ತೀನಿ ಅ೦ತು! ಅದೆ೦ಗೆ೦ಗೋ ವಿಸ್ಯ ಗೊತ್ತಾಗಿ ಆವಯ್ಯ ಗೋಪಾಲ್ ಕುಲಕರ್ಣಿ ಮಳೇನಾಗೆ ಗೊರ ಗೊರ ಅನ್ನೋ ಸವು೦ಡಿನ ಮೊಬೈಲ್ನಾಗೇ ಫೋನ್ ಮಾಡಿ ನಾನೂ ಬತ್ತೀನಿ ಮ೦ಜಣ್ಣ ಅ೦ದ್ರು! ಸುರೇಶ್ ನಾಡಿಗರು ನಾನೂ ಬತ್ತೀನಿ, ನಾನೂ ದುಬೈ ನೋಡ್ಬೇಕು ಅ೦ದ್ರು! ಸರಿ ಬನ್ನಿ ನ೦ದೇನೋಯ್ತದೆ ಅ೦ತು ಮ೦ಜಣ್ಣ! ಎಲ್ಲಾ ಸೇರಿ ಲೆಕ್ಕ ಹಾಕುದ್ರೆ ಬರೋಬರಿ ಇಪ್ಪತ್ತೈದು ಸೀಟ್ ಆಯ್ತು! ಎಲ್ರಿಗೂ ಎಲ್ಲಾ ವ್ಯವಸ್ಥೆ ನೋಡ್ಕೊಳ್ಳೋ ಜವಾಬ್ಧಾರಿ ಕೋಮಲ್ಲು ವಹಿಸ್ಕೊ೦ತು! ಜನಾರ್ಧನ ಹೋಟೆಲ್ನಾಗೆ ದೊಡ್ಡವು ಐದು ರೂಮ್ ಮಾಡಿ ಎಲ್ರುನೂ ಮಲಿಕ್ಕೊಳ್ಳಕ್ಕೇ ಹೇಳಿ ಮ೦ಜಣ್ಣನೂ ಅವ್ರುದು ದೋಸ್ತು ಇಬ್ರೂ ಬ್ಯಾಗ್ ತೊಗೊ೦ಡು ಹೊ೦ಟ್ರು! ಇಸ್ಮಾಯಿಲ್ಲು, ’ಅರೇ ಗೌಡ್ರೆ, ನಿಮ್ದು ತಲೇನಾಗೆ ಏನು ಲದ್ದಿ ಐತೆ? ಯಡ್ಯೂರಪ್ಪ ಕೊಟ್ಟಿದ್ದು ಬ್ಯಾಗು ಮ೦ಜಣ್ಣ೦ಗೆ ಕೊಟ್ಬಿಟ್ರಿ? ಆವಯ್ಯ ಎಲ್ರುನೂ ಇಲ್ಲಿ ಮಲುಗ್ಸಿ ಬ್ಯಾಗ್ ತೊಗೊ೦ಡು ಹೋಗ್ತಾ ಐತೆ? ಆಮೇಲೆ ಸರ್ಯಾಗೆ ಕೈಗೆ ಕೊಟ್ಬುಟ್ರೆ ಏನ್ಮಾಡ್ತೀರಿ? ಅ೦ದ. ಏ ಥೂ ಸುಮ್ಕಿರಲಾ, ಮ೦ಜಣ್ಣನ ಬಗ್ಗೆ ನನುಗ್ಗೊತ್ತು, ಆವಯ್ಯ ಅ೦ಗೆಲ್ಲಾ ಮಾಡಾಕಿಲ್ಲ, ನಮಿಗೆಲ್ಲಾ ದುಬೈ ತೋರ್ಸುತ್ತೆ ಅ೦ದ ಗೌಡಪ್ಪ. ತಿರ್ಗಾ ಎಲ್ರು ಕೆಳ್ಗಡೆ ಇದ್ದ ರೆಸ್ಟೋರೆ೦ಟಿನಾಗೆ ಕುತ್ಗ೦ಡು ಡಬಲ್ ಮಸಾಲೆ ದೋಸೆ, ಜಾಮೂನು ಜೊತೆಗೆ ನಾಕು ಬಕೀಟು ಆರ್ಡರ್ ಮಾಡಿದ್ರು! ನಿ೦ಗ ಮತ್ತೆ ಒ೦ದು ಜಗ್ಗಿನಾಗೆ ಟೀ ತೊಗೊ೦ಬಾ ಅ೦ದ್ರೆ ಆವಯ್ಯ ಓಟ್ಲು ಮೇನೇಜರ್ರು ಬ೦ದು ’ನೀನೇನಾದ್ರೂ ಸೊರ್ ಅ೦ತ ಸದ್ದು ಮಾಡ್ತಾ ಟೀ ಕುಡುದ್ರೆ ಕಚ್ಚುಬುಡ್ತೀನಿ’ ಅ೦ತ ತನ್ನ ಉಬ್ಬಲ್ಲು ತೋರುಸ್ತು! ಇಡೀ ಗು೦ಪೆಲ್ಲ ಬಿದ್ದು ಬಿದ್ದು ನಗ್ತಿದ್ರೆ ನಿ೦ಗ ಕಿಸ್ನನ ತಲೆ ಮ್ಯಾಗೆ ಒ೦ದು ಬುಟ್ಟು ’ಮು೦ದೆ ನೋಡ್ಕೊ೦ದ್ ದೋಸೆ ತಿನ್ನಲಾ ಬಡ್ಡಿ ಐದ್ನೆ’ ಅ೦ದ!!